/newsfirstlive-kannada/media/post_attachments/wp-content/uploads/2025/06/AP_CM.jpg)
ಹೈದರಾಬಾದ್​: ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇರುವಂತೆ ಆಂಧ್ರಪ್ರದೇಶದಲ್ಲೂ ಮಹಿಳೆಯರಿಗೆ ಉಚಿತ ಬಸ್​ ಸೇವೆಯನ್ನು ಆಗಸ್ಟ್​ 15ರಿಂದ ಒದಗಿಸಲಾಗುವುದು ಎಂದು ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.
ಕರ್ನೂಲ್ ಜಿಲ್ಲೆಯ ನಂದ್ಯಾಲ್ ಚೆಕ್ಪೋಸ್ಟ್ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ಎನ್​​.ಚಂದ್ರಬಾಬು ನಾಯ್ಡು ಅವರು, ಚುನಾವಣೆಗೂ ಮೊದಲು ನೀಡಿದ ಎಲ್ಲ ಸೂಪರ್​ ಸಿಕ್ಸ್​ ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇವೆ. ಇದರಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣವನ್ನು ಆಗಸ್ಟ್​ 15, ಸ್ವಾತಂತ್ರ್ಯ ದಿನದಂದು ಒದಗಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನೀಡಿದ ಭರವಸೆಗಳನ್ನು ಒಂದೊಂದಾಗೆ ಅನುಷ್ಠಾನಗೊಳಿಸಲಾಗುವುದು. 19 ರಿಂದ 59 ವರ್ಷದ ಒಳಗಿನ ಮಹಿಳೆಯರಿಗೆ 1,500 ರೂಪಾಯಿ. ಮಹಿಳೆಯರಿಗೆ 20 ಲಕ್ಷ ಹೊಸ ಉದ್ಯೋಗಗಳು ಅಥವಾ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರೂಪಾಯಿ. ಉಚಿತ ಬಸ್​ ಸೇವೆ ಇವುಗಳನ್ನು ಮೊದಲ ಹೆಜ್ಜೆಯಾಗಿ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಸಿಎಂ ಹೇಳಿದ್ದಾರೆ.
ಇದರ ಜೊತೆಗೆ ತಲ್ಲಿಕಿ ವಂದನಂ ಯೋಜನೆಯಡಿ ಶಾಲೆಗೆ ಹೋಗುವ ಮಗುವಿಗೆ ವರ್ಷಕ್ಕೆ 15,000 ರೂಪಾಯಿಗಳು. ದೀಪಂ-2 ಅಡಿ ವರ್ಷಕ್ಕೆ ಒಂದು ಮನೆಗೆ 3 ಗ್ಯಾಸ್​ ಸಿಲಿಂಡರ್​ಗಳು ಉಚಿತವಾಗಿ ಒದಗಿಸುವುದು ಮತ್ತು ಅನ್ನದಾತ ಸುಖಿಭವ ಯೋಜನೆ ಅಡಿ ಪ್ರತಿ ರೈತರಿಗೆ ವರ್ಷಕ್ಕೆ 20 ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಇದನ್ನು 3 ಕಂತುಗಳಲ್ಲಿ ಜಾರಿ ಮಾಡಲಾಗುವುದು. ಇವುಗಳನ್ನು ಶೀಘ್ರದಲ್ಲೇ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ