ಸಾಮಾನ್ಯರಲ್ಲಿ ಸಾಮಾನ್ಯನಾದ ಕಿಂಗ್ ವಿರಾಟ್ ಕೊಹ್ಲಿ..!
ಅದ್ಧೂರಿ ವಿವಾಹ ಬಿಟ್ಟು ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ
ನೀಮ್ ಕರೋಲಿ ಬಾಬಾಗೂ ಇವ್ರಿಗೂ ಇರೋ ನಂಟೇನು?
ಇಡೀ ಭಾರತೀಯ ಕ್ರಿಕೆಟ್ ಲೋಕವೇ ವಿಶ್ವದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿತ್ತು. ಸಚಿನ್, ಧೋನಿಯಿಂದ ಹಿಡಿದು ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳೆಲ್ಲಾ ಈ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಿಂಗ್ ಕೊಹ್ಲಿ ಮಾತ್ರ ಇಲ್ಲಿ ಕಾಣಿಸಲಿಲ್ಲ. ಅದ್ಧೂರಿ ವಿವಾಹವನ್ನ ಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕೀರ್ತನೆ ಕೇಳೋಕೆ ವಿರಾಟ್ ಕೊಹ್ಲಿ ತೆರಳಿದ್ದರು.
ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ..!
ಭಾರತೀಯ ಕ್ರಿಕೆಟ್ ಕಂಡ ಸೂಪರ್ ಸ್ಟಾರ್ಗಳೆಲ್ಲಾ ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಮಸ್ತಿ ಮಾಡಿದ್ರೆ, ವಿರಾಟ್ ಕೊಹ್ಲಿ ದೇವರ ಧ್ಯಾನದಲ್ಲಿ ಮಗ್ನರಾಗಿದ್ರು. ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್ನ ಯುನಿಯನ್ ಚಾಪೆಲ್ನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?
ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದ ಬಳಿಕ ಬಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗಿಯಾಗಿದ್ರು. ಬಳಿಕ ಮರುದಿನವೇ ಲಂಡನ್ಗೆ ಹಾರಿದ್ರು. ಪತ್ನಿ, ಮಕ್ಕಳೊಂದಿಗೆ ವಿರಾಟ್ ವಿಶ್ರಾಂತಿ ದಿನ ಕಳೆಯುತ್ತಿದ್ದಾರೆ. ಇದ್ರ ನಡುವೆ ಕೃಷ್ಣದಾಸ್ ನಡೆಸಿಕೊಡೋ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣನ ಕೀರ್ತನೆಗಳನ್ನ ಆಲಿಸಿ ಆಧ್ಯಾತ್ಮಿಕ ಲೋಕದಲ್ಲಿ ಮೈ ಮರೆತಿದ್ದಾರೆ.
ಕೃಷ್ಣದಾಸ್ ಕೀರ್ತನೆ ಮಿಸ್ ಮಾಡಲ್ಲ
ಇದು ಮೊದಲ ಬಾರಿಯಲ್ಲ. ಈ ಹಿಂದೆ 2023ರಲ್ಲೂ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಒಟ್ಟಾಗಿ ಕೃಷ್ಣದಾಸ್ ನಡೆಸಿಕೊಡೋ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಲಂಡನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಮಾನ್ಯರಂತೆ ತೆರಳಿ ದೇವರ ಧ್ಯಾನ ಮಾಡಿದ್ರು. ಈ ಕೃಷ್ಣ ದಾಸ್ ಅಮೆರಿಕಾ ಮೂಲದ ಕೀರ್ತನೆಕಾರ. ಕೃಷ್ಣನ ಪರಮ ಭಕ್ತ. ಕೃಷ್ಣ ಕೀರ್ತನೆಗಳ ಕಾರ್ಯಕ್ರಮ ದಿನವೂ ಒಂದಲ್ಲ ಒಂದು ಕಡೆ ನಡೆಸಿಕೊಡ್ತಾರೆ. ಹಲವು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಇವ್ರ ಶೋಗೆ, ಸಾವಿರಾರು ಭಕ್ತರು ಜಮಾಯಿಸಿಸ್ತಾರೆ. ಇವ್ರ ಒಂದು ಕಾರ್ಯಕ್ರಮದ ಒಂದು ಟಿಕೆಟ್ನ ಬೆಲೆ 10 ಸಾವಿರಕ್ಕೂ ಹೆಚ್ಚಿದೆ. ಕೀರ್ತನೆಯ ಜೊತೆಗೆ ಈವರೆಗೆ 17ಕ್ಕೂ ಹೆಚ್ಚು ಅಲ್ಭಮ್ಗಳನ್ನ ಕೂಡ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್.. ಕೆಲವರು ಹೀಗೂ ಇದ್ದಾರಾ..?
ಇಬ್ಬರೂ ನೀಮ್ ಕರೋಲಿ ಬಾಬಾರ ಮಹಾನ್ ಭಕ್ತರು
ಕೃಷ್ಣದಾಸ್ರ ಮೂಲ ಹೆಸರು ರಾಮ್ ದಾಸ್ ಎಂದು. ನೀಮ್ ಕರೋಲಿ ಬಾಬಾರ ಪರಮ ಭಕ್ತರು. ಇನ್ಫ್ಯಾಕ್ಟ್ ಇವ್ರಿಗೆ ಕೃಷ್ಣದಾಸ್ ಎಂದು ಹೆಸರಿಟ್ಟಿದ್ದು ಕೂಡ ನೀಮ್ ಕರೋಲಿ ಬಾಬಾ ಅವ್ರೆ. ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಕೂಡ ನೀಮ್ ಕರೋಲಿ ಬಾಬಾರ ಪರಮ ಭಕ್ತರಾಗಿದ್ದಾರೆ. ಕೊಹ್ಲಿ ಮೊಬೈಲ್ನ ವಾಲ್ಪೆಪರ್ನ ಫೋಟೋ ಕೂಡ ಅವ್ರದ್ದೇ. ನೀಮ್ ಕರೋಲಿ ಬಾಬಾರನ್ನು ಕೊಹ್ಲಿ ಆರಾಧಿಸಲು ಆರಂಭಿಸಿದ ಮೇಲೆಯೇ ಈ ಕೃಷ್ಣದಾಸ್ ಪರಿಚಯವಾಗಿದ್ದು. ಅಲ್ಲಿಂದ ಈವರೆಗೆ ಕೊಹ್ಲಿ ಬಿಡುವಿದ್ದಾಗ ಕಾರ್ಯಕ್ರಮಕ್ಕೆ ಮಿಸ್ ಮಾಡದೇ ಹೋಗ್ತಾರೆ.
ನಾನು ನಿಮಗೆ ಪೂಜೆ-ಪುನಸ್ಕಾರ ಮಾಡುವವನ ತರ ಕಾಣ್ತೀನಾ.? ಕೊಹ್ಲಿ ಪ್ರೆಸ್ಮೀಟ್ನಲ್ಲಿ ಈ ಪ್ರಶ್ನೆ ಕೇಳಿದ ದಿನವೊಂದಿತ್ತು. ಅದೇ ಕೊಹ್ಲಿ ಈಗ ಮೇಲಿಂದ ಮೇಲೆ ಟೆಂಪಲ್ ರನ್ ಮಾಡ್ತಾರೆ. ಕೀರ್ತನೆ, ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಈ ಬದಲಾವಣೆಯಿಂದ ಏನು ಲಾಭ ಅಗಿದ್ಯೋ ಇಲ್ವೋ ಗೊತ್ತಿಲ್ಲ.. ಕೊಹ್ಲಿ ಸಾಕಷ್ಟು ನೆಮ್ಮದಿಯಿಂದ ಇದ್ದಂತೆ ಕಾಣ್ತಿರೋದಂತೂ ಸತ್ಯ.
ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸಾಮಾನ್ಯರಲ್ಲಿ ಸಾಮಾನ್ಯನಾದ ಕಿಂಗ್ ವಿರಾಟ್ ಕೊಹ್ಲಿ..!
ಅದ್ಧೂರಿ ವಿವಾಹ ಬಿಟ್ಟು ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ
ನೀಮ್ ಕರೋಲಿ ಬಾಬಾಗೂ ಇವ್ರಿಗೂ ಇರೋ ನಂಟೇನು?
ಇಡೀ ಭಾರತೀಯ ಕ್ರಿಕೆಟ್ ಲೋಕವೇ ವಿಶ್ವದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿತ್ತು. ಸಚಿನ್, ಧೋನಿಯಿಂದ ಹಿಡಿದು ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳೆಲ್ಲಾ ಈ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಿಂಗ್ ಕೊಹ್ಲಿ ಮಾತ್ರ ಇಲ್ಲಿ ಕಾಣಿಸಲಿಲ್ಲ. ಅದ್ಧೂರಿ ವಿವಾಹವನ್ನ ಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕೀರ್ತನೆ ಕೇಳೋಕೆ ವಿರಾಟ್ ಕೊಹ್ಲಿ ತೆರಳಿದ್ದರು.
ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ..!
ಭಾರತೀಯ ಕ್ರಿಕೆಟ್ ಕಂಡ ಸೂಪರ್ ಸ್ಟಾರ್ಗಳೆಲ್ಲಾ ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಮಸ್ತಿ ಮಾಡಿದ್ರೆ, ವಿರಾಟ್ ಕೊಹ್ಲಿ ದೇವರ ಧ್ಯಾನದಲ್ಲಿ ಮಗ್ನರಾಗಿದ್ರು. ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್ನ ಯುನಿಯನ್ ಚಾಪೆಲ್ನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?
ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದ ಬಳಿಕ ಬಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗಿಯಾಗಿದ್ರು. ಬಳಿಕ ಮರುದಿನವೇ ಲಂಡನ್ಗೆ ಹಾರಿದ್ರು. ಪತ್ನಿ, ಮಕ್ಕಳೊಂದಿಗೆ ವಿರಾಟ್ ವಿಶ್ರಾಂತಿ ದಿನ ಕಳೆಯುತ್ತಿದ್ದಾರೆ. ಇದ್ರ ನಡುವೆ ಕೃಷ್ಣದಾಸ್ ನಡೆಸಿಕೊಡೋ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣನ ಕೀರ್ತನೆಗಳನ್ನ ಆಲಿಸಿ ಆಧ್ಯಾತ್ಮಿಕ ಲೋಕದಲ್ಲಿ ಮೈ ಮರೆತಿದ್ದಾರೆ.
ಕೃಷ್ಣದಾಸ್ ಕೀರ್ತನೆ ಮಿಸ್ ಮಾಡಲ್ಲ
ಇದು ಮೊದಲ ಬಾರಿಯಲ್ಲ. ಈ ಹಿಂದೆ 2023ರಲ್ಲೂ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಒಟ್ಟಾಗಿ ಕೃಷ್ಣದಾಸ್ ನಡೆಸಿಕೊಡೋ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಲಂಡನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಮಾನ್ಯರಂತೆ ತೆರಳಿ ದೇವರ ಧ್ಯಾನ ಮಾಡಿದ್ರು. ಈ ಕೃಷ್ಣ ದಾಸ್ ಅಮೆರಿಕಾ ಮೂಲದ ಕೀರ್ತನೆಕಾರ. ಕೃಷ್ಣನ ಪರಮ ಭಕ್ತ. ಕೃಷ್ಣ ಕೀರ್ತನೆಗಳ ಕಾರ್ಯಕ್ರಮ ದಿನವೂ ಒಂದಲ್ಲ ಒಂದು ಕಡೆ ನಡೆಸಿಕೊಡ್ತಾರೆ. ಹಲವು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಇವ್ರ ಶೋಗೆ, ಸಾವಿರಾರು ಭಕ್ತರು ಜಮಾಯಿಸಿಸ್ತಾರೆ. ಇವ್ರ ಒಂದು ಕಾರ್ಯಕ್ರಮದ ಒಂದು ಟಿಕೆಟ್ನ ಬೆಲೆ 10 ಸಾವಿರಕ್ಕೂ ಹೆಚ್ಚಿದೆ. ಕೀರ್ತನೆಯ ಜೊತೆಗೆ ಈವರೆಗೆ 17ಕ್ಕೂ ಹೆಚ್ಚು ಅಲ್ಭಮ್ಗಳನ್ನ ಕೂಡ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್.. ಕೆಲವರು ಹೀಗೂ ಇದ್ದಾರಾ..?
ಇಬ್ಬರೂ ನೀಮ್ ಕರೋಲಿ ಬಾಬಾರ ಮಹಾನ್ ಭಕ್ತರು
ಕೃಷ್ಣದಾಸ್ರ ಮೂಲ ಹೆಸರು ರಾಮ್ ದಾಸ್ ಎಂದು. ನೀಮ್ ಕರೋಲಿ ಬಾಬಾರ ಪರಮ ಭಕ್ತರು. ಇನ್ಫ್ಯಾಕ್ಟ್ ಇವ್ರಿಗೆ ಕೃಷ್ಣದಾಸ್ ಎಂದು ಹೆಸರಿಟ್ಟಿದ್ದು ಕೂಡ ನೀಮ್ ಕರೋಲಿ ಬಾಬಾ ಅವ್ರೆ. ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಕೂಡ ನೀಮ್ ಕರೋಲಿ ಬಾಬಾರ ಪರಮ ಭಕ್ತರಾಗಿದ್ದಾರೆ. ಕೊಹ್ಲಿ ಮೊಬೈಲ್ನ ವಾಲ್ಪೆಪರ್ನ ಫೋಟೋ ಕೂಡ ಅವ್ರದ್ದೇ. ನೀಮ್ ಕರೋಲಿ ಬಾಬಾರನ್ನು ಕೊಹ್ಲಿ ಆರಾಧಿಸಲು ಆರಂಭಿಸಿದ ಮೇಲೆಯೇ ಈ ಕೃಷ್ಣದಾಸ್ ಪರಿಚಯವಾಗಿದ್ದು. ಅಲ್ಲಿಂದ ಈವರೆಗೆ ಕೊಹ್ಲಿ ಬಿಡುವಿದ್ದಾಗ ಕಾರ್ಯಕ್ರಮಕ್ಕೆ ಮಿಸ್ ಮಾಡದೇ ಹೋಗ್ತಾರೆ.
ನಾನು ನಿಮಗೆ ಪೂಜೆ-ಪುನಸ್ಕಾರ ಮಾಡುವವನ ತರ ಕಾಣ್ತೀನಾ.? ಕೊಹ್ಲಿ ಪ್ರೆಸ್ಮೀಟ್ನಲ್ಲಿ ಈ ಪ್ರಶ್ನೆ ಕೇಳಿದ ದಿನವೊಂದಿತ್ತು. ಅದೇ ಕೊಹ್ಲಿ ಈಗ ಮೇಲಿಂದ ಮೇಲೆ ಟೆಂಪಲ್ ರನ್ ಮಾಡ್ತಾರೆ. ಕೀರ್ತನೆ, ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಈ ಬದಲಾವಣೆಯಿಂದ ಏನು ಲಾಭ ಅಗಿದ್ಯೋ ಇಲ್ವೋ ಗೊತ್ತಿಲ್ಲ.. ಕೊಹ್ಲಿ ಸಾಕಷ್ಟು ನೆಮ್ಮದಿಯಿಂದ ಇದ್ದಂತೆ ಕಾಣ್ತಿರೋದಂತೂ ಸತ್ಯ.
ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್