newsfirstkannada.com

ಪ್ರೇಯಸಿ ಜೊತೆ ಇರುವಾಗ ಪತ್ನಿಯ ಕೈಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್​​

Share :

Published July 25, 2024 at 7:13am

Update July 25, 2024 at 8:53am

    ಹಾಸಿಗೆ ಮೀರಿ ಕಾಲು ಚಾಚಿದ ಹೆಡ್​ಕಾನ್ಸ್​​ಟೇಬಲ್

    ಮತ್ತೊಬ್ಬಳ ಜೊತೆ ರೂಮ್​ ಒಳಗಿದ್ದಾಗ ತಗ್ಲಾಕೊಂಡ ಪೊಲೀಸ್​

    ಪೊಲೀಸಪ್ಪನ ರಂಗಿನಾಟವನ್ನು ರೆಡ್​​ಹ್ಯಾಂಡ್​ ಆಗಿ ಹಿಡಿದ ಪತ್ನಿ

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತ ಗಾದೆನೇ ಇದೆ‌. ಆದ್ರೆ ಇಲ್ಲೊಬ್ಬ ಪೊಲೀಸ್ ಹಾಸಿಗೆ ಮೀರಿ ಕಾಲು ಚಾಚಿ ಸದ್ಯ ಪೇಚಿಗೆ ಸಿಲುಕಿದ್ದಾನೆ. ರಾಯಚೂರಿನ ಸಿರವಾರ ಪೊಲೀಸ್ ರಂಗಿನಾಟಕ್ಕೆ ಖುದ್ದು ಪತ್ನಿಯೇ ಕೆರಳಿದ್ದು ಪ್ರೇಯಸಿ ಜೊತೆ ಇದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ‌.

ಮನೆಯಲ್ಲಿ ಪ್ರೇಯಸಿ ಜೊತೆ ಹಾಯಾಗಿದ್ದಾಗ ರೆಡ್​ಹ್ಯಾಂಡ್​ ಆಗಿ ಪತ್ನಿ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೊಲೀಸಪ್ಪ ಕ್ಷಣಕಾಲ ಪಜೀತಿಗೊಳಗಾಗಿದ್ದಾನೆ. 

ಪೊಲೀಸ್ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ

ವೃತ್ತಿಯಲ್ಲಿ ಈ ಮಹಿಳೆ ಪೊಲೀಸ್ ಕಾನ್​ಸ್ಟೇಬಲ್. ಈಕೆಯ​ ಪತಿಯ ಹೆಸರು ರಾಜ್ ಮಹಮ್ಮದ್. ಈತ ಪೊಲೀಸ್ ಹೆಡ್​ಕಾನ್ಸ್​​ಟೇಬಲ್ ಆಗಿದ್ದು, ರೂಮ್​ ಒಳಗೆ ಮತ್ತೊಬ್ಬಳ ಜೊತೆ ರೆಡ್​ ಹ್ಯಾಂಡ್​ ಆಗಿ ತಗ್ಲಾಕೊಂಡಿದ್ದಾನೆ.

 

ರಾಯಚೂರು ಜಿಲ್ಲೆ ಸಿರವಾರ ಪೊಲೀಸ್ ಠಾಣೆಯ ಪೊಲೀಸಪ್ಪನ ರಂಗಿನಾಟಕ್ಕೆ ರೋಸಿ ಹೋಗಿ ಖುದ್ದು ಪತ್ನಿಯೇ ಫೀಲ್ಡ್​ಗೆ ಇಳಿದಿದ್ದಾಳೆ‌. ಇಂಟ್ರೆಸ್ಟಿಂಗ್ ಏನಂದ್ರೆ ಇತ್ತ ಪತಿ ಸಿರವಾರ ಪೊಲೀಸ್ ಠಾಣೆಯ ಹೆಡ್​​ಕಾನ್ಸ್​ಸ್ಟೇಬಲ್​ ಆಗಿ ಕೆಲಸ ಮಾಡ್ತಿದ್ರೆ ಅತ್ತ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾನ್ಸ್​ಟೇಬಲ್​ ಆಗಿದ್ದಾರೆ. ಇಬ್ಬರೂ ಪೊಲೀಸ್ ಡಿಪಾರ್ಟ್ಮೆಂಟ್​ನಲ್ಲಿದ್ದು, ಕಳೆದ ನಾಲ್ಕು ವರ್ಷದಿಂದ ದೂರ ದೂರ ವಾಸ ಮಾಡ್ತಿದ್ದಾರೆ. ಇದಕ್ಕೆ ಕಾರಣ ಓರ್ವ ಲೇಡಿ.

ಇದನ್ನೂ ಓದಿ: ನಟ ದರ್ಶನ್ ಬೇಡಿಕೆ ಈಡೇರುತ್ತಾ? ಕುತೂಹಲ ಮೂಡಿಸಿದ ಇಂದಿನ ಜಡ್ಜ್ ಆದೇಶ

ಸರಳ ಎಂಬ ಮಹಿಳೆ ಜೊತೆ ಸಿರವಾರ ಹೆಡ್​​ಕಾನ್ಸ್​ಸ್ಟೇಬಲ್​ ರಾಜ್ ಮಹಮ್ಮದ್ ಸಿರವಾರದ ತಮ್ಮದೇ ಮನೆಯಲ್ಲಿ ಲವ್ವಿಡವ್ವಿ ನಡೆಸಿದ್ದ. ಈ ವಿಷಯ ತಿಳಿದ ಪತ್ನಿ ಪ್ಯಾರಿ ಬೇಗಂ, ಪ್ರೇಯಸಿ ಜೊತೆ ಪತಿ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾಳೆ. ಅಷ್ಟೇ ಅಲ್ಲ, ಗಂಡ ಮತ್ತು ಪ್ರೇಯಸಿಯನ್ನು ಮನೆಯಲ್ಲಿ ಕೂಡಿ ಹಾಕಿ ಸ್ಥಳದಲ್ಲೇ ರಾಯಚೂರು ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಎಸ್ಪಿ ಸೂಚನೆಯ ಮೇರೆಗೆ ಸಿರವಾರ ಠಾಣೆ ಪಿಎಸ್ಐ ಗುರುಚಂದ್ರ ಯಾದವ್ ಕಾರ್ಯಾಚರಣೆ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 8 ಶವ ಹೊರಕ್ಕೆ, ಪತ್ತೆಯಾಗದ ಇನ್ನೂ ಮೂರು ಜನ

ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನೇ ರಾಜ್ ಮಹಮ್ಮದ್ ದೂರ ಮಾಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಎಸ್ಪಿ ಹಲವು ಬಾರಿ ಬೈದು ಬುದ್ಧಿ ಹೇಳಿದರೂ ಹೆಡ್ ಕಾನ್​ಸ್ಟೇಬಲ್ ಬುದ್ಧಿ ಕಲಿತಿರಲಿಲ್ಲ. ಸದ್ಯ ತನಗಾದ ಅನ್ಯಾಯದ ವಿರುದ್ಧ ಪತಿಯ ವಿರುದ್ಧ ಸಿರವಾರ ಠಾಣೆಗೆ ದೂರು ದಾಖಲಿಸಲು ಪ್ಯಾರಿ ಬೇಗಂ ನಿರ್ಧರಿಸಿದ್ದಾರೆ. ಕಟ್ಟಿಕೊಂಡ ಹೆಂಡತಿಗೆ ಮೋಸ ಮಾಡುವಂತ ಇಂತಹ ಕಾಮುಕರಿಗೆ ಈ ಕಠಿಣ ಶಿಕ್ಷೆ ಆಗಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಯಸಿ ಜೊತೆ ಇರುವಾಗ ಪತ್ನಿಯ ಕೈಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್​​

https://newsfirstlive.com/wp-content/uploads/2024/07/Raichur-3.jpg

    ಹಾಸಿಗೆ ಮೀರಿ ಕಾಲು ಚಾಚಿದ ಹೆಡ್​ಕಾನ್ಸ್​​ಟೇಬಲ್

    ಮತ್ತೊಬ್ಬಳ ಜೊತೆ ರೂಮ್​ ಒಳಗಿದ್ದಾಗ ತಗ್ಲಾಕೊಂಡ ಪೊಲೀಸ್​

    ಪೊಲೀಸಪ್ಪನ ರಂಗಿನಾಟವನ್ನು ರೆಡ್​​ಹ್ಯಾಂಡ್​ ಆಗಿ ಹಿಡಿದ ಪತ್ನಿ

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತ ಗಾದೆನೇ ಇದೆ‌. ಆದ್ರೆ ಇಲ್ಲೊಬ್ಬ ಪೊಲೀಸ್ ಹಾಸಿಗೆ ಮೀರಿ ಕಾಲು ಚಾಚಿ ಸದ್ಯ ಪೇಚಿಗೆ ಸಿಲುಕಿದ್ದಾನೆ. ರಾಯಚೂರಿನ ಸಿರವಾರ ಪೊಲೀಸ್ ರಂಗಿನಾಟಕ್ಕೆ ಖುದ್ದು ಪತ್ನಿಯೇ ಕೆರಳಿದ್ದು ಪ್ರೇಯಸಿ ಜೊತೆ ಇದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ‌.

ಮನೆಯಲ್ಲಿ ಪ್ರೇಯಸಿ ಜೊತೆ ಹಾಯಾಗಿದ್ದಾಗ ರೆಡ್​ಹ್ಯಾಂಡ್​ ಆಗಿ ಪತ್ನಿ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೊಲೀಸಪ್ಪ ಕ್ಷಣಕಾಲ ಪಜೀತಿಗೊಳಗಾಗಿದ್ದಾನೆ. 

ಪೊಲೀಸ್ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ

ವೃತ್ತಿಯಲ್ಲಿ ಈ ಮಹಿಳೆ ಪೊಲೀಸ್ ಕಾನ್​ಸ್ಟೇಬಲ್. ಈಕೆಯ​ ಪತಿಯ ಹೆಸರು ರಾಜ್ ಮಹಮ್ಮದ್. ಈತ ಪೊಲೀಸ್ ಹೆಡ್​ಕಾನ್ಸ್​​ಟೇಬಲ್ ಆಗಿದ್ದು, ರೂಮ್​ ಒಳಗೆ ಮತ್ತೊಬ್ಬಳ ಜೊತೆ ರೆಡ್​ ಹ್ಯಾಂಡ್​ ಆಗಿ ತಗ್ಲಾಕೊಂಡಿದ್ದಾನೆ.

 

ರಾಯಚೂರು ಜಿಲ್ಲೆ ಸಿರವಾರ ಪೊಲೀಸ್ ಠಾಣೆಯ ಪೊಲೀಸಪ್ಪನ ರಂಗಿನಾಟಕ್ಕೆ ರೋಸಿ ಹೋಗಿ ಖುದ್ದು ಪತ್ನಿಯೇ ಫೀಲ್ಡ್​ಗೆ ಇಳಿದಿದ್ದಾಳೆ‌. ಇಂಟ್ರೆಸ್ಟಿಂಗ್ ಏನಂದ್ರೆ ಇತ್ತ ಪತಿ ಸಿರವಾರ ಪೊಲೀಸ್ ಠಾಣೆಯ ಹೆಡ್​​ಕಾನ್ಸ್​ಸ್ಟೇಬಲ್​ ಆಗಿ ಕೆಲಸ ಮಾಡ್ತಿದ್ರೆ ಅತ್ತ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾನ್ಸ್​ಟೇಬಲ್​ ಆಗಿದ್ದಾರೆ. ಇಬ್ಬರೂ ಪೊಲೀಸ್ ಡಿಪಾರ್ಟ್ಮೆಂಟ್​ನಲ್ಲಿದ್ದು, ಕಳೆದ ನಾಲ್ಕು ವರ್ಷದಿಂದ ದೂರ ದೂರ ವಾಸ ಮಾಡ್ತಿದ್ದಾರೆ. ಇದಕ್ಕೆ ಕಾರಣ ಓರ್ವ ಲೇಡಿ.

ಇದನ್ನೂ ಓದಿ: ನಟ ದರ್ಶನ್ ಬೇಡಿಕೆ ಈಡೇರುತ್ತಾ? ಕುತೂಹಲ ಮೂಡಿಸಿದ ಇಂದಿನ ಜಡ್ಜ್ ಆದೇಶ

ಸರಳ ಎಂಬ ಮಹಿಳೆ ಜೊತೆ ಸಿರವಾರ ಹೆಡ್​​ಕಾನ್ಸ್​ಸ್ಟೇಬಲ್​ ರಾಜ್ ಮಹಮ್ಮದ್ ಸಿರವಾರದ ತಮ್ಮದೇ ಮನೆಯಲ್ಲಿ ಲವ್ವಿಡವ್ವಿ ನಡೆಸಿದ್ದ. ಈ ವಿಷಯ ತಿಳಿದ ಪತ್ನಿ ಪ್ಯಾರಿ ಬೇಗಂ, ಪ್ರೇಯಸಿ ಜೊತೆ ಪತಿ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾಳೆ. ಅಷ್ಟೇ ಅಲ್ಲ, ಗಂಡ ಮತ್ತು ಪ್ರೇಯಸಿಯನ್ನು ಮನೆಯಲ್ಲಿ ಕೂಡಿ ಹಾಕಿ ಸ್ಥಳದಲ್ಲೇ ರಾಯಚೂರು ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಎಸ್ಪಿ ಸೂಚನೆಯ ಮೇರೆಗೆ ಸಿರವಾರ ಠಾಣೆ ಪಿಎಸ್ಐ ಗುರುಚಂದ್ರ ಯಾದವ್ ಕಾರ್ಯಾಚರಣೆ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 8 ಶವ ಹೊರಕ್ಕೆ, ಪತ್ತೆಯಾಗದ ಇನ್ನೂ ಮೂರು ಜನ

ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನೇ ರಾಜ್ ಮಹಮ್ಮದ್ ದೂರ ಮಾಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಎಸ್ಪಿ ಹಲವು ಬಾರಿ ಬೈದು ಬುದ್ಧಿ ಹೇಳಿದರೂ ಹೆಡ್ ಕಾನ್​ಸ್ಟೇಬಲ್ ಬುದ್ಧಿ ಕಲಿತಿರಲಿಲ್ಲ. ಸದ್ಯ ತನಗಾದ ಅನ್ಯಾಯದ ವಿರುದ್ಧ ಪತಿಯ ವಿರುದ್ಧ ಸಿರವಾರ ಠಾಣೆಗೆ ದೂರು ದಾಖಲಿಸಲು ಪ್ಯಾರಿ ಬೇಗಂ ನಿರ್ಧರಿಸಿದ್ದಾರೆ. ಕಟ್ಟಿಕೊಂಡ ಹೆಂಡತಿಗೆ ಮೋಸ ಮಾಡುವಂತ ಇಂತಹ ಕಾಮುಕರಿಗೆ ಈ ಕಠಿಣ ಶಿಕ್ಷೆ ಆಗಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More