ಆಸ್ಟ್ರೇಲಿಯಾ ಪ್ರವಾಸ; ಟೀಮ್​ ಇಂಡಿಯಾದಿಂದ ಸರ್ಫರಾಜ್​ ಕೈ ಬಿಡಲು ಕಾರಣವೇನು?

author-image
Ganesh Nachikethu
Updated On
ಮಹತ್ವದ ಟೆಸ್ಟ್​ ಸೀರೀಸ್​ನಿಂದ ರೋಹಿತ್​ ಆಪ್ತನಿಗೆ ಕೊಕ್​​; ಧೃವ್​ ಜುರೆಲ್​ಗೆ ಅವಕಾಶ
Advertisment
  • ಟೀಮ್​ ಇಂಡಿಯಾಗೆ ಬ್ಯಾಕ್​ ಟು ಬ್ಯಾಕ್​ ಹೀನಾಯ ಸೋಲು!
  • ಹೀನಾಯ ಸೋಲಿನ ಬೆನ್ನಲ್ಲೇ ಬುದ್ಧಿ ಕಲಿತ ಟೀಮ್​ ಇಂಡಿಯಾ
  • ಭಾರತ ಕ್ರಿಕೆಟ್​ ತಂಡದಿಂದ ಸರ್ಫರಾಜ್​ ಕೈ ಬಿಡಲು ಕಾರಣವೇನು?

ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟೆಸ್ಟ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ 25 ರನ್​ಗಳಿಂದ ಸೋತಿದೆ. ನ್ಯೂಜಿಲೆಂಡ್​ ನೀಡಿದ 147 ರನ್​​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 29.1 ಓವರ್​​ಗಳಲ್ಲಿ ಕೇವಲ 121 ರನ್​​ಗಳಿಗೆ ಆಲೌಟ್​​ ಆಗಿ ಸೋತು ಭಾರೀ ಮುಖಭಂಗ ಅನುಭವಿಸಿದೆ.

ಇನ್ನು, ಟೀಮ್​ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್​ ವಿಕೆಟ್​ ಬ್ಯಾಟರ್​​ ರಿಷಬ್​ ಪಂತ್​​. ಬರೋಬ್ಬರಿ 64 ರನ್​ ಸಿಡಿಸಿ ಟೀಮ್​ ಇಂಡಿಯಾ ಪಡೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ರು. ಆದರೆ, ಇವರು ಔಟ್​​ ಆದ ಕಾರಣ ಭಾರತ ಸೋಲಬೇಕಾಯ್ತು. ಭಾರತ ತಂಡದ ಬ್ಯಾಟರ್​​ಗಳು ನ್ಯೂಜಿಲೆಂಡ್​​ ಬೌಲರ್​​​ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು.

ಟೀಮ್​ ಇಂಡಿಯಾಗೆ ಕೈ ಕೊಟ್ಟ ಸರ್ಫರಾಜ್​ ಖಾನ್​​

ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್​​ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​​ ಸಿಡಿಸಿ ಭಾರೀ ಸದ್ದು ಮಾಡಿದ್ದ ಸರ್ಫರಾಜ್​ ಖಾನ್​ ಟೀಮ್​ ಇಂಡಿಯಾಗೆ ಕೈ ಕೊಟ್ಟರು. ಕೊನೆ ಟೆಸ್ಟ್​ ಪಂದ್ಯದಲ್ಲಿ ಸರ್ಫರಾಜ್​ ಖಾನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ರು. ಕಳೆದ ಮೂರು ಇನ್ನಿಂಗ್ಸ್​ನಲ್ಲಿ ಸರ್ಫರಾಜ್​ ಖಾನ್​ 11(24), 9(15), 0(4) ಗಳಿಸೋ ಮೂಲಕ ಕಳಪೆ ಪ್ರದರ್ಶನ ನೀಡಿದ್ರು.

ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದಕ್ಕೆ ಕೆ.ಎಲ್​ ರಾಹುಲ್​ ಅವರನ್ನು 2 ಪಂದ್ಯಗಳಿಂದ ಬೆಂಚ್​​ ಕಾಯಿಸಲಾಗಿತ್ತು. ಇವರ ಬದಲಿಗೆ ಸರ್ಫರಾಜ್​ ಖಾನ್​ ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಸರ್ಫರಾಜ್​ ಖಾನ್​ ಸಂಪೂರ್ಣ ಬ್ಯಾಟಿಂಗ್​ನಲ್ಲಿ ವೈಫಲ್ಯರಾಗಿದ್ದು, ಕೆ.ಎಲ್​ ರಾಹುಲ್​​ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್​ ತಂಡ ತಪ್ಪು ಮಾಡಿದ್ಯಾ? ಅನ್ನೋ ಪ್ರಶ್ನೆಗಳು ಕೇಳಿ ಬಂದವು.

ಬಾರ್ಡರ್ ಗವಾಸ್ಕರ್ ಟ್ರೋಫಿ

ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಆಸೀಸ್ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಿರೋ ಬಿಸಿಸಿಐ ಸರ್ಫರಾಜ್​ ಖಾನ್​ ಅವರನ್ನು ಕೈ ಬಿಡಲು ಮುಂದಾಗಿದೆ.

ಸರ್ಫರಾಜ್​ ಖಾನ್​ ಕೈ ಬಿಡಲು ಕಾರಣವೇನು?

ಒಂದು ಪಂದ್ಯ ಹೊರತುಪಡಿಸಿದ್ರೆ ಉಳಿದ 2 ಟೆಸ್ಟ್​ನಲ್ಲೂ ಸರ್ಫರಾಜ್​ ಖಾನ್​​ ಕಳಪೆ ಪ್ರದರ್ಶನ ನೀಡಿದ್ರು. ಅದರಲ್ಲೂ ತನ್ನ ತವರಾದ ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟೆಸ್ಟ್​ನಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ಹಾಗಾಗಿ ಬಾರ್ಡರ್​ ಗವಾಸ್ಕರ್​​​ ಟ್ರೋಫಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ವಿದೇಶಿ ಪಿಚ್​​ಗಳಲ್ಲಿ ಬ್ಯಾಟ್​ ಬೀಸಲು ಅನುಭವಿ ಆಟಗಾರ ಬೇಕು. ಆಸ್ಟ್ರೇಲಿಯಾದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​ ಮತ್ತು ಆವರೇಜ್​ ಚೆನ್ನಾಗಿದೆ. ಹೀಗಾಗಿ ಯಾವುದೇ ರಿಸ್ಕ್​ ಮಾಡದೆ ಕೆ.ಎಲ್​ ರಾಹುಲ್​ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ.

ಆಸೀಸ್​ ಪ್ರವಾಸದಲ್ಲಿ ಸರ್ಫರಾಜ್ ಖಾನ್ ಬದಲಿಗೆ ಅನುಭವಿ ರಾಹುಲ್ ಅತ್ಯುತ್ತಮ ಆಯ್ಕೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬಿಸಿಸಿಐ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment