RCB ಅಭಿಮಾನಿಗಳನ್ನ ಬಿಟ್ಟೂ ಬಿಡದೇ ಕಾಡ್ತಿದೆ ಕೊಹ್ಲಿ ನಿರ್ಧಾರ.. ಕಿಂಗ್ ಇಷ್ಟ ಆಗೋದು ಇದಕ್ಕೆ..!

author-image
Ganesh
Updated On
ಆರ್​​ಸಿಬಿ ಮುಂದಿನ ಕ್ಯಾಪ್ಟನ್​​ ಯಾರು? ಎಂದು ಸ್ಫೋಟಕ ಸುಳಿವು ಕೊಟ್ಟ ಮುಖ್ಯ ಕೋಚ್​; ಕೊಹ್ಲಿ ಕಥೆಯೇನು?
Advertisment
  • ಐಪಿಎಲ್ 2025ಕ್ಕೆ ಆರ್​ಸಿಬಿ ಸಕಲ ಸಿದ್ಧತೆ
  • ಕ್ಯಾಪ್ಟನ್​ ಹೆಸರು ಘೋಷಣೆ, ರಜತ್ ಸಾರಥಿ
  • ಜಗ ಮೆಚ್ಚಿತು ಕೊಹ್ಲಿಯ ಈ ನಿರ್ಧಾರ, ಏನದು?

ಕೊಹ್ಲಿ ಮತ್ತೆ ಆರ್​​ಸಿಬಿಯ ಸಿಂಹಾಸನ ಏರ್ತಾರೆ ಅಂದುಕೊಂಡಿದ್ದ ಫ್ಯಾನ್ಸ್​ಗೆ ಐಪಿಎಲ್​ಗೂ ಮುನ್ನವೇ ನಿರಾಸೆಯಾಗಿದೆ. ಕೊಹ್ಲಿ ಕ್ಯಾಪ್ಟೆನ್ಸಿ ಆಫರ್​ನ ರಿಜೆಕ್ಟ್​ ಮಾಡಿದ್ದೂ ಆಯ್ತು. ರಜತ್​​ ಪಾಟಿದಾರ್​​ಗೆ​ ಪಟ್ಟ ಕಟ್ಟಿದ್ದೂ ಆಯ್ತು. ಆರ್​​ಸಿಬಿಯ ನಾಯಕತ್ವದ ಆಫರ್​​ನ ಕೊಹ್ಲಿ ರಿಜೆಕ್ಟ್​ ಮಾಡಿದ್ಯಾಕೆ? ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆ ಇನ್ನೂ ಅಭಿಮಾನಿಗಳನ್ನ ಕಾಡ್ತಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 18ಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿಯಾಗಿ ಸಜ್ಜಾಗಿದೆ. ಯುವ ಕ್ರಿಕೆಟಿಗ ರಜತ್​ ಪಾಟಿದಾರ್​ಗೆ ಪಟ್ಟಾಭಿಷೇಕ ಮಾಡಿರೋ ಆರ್​​ಸಿಬಿ ಕ್ಯಾಂಪ್​ನಲ್ಲೀಗ ಹೊಸ ಅಧ್ಯಾಯ ಶುರುವಾಗಿದೆ. ಹೊಸ ಸೀಸನ್​​ನಲ್ಲಿ, ಹೊಸ ಕ್ಯಾಪ್ಟನ್​​, ಹೊಸ ಛಲ, ಹೊಸ ಹುರುಪಿನೊಂದಿಗೆ ಸುದೀರ್ಘ 17 ಸೀಸನ್​​​ಗಳ ಹಳೆ ಕನಸಾದ ಕಪ್​ ಗೆಲುವನ್ನ ಟಾರ್ಗೆಟ್​ ಮಾಡಿದೆ.

ಇದನ್ನೂ ಓದಿ: ‘ಈ ತರಹದ ಮದುವೆ ಎಕ್ಸ್​ಪೆಕ್ಟ್​ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?

publive-image

RCB ಕ್ಯಾಪ್ಟನ್ಸಿ ಆಫರ್​​​ ರಿಜೆಕ್ಟ್​ ಮಾಡಿದ ಕೊಹ್ಲಿ

ಐಪಿಎಲ್​ ಮೆಗಾ ಆಕ್ಷನ್​ ಅಂತ್ಯದ ಬಳಿಕ ವಿರಾಟ್​ ಕೊಹ್ಲಿ ಮತ್ತೆ ಆರ್​​​ಸಿಬಿ ಕ್ಯಾಪ್ಟನ್​ ಆಗ್ತಾರೆ ಅನ್ನೋ ಸುದ್ದಿ ಸಖತ್​ ಸದ್ದು ಮಾಡಿತ್ತು. ಕೊಹ್ಲಿಗೆ ಪಟ್ಟಕಟ್ಟಲು ಫ್ರಾಂಚೈಸಿ ಮುಂದಾಗಿರೋದನ್ನ ಮ್ಯಾನೇಜ್​ಮೆಂಟ್​ನ ಮೂಲಗಳೂ ಕೂಡ ಕನ್ಫರ್ಮ್ ಮಾಡಿದ್ವು. ಹೀಗಾಗಿ ಕಿಂಗ್​ ಕೊಹ್ಲಿ ಮತ್ತೊಮ್ಮೆ ನಾಯಕತ್ವದ ಸಿಂಹಾಸನವೇರೋದು ಕನ್ಫರ್ಮ ​ ಅನ್ನೋದು ಆರ್​​ಸಿಬಿ ಫ್ಯಾನ್ಸ್​ ಮನದಾಳವಾಗಿತ್ತು. ಫ್ರಾಂಚೈಸಿ ಮನವೊಲಿಕೆಗೆ ಒಪ್ಪದ ಕೊಹ್ಲಿ, ಹೊಸ ಆಟಗಾರನಿಗೆ ನಾಯಕತ್ವ ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ನಾಯಕತ್ವ ರಿಜೆಕ್ಟ್ ಮಾಡ್ತಿರೋದಕ್ಕೆ ಕಾರಣ ನೀಡಿದ್ದಾರೆ.

ಫಾರ್ಮ್​ ಸಮಸ್ಯೆ..!

ಕಳೆದ ಒಂದು ವರ್ಷದಿಂದ ಕೊಹ್ಲಿ ಫಾರ್ಮ್​ ಸಮಸ್ಯೆಯಿಂದ ಬಳಲ್ತಿದ್ದಾರೆ. ಇನ್​​​ಕನ್ಸಿಸ್ಟೆನ್ಸಿ ಕೊಹ್ಲಿಯನ್ನ ಬಿಡದೇ ಕಾಡ್ತಿದೆ. ಟೀಮ್​ ಇಂಡಿಯಾದಲ್ಲೂ ಸ್ಥಾನ ಅಲುಗಾಡ್ತಿದೆ. ಹೀಗಾಗಿ ಈಗ ಕೊಹ್ಲಿ ಬ್ಯಾಟಿಂಗ್​ ಮೇಲೆ ಹೆಚ್ಚು ಫೋಕಸ್​ ಮಾಡಬೇಕಿದೆ. ರನ್​ಗಳಿಸಿ ಟೀಕೆಗಳಿಗೆ ಉತ್ತರಿಸಬೇಕಿದೆ. ಈ ಒತ್ತಡದ ನಡುವೆ ನಾಯಕತ್ವದ ಜವಾಬ್ದಾರಿ ನಿಭಾಯಿಸೋದು ಸವಾಲಿನ ಕೆಲಸ. ಕೊಹ್ಲಿ ನಾಯಕತ್ವದ ಆಫರ್​ನ ತಿರಸ್ಕರಿಸಿದ್ರ ಹಿಂದಿರೋ ಮೇನ್​ ರೀಸನ್​ ಇದೇ.

ಇದನ್ನೂ ಓದಿ: ಡಾಲಿ ಮದುವೆಯಲ್ಲಿ ಗಣ್ಯರು, ಫ್ಯಾನ್ಸ್‌ಗೂ ಒಂದೇ ಭೋಜನದ ವ್ಯವಸ್ಥೆ; ಊಟದ ಮೆನು ಇಲ್ಲಿದೆ!

publive-image

11 ವರ್ಷ ಸುದೀರ್ಘ ಸಾರಥ್ಯ..

ಆರ್​​ಸಿಬಿ ತಂಡದ ನಾಯಕನಾಗಿ ಕೊಹ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 2011ರಿಂದ 2021ರವರೆಗೆ ಸುದೀರ್ಘ 10 ವರ್ಷಗಳ ಕಾಲ ಆರ್​​ಸಿಬಿ ತಂಡವನ್ನ ಮುನ್ನಡೆಸಿದ್ರು. ಇದೇ ಸಮಯದಲ್ಲಿ ಟೀಮ್​ ಇಂಡಿಯಾಗೂ ನಾಯಕನಾಗಿದ್ರು. ಸುದೀರ್ಘ ಕಾಲ ನಾಯಕತ್ವ ನಿರ್ವಹಿಸಿರೋದ್ರಿಂದ ಮತ್ತೆ ನಾಯಕನಾಗಲು ನೋ ಎಂದಿರೋ ಕೊಹ್ಲಿ, ಹೊಸಬರಿಗೆ ಅವಕಾಶ ನೀಡಲು ಸಲಹೆ ನೀಡಿದ್ದಾರೆ.

ಹೊಸ ಲೀಡರ್​ಗೆ ಮತ್ತೊಬ್ಬ ಲೀಡರ್​ ಬೆಳೆಸೋ ಕನಸು

ವಿರಾಟ್​ ಕೊಹ್ಲಿಗೀಗ 36 ವರ್ಷ.. ಹೆಚ್ಚಂದ್ರೆ ಮುಂದಿನ 4-5 ಸೀಸನ್​ ಆಡಬಹುದು. ಹೀಗಾಗಿ ಹೊಸ ಲೀಡರ್​ನ ಗ್ರೂಮ್​ ಮಾಡೋ ಕನಸು ಕಾಣ್ತಿದ್ದಾರೆ. ಐಪಿಎಲ್​ ಆರಂಭದಿಂದ ಈವರೆಗೂ ಆರ್​​ಸಿಬಿ ಭಾಗವಾಗಿರೋ ಕೊಹ್ಲಿ, ತಾನು ತಂಡದಲ್ಲಿದ್ದಾಗಲೇ ಮತ್ತೊಬ್ಬ ಲೀಡರ್​ನ ಬೆಳೆಸುವ ಲೆಕ್ಕಾಚಾರದಲ್ಲಿದ್ದಾರೆ. ಈಗ ಸಾರಥ್ಯವನ್ನ ವಹಿಸಿಕೊಂಡಿರೋ ರಜತ್​ ಪಾಟಿದಾರ್ ಹೆಸರನ್ನು ನಾಯಕತ್ವಕ್ಕೆ ಸೂಚಿಸಿದ್ದೆ ಕೊಹ್ಲಿ!

ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ ವಿರುದ್ಧ ಕೇಸ್ ದಾಖಲಿಸಿದ್ದೇನೆ ಎಂದ ಪ್ರಕಾಶ್ ರಾಜ್; ಇಬ್ಬರ ಮಧ್ಯೆ ಏನಾಯ್ತು..?

publive-image

ಯುವಕರಿಗೆ ಆದ್ಯತೆ

ಟಿ20 ಅನ್ನೋದು ಸದ್ಯಕ್ಕಂತೂ ಯಂಗ್​​ಸ್ಟರ್ಸ್​ ಗೇಮ್​ ಆಗಿ ಗುರುತಿಸಿಕೊಂಡಿದೆ. ಹೀಗಾಗಿ ಯಂಗ್​​ಸ್ಟರ್ಸ್​ಗೆ ಹೆಚ್ಚಿನ ಅವಕಾಶ ನೀಡಬೇಕಿದೆ. ಕೊಹ್ಲಿ ಈಗ ಟಿ20 ಇಂಟರ್​​ನ್ಯಾಷನಲ್ಸ್​ಗೆ ರಿಟೈರ್​​ಮೆಂಟ್​ ಘೋಷಿಸಿದ್ದಾರೆ. ಕೊಹ್ಲಿಯ ಟಿ20 ಆಟ ಏನಿದ್ರೂ ಆರ್​​ಸಿಬಿಗೆ ಮಾತ್ರ ಸೀಮಿತವಾಗಿದೆ. ಸಾರಥ್ಯವಹಿಸಿಕೊಂಡು ಕಪ್​ ಗೆಲ್ಲಿಸಿದ್ರೂ, ಟೀಮ್​ ಇಂಡಿಯಾ ಪರ ಆಡೋಕೆ ಸಾಧ್ಯವಿಲ್ಲ. ಅದೇ ಒಬ್ಬ ಯಂಗ್​​ಸ್ಟರ್​ ಆರ್​​​ಸಿಬಿ ಪರ ಶೈನ್​ ಆಗಿ ಕಪ್​ ಗೆಲ್ಲಿಸಿದ್ರೆ, ಅದೃಷ್ಟವಿದ್ರೆ ಆತನಿಗೆ ಟೀಮ್​ ಇಂಡಿಯಾ ಡೋರ್​ ತೆಗೆಯಲಿದೆ. ಹೀಗಾಗಿ ಯಂಗ್​​ಸ್ಟರ್ಸ್​ಗೆ ಹೆಚ್ಚಿನ ಆದ್ಯತೆ ನೀಡೋದು ಕೊಹ್ಲಿ ನಿರ್ಧಾರದ ಹಿಂದಿನ ಉದ್ದೇಶಗಳಲ್ಲಿ ಒಂದಾಗಿದೆ.

ವಿವಾದದಿಂದ ದೂರ ಇರಲು ಪ್ರಯತ್ನ

ನಾಯಕತ್ವ ಅಂದ್ರೆ ಅಧಿಕಾರ ಮಾತ್ರ ಸಿಗಲ್ಲ. ಆಗಾಗ ವಿವಾದಗಳಿಗೂ ಆಹಾರವಾಗಬೇಕಾಗುತ್ತದೆ. ವಿವಾದಗಳು, ಟೀಕೆಗಳು ಮೆಂಟಲಿ ಡಿಸ್ಟರ್ಬ್​ ಮಾಡಲಿವೆ. ಅದ್ರಲ್ಲೂ ಆರ್​ಸಿಬಿ ನಾಯಕತ್ವ ಫ್ರೆಶರ್​ ಸ್ವಲ್ಪ ಹೆಚ್ಚೇ ಇರುತ್ತೆ. ಇದೆಲ್ಲದರಿಂದ ದೂರ ಇರಲು ವಿರಾಟ್​​ ಕೊಹ್ಲಿ ಸರ್ವ ಪ್ರಯತ್ನ ಮಾಡ್ತಿದ್ದಾರೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಕೊಹ್ಲಿ ನಾಯಕತ್ವವನ್ನ ರಿಜೆಕ್ಟ್​ ಮಾಡಿದ್ದಾರೆ. ಇದೇ ವೇಳೆ ನಿನ್ನೆ ಬೆನ್ನ ಹಿಂದೆ ನಾನಿದ್ದೇನೆ ಎಂದು ಬಹಿರಂಗವಾಗಿ ಹೇಳಿ ನೂತನ ನಾಯಕ ರಜತ್​ ಬೆಂಬಲಕ್ಕೆ ನಿಂತಿದ್ದಾರೆ. ಆನ್​ಫೀಲ್ಡ್​ನಲ್ಲಿ ಪಾಟಿದಾರ್​​ಗೆ ಅಗತ್ಯ ಮಾರ್ಗದರ್ಶನ ನೀಡೋ ವಾಗ್ದಾನ ಮಾಡಿದ್ದಾರೆ. ಕೊಹ್ಲಿಯ ಈ ಗುಣವೇ ಅಭಿಮಾನಿಗಳಿಗೆ ಇಷ್ಟವಾಗೋದು.

ಇದನ್ನೂ ಓದಿ: RCB ಫ್ಯಾನ್ಸ್​ ಕುತೂಹಲಕ್ಕೆ ಒಂದೇ ಉತ್ತರ.. Heartbroken ಎಂದ ಶ್ರೇಯಾಂಕ ಪಾಟೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment