newsfirstkannada.com

ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು?

Share :

Published July 19, 2024 at 9:51pm

Update July 19, 2024 at 9:59pm

    ಜೈಲಿನಲ್ಲಿರುವ ದರ್ಶನ್​ರನ್ನು ಬಿಡಿಸಲು​ ಕುಟುಂಬಸ್ಥರು ಹರಸಾಹಸ

    ಉಗುರಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ದರ್ಶನ್ ಗ್ಯಾಂಗ್‌

    ಪರಪ್ಪನ ಅಗ್ರಹಾರದಲ್ಲಿ ಪಶ್ಚಾತ್ತಾಪ ಮಾತುಗಳನ್ನು ಆಡುತ್ತಿರೋ ನಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ಗೆ ಇದೀಗ ರೇಣುಕಾಸ್ವಾಮಿ ಕುಟುಂಬದ ಚಿಂತೆ ಕಾಡುತ್ತಿದೆ. ಜೈಲಿಂದ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಸ್ಥರ ನೆರವಿಗೆ ತಯಾರಿ ನಡೆಸಿದ್ದು, ಈ ವಿಷಯ ದರ್ಶನ್ ಮುಂದೆ ಕುಟುಂಬಸ್ಥರು ಪ್ರಸ್ತಾಪಿಸಿದ್ದಾರಂತೆ. ಇದಕ್ಕೆ ಸಾರಥಿ ಕೂಡ ಸಹಾಯಹಸ್ತ ಚಾಚಲು ಆಲೋಚನೆ ಮಾಡಿದ್ದು, ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿದ ಅಂಥ ರೇಣುಕಾಸ್ವಾಮಿಯ ಹತ್ಯೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿದ್ದಾರೆ. ಇತ್ತ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ರೇಣುಕಾಸ್ವಾಮಿ ಕುಟುಂಬ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಆದ್ರೀಗ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಲು ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್​ ಆಲೋಚನೆ ಮಾಡಿದ್ದಾರೆ ಎನ್ನಲಾಗ್ತಿದೆ. ಜೈಲಿನಲ್ಲಿರುವ ದರ್ಶನ್​ರನ್ನು ಬಿಡಿಸಿಕೊಂಡು ಬರಲು ​ ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ದರ್ಶನ್​ ಪತ್ನಿ, ತಾಯಿ, ಸಹೋದರ, ಹಾಗೂ ದರ್ಶನ್​ನ ಸ್ನೇಹಿತರು, ಆಪ್ತರು ಜೈಲಿಗೆ ತೆರಳಿ ಧೈರ್ಯ ತುಂಬುತ್ತಿದ್ದಾರೆ. ಇದರ ನಡುವೆ ದರ್ಶನ್​ ಕುಟುಂಬದವರು, ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

‘ಸಾರಥಿ’ಯ ಸಹಾಯದ ಮಾತು!

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್​ ಪಶ್ಚಾತ್ತಾಪ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ರೇಣುಕಾ ಕುಟುಂಬಕ್ಕೆ ಸಹಾಯ ಮಾಡುವಂತೆ ದರ್ಶನ್​ ಕುಟುಂಬ ಸಲಹೆ ನೀಡಿದೆ. ಅದರಂತೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡೋದಾಗಿ ದರ್ಶನ್ ತಮ್ಮ ಕುಟುಂಬದ ಜೊತೆ ಮಾತಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೈಲಿಂದ ಹೊರಬಂದ ಬಳಿಕ ಅಭಿಮಾನಿಗಳ ಜೊತೆ ಹೋಗಿ ಸಹಾಯ ಮಾಡೋದಾಗಿ ಹೇಳಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಹಾಗೂ ಮಗುವಿಗೆ ಸಹಾಯ ಮಾಡುವ ಚಿಂತನೆ ಇದ್ದು, ಇದರ ಜೊತೆಗೆ ರೇಣುಕಾಸ್ವಾಮಿ ಪೋಷಕರಿಗೂ ಪ್ರತ್ಯೇಕ ಸಹಾಯ ಮಾಡಲು ದಾಸ ನಿರ್ಧರಿಸಿದ್ದಾರೆ ಎಂದು ದರ್ಶನ್​ ಆಪ್ತ ವಲಯಗಳಿಂದ ತಿಳಿದು ಬಂದಿದೆ. ಇನ್ನು, ಇವತ್ತು ನಟ ದರ್ಶನ್​ ಭೇಟಿಯಾಗಲು ಕಾಟೇರ ನಿರ್ದೇಶಕ ತರುಣ್​ ಸುಧೀರ್​ ಪರಪ್ಪನ ಆಗ್ರಹಾರಕ್ಕೆ ಭೇಟಿ ನೀಡಿದ್ರು. ಈ ವೇಳೆ ದರ್ಶನ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ತರುಣ್​ ಸುಧೀರ್​, ದರ್ಶನ್​ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಉಗುರಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ನಟ ದರ್ಶನ್​ ಇದೀಗ ಪರಪ್ಪನ ಆಗ್ರಹಾರದಲ್ಲಿ ಪಶ್ಚಾತಾಪ ಪಡ್ತಿದ್ದಾರೆ. ಕುಟುಂಬದ ಸಲಹೆಯಂತೆ ನಟ ದರ್ಶನ್​ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಈ ಸಹಾಯವನ್ನು ರೇಣುಕಾಸ್ವಾಮಿ ಕುಟುಂಬ ಸ್ವೀಕರಿಸುತ್ತಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು?

https://newsfirstlive.com/wp-content/uploads/2024/07/darshan2-2.jpg

    ಜೈಲಿನಲ್ಲಿರುವ ದರ್ಶನ್​ರನ್ನು ಬಿಡಿಸಲು​ ಕುಟುಂಬಸ್ಥರು ಹರಸಾಹಸ

    ಉಗುರಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ದರ್ಶನ್ ಗ್ಯಾಂಗ್‌

    ಪರಪ್ಪನ ಅಗ್ರಹಾರದಲ್ಲಿ ಪಶ್ಚಾತ್ತಾಪ ಮಾತುಗಳನ್ನು ಆಡುತ್ತಿರೋ ನಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ಗೆ ಇದೀಗ ರೇಣುಕಾಸ್ವಾಮಿ ಕುಟುಂಬದ ಚಿಂತೆ ಕಾಡುತ್ತಿದೆ. ಜೈಲಿಂದ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಸ್ಥರ ನೆರವಿಗೆ ತಯಾರಿ ನಡೆಸಿದ್ದು, ಈ ವಿಷಯ ದರ್ಶನ್ ಮುಂದೆ ಕುಟುಂಬಸ್ಥರು ಪ್ರಸ್ತಾಪಿಸಿದ್ದಾರಂತೆ. ಇದಕ್ಕೆ ಸಾರಥಿ ಕೂಡ ಸಹಾಯಹಸ್ತ ಚಾಚಲು ಆಲೋಚನೆ ಮಾಡಿದ್ದು, ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿದ ಅಂಥ ರೇಣುಕಾಸ್ವಾಮಿಯ ಹತ್ಯೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿದ್ದಾರೆ. ಇತ್ತ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ರೇಣುಕಾಸ್ವಾಮಿ ಕುಟುಂಬ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಆದ್ರೀಗ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಲು ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್​ ಆಲೋಚನೆ ಮಾಡಿದ್ದಾರೆ ಎನ್ನಲಾಗ್ತಿದೆ. ಜೈಲಿನಲ್ಲಿರುವ ದರ್ಶನ್​ರನ್ನು ಬಿಡಿಸಿಕೊಂಡು ಬರಲು ​ ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ದರ್ಶನ್​ ಪತ್ನಿ, ತಾಯಿ, ಸಹೋದರ, ಹಾಗೂ ದರ್ಶನ್​ನ ಸ್ನೇಹಿತರು, ಆಪ್ತರು ಜೈಲಿಗೆ ತೆರಳಿ ಧೈರ್ಯ ತುಂಬುತ್ತಿದ್ದಾರೆ. ಇದರ ನಡುವೆ ದರ್ಶನ್​ ಕುಟುಂಬದವರು, ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

‘ಸಾರಥಿ’ಯ ಸಹಾಯದ ಮಾತು!

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್​ ಪಶ್ಚಾತ್ತಾಪ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ರೇಣುಕಾ ಕುಟುಂಬಕ್ಕೆ ಸಹಾಯ ಮಾಡುವಂತೆ ದರ್ಶನ್​ ಕುಟುಂಬ ಸಲಹೆ ನೀಡಿದೆ. ಅದರಂತೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡೋದಾಗಿ ದರ್ಶನ್ ತಮ್ಮ ಕುಟುಂಬದ ಜೊತೆ ಮಾತಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೈಲಿಂದ ಹೊರಬಂದ ಬಳಿಕ ಅಭಿಮಾನಿಗಳ ಜೊತೆ ಹೋಗಿ ಸಹಾಯ ಮಾಡೋದಾಗಿ ಹೇಳಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಹಾಗೂ ಮಗುವಿಗೆ ಸಹಾಯ ಮಾಡುವ ಚಿಂತನೆ ಇದ್ದು, ಇದರ ಜೊತೆಗೆ ರೇಣುಕಾಸ್ವಾಮಿ ಪೋಷಕರಿಗೂ ಪ್ರತ್ಯೇಕ ಸಹಾಯ ಮಾಡಲು ದಾಸ ನಿರ್ಧರಿಸಿದ್ದಾರೆ ಎಂದು ದರ್ಶನ್​ ಆಪ್ತ ವಲಯಗಳಿಂದ ತಿಳಿದು ಬಂದಿದೆ. ಇನ್ನು, ಇವತ್ತು ನಟ ದರ್ಶನ್​ ಭೇಟಿಯಾಗಲು ಕಾಟೇರ ನಿರ್ದೇಶಕ ತರುಣ್​ ಸುಧೀರ್​ ಪರಪ್ಪನ ಆಗ್ರಹಾರಕ್ಕೆ ಭೇಟಿ ನೀಡಿದ್ರು. ಈ ವೇಳೆ ದರ್ಶನ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ತರುಣ್​ ಸುಧೀರ್​, ದರ್ಶನ್​ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಉಗುರಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ನಟ ದರ್ಶನ್​ ಇದೀಗ ಪರಪ್ಪನ ಆಗ್ರಹಾರದಲ್ಲಿ ಪಶ್ಚಾತಾಪ ಪಡ್ತಿದ್ದಾರೆ. ಕುಟುಂಬದ ಸಲಹೆಯಂತೆ ನಟ ದರ್ಶನ್​ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಈ ಸಹಾಯವನ್ನು ರೇಣುಕಾಸ್ವಾಮಿ ಕುಟುಂಬ ಸ್ವೀಕರಿಸುತ್ತಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More