ಯಾವುದೇ ಕಾರಣಕ್ಕೂ ಬಲವಂತ ಮದುವೆ ಮಾಡಲೇಬೇಡಿ
ಗಂಡನನ್ನು ಬಾತ್ರೂಮ್ನಲ್ಲಿ ಲಾಕ್ ಮಾಡಿ ಹೆಂಡತಿ ಎಸ್ಕೇಪ್
ಹೆಂಡತಿಯನ್ನು ಹುಡುಕಿ ಕೊಡಿ ಎಂದು ಗಂಡ ಪೊಲೀಸ್ ಮೊರೆ
ಬೆಂಗಳೂರು: ನಿಮಗೆ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸಿನಿಮಾ ಗೊತ್ತಿರಬೇಕು ಅಲ್ಲವೇ? ಕುಟುಂಬದ ಒತ್ತಡಕ್ಕೆ ಬೇರೊಬ್ಬರ ಜೊತೆ ಸಪ್ತಪದಿ ತುಳಿದಿದ್ದ ಹೆಣ್ಣು ಮದುವೆ ಆದಮೇಲೂ ಪ್ರಿಯಕರನನ್ನ ಹುಡುಕುತ್ತಾಳೆ. ಅವನನ್ನ ಸೇರೋ ಪ್ರಯತ್ನ ಮಾಡುತ್ತಾಳೆ. ಇಲ್ಲೂ ಸೇಮ್ ಟು ಸೇಮ್. ಆದ್ರೆ ಸಿನಿಮಾ ಕ್ಲೈಮ್ಯಾಕ್ಸ್ ಹ್ಯಾಪಿ ಎಂಡಿಂಗ್ ಆದ್ರೆ, ನಾವು ಈಗ ಹೇಳ್ತಿರೋ ಕಥೆ ಕ್ಲೈಮ್ಯಾಕ್ಸ್ ಬೇರೆಯದ್ದೇ ಆಗಿದೆ.
ಆಕೆ ಅರ್ಪಿತಾ, ಈತ ರಮೇಶ್. ಇಬ್ಬರೂ ದಾಪಂತ್ಯ ಜೀವನಕ್ಕೆ ಕಾಲಿಟ್ಟು ಎರಡು ತಿಂಗಳಾಗಿದೆ ಅಷ್ಟೇ. ಇಂದ್ರ, ಚಂದ್ರ ಅಂತ ಹನಿಮೂನ್ ಮಾಡ್ತಿರಬೇಕಾದ ಟೈಮಿದು. ಆದ್ರೆ ಮೊನ್ನೆ ವಾರದ ಹಿಂದೆ ಆಗಿದ್ದೇ ಬೇರೆ.
ಆಗಸ್ಟ್ 12, ಶನಿವಾರ
ವೃತ್ತಿಯಲ್ಲಿ ನರ್ಸ್ ಆಗಿರೋ ಅರ್ಪಿತಾ ಹಾಗೂ ರಮೇಶ್ ರಾಜರಾಜೇಶ್ವರಿ ನಗರದ ಮನೆಯೊಂದ್ರಲ್ಲಿ ವಾಸವಿದ್ರು. ಆಗಸ್ಟ್ 12ನೇ ತಾರೀಖು ಬೆಳಗ್ಗೆ ಎದ್ದಿದ್ದ ಅರ್ಪಿತಾ ಎಂದಿನಂತೆ ಆಸ್ಪತ್ರೆಗೆ ಹೋಗೋಕೆ ರೆಡಿಯಾಗಿದ್ದಾಳೆ. ನಂತರ ಗಂಡ ರಮೇಶ್ ಎದ್ದು ಬಾತ್ ರೂಮ್ಗೆ ಹೋಗಿದ್ದಾನೆ. ಇದನ್ನೇ ಕಾಯ್ತಿದ್ದ ಅರ್ಪಿತಾ ತಕ್ಷಣ ಮನೆಗೇ ಬೀಗ ಹಾಕ್ಕೊಂಡು ಎಸ್ಕೇಪ್ ಆಗ್ಬಿಟ್ಟಿದ್ದಾಳೆ.
ಎಂಥಾ ಟ್ವಿಸ್ಟ್ ನೋಡಿ.. ಬಾತ್ರೂಮ್ನಿಂದ ಹೊರಬಂದ ರಮೇಶ್ಗೆ ಆಘಾತ.. ಕೊನೆಗೆ ಅಕ್ಕ ಪಕ್ಕದವ್ರ ಸಹಾಯ ಪಡೆದ ರಮೇಶ್ ಮನೆಯಿಂದ ಹೊರ ಬಂದಿದ್ದಾನೆ. ಕಾಲ್ ಮಾಡಿದ್ರೆ ಪತ್ನಿ ನಾಟ್ ರೀಚಬಲ್. ತಕ್ಷಣ ಪತ್ನಿ ಕೆಲಸ ಮಾಡ್ತಿದ್ದ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದಾನೆ. ಆಗಲೇ ಪತ್ನಿಯ ಪ್ರೇಮ ಪುರಾಣ ಹೊರಬಂದಿದ್ದು.
ಲವರ್ ಜತೆ ಎಸ್ಕೇಪ್
ಹೌದು.. ಈ ಹಿಂದೆ ಅರ್ಪಿತಾ ಕೆಲಸ ಮಾಡ್ತಿದ್ದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕಾರ್ತಿಕ್ ಎಂಬಾತನ ಜೊತೆ ಪತ್ನಿಗೆ ಲವ್ನಲ್ಲಿ ಇದ್ದಳು. ಈ ವಿಷಯ ಗೊತ್ತಾದ ಕೂಡಲೇ ರಮೇಶ್ ಆತನನ್ನ ಹುಡುಕಿಕೊಂಡು ಹೋಗಿ ಪತ್ನಿ ಬಗ್ಗೆ ವಿಚಾರಿಸಿದ್ದ. ಈ ವೇಳೆ ನಿನ್ನ ಪತ್ನಿ ಬಿಟಿಎಂ ಲೇಔಟ್ನಲ್ಲಿದ್ದಾಳೆ, ಕರ್ಕೊಂಡ್ ಬರ್ತೀನಿ ಅಂತ ಹೋದ ಕಾರ್ತಿಕ್ ಮೊಬೈಲ್ ಕೂಡ ಆ ನಂತ್ರ ಸ್ವಿಚ್ ಆಫ್.
ಸದ್ಯ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರೋ ರಮೇಶ್, ನನ್ ಹೆಂಡ್ತಿನ ಹುಡುಕಿ ಕೊಡಿ ಅಂತ ಮನವಿ ಮಾಡಿದ್ದಾನೆ. ಅದೇನೇ ಇರ್ಲಿ ಮಕ್ಕಳಿಗೆ ಒತ್ತಾಯ ಮಾಡಿ ಮದುವೆ ಮಾಡಿದ ಪೋಷಕರಿಂದ ಈಗ ಮೂರು ಕುಟುಂಬಗಳು ಕೊರಗುತ್ತಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯಾವುದೇ ಕಾರಣಕ್ಕೂ ಬಲವಂತ ಮದುವೆ ಮಾಡಲೇಬೇಡಿ
ಗಂಡನನ್ನು ಬಾತ್ರೂಮ್ನಲ್ಲಿ ಲಾಕ್ ಮಾಡಿ ಹೆಂಡತಿ ಎಸ್ಕೇಪ್
ಹೆಂಡತಿಯನ್ನು ಹುಡುಕಿ ಕೊಡಿ ಎಂದು ಗಂಡ ಪೊಲೀಸ್ ಮೊರೆ
ಬೆಂಗಳೂರು: ನಿಮಗೆ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸಿನಿಮಾ ಗೊತ್ತಿರಬೇಕು ಅಲ್ಲವೇ? ಕುಟುಂಬದ ಒತ್ತಡಕ್ಕೆ ಬೇರೊಬ್ಬರ ಜೊತೆ ಸಪ್ತಪದಿ ತುಳಿದಿದ್ದ ಹೆಣ್ಣು ಮದುವೆ ಆದಮೇಲೂ ಪ್ರಿಯಕರನನ್ನ ಹುಡುಕುತ್ತಾಳೆ. ಅವನನ್ನ ಸೇರೋ ಪ್ರಯತ್ನ ಮಾಡುತ್ತಾಳೆ. ಇಲ್ಲೂ ಸೇಮ್ ಟು ಸೇಮ್. ಆದ್ರೆ ಸಿನಿಮಾ ಕ್ಲೈಮ್ಯಾಕ್ಸ್ ಹ್ಯಾಪಿ ಎಂಡಿಂಗ್ ಆದ್ರೆ, ನಾವು ಈಗ ಹೇಳ್ತಿರೋ ಕಥೆ ಕ್ಲೈಮ್ಯಾಕ್ಸ್ ಬೇರೆಯದ್ದೇ ಆಗಿದೆ.
ಆಕೆ ಅರ್ಪಿತಾ, ಈತ ರಮೇಶ್. ಇಬ್ಬರೂ ದಾಪಂತ್ಯ ಜೀವನಕ್ಕೆ ಕಾಲಿಟ್ಟು ಎರಡು ತಿಂಗಳಾಗಿದೆ ಅಷ್ಟೇ. ಇಂದ್ರ, ಚಂದ್ರ ಅಂತ ಹನಿಮೂನ್ ಮಾಡ್ತಿರಬೇಕಾದ ಟೈಮಿದು. ಆದ್ರೆ ಮೊನ್ನೆ ವಾರದ ಹಿಂದೆ ಆಗಿದ್ದೇ ಬೇರೆ.
ಆಗಸ್ಟ್ 12, ಶನಿವಾರ
ವೃತ್ತಿಯಲ್ಲಿ ನರ್ಸ್ ಆಗಿರೋ ಅರ್ಪಿತಾ ಹಾಗೂ ರಮೇಶ್ ರಾಜರಾಜೇಶ್ವರಿ ನಗರದ ಮನೆಯೊಂದ್ರಲ್ಲಿ ವಾಸವಿದ್ರು. ಆಗಸ್ಟ್ 12ನೇ ತಾರೀಖು ಬೆಳಗ್ಗೆ ಎದ್ದಿದ್ದ ಅರ್ಪಿತಾ ಎಂದಿನಂತೆ ಆಸ್ಪತ್ರೆಗೆ ಹೋಗೋಕೆ ರೆಡಿಯಾಗಿದ್ದಾಳೆ. ನಂತರ ಗಂಡ ರಮೇಶ್ ಎದ್ದು ಬಾತ್ ರೂಮ್ಗೆ ಹೋಗಿದ್ದಾನೆ. ಇದನ್ನೇ ಕಾಯ್ತಿದ್ದ ಅರ್ಪಿತಾ ತಕ್ಷಣ ಮನೆಗೇ ಬೀಗ ಹಾಕ್ಕೊಂಡು ಎಸ್ಕೇಪ್ ಆಗ್ಬಿಟ್ಟಿದ್ದಾಳೆ.
ಎಂಥಾ ಟ್ವಿಸ್ಟ್ ನೋಡಿ.. ಬಾತ್ರೂಮ್ನಿಂದ ಹೊರಬಂದ ರಮೇಶ್ಗೆ ಆಘಾತ.. ಕೊನೆಗೆ ಅಕ್ಕ ಪಕ್ಕದವ್ರ ಸಹಾಯ ಪಡೆದ ರಮೇಶ್ ಮನೆಯಿಂದ ಹೊರ ಬಂದಿದ್ದಾನೆ. ಕಾಲ್ ಮಾಡಿದ್ರೆ ಪತ್ನಿ ನಾಟ್ ರೀಚಬಲ್. ತಕ್ಷಣ ಪತ್ನಿ ಕೆಲಸ ಮಾಡ್ತಿದ್ದ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದಾನೆ. ಆಗಲೇ ಪತ್ನಿಯ ಪ್ರೇಮ ಪುರಾಣ ಹೊರಬಂದಿದ್ದು.
ಲವರ್ ಜತೆ ಎಸ್ಕೇಪ್
ಹೌದು.. ಈ ಹಿಂದೆ ಅರ್ಪಿತಾ ಕೆಲಸ ಮಾಡ್ತಿದ್ದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕಾರ್ತಿಕ್ ಎಂಬಾತನ ಜೊತೆ ಪತ್ನಿಗೆ ಲವ್ನಲ್ಲಿ ಇದ್ದಳು. ಈ ವಿಷಯ ಗೊತ್ತಾದ ಕೂಡಲೇ ರಮೇಶ್ ಆತನನ್ನ ಹುಡುಕಿಕೊಂಡು ಹೋಗಿ ಪತ್ನಿ ಬಗ್ಗೆ ವಿಚಾರಿಸಿದ್ದ. ಈ ವೇಳೆ ನಿನ್ನ ಪತ್ನಿ ಬಿಟಿಎಂ ಲೇಔಟ್ನಲ್ಲಿದ್ದಾಳೆ, ಕರ್ಕೊಂಡ್ ಬರ್ತೀನಿ ಅಂತ ಹೋದ ಕಾರ್ತಿಕ್ ಮೊಬೈಲ್ ಕೂಡ ಆ ನಂತ್ರ ಸ್ವಿಚ್ ಆಫ್.
ಸದ್ಯ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರೋ ರಮೇಶ್, ನನ್ ಹೆಂಡ್ತಿನ ಹುಡುಕಿ ಕೊಡಿ ಅಂತ ಮನವಿ ಮಾಡಿದ್ದಾನೆ. ಅದೇನೇ ಇರ್ಲಿ ಮಕ್ಕಳಿಗೆ ಒತ್ತಾಯ ಮಾಡಿ ಮದುವೆ ಮಾಡಿದ ಪೋಷಕರಿಂದ ಈಗ ಮೂರು ಕುಟುಂಬಗಳು ಕೊರಗುತ್ತಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ