ಲೋಕಸಭಾ ಚುನಾವಣೆ ಕ್ಯಾಂಪೇನ್ ವೇಳೆ ಸಿಎಂ ಘೋಷಣೆ
ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಆಗುವುದು ಗ್ಯಾರಂಟಿನಾ?
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಾಗ ಅನೌನ್ಸ್
ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕ್ಯಾಂಪೇನ್ ಭರ್ಜರಿಯಾಗಿ ಸಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಘೋಷಣೆಗಳನ್ನು ಮಾಡುತ್ತಿವೆ. ಜೊತೆಗೆ ಅಭ್ಯರ್ಥಿಗಳು ಕೂಡ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನರಿಗೆ ಒಳ್ಳೆ, ಒಳ್ಳೆಯ ಭರವಸೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಲೋಕಸಭಾ ಚುನಾವಣೆ ಕ್ಯಾಂಪೇನ್ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಅದರಂತೆ ಯಾದಾದ್ರಿ ಭುವನಗಿರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಸಿಎಂ ರೇವಂತ್ ರೆಡ್ಡಿಯವರು ಭೋಂಗಿರಿ ನಗರದಲ್ಲಿ ರೋಡ್ ಶೋ ಮಾಡುತ್ತಿದ್ದರು. ಈ ವೇಳೆ ಸೇರಿದ್ದ ಜನರಿಗೆ ದೊಡ್ಡ ಭರವಸೆಯೊಂದನ್ನು ಸಿಎಂ ರೇವಂತ್ ರೆಡ್ಡಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ
In a dramatic announcement as part of election campaign in #Bhongir, Telangana chief minister @revanth_anumula says, he swears on locally revered Yadagirigutta presiding deity Lakshminarasimhaswamy, that by August 15, he would waive #FarmLoans of upto Rs 2 lakh #ElectionsWithNDTV pic.twitter.com/7kO8mRPXlR
— Uma Sudhir (@umasudhir) April 22, 2024
ಇದನ್ನೂ ಓದಿ: 98 ಸಲ ಎಲೆಕ್ಷನ್ಗೆ ಸ್ಪರ್ಧಿಸಿದ್ರೂ ಒಂದೂ ಬಾರಿ ಗೆಲ್ಲದ ಅಂಬೇಡ್ಕರ್.. 99ನೇ ಬಾರಿಗೆ ಬಿಗ್ ಶಾಕ್ ಕೊಟ್ಟ ಅಧಿಕಾರಿಗಳು
ಈಗ ನಮ್ಮ ರೈತರಿಗೆ ಒಂದು ಮಾತು ಕೊಡುತ್ತಿದ್ದೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಮೇಲೆ ಆಣೆ ಮಾಡಿ, ಈ ಮಾತು ಹೇಳುತ್ತಿದ್ದೇನೆ. ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಸೂರ್ಯ ಉದಯಿಸಿವುದು ಬಿಟ್ರೇ, ಪ್ರಪಂಚ ತಲೆ ಕೆಳಗಾದರು, ಏನೇ ಆದ್ರೂ, ಯಾರು ಇದ್ದರೂ, ಯಾರೇ ಹೋದರೂ ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ. ಇದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಸಾಕ್ಷಿಯಾಗಿ ತೆಲಂಗಾಣದ ರೈತರಿಗೆ ಮಾತು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕಸಭಾ ಚುನಾವಣೆ ಕ್ಯಾಂಪೇನ್ ವೇಳೆ ಸಿಎಂ ಘೋಷಣೆ
ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಆಗುವುದು ಗ್ಯಾರಂಟಿನಾ?
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಾಗ ಅನೌನ್ಸ್
ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕ್ಯಾಂಪೇನ್ ಭರ್ಜರಿಯಾಗಿ ಸಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಘೋಷಣೆಗಳನ್ನು ಮಾಡುತ್ತಿವೆ. ಜೊತೆಗೆ ಅಭ್ಯರ್ಥಿಗಳು ಕೂಡ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನರಿಗೆ ಒಳ್ಳೆ, ಒಳ್ಳೆಯ ಭರವಸೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಲೋಕಸಭಾ ಚುನಾವಣೆ ಕ್ಯಾಂಪೇನ್ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಅದರಂತೆ ಯಾದಾದ್ರಿ ಭುವನಗಿರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಸಿಎಂ ರೇವಂತ್ ರೆಡ್ಡಿಯವರು ಭೋಂಗಿರಿ ನಗರದಲ್ಲಿ ರೋಡ್ ಶೋ ಮಾಡುತ್ತಿದ್ದರು. ಈ ವೇಳೆ ಸೇರಿದ್ದ ಜನರಿಗೆ ದೊಡ್ಡ ಭರವಸೆಯೊಂದನ್ನು ಸಿಎಂ ರೇವಂತ್ ರೆಡ್ಡಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ
In a dramatic announcement as part of election campaign in #Bhongir, Telangana chief minister @revanth_anumula says, he swears on locally revered Yadagirigutta presiding deity Lakshminarasimhaswamy, that by August 15, he would waive #FarmLoans of upto Rs 2 lakh #ElectionsWithNDTV pic.twitter.com/7kO8mRPXlR
— Uma Sudhir (@umasudhir) April 22, 2024
ಇದನ್ನೂ ಓದಿ: 98 ಸಲ ಎಲೆಕ್ಷನ್ಗೆ ಸ್ಪರ್ಧಿಸಿದ್ರೂ ಒಂದೂ ಬಾರಿ ಗೆಲ್ಲದ ಅಂಬೇಡ್ಕರ್.. 99ನೇ ಬಾರಿಗೆ ಬಿಗ್ ಶಾಕ್ ಕೊಟ್ಟ ಅಧಿಕಾರಿಗಳು
ಈಗ ನಮ್ಮ ರೈತರಿಗೆ ಒಂದು ಮಾತು ಕೊಡುತ್ತಿದ್ದೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಮೇಲೆ ಆಣೆ ಮಾಡಿ, ಈ ಮಾತು ಹೇಳುತ್ತಿದ್ದೇನೆ. ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಸೂರ್ಯ ಉದಯಿಸಿವುದು ಬಿಟ್ರೇ, ಪ್ರಪಂಚ ತಲೆ ಕೆಳಗಾದರು, ಏನೇ ಆದ್ರೂ, ಯಾರು ಇದ್ದರೂ, ಯಾರೇ ಹೋದರೂ ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ. ಇದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಸಾಕ್ಷಿಯಾಗಿ ತೆಲಂಗಾಣದ ರೈತರಿಗೆ ಮಾತು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ