ರಾಷ್ಟ್ರ ಪ್ರಶಸ್ತಿ ವಿಜೇತ ಸ್ಟಾರ್ ಡೈರೆಕ್ಟರ್ ಮಂಸೋರೆ!
ಮಂಸೋರೆ ವಿರುದ್ಧ ಹೆಂಡತಿಯಿಂದ ಗಂಭೀರ ಆರೋಪ
ಹೆಂಡತಿ ವಿರುದ್ಧವೇ ಕೌಂಟರ್ ಕಂಪ್ಲೈಂಟ್ ಕೊಟ್ಟ ಡೈರೆಕ್ಟರ್
ಬೆಂಗಳೂರು: ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಮತ್ತೊಬ್ಬರಿಗೆ ಮಾರ್ಗದರ್ಶನ ನೀಡೋ ಕಥೆ ಮಾಡಿದ್ದ ಡೈರೆಕ್ಟರ್, ಸತಿಗೆ ಯಾಕೆ ಹೀಗೆ ಮಾಡಿದ್ರು? ಈ ಆರೋಪಕ್ಕೆ ನಿರ್ದೇಶಕರ ಪ್ರತಿ ದೂರೇನು ಎಂಬುದಕ್ಕೆ ಈ ಸ್ಟೋರಿ ಓದಿ.
ಸಾಲು ಸಾಲು ಆರೋಪ ಕೇಳಿ ಬಂದಿರುವುದು ಹರಿವು, 19.20.21 , ಆಕ್ಟ್ 1978, ನಾತಿಚರಾಮಿ ಈ ರೀತಿಯ ಅದ್ಭುತ ಸಿನಿಮಾಗಳ ಮೂಲಕ ರಾಜ್ಯ ರಾಷ್ಟ್ರಪ್ರಶಸ್ತಿಗಳನ್ನ ಗೆದ್ದ ನಿರ್ದೇಶಕ ಮಂಸೋರೆ ವಿರುದ್ಧ.
ಮಂಸೂರೆ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನ ಪತ್ನಿ ಅಖಿಲಾ ಮಾಡಿದ್ದಾರೆ. ಸಿನಿಮಾ ಮಾಡಲು ಹಣ ತರುವಂತೆ ತಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪಿಸಿ ದೂರು ಕೂಡಾ ಕೊಟ್ಟಿದ್ದಾರೆ. ಈ ಸಂಬಂಧ ಮಂಸೋರೆ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಅಲ್ಲದೇ ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ವಿರುದ್ಧವೂ ಅಖಿಲಾ ದೂರು ನೀಡಿದ್ದಾರೆ.
ಅಂದ್ಹಾಗೆ 2021, ಆಗಸ್ಟ್ನಲ್ಲಿ ಮಂಜುನಾಥ್ ಸೋಮಶೇಖರ್ ರೆಡ್ಡಿ ಮತ್ತು ಅಖಿಲಾ ಪ್ರೀತಿಸಿ ಮದುವೆಯಾಗಿದ್ರು. ಎರಡು ವರ್ಷಗಳ ಕಾಲ ಸಂಸಾರ ಕೂಡಾ ಮಾಡಿದ್ರು. ಅಲ್ಲದೇ ಅಖಿಲಾ ಕುಟುಂಬಸ್ಥರು ಮೂವತ್ತು ಲಕ್ಷ ಖರ್ಚು ಮಾಡಿ ಮದುವೆಯನ್ನೂ ಮಾಡಿಕೊಟ್ಟಿದ್ರಂತೆ. ಇಷ್ಟೆಲ್ಲಾ ಆದ್ರೂ ಸಿನಿಮಾ ಮಾಡೋಕೆ ಮತ್ತೆ ಹಣ ತರುವಂತೆ ಪೀಡಿಸುತ್ತಿದ್ದಾರೆ ಅಂತ ಅಖಿಲಾ ತಮ್ಮ ಪತಿಯ ವಿರುದ್ಧವೇ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ಮಂಸೋರೆ ದೂರಿನಲ್ಲೇನಿದೆ..?
ಇನ್ನೂ ಈ ಆರೋಪಕ್ಕೆ ಕೌಂಟರ್ ಕಂಪ್ಲೆಂಟ್ ಕೊಟ್ಟಿರುವ ನಿರ್ದೇಶಕ ಮಂಸೂರೇ, ಪತ್ನಿ ಅಖಿಲಾ ಹಾಗೂ ಆಕೆಯ ಸಹೋದರರ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ನೀಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸುಳ್ಳು ಅಪಪ್ರಚಾರದ ಮೂಲಕ ಆಕೆಯ ಸಹೋದರರು ಪಿತೂರಿ ನಡೆಸಿದ್ದಾರೆ ಅಂತಾ ಆರೋಪಿಸಿದ್ದಾರೆ.
ಒಟ್ಟಾರೆ, ರೀಲ್ ಲೈಫ್ನಲ್ಲಿ ಜನಮೆಚ್ಚುವ ಚಿತ್ರಗಳಿಗೆ ಡೈರೆಕ್ಷನ್ ಮಾಡಿದ್ದ ಮಂಸೋರೆ ಇದೀಗ ತಮ್ಮ ಸಾಂಸಾರಿಕ ಬದುಕಿಗೆ ರಾಂಗ್ ಡೈರೆಕ್ಷನ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ. ಮಂಸೋರೆ ಜೀವನ ಚೈತ್ರದ ಹರಿವು ಬೇರೆ ತಿರುವನ್ನೇ ಪಡೀತಾ ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಷ್ಟ್ರ ಪ್ರಶಸ್ತಿ ವಿಜೇತ ಸ್ಟಾರ್ ಡೈರೆಕ್ಟರ್ ಮಂಸೋರೆ!
ಮಂಸೋರೆ ವಿರುದ್ಧ ಹೆಂಡತಿಯಿಂದ ಗಂಭೀರ ಆರೋಪ
ಹೆಂಡತಿ ವಿರುದ್ಧವೇ ಕೌಂಟರ್ ಕಂಪ್ಲೈಂಟ್ ಕೊಟ್ಟ ಡೈರೆಕ್ಟರ್
ಬೆಂಗಳೂರು: ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಮತ್ತೊಬ್ಬರಿಗೆ ಮಾರ್ಗದರ್ಶನ ನೀಡೋ ಕಥೆ ಮಾಡಿದ್ದ ಡೈರೆಕ್ಟರ್, ಸತಿಗೆ ಯಾಕೆ ಹೀಗೆ ಮಾಡಿದ್ರು? ಈ ಆರೋಪಕ್ಕೆ ನಿರ್ದೇಶಕರ ಪ್ರತಿ ದೂರೇನು ಎಂಬುದಕ್ಕೆ ಈ ಸ್ಟೋರಿ ಓದಿ.
ಸಾಲು ಸಾಲು ಆರೋಪ ಕೇಳಿ ಬಂದಿರುವುದು ಹರಿವು, 19.20.21 , ಆಕ್ಟ್ 1978, ನಾತಿಚರಾಮಿ ಈ ರೀತಿಯ ಅದ್ಭುತ ಸಿನಿಮಾಗಳ ಮೂಲಕ ರಾಜ್ಯ ರಾಷ್ಟ್ರಪ್ರಶಸ್ತಿಗಳನ್ನ ಗೆದ್ದ ನಿರ್ದೇಶಕ ಮಂಸೋರೆ ವಿರುದ್ಧ.
ಮಂಸೂರೆ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನ ಪತ್ನಿ ಅಖಿಲಾ ಮಾಡಿದ್ದಾರೆ. ಸಿನಿಮಾ ಮಾಡಲು ಹಣ ತರುವಂತೆ ತಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪಿಸಿ ದೂರು ಕೂಡಾ ಕೊಟ್ಟಿದ್ದಾರೆ. ಈ ಸಂಬಂಧ ಮಂಸೋರೆ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಅಲ್ಲದೇ ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ವಿರುದ್ಧವೂ ಅಖಿಲಾ ದೂರು ನೀಡಿದ್ದಾರೆ.
ಅಂದ್ಹಾಗೆ 2021, ಆಗಸ್ಟ್ನಲ್ಲಿ ಮಂಜುನಾಥ್ ಸೋಮಶೇಖರ್ ರೆಡ್ಡಿ ಮತ್ತು ಅಖಿಲಾ ಪ್ರೀತಿಸಿ ಮದುವೆಯಾಗಿದ್ರು. ಎರಡು ವರ್ಷಗಳ ಕಾಲ ಸಂಸಾರ ಕೂಡಾ ಮಾಡಿದ್ರು. ಅಲ್ಲದೇ ಅಖಿಲಾ ಕುಟುಂಬಸ್ಥರು ಮೂವತ್ತು ಲಕ್ಷ ಖರ್ಚು ಮಾಡಿ ಮದುವೆಯನ್ನೂ ಮಾಡಿಕೊಟ್ಟಿದ್ರಂತೆ. ಇಷ್ಟೆಲ್ಲಾ ಆದ್ರೂ ಸಿನಿಮಾ ಮಾಡೋಕೆ ಮತ್ತೆ ಹಣ ತರುವಂತೆ ಪೀಡಿಸುತ್ತಿದ್ದಾರೆ ಅಂತ ಅಖಿಲಾ ತಮ್ಮ ಪತಿಯ ವಿರುದ್ಧವೇ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ಮಂಸೋರೆ ದೂರಿನಲ್ಲೇನಿದೆ..?
ಇನ್ನೂ ಈ ಆರೋಪಕ್ಕೆ ಕೌಂಟರ್ ಕಂಪ್ಲೆಂಟ್ ಕೊಟ್ಟಿರುವ ನಿರ್ದೇಶಕ ಮಂಸೂರೇ, ಪತ್ನಿ ಅಖಿಲಾ ಹಾಗೂ ಆಕೆಯ ಸಹೋದರರ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ನೀಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸುಳ್ಳು ಅಪಪ್ರಚಾರದ ಮೂಲಕ ಆಕೆಯ ಸಹೋದರರು ಪಿತೂರಿ ನಡೆಸಿದ್ದಾರೆ ಅಂತಾ ಆರೋಪಿಸಿದ್ದಾರೆ.
ಒಟ್ಟಾರೆ, ರೀಲ್ ಲೈಫ್ನಲ್ಲಿ ಜನಮೆಚ್ಚುವ ಚಿತ್ರಗಳಿಗೆ ಡೈರೆಕ್ಷನ್ ಮಾಡಿದ್ದ ಮಂಸೋರೆ ಇದೀಗ ತಮ್ಮ ಸಾಂಸಾರಿಕ ಬದುಕಿಗೆ ರಾಂಗ್ ಡೈರೆಕ್ಷನ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ. ಮಂಸೋರೆ ಜೀವನ ಚೈತ್ರದ ಹರಿವು ಬೇರೆ ತಿರುವನ್ನೇ ಪಡೀತಾ ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ