/newsfirstlive-kannada/media/post_attachments/wp-content/uploads/2025/03/KOHLI_Unbox_1.jpg)
2025ರ ಐಪಿಎಲ್ಗೆ ಬಲಿಷ್ಠ ಟೀಮ್ ಕಟ್ಟಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅಖಾಡಕ್ಕೆ ಧುಮುಕುತ್ತಿದೆ. ತಂಡದಲ್ಲಿ ನಾಯಕ ಸೇರಿದಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. 18ನೇ ವರ್ಷದ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ಮೈದಾನಕ್ಕೆ ಇಳಿಯುತ್ತಿದೆ. ಈ ಎಲ್ಲದರ ನಡುವೆ ಆರ್ಸಿಬಿ ಅನ್ಬಾಕ್ಸ್ ಇವೆಂಟ್ ಸಿದ್ಧತೆ ಜೋರಾಗಿದ್ದು ವಿರಾಟ್ ಕೊಹ್ಲಿ ಸಿಲಿಕಾನ್ ಸಿಟಿಗೆ ಈಗಾಗಲೇ ಬಂದಿದ್ದಾರೆ.
ಆರ್ಸಿಬಿ ಅನ್ಬಾಕ್ಸ್ ಇವೆಂಟ್ ಎಂದರೆ ಇಡೀ ಐಪಿಎಲ್ನಲ್ಲೇ ಒಂದು ವಿಶೇಷವಾದ ಕಾರ್ಯಕ್ರಮ. ಯಾವ ತಂಡಕ್ಕೂ ಇರದ ಅಭಿಮಾನಿಗಳು ಬೆಂಗಳೂರು ಟೀಮ್ಗೆ ಇದ್ದು ಅನ್ಬಾಕ್ಸ್ ಇವೆಂಟ್ನಲ್ಲಿ ವಿಶೇಷ ಘೋಷಣೆ, ಜೆರ್ಸಿ ಬಿಡುಗಡೆ ಜೊತೆಗೆ ಈ ಸಲ ಹೊಸ ಕ್ಯಾಪ್ಟನ್ ಅನ್ನು ಪರಿಚಯ ಇರಲಿದ್ದು ಅಭಿಮಾನಿಗಳನ್ನು ರಂಜಿಸಲಾಗುತ್ತದೆ. ಆರ್ಸಿಬಿ ಅನ್ಬಾಕ್ಸ್ ಇವೆಂಟ್ ಮಾರ್ಚ್ 17 ರಂದು ಅಂದರೆ ನಾಳೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ. ನ್ಯೂ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಕಾರ್ಯಕ್ರಮ ಒಂದಕ್ಕೆ ಹಾಜರಾಗಿ ಸಂದರ್ಶನ ಕೂಡ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ ಎಂದರೆ ಅಭಿಮಾನಿಗಳ ಉತ್ಸಾಹ ಇನ್ನಷ್ಟು ಇಮ್ಮಡಿಯಾಗಲಿದೆ. ಅನ್ಬಾಕ್ಸ್ ಇವೆಂಟ್ ಬಳಿಕ ವಿರಾಟ್ ಸೇರಿದಂತೆ ಎಲ್ಲ ಆಟಗಾರರು ಅಧಿಕೃತವಾಗಿ ಅಭ್ಯಾಸ ಮಾಡಲಿದ್ದಾರೆ.
ಇದನ್ನೂ ಓದಿ:ಫೈನಲ್ನಲ್ಲಿ ಹ್ಯಾಟ್ರಿಕ್ ಸೋಲು.. ಮುಂಬೈ ಬೌಲಿಂಗ್ ಪರಾಕ್ರಮ, ಟ್ರೋಫಿ ಕೈ ಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್
ಅನ್ಬಾಕ್ಸ್ ಕಾರ್ಯಕ್ರಮದ ಟಿಕೆಟ್ಗಳೆಲ್ಲಾ ಮಾರ್ಚ್ 6 ರಿಂದ ನೀಡಲಾಗುತ್ತಿತ್ತು. ಆದರೆ ಟಿಕೆಟ್ ಕೌಂಟರ್ ಓಪನ್ ಮಾಡಿದ ಒಂದು ಗಂಟೆ ಒಳಗೆ ಎಲ್ಲ ಸೋಲ್ಡ್ ಔಟ್ ಆಗಿವೆ. ನಾಳೆ ಇವೆಂಟ್ 3:30ಕ್ಕೆ ಪ್ರಾರಂಭವಾಗಲಿದ್ದು ಡಿಜೆ ಮ್ಯಾಗ್, ಟಿಮ್ಮಿ ಟ್ರಂಪೆಟ್ ಸ್ಟಾರ್ ಆಕರ್ಷಣೆ ಆಗಲಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ ಸಿಂಗರ್ ಆದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್ ಅವರ ಸುಮಧುರ ಧ್ವನಿ ಕೂಡ ಅಭಿಮಾನಿಗಳು ಲೈವ್ನಲ್ಲಿ ಕೇಳಬಹುದು.
ಆರ್ಸಿಬಿಯ ಮೊದಲ ಮ್ಯಾಚ್ ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಆರ್ಸಿಬಿ ಹೊಸ ತಂಡ, ಹೊಸ ಕ್ಯಾಪ್ಟನ್ನೊಂದಿಗೆ ಮೊದಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕಾದಾಟ ನಡೆಸಲಿದೆ. ಈ ಸಲ ಆದರೂ ಕಪ್ ಆರ್ಸಿಬಿಗೆ ಒಲಿದು ಬರಲಿ ಎಂದು ಅಭಿಮಾನಿಗಳ ದೊಡ್ಡ ಕನಸು ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ