ರಾಜಧಾನಿಯಲ್ಲಿ ಗಂಡ-ಹೆಂಡತಿ ಮತ್ತು ಅವಳ ಕಥೆ
ಪತಿ ಜೊತೆ ಅಕ್ರಮ ಸಂಬಂಧ, ಪತ್ನಿ ಭದ್ರಕಾಳಿ!
ಯುವತಿ ಮನೆ ಮೇಲೆ ಪತ್ನಿ ದಾಳಿ, ಪೀಸ್ಪೀಸ್
ಬೆಂಗಳೂರು: ಪತಿಯ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪತ್ನಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರೋರಾತ್ರಿ ಯುವತಿ ಮನೆಯ ಮೇಲೆ ದಾಳಿ ಮಾಡಿ ಕಿಟಕಿ, ಪೀಠೋಪಕರಣ, ಕಾರು ಸೇರಿದಂತೆ ಎಲ್ಲಾ ಪೀಸ್ ಪೀಸ್ ಮಾಡಿದ್ದಾರೆ.
ಯುವತಿಯ ಮನೆಯ ಕಿಟಕಿ, ಕಾರುಗಳ ಗ್ಲಾಸ್ ಪುಡಿ ಪುಡಿ
ಮನೆಯೊಂದರ ಮೇಲೆ ದಾಳಿ ಮಾಡಿ ಕಿಟಕಿ, 2 ಕಾರುಗಳ ಗ್ಲಾಸ್ಗಳನ್ನು ಪುಡಿ ಮಾಡ್ತಿರೋದಕ್ಕೆ ಕಾರಣ ಪತಿಯ ಅಕ್ರಮ ಸಂಬಂಧ. ಈಕೆ ಹೆಸರು ಸಮಂತಾ, ಉದ್ಯಮಿ ಶರಣ್ ಎಂಬುವವರ ಪತ್ನಿ. ಹಾಗೂ ಇವರು ಶರಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆನ್ನಲಾದ ಯುವತಿ.
ಶರಣ್ ಪತ್ನಿ ಸಮಂತಾ ಕಡೆಯವರಿಂದ ಗೂಂಡಾಗಿರಿ
ಪತಿ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಅಂತ ಆರೋಪಿಸಿ ಸಮಂತಾ ಕಡೆಯವರು ಯುವತಿಯ ಮನೆ ಮೇಲೆ ದಾಳಿ ಮಾಡಿದ್ದಾರಂತೆ. ಬೆಂಗಳೂರಿನ ಬಿಳೇಶಿವಾಲೆ ಸಮೀಪದ ಮಾರುತಿ ಲೇಔಟ್ನಲ್ಲಿರುವ ಮನೆಯ ಕಿಟಕಿ, ಬಾಗಿಲು, ಎರಡು ಕಾರಿನ ಗಾಜುಗಳನ್ನು ಹೊಡೆದು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಂತ ಯುವತಿ ಆರೋಪಿಸಿದ್ದಾರೆ. ಮಾತ್ರವಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ಕೊತ್ತನೂರು ಠಾಣೆಯಲ್ಲಿ ಸಮಂತಾ, ಕೆಂಪರಾಜು, ಶರತ್ ವಿರುದ್ಧ ದೂರು ನೀಡಿದ್ದಾರೆ.
ಅಕ್ರಮ ಸಂಬಂಧದ ಬಗ್ಗೆ ಯುವತಿ ಹೇಳಿದ್ದೇನು?
ಇನ್ನು ಇತ್ತ ಯುವತಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಶರಣ್ ಪತ್ನಿ ಸಮಂತ ಹೇಳಿದ್ದಾರೆ. ಮಾತ್ರವಲ್ಲದೆ ಅವಳಿಗೆ ನನ್ನ ಪತಿಯಿಂದ ಒಂದರಿಂದ ಎರಡು ಕೋಟಿವರೆಗೆ ಹಣ ಹೋಗಿದೆ ಅಂತ ಆರೋಪಿಸಿದ್ದಾರೆ. ಸದ್ಯ ಹಾನಿಗೊಳಗಾದ ಯುವತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ನಷ್ಟ ಭರಿಸಬೇಕೆಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜಧಾನಿಯಲ್ಲಿ ಗಂಡ-ಹೆಂಡತಿ ಮತ್ತು ಅವಳ ಕಥೆ
ಪತಿ ಜೊತೆ ಅಕ್ರಮ ಸಂಬಂಧ, ಪತ್ನಿ ಭದ್ರಕಾಳಿ!
ಯುವತಿ ಮನೆ ಮೇಲೆ ಪತ್ನಿ ದಾಳಿ, ಪೀಸ್ಪೀಸ್
ಬೆಂಗಳೂರು: ಪತಿಯ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪತ್ನಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರೋರಾತ್ರಿ ಯುವತಿ ಮನೆಯ ಮೇಲೆ ದಾಳಿ ಮಾಡಿ ಕಿಟಕಿ, ಪೀಠೋಪಕರಣ, ಕಾರು ಸೇರಿದಂತೆ ಎಲ್ಲಾ ಪೀಸ್ ಪೀಸ್ ಮಾಡಿದ್ದಾರೆ.
ಯುವತಿಯ ಮನೆಯ ಕಿಟಕಿ, ಕಾರುಗಳ ಗ್ಲಾಸ್ ಪುಡಿ ಪುಡಿ
ಮನೆಯೊಂದರ ಮೇಲೆ ದಾಳಿ ಮಾಡಿ ಕಿಟಕಿ, 2 ಕಾರುಗಳ ಗ್ಲಾಸ್ಗಳನ್ನು ಪುಡಿ ಮಾಡ್ತಿರೋದಕ್ಕೆ ಕಾರಣ ಪತಿಯ ಅಕ್ರಮ ಸಂಬಂಧ. ಈಕೆ ಹೆಸರು ಸಮಂತಾ, ಉದ್ಯಮಿ ಶರಣ್ ಎಂಬುವವರ ಪತ್ನಿ. ಹಾಗೂ ಇವರು ಶರಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆನ್ನಲಾದ ಯುವತಿ.
ಶರಣ್ ಪತ್ನಿ ಸಮಂತಾ ಕಡೆಯವರಿಂದ ಗೂಂಡಾಗಿರಿ
ಪತಿ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಅಂತ ಆರೋಪಿಸಿ ಸಮಂತಾ ಕಡೆಯವರು ಯುವತಿಯ ಮನೆ ಮೇಲೆ ದಾಳಿ ಮಾಡಿದ್ದಾರಂತೆ. ಬೆಂಗಳೂರಿನ ಬಿಳೇಶಿವಾಲೆ ಸಮೀಪದ ಮಾರುತಿ ಲೇಔಟ್ನಲ್ಲಿರುವ ಮನೆಯ ಕಿಟಕಿ, ಬಾಗಿಲು, ಎರಡು ಕಾರಿನ ಗಾಜುಗಳನ್ನು ಹೊಡೆದು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಂತ ಯುವತಿ ಆರೋಪಿಸಿದ್ದಾರೆ. ಮಾತ್ರವಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ಕೊತ್ತನೂರು ಠಾಣೆಯಲ್ಲಿ ಸಮಂತಾ, ಕೆಂಪರಾಜು, ಶರತ್ ವಿರುದ್ಧ ದೂರು ನೀಡಿದ್ದಾರೆ.
ಅಕ್ರಮ ಸಂಬಂಧದ ಬಗ್ಗೆ ಯುವತಿ ಹೇಳಿದ್ದೇನು?
ಇನ್ನು ಇತ್ತ ಯುವತಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಶರಣ್ ಪತ್ನಿ ಸಮಂತ ಹೇಳಿದ್ದಾರೆ. ಮಾತ್ರವಲ್ಲದೆ ಅವಳಿಗೆ ನನ್ನ ಪತಿಯಿಂದ ಒಂದರಿಂದ ಎರಡು ಕೋಟಿವರೆಗೆ ಹಣ ಹೋಗಿದೆ ಅಂತ ಆರೋಪಿಸಿದ್ದಾರೆ. ಸದ್ಯ ಹಾನಿಗೊಳಗಾದ ಯುವತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ನಷ್ಟ ಭರಿಸಬೇಕೆಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ