Advertisment

RCB ತಂಡದ ಹಿತಕ್ಕಾಗಿ ಕೊಹ್ಲಿ ಶಾಕಿಂಗ್​ ನಿರ್ಧಾರ; ಕೊನೆಗೂ ಅಸಲಿ ಕಾರಣ ಬಹಿರಂಗ

author-image
Ganesh Nachikethu
Updated On
ಈ ಮೂವರು ಬೌಲರ್ಸ್ ತುಂಬಾನೇ ಡೇಂಜರ್​​.. ಬ್ಯಾಟರ್​​ಗಳು ಎಚ್ಚರದಿಂದ ಆಡಬೇಕು..!
Advertisment
  • ನಾಯಕತ್ವಕ್ಕೆ ರಜತ್​ ಪಾಟೀದಾರ್ ಹೆಸರನ್ನು ಸೂಚಿಸಿದ್ದು ಯಾರು?
  • RCB ಮ್ಯಾನೇಜ್​​ಮೆಂಟ್​ಗೆ ವಿರಾಟ್​ ಕೊಹ್ಲಿ ಕೊಟ್ಟ ಕಾರಣ ಇಲ್ಲಿದೆ
  • ಹೊಸಬರಿಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಸಲಹೆ ನೀಡಿದ್ರಾ?

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಇನ್ನೇನು ಮೂರು ವಾರ ಮಾತ್ರ ಬಾಕಿ ಇದೆ. ಇದೇ ತಿಂಗಳು ಮಾರ್ಚ್​ 22 ರಿಂದ ಅದ್ಧೂರಿಯಾಗಿ ಐಪಿಎಲ್​ ಶುರುವಾಗಲಿದೆ. ಎಲ್ಲ ಫ್ರಾಂಚೈಸಿಗಳು ಭರ್ಜರಿ ತಯಾರಿಯಲ್ಲಿವೆ. ಈ ಬಾರಿ ಉದ್ಘಾಟನೆ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಕೆಕೆಆರ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ.

Advertisment

ರಜತ್ ಪಾಟೀದಾರ್​ಗೆ ಕೊಹ್ಲಿ ಬೆಂಬಲ

ಕ್ಯಾಪ್ಟನ್ಸಿ ರೇಸ್​​ನಲ್ಲಿ ರಜತ್ ಪಾಟಿದಾರ್​ ಹೆಸರು ಮುಂಚೂಣಿಯಲ್ಲಿತ್ತು. ರಜತ್ ಹೆಸರು ಬರುತ್ತಿದ್ದಂತೆ ವಿರಾಟ್ ಕೊಹ್ಲಿಯ ಆಪ್ತ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. 2021ರಿಂದ ಆರ್​​ಸಿಬಿಯಲ್ಲಿರುವ ರಜತ್, ಕೊಹ್ಲಿ ಆಪ್ತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಂತೆಯೇ ರಜತ್ ಕ್ಯಾಪ್ಟನ್ ಆಗಿರೋದರ ಹಿಂದೆ ಕೊಹ್ಲಿ ಬೆಂಬಲ ಇದ್ದೇ ಇದೆ.

ಕೊಹ್ಲಿಗೆ ಕ್ಯಾಪ್ಟನ್ಸಿ ಬೇಡ ಎಂದಿದ್ದೇಕೆ?

ಕೊಹ್ಲಿ ಜೊತೆ ಆರ್‌ಸಿಬಿ ಸಭೆ ನಡೆಸಿತ್ತು. ಕೊಹ್ಲಿಗೆ ನೀವು ನಾಯಕತ್ವ ವಹಿಸಿಕೊಳ್ಳಿ ಎಂದು ಫ್ರಾಂಚೈಸಿ ಮನವಿ ಮಾಡಿತ್ತು. ಆದರೆ ಅದನ್ನು ವಿರಾಟ್ ವಿನಯದಿಂದ ನಿರಾಕರಿಸಿದರು. ನಂತರ ಪಾಟಿದಾರ್​ ಹೆಸರು ಬಂದಿದೆ. ಇದಕ್ಕೆ ಎಲ್ಲರೂ ಒಪ್ಪಿದರು. ಕೊಹ್ಲಿ ಒಪ್ಪಿಗೆ ನೀಡಿದ ನಂತರ ರಜತ್ ಪಾಟಿದಾರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಬ್ಯಾಟಿಂಗ್​​ ಮೇಲೆ ಫೋಕಸ್​ ಮಾಡಲು ಕೊಹ್ಲಿ ಕ್ಯಾಪ್ಟನ್ಸಿ ಬೇಡ ಎಂದರು.

2011ರಿಂದ 2021ರವರೆಗೆ ಸುದೀರ್ಘ 10 ವರ್ಷಗಳ ಕಾಲ ಆರ್​​ಸಿಬಿ ತಂಡವನ್ನ ನಾಯಕನಾಗಿ ವಿರಾಟ್ ಮುನ್ನಡೆಸಿದ್ದಾರೆ. ನಾಯಕತ್ವ ನಿರ್ವಹಿಸಿರೋದ್ರಿಂದ ಮತ್ತೆ ನಾಯಕನಾಗಲು ನೋ ಎಂದಿರೋ ಕೊಹ್ಲಿ, ಹೊಸಬರಿಗೆ ಅವಕಾಶ ನೀಡಲು ಸಲಹೆ ನೀಡಿದ್ದಾರೆ. ವಿರಾಟ್​ ಹೆಚ್ಚಂದ್ರೆ ಮುಂದಿನ 4-5 ಸೀಸನ್​ ಆಡಬಹುದು. ಹೀಗಾಗಿ ಹೊಸ ಲೀಡರ್​ನ ಗ್ರೂಮ್​ ಮಾಡೋ ಕನಸು ಕಾಣ್ತಿದ್ದಾರೆ.

Advertisment

ಇದನ್ನೂ ಓದಿ: Jio, Airtel, Vi; ನಿಮ್ಮ ಸಿಮ್ ಬಳಕೆದಾರರಿಗೆ ಬಿಗ್​ ಶಾಕ್​​; ಇನ್ಮುಂದೆ ಇಷ್ಟು ಮಿನಿಮಮ್​ ರೀಚಾರ್ಜ್​ ಮಾಡಲೇಬೇಕು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment