newsfirstkannada.com

‘ತೂಗುದೀಪ ಶ್ರೀನಿವಾಸ್ ಮಗ ಎಂದು ಖುಷಿಯಿತ್ತು, ಆದರೆ..’- ದರ್ಶನ್​ ವಿರುದ್ಧ ಮಹಿಳೆ ಫುಲ್​​​ ಗರಂ

Share :

Published February 22, 2024 at 7:54pm

Update February 22, 2024 at 8:24pm

    ದರ್ಶನ್​​ 25 ವರ್ಷ ಸಿನಿಮಾದಲ್ಲಿ ಕಷ್ಟಪಟ್ಟು ಬೆಳೆದಿದ್ದಾರೆ!

    ನಮಗೂ ದರ್ಶನ್​ ಅಂದರೆ ತುಂಬಾ ಇಷ್ಟನೇ ಎಂದ ಮಹಿಳೆ

    ಅಭಿಮಾನಿಗಳಿಂದಲೇ ದರ್ಶನ್​ ಹಾಳಾಗಿದ್ದು ಎಂದು ಗರಂ

ನಟ ದರ್ಶನ್​ ಅವರು 25 ವರ್ಷ ಆಚರಣೆ ಮಾಡಿದ್ದಾರೆ. ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ನಮಗೂ ಅದರ ಬಗ್ಗೆ ಖುಷಿ ಇದೆ. ನಾವು ಎಲ್ಲಾ ದರ್ಶನ್​ ಸಿನಿಮಾಗಳು ನೋಡಿದೀವಿ. ದರ್ಶನ್​ ಅಂದ್ರೆ ನಮಗೂ ಇಷ್ಟಾನೆ. ತೂಗುದೀಪ ಶ್ರೀನಿವಾಸ್​ ಅವರ ಮಗ ಹೀರೋ ಆಗಿದ್ದಾರೆ ಎಂದಾಗ ನಮಗೆ ಬಹಳ ಖುಷಿ ಆಗಿತ್ತು. ಎಲ್ಲವೂ ಚೆನ್ನಾಗಿ ಇತ್ತು. ಇತ್ತೀಚೆಗೆ ನಟ ದರ್ಶನ್​ ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ ಎಂದು ಮಹಿಳೆ ಗರಂ ಆಗಿದ್ದಾರೆ.

ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ನ್ಯೂಸ್​ಫಸ್ಟ್​ ಜತೆ ಮಾತಾಡಿದ ಮಹಿಳೆ, ದರ್ಶನ್​ ಅವರು ಏನು ಮಾಡ್ತಾರೋ ಅದನ್ನೇ ಅವರ ಅಭಿಮಾನಿಗಳು ಮಾಡ್ತಿದಾರೆ. ಎಲ್ಲಾ ಅಭಿಮಾನಿಗಳು ಎಂದು ಹೇಳುವುದು ತಪ್ಪಾಗುತ್ತೇ, ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ತಿದಾರೆ. ಸೋಷಿಯಲ್​ ಮೀಡಿಯಾದಲ್ಲಿ ನಾವು ಏನಾದ್ರೂ ಅಭಿಪ್ರಾಯ ಹಾಕಿದ್ರೆ ಪಾತ್ರೆ ತೊಳಿ ಹೋಗಲೇ ಎಂದು ಅಭಿಮಾನಿಗಳು ಕಾಮೆಂಟ್​ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಮನೆ ಕೆಲಸ ನಮಗೆ ಮಾಡಿಕೊಳ್ಳುವುದು ಗೊತ್ತಿದೆ. ಕಾಮೆಂಟ್​ ಹಾಕೋರು ನಮ್ಮ ಅತ್ತೆಯರ. ಅತ್ತೆಯರೇ ನಮಗೆ ಕೆಲಸ ಹೇಳಲ್ಲ. ಪಾತ್ರೆ ತೊಳಿ ಹೋಗು, ನಿನಗೆ ಮಾಡಕ್ಕೆ ಕೆಲಸ ಇಲ್ವಾ? ನಿನಗೆ ಗಂಡ ಇಲ್ವಾ? ಎಲ್ಲಿಂದ ಎಲ್ಲಿಗೋ ಹೋಗುತ್ತೆ ಅದು. ಎಲ್ಲವೂ ಮಾತಾಡ್ತಾರೆ. ಹೀಗೆ ಪದ ಬಳಕೆ ಮಾಡೋ ಅಭಿಮಾನಿಗಳು ದರ್ಶನ್​ ಅವರು ಬುದ್ಧಿ ಹೇಳಬೇಕು. ಅಭಿಮಾನಿಗಳಿಂದಲೇ ದರ್ಶನ್​ ಹೆಸರು ಹಾಳಾಗ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತೂಗುದೀಪ ಶ್ರೀನಿವಾಸ್ ಮಗ ಎಂದು ಖುಷಿಯಿತ್ತು, ಆದರೆ..’- ದರ್ಶನ್​ ವಿರುದ್ಧ ಮಹಿಳೆ ಫುಲ್​​​ ಗರಂ

https://newsfirstlive.com/wp-content/uploads/2024/02/Darshan_Women_1.jpg

    ದರ್ಶನ್​​ 25 ವರ್ಷ ಸಿನಿಮಾದಲ್ಲಿ ಕಷ್ಟಪಟ್ಟು ಬೆಳೆದಿದ್ದಾರೆ!

    ನಮಗೂ ದರ್ಶನ್​ ಅಂದರೆ ತುಂಬಾ ಇಷ್ಟನೇ ಎಂದ ಮಹಿಳೆ

    ಅಭಿಮಾನಿಗಳಿಂದಲೇ ದರ್ಶನ್​ ಹಾಳಾಗಿದ್ದು ಎಂದು ಗರಂ

ನಟ ದರ್ಶನ್​ ಅವರು 25 ವರ್ಷ ಆಚರಣೆ ಮಾಡಿದ್ದಾರೆ. ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ನಮಗೂ ಅದರ ಬಗ್ಗೆ ಖುಷಿ ಇದೆ. ನಾವು ಎಲ್ಲಾ ದರ್ಶನ್​ ಸಿನಿಮಾಗಳು ನೋಡಿದೀವಿ. ದರ್ಶನ್​ ಅಂದ್ರೆ ನಮಗೂ ಇಷ್ಟಾನೆ. ತೂಗುದೀಪ ಶ್ರೀನಿವಾಸ್​ ಅವರ ಮಗ ಹೀರೋ ಆಗಿದ್ದಾರೆ ಎಂದಾಗ ನಮಗೆ ಬಹಳ ಖುಷಿ ಆಗಿತ್ತು. ಎಲ್ಲವೂ ಚೆನ್ನಾಗಿ ಇತ್ತು. ಇತ್ತೀಚೆಗೆ ನಟ ದರ್ಶನ್​ ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ ಎಂದು ಮಹಿಳೆ ಗರಂ ಆಗಿದ್ದಾರೆ.

ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ನ್ಯೂಸ್​ಫಸ್ಟ್​ ಜತೆ ಮಾತಾಡಿದ ಮಹಿಳೆ, ದರ್ಶನ್​ ಅವರು ಏನು ಮಾಡ್ತಾರೋ ಅದನ್ನೇ ಅವರ ಅಭಿಮಾನಿಗಳು ಮಾಡ್ತಿದಾರೆ. ಎಲ್ಲಾ ಅಭಿಮಾನಿಗಳು ಎಂದು ಹೇಳುವುದು ತಪ್ಪಾಗುತ್ತೇ, ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ತಿದಾರೆ. ಸೋಷಿಯಲ್​ ಮೀಡಿಯಾದಲ್ಲಿ ನಾವು ಏನಾದ್ರೂ ಅಭಿಪ್ರಾಯ ಹಾಕಿದ್ರೆ ಪಾತ್ರೆ ತೊಳಿ ಹೋಗಲೇ ಎಂದು ಅಭಿಮಾನಿಗಳು ಕಾಮೆಂಟ್​ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಮನೆ ಕೆಲಸ ನಮಗೆ ಮಾಡಿಕೊಳ್ಳುವುದು ಗೊತ್ತಿದೆ. ಕಾಮೆಂಟ್​ ಹಾಕೋರು ನಮ್ಮ ಅತ್ತೆಯರ. ಅತ್ತೆಯರೇ ನಮಗೆ ಕೆಲಸ ಹೇಳಲ್ಲ. ಪಾತ್ರೆ ತೊಳಿ ಹೋಗು, ನಿನಗೆ ಮಾಡಕ್ಕೆ ಕೆಲಸ ಇಲ್ವಾ? ನಿನಗೆ ಗಂಡ ಇಲ್ವಾ? ಎಲ್ಲಿಂದ ಎಲ್ಲಿಗೋ ಹೋಗುತ್ತೆ ಅದು. ಎಲ್ಲವೂ ಮಾತಾಡ್ತಾರೆ. ಹೀಗೆ ಪದ ಬಳಕೆ ಮಾಡೋ ಅಭಿಮಾನಿಗಳು ದರ್ಶನ್​ ಅವರು ಬುದ್ಧಿ ಹೇಳಬೇಕು. ಅಭಿಮಾನಿಗಳಿಂದಲೇ ದರ್ಶನ್​ ಹೆಸರು ಹಾಳಾಗ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More