ಕೊಹ್ಲಿ ಆಪ್ತನ ಕೈ ಬಿಟ್ಟು ತಪ್ಪು ಮಾಡಿದ್ಯಾ RCB? ಈ ಆಟಗಾರನಿಗೆ ಗೇಟ್​ಪಾಸ್​ ನೀಡಲು ಕಾರಣವೇನು?

author-image
Ganesh Nachikethu
Updated On
6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಆರ್​​ಸಿಬಿ ತಂಡದಿಂದ ಯುವ ಆಲ್​ರೌಂಡರ್​ಗೆ ಕೊಕ್​ ಏಕೆ?
  • ಹರಾಜಿಗೆ ಮುನ್ನ ಹೊರಬಿದ್ದ ಆಲ್​ರೌಂಡರ್​ ಯಾರು ಗೊತ್ತಾ?

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದಿದೆ. ಈ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್‌ ದಯಾಳ್‌ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್​​​ಸಿಬಿ ತಂಡದಿಂದ ಈ ಯುವ ಆಲ್​ರೌಂಡರ್​​ಗೆ ಗೇಟ್​ಪಾಸ್​ ನೀಡಲಾಗಿದೆ.

publive-image

ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಯಿಂದ ಔಟ್​ ಆಗಿರೋ ಯುವ ಆಲ್​ರೌಂಡರ್​ ಮತ್ಯಾರು ಅಲ್ಲ, ಮಯಾಂಕ್​. ಇವರನ್ನು ಹರಾಜಿನಲ್ಲೂ ಆರ್​​ಸಿಬಿ ಬಿಡ್​ ಮಾಡಲಿಲ್ಲ.

ಮಯಾಂಕ್​ಗೆ ಕೊಕ್​ ನೀಡಲು ಕಾರಣವೇನು?

ಆರ್​​ಸಿಬಿ ತಂಡದ ಯುವ ಆಲ್​ರೌಂಡರ್​​ ಮಯಾಂಕ್​. ಕಳೆದ ಸೀಸನ್​​ನಲ್ಲಿ ಆರ್​​​ಸಿಬಿ ಪರ ಇವರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಲಿಲ್ಲ. 2024ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ ತಾನು ಆಡಿದ 5 ಪಂದ್ಯದಲ್ಲಿ ಕೇವಲ 1 ವಿಕೆಟ್​ ಪಡೆದಿದ್ರು. ಬ್ಯಾಟಿಂಗ್​ನಲ್ಲಂತೂ ಶೂನ್ಯ ಕೊಡುಗೆ. ಹಾಗಾಗಿ ಇವರನ್ನು ಕೈ ಬಿಡಲಾಗಿದೆ. ಮಯಾಂಕ್​ ಡಗಾರ್​​ ಕೊಹ್ಲಿಗೆ ಬಹಳ ಆಪ್ತನಾಗಿದ್ದ.

ಇದನ್ನೂ ಓದಿ:ಹಾರ್ದಿಕ್​​ಗೆ ಮಾಸ್ಟರ್​ ಸ್ಟ್ರೋಕ್​​; ಮುಂಬೈ ತಂಡದ ಕ್ಯಾಪ್ಟನ್ಸಿಗಾಗಿ ಈ ಮೂವರ ಮಧ್ಯೆ ಪೈಪೋಟಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment