ಸೀಸನ್ 17ಕ್ಕೂ ಮುನ್ನ ಫ್ಯಾನ್ಸ್ಗೆ ಶಾಕ್ ಕೊಟ್ಟ ಧೋನಿ
CSKಗೆ ಋತುರಾಜ್ ಗಾಯಕ್ವಾಡ್ ನೂತನ ನಾಯಕ
ಪಟ್ಟ ತ್ಯಜಿಸಿದ ತಲಾ, ಋತುರಾಜ್ ನೂತನ ನಾಯಕ..!
ಧೋನಿ ಅಂದ್ರೆನೆ ಅನ್ಪ್ರಿಡಿಕ್ಟಬಲ್. ಯಾವಾಗ? ಏನು? ನಿರ್ಧಾರ ತೆಗೆದುಕೊಳ್ತಾರೆ ಅನ್ನೋದನ್ನ ಕನಿಷ್ಟ ಊಹಿಸೋಕೂ ಸಾಧ್ಯವಿಲ್ಲ. ಎಲ್ಲರೂ ಐಪಿಎಲ್ ಹಬ್ಬದ ಸಂಭ್ರಮಕ್ಕೆ ಕಾತರರಾಗಿ ಕಾಯ್ತಿದ್ದಾರೆ. ಈ ಸಂದರ್ಭದಲ್ಲಿ ತಲಾ ಧೋನಿ, ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಚೆನ್ನೈ ಮತ್ತೆ ಕಪ್ ಗೆಲ್ಲುತ್ತಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಒಂದು ಟ್ರೋಫಿ ಮೇಲೆ 10 ತಂಡಗಳು ಕಣ್ಣಿಟ್ಟಿವೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಫ್ಯಾನ್ಸ್ ಕೂಡ ಐಪಿಎಲ್ ಆರಂಭಕ್ಕೆ ಕಾತುರರಾಗಿ ಕಾಯ್ತಿದ್ದಾರೆ. ಇದ್ರ ನಡುವೆ ಸಿಎಸ್ಕೆ ನಾಯಕ ಎಮ್.ಎಸ್ ಧೋನಿ ಫ್ಯಾನ್ಸ್ಗೆ ಆಘಾತ ನೀಡಿದ್ದಾರೆ.
ಸಿಎಸ್ಕೆ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಧೋನಿ
ಐಪಿಎಲ್ ಆರಂಭಕ್ಕಾಗಿ ಎಲ್ರೂ ಕಾಯ್ತಾ ಇರೋ ಈ ಸಂದರ್ಭದಲ್ಲಿ ಧೋನಿ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಧೋನಿ ದಿಢೀರ್ ಗುಡ್ ಬೈ ಹೇಳಿದ್ದಾರೆ. CSK ಫ್ರಾಂಚೈಸಿ ಟ್ವೀಟ್ ಮಾಡುವ ಮೂಲಕ ಧೋನಿ ನಾಯಕತ್ವದಿಂದ ಕೆಳಗಿಳಿದ ಸುದ್ದಿಯನ್ನ ಅಧಿಕೃತವಾಗಿಸಿದೆ. ಟೂರ್ನಿಗೆ ಒಂದು ದಿನ ಮುಂಚೆ ಧೋನಿ ತೆಗೆದುಕೊಂಡಿರೋ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಪಟ್ಟ ತ್ಯಜಿಸಿದ ತಲಾ, ಋತುರಾಜ್ ನೂತನ ನಾಯಕ
ಧೋನಿ ನಾಯಕತ್ವದ ಕೆಳಗಿಳಿದ ಬೆನ್ನಲ್ಲೇ ಯುವ ಆಟಗಾರನಿಗೆ ಫ್ರಾಂಚೈಸಿ ಪಟ್ಟ ಕಟ್ಟಿದೆ. ನಿರೀಕ್ಷೆಯಂತೆ ಋತುರಾಜ್ ಗಾಯಕ್ವಾಡ್ ನಾಯಕನ ಪಟ್ಟಕ್ಕೇರಿದ್ದಾರೆ. ಭವಿಷ್ಯದ ಲೆಕ್ಕಾಚಾರವನ್ನ ಹಾಕಿರುವ ಫ್ರಾಂಚೈಸಿ, 27 ವರ್ಷದ ಋತುರಾಜ್ಗೆ ಪಟ್ಟ ಕಟ್ಟಿದೆ. ಋತುರಾಜ್ 2019ರಿಂದ ಚೆನ್ನೈ ಫ್ರಾಂಚೈಸಿಯ ಭಾಗವಾಗಿದ್ದಾರೆ.
ಧೋನಿ ದಿಢೀರ್ ನಿರ್ಧಾರಕ್ಕೆ ಕಾರಣ ಏನು?
ಕಳೆದ ವರ್ಷದ ಐಪಿಎಲ್ ಅಂತ್ಯವಾದ ಬೆನ್ನಲ್ಲೇ ಧೋನಿ KNEE ಸರ್ಜರಿಗೆ ಒಳಗಾಗಿದ್ರು. ಇಂಜುರಿಯಿಂದ ಈವರೆಗೆ ಧೋನಿ ಪರಿಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದ್ರಿಂದ ಧೋನಿಗೆ ಟೀಮ್ ಮೇಲೆ ಫೋಕಸ್ ಮಾಡೋದಕ್ಕೆ ಕಷ್ಟ ಆಗ್ತಿದೆ. ಟೂರ್ನಿ ಮಧ್ಯೆ ಮತ್ತೆ ಇಂಜುರಿಯಾದ್ರೆ, ತಂಡದಿಂದ ಹೊರಬರಬೇಕಾಗುತ್ತದೆ. ಹೀಗಾಗಿ ಧೋನಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇದೇ ಧೋನಿ ಪಾಲಿನ ಕೊನೆಯ ಐಪಿಎಲ್?
ಚೆನ್ನೈ ನಾಯಕತ್ವಕ್ಕೆ ಗುಡ್ ಬೈ ಹೇಳಿರೋದು ಇದೇ ಧೋನಿ ಪಾಲಿನ ಕೊನೆಯ ಸೀಸನ್ ಎಂಬ ಸುಳಿವು ನೀಡಿದಂತಿದೆ. ಈಗಾಗಲೇ ಧೋನಿಯ ವಯಸ್ಸು 42ರ ಗಡಿ ದಾಟಿದೆ. ಹಿಂದಿನ ಚಾರ್ಮ್ ಕೂಡ ಮಾಯವಾಗಿದೆ. ನೀ ಇಂಜುರಿ ಸಮಸ್ಯೆ ಕೂಡ ಇರೋದ್ರಿಂದ ಈ ಸೀಸನ್ನ ಅಂತ್ಯದೊಂದಿಗೆ ಧೋನಿ ಐಪಿಎಲ್ಗೂ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ.
ಋತುರಾಜ್ಗೆ ನಾಯಕತ್ವ ನೀಡಿದ್ಯಾಕೆ..?
ಚಾಣಾಕ್ಷ ಧೋನಿ ಅಳೆದೂ ತೂಗಿ ಲೆಕ್ಕಾಚಾರ ಹಾಕಿಯೇ ನಾಯಕತ್ವ ಹಸ್ತಾಂತರ ಮಾಡಿದ್ದಾರೆ. ಕಳೆದ 5 ಸೀಸನ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿರೋ ಋತುರಾಜ್, ಸಿಎಸ್ಕೆ ಕಲ್ಚರ್ಗೆ ಅಡ್ಜಸ್ಟ್ ಆಗಿದ್ದಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಕ್ವಾಲಿಟಿಗಳು ಋತುರಾಜ್ಗಿದೆ. ಕೂಲ್ ಅಂಡ್ ಕಾಮ್ ವ್ಯಕ್ತಿತ್ವದ ಋತುರಾಜ್ ಒಳ್ಳೆ ಬ್ಯಾಟ್ಸ್ಮನ್ ಅನ್ನೋದ್ರ ಜೊತೆಗೆ ಉತ್ತಮ ಗೇಮ್ ರೀಡರ್ ಕೂಡ ಹೌದು. ತಂಡಕ್ಕೆ ಏಕ್ಸಾಂಪಲ್ ಸೆಟ್ ಮಾಡಬಲ್ಲ ಸಾಮರ್ಥ್ಯವಿರೋ ಋತುರಾಜ್, ಭವಿಷ್ಯದ ದೃಷ್ಟಿಯಿಂದಲೂ ಬೆಸ್ಟ್ ಚಾಯ್ಸ್.!
ಒಟ್ಟಿನಲ್ಲಿ, ಫ್ರಾಂಚೈಸಿ ಭವಿಷ್ಯದ ಬಗ್ಗೆ ಲೆಕ್ಕಾಚಾರ ಹಾಕಿರುವ ಧೋನಿ ಸೀಸನ್ ಆರಂಭಕ್ಕೂ ಮುನ್ನವೇ ಯುವ ಆಟಗಾರನಿಗೆ ನಾಯಕತ್ವ ಹಸ್ತಾಂತರಿಸಿದ್ದಾರೆ. ಧೋನಿ ಗರಡಿಯಲ್ಲೇ ಪಳಗಿರೋ ಋತುರಾಜ್ ಗಾಯಕ್ವಾಡ್, ತಂಡವನ್ನ ಹೇಗೆ ಲೀಡ್ ಮಾಡ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸೀಸನ್ 17ಕ್ಕೂ ಮುನ್ನ ಫ್ಯಾನ್ಸ್ಗೆ ಶಾಕ್ ಕೊಟ್ಟ ಧೋನಿ
CSKಗೆ ಋತುರಾಜ್ ಗಾಯಕ್ವಾಡ್ ನೂತನ ನಾಯಕ
ಪಟ್ಟ ತ್ಯಜಿಸಿದ ತಲಾ, ಋತುರಾಜ್ ನೂತನ ನಾಯಕ..!
ಧೋನಿ ಅಂದ್ರೆನೆ ಅನ್ಪ್ರಿಡಿಕ್ಟಬಲ್. ಯಾವಾಗ? ಏನು? ನಿರ್ಧಾರ ತೆಗೆದುಕೊಳ್ತಾರೆ ಅನ್ನೋದನ್ನ ಕನಿಷ್ಟ ಊಹಿಸೋಕೂ ಸಾಧ್ಯವಿಲ್ಲ. ಎಲ್ಲರೂ ಐಪಿಎಲ್ ಹಬ್ಬದ ಸಂಭ್ರಮಕ್ಕೆ ಕಾತರರಾಗಿ ಕಾಯ್ತಿದ್ದಾರೆ. ಈ ಸಂದರ್ಭದಲ್ಲಿ ತಲಾ ಧೋನಿ, ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಚೆನ್ನೈ ಮತ್ತೆ ಕಪ್ ಗೆಲ್ಲುತ್ತಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಒಂದು ಟ್ರೋಫಿ ಮೇಲೆ 10 ತಂಡಗಳು ಕಣ್ಣಿಟ್ಟಿವೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಫ್ಯಾನ್ಸ್ ಕೂಡ ಐಪಿಎಲ್ ಆರಂಭಕ್ಕೆ ಕಾತುರರಾಗಿ ಕಾಯ್ತಿದ್ದಾರೆ. ಇದ್ರ ನಡುವೆ ಸಿಎಸ್ಕೆ ನಾಯಕ ಎಮ್.ಎಸ್ ಧೋನಿ ಫ್ಯಾನ್ಸ್ಗೆ ಆಘಾತ ನೀಡಿದ್ದಾರೆ.
ಸಿಎಸ್ಕೆ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಧೋನಿ
ಐಪಿಎಲ್ ಆರಂಭಕ್ಕಾಗಿ ಎಲ್ರೂ ಕಾಯ್ತಾ ಇರೋ ಈ ಸಂದರ್ಭದಲ್ಲಿ ಧೋನಿ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಧೋನಿ ದಿಢೀರ್ ಗುಡ್ ಬೈ ಹೇಳಿದ್ದಾರೆ. CSK ಫ್ರಾಂಚೈಸಿ ಟ್ವೀಟ್ ಮಾಡುವ ಮೂಲಕ ಧೋನಿ ನಾಯಕತ್ವದಿಂದ ಕೆಳಗಿಳಿದ ಸುದ್ದಿಯನ್ನ ಅಧಿಕೃತವಾಗಿಸಿದೆ. ಟೂರ್ನಿಗೆ ಒಂದು ದಿನ ಮುಂಚೆ ಧೋನಿ ತೆಗೆದುಕೊಂಡಿರೋ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಪಟ್ಟ ತ್ಯಜಿಸಿದ ತಲಾ, ಋತುರಾಜ್ ನೂತನ ನಾಯಕ
ಧೋನಿ ನಾಯಕತ್ವದ ಕೆಳಗಿಳಿದ ಬೆನ್ನಲ್ಲೇ ಯುವ ಆಟಗಾರನಿಗೆ ಫ್ರಾಂಚೈಸಿ ಪಟ್ಟ ಕಟ್ಟಿದೆ. ನಿರೀಕ್ಷೆಯಂತೆ ಋತುರಾಜ್ ಗಾಯಕ್ವಾಡ್ ನಾಯಕನ ಪಟ್ಟಕ್ಕೇರಿದ್ದಾರೆ. ಭವಿಷ್ಯದ ಲೆಕ್ಕಾಚಾರವನ್ನ ಹಾಕಿರುವ ಫ್ರಾಂಚೈಸಿ, 27 ವರ್ಷದ ಋತುರಾಜ್ಗೆ ಪಟ್ಟ ಕಟ್ಟಿದೆ. ಋತುರಾಜ್ 2019ರಿಂದ ಚೆನ್ನೈ ಫ್ರಾಂಚೈಸಿಯ ಭಾಗವಾಗಿದ್ದಾರೆ.
ಧೋನಿ ದಿಢೀರ್ ನಿರ್ಧಾರಕ್ಕೆ ಕಾರಣ ಏನು?
ಕಳೆದ ವರ್ಷದ ಐಪಿಎಲ್ ಅಂತ್ಯವಾದ ಬೆನ್ನಲ್ಲೇ ಧೋನಿ KNEE ಸರ್ಜರಿಗೆ ಒಳಗಾಗಿದ್ರು. ಇಂಜುರಿಯಿಂದ ಈವರೆಗೆ ಧೋನಿ ಪರಿಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದ್ರಿಂದ ಧೋನಿಗೆ ಟೀಮ್ ಮೇಲೆ ಫೋಕಸ್ ಮಾಡೋದಕ್ಕೆ ಕಷ್ಟ ಆಗ್ತಿದೆ. ಟೂರ್ನಿ ಮಧ್ಯೆ ಮತ್ತೆ ಇಂಜುರಿಯಾದ್ರೆ, ತಂಡದಿಂದ ಹೊರಬರಬೇಕಾಗುತ್ತದೆ. ಹೀಗಾಗಿ ಧೋನಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇದೇ ಧೋನಿ ಪಾಲಿನ ಕೊನೆಯ ಐಪಿಎಲ್?
ಚೆನ್ನೈ ನಾಯಕತ್ವಕ್ಕೆ ಗುಡ್ ಬೈ ಹೇಳಿರೋದು ಇದೇ ಧೋನಿ ಪಾಲಿನ ಕೊನೆಯ ಸೀಸನ್ ಎಂಬ ಸುಳಿವು ನೀಡಿದಂತಿದೆ. ಈಗಾಗಲೇ ಧೋನಿಯ ವಯಸ್ಸು 42ರ ಗಡಿ ದಾಟಿದೆ. ಹಿಂದಿನ ಚಾರ್ಮ್ ಕೂಡ ಮಾಯವಾಗಿದೆ. ನೀ ಇಂಜುರಿ ಸಮಸ್ಯೆ ಕೂಡ ಇರೋದ್ರಿಂದ ಈ ಸೀಸನ್ನ ಅಂತ್ಯದೊಂದಿಗೆ ಧೋನಿ ಐಪಿಎಲ್ಗೂ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ.
ಋತುರಾಜ್ಗೆ ನಾಯಕತ್ವ ನೀಡಿದ್ಯಾಕೆ..?
ಚಾಣಾಕ್ಷ ಧೋನಿ ಅಳೆದೂ ತೂಗಿ ಲೆಕ್ಕಾಚಾರ ಹಾಕಿಯೇ ನಾಯಕತ್ವ ಹಸ್ತಾಂತರ ಮಾಡಿದ್ದಾರೆ. ಕಳೆದ 5 ಸೀಸನ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿರೋ ಋತುರಾಜ್, ಸಿಎಸ್ಕೆ ಕಲ್ಚರ್ಗೆ ಅಡ್ಜಸ್ಟ್ ಆಗಿದ್ದಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಕ್ವಾಲಿಟಿಗಳು ಋತುರಾಜ್ಗಿದೆ. ಕೂಲ್ ಅಂಡ್ ಕಾಮ್ ವ್ಯಕ್ತಿತ್ವದ ಋತುರಾಜ್ ಒಳ್ಳೆ ಬ್ಯಾಟ್ಸ್ಮನ್ ಅನ್ನೋದ್ರ ಜೊತೆಗೆ ಉತ್ತಮ ಗೇಮ್ ರೀಡರ್ ಕೂಡ ಹೌದು. ತಂಡಕ್ಕೆ ಏಕ್ಸಾಂಪಲ್ ಸೆಟ್ ಮಾಡಬಲ್ಲ ಸಾಮರ್ಥ್ಯವಿರೋ ಋತುರಾಜ್, ಭವಿಷ್ಯದ ದೃಷ್ಟಿಯಿಂದಲೂ ಬೆಸ್ಟ್ ಚಾಯ್ಸ್.!
ಒಟ್ಟಿನಲ್ಲಿ, ಫ್ರಾಂಚೈಸಿ ಭವಿಷ್ಯದ ಬಗ್ಗೆ ಲೆಕ್ಕಾಚಾರ ಹಾಕಿರುವ ಧೋನಿ ಸೀಸನ್ ಆರಂಭಕ್ಕೂ ಮುನ್ನವೇ ಯುವ ಆಟಗಾರನಿಗೆ ನಾಯಕತ್ವ ಹಸ್ತಾಂತರಿಸಿದ್ದಾರೆ. ಧೋನಿ ಗರಡಿಯಲ್ಲೇ ಪಳಗಿರೋ ಋತುರಾಜ್ ಗಾಯಕ್ವಾಡ್, ತಂಡವನ್ನ ಹೇಗೆ ಲೀಡ್ ಮಾಡ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್