ಆಸೀಸ್​ ವಿರುದ್ಧ ಮಹತ್ವದ ಟೆಸ್ಟ್​; ಟೀಮ್​ ಇಂಡಿಯಾದಿಂದ ಸ್ಟಾರ್​ ಆಲ್​ರೌಂಡರ್​ ಕೈ ಬಿಡಲು ಕಾರಣವೇನು?

author-image
Ganesh Nachikethu
Updated On
ಮೊದಲ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಟೀಮ್​ ಇಂಡಿಯಾದಲ್ಲಿ ಇವರಿಗೆ ಸ್ಥಾನ
Advertisment
  • ಭಾರತ, ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ
  • ಆಡಿಲೇಡ್‌ನಲ್ಲಿ ನಡೆಯುತ್ತಿರೋ ಎರಡನೇ ಮಹತ್ವದ ಟೆಸ್ಟ್​ ಪಂದ್ಯ
  • ಸ್ಟಾರ್​ ಆಲ್​ರೌಂಡರ್​ ಅನ್ನು ತಂಡದಿಂದ ಕೈ ಬಿಡಲು ಕಾರಣವೇನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ 2ನೇ ಟೆಸ್ಟ್‌ ಆಡಿಲೇಡ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿದೆ. ಮಹತ್ವದ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಎಲ್ಲಾ ಆಟಗಾರರು ಆಘಾತ ನೀಡಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್​ ಬೌಲರ್​ ಮಿಚೆಲ್​ ಸ್ಟಾರ್ಕ್​​​ ಮಾರಕ ಬೌಲಿಂಗ್​ಗೆ ತತ್ತರಿಸಿದ ಟೀಮ್​ ಇಂಡಿಯಾ 44.1 ಓವರ್​​ನಲ್ಲಿ ಕೇವಲ 180 ರನ್​ಗೆ ಆಲೌಟ್​ ಆಗಿದೆ. ಮೊದಲ ಟೆಸ್ಟ್​​ನಿಂದ ಹೊರಗುಳಿದಿದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾ 2ನೇ ಪಂದ್ಯಕ್ಕಾಗಿ ಟೀಮ್​ ಇಂಡಿಯಾ ಸೇರಿದ್ರು. ಆದರೆ, 2ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ಇಷ್ಟೇ ಅಲ್ಲ ರಾಹುಲ್​​, ನಿತೀಶ್​ ರೆಡ್ಡಿ ಹೊರತುಪಡಿಸಿ ಮತ್ಯಾರು ಆಡಲಿಲ್ಲ.

ಇನ್ನು, ಪಂದ್ಯದಲ್ಲಿ ಟೀಮ್‌ ಇಂಡಿಯಾ ಆಲ್‌ರೌಂಡರ್‌ ವಾಶಿಂಗ್ಟನ್‌ ಸುಂದರ್‌ ಅವರ ಬದಲಿಗೆ ಅನುಭವಿ ಆರ್‌ ಅಶ್ವಿನ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ. ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ತಂಡಕ್ಕೆ ಮರಳಿದ್ದಾರೆ. ಇವರು ತಂಡಕ್ಕೆ ವಾಪಸ್ ಆಗಿದ್ದ ಕಾರಣ ದೇವದತ್ ಪಡಿಕ್ಕಲ್‌ ಹಾಗೂ ಧ್ರುವ್ ಜುರೇಲ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ವಾಷಿಂಗ್ಟನ್​ ಸುಂದರ್​ಗೆ ಕೊಕ್​ ಯಾಕೆ?

ಮೊದಲ ಟೆಸ್ಟ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ವಾಷಿಂಗ್ಟನ್‌ ಸುಂದರ್ ತಂಡದಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ಅನುಭವಿ ಆಟಗಾರ ಆರ್‌ ಅಶ್ವಿನ್‌ ಅವರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಕಾರಣ ವಾಷಿಂಗ್ಟನ್​ ಸುಂದರ್​ ಅವರು ಹೊಸಬರು ಆಗಿದ್ದು, ಆಸ್ಟ್ರೇಲಿಯಾ ತಂಡದಿಂದ ಸೃಷ್ಟಿಯಾಗೋ ಒತ್ತಡ ಡೀಲ್​ ಮಾಡಲು ಕಷ್ಟ. ಹಾಗಾಗಿ ಆರ್​. ಅಶ್ವಿನ್​​ ಸೂಕ್ತ ಆಟಗಾರನಾಗಿದ್ದು, ಇವರಿಗೆ ಅವಕಾಶ ನೀಡಲಾಗಿದೆ.

ಭಾರತ ತಂಡ ಹೀಗಿದೆ!

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: KL ರಾಹುಲ್​​ನಿಂದ ಕೈ ತಪ್ಪಿದ ಸ್ಥಾನ; ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕ್ಯಾಪ್ಟನ್​ ರೋಹಿತ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment