IPLನಲ್ಲಿ ಆಡಿ ಇಲ್ಯಾಕೆ ಹಿಂಗಾಯ್ತು?
ಟೀಂ ಇಂಡಿಯಾಗೆ ಶನಿದೆಸೆಯೇ?
ಟೀಂ ಇಂಡಿಯಾದ ಮುಂದೆ ಆಸೀಸ್ ಓಟದ ಆಟ
ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕೋ ಪ್ಲಾನ್ ಹಾಕಿಕೊಂಡು ಇಂಗ್ಲೆಂಡ್ ಫ್ಲೈಟ್ ಹತ್ತಿದ ಟೀಮ್ ಇಂಡಿಯಾದ ಲೆಕ್ಕಾಚಾರ ಮೊದಲ ದಿನದಲ್ಲೇ ತಲೆ ಕೆಳಗಾಯ್ತು. ಆಸ್ಟ್ರೇಲಿಯಾ ಖಡಕ್ ಆಟದ ಮುಂದೆ ರೋಹಿತ್ ಪಡೆ ದಿಕ್ಕೇ ತೋಚದೆ ನಿಂತು ಬಿಡ್ತು. ತಂಡದಲ್ಲಿ ಕಾನ್ಫಿಡೆನ್ಸ್ ಅನ್ನೋದೆ ಮಾಯವಾಯ್ತು. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಬೌಲಿಂಗ್ ಅಷ್ಟು ಕಳಪೆಯಾಗಿತ್ತು.
ರನ್ಮಷೀನ್ಗಳಾದ ಬೌಲರ್ಸ್, ಕಂಗೆಟ್ಟ ಕ್ಯಾಪ್ಟನ್.!
ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದೇ ತಡ ಟೀಮ್ ಇಂಡಿಯಾ ಅರ್ಧಪಂದ್ಯ ಗೆಲ್ತು ಅಂತ ಎಲ್ರೂ ಭಾವಿಸಿದ್ರು. ಆರಂಭದಲ್ಲೇ ಆಸಿಸ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ ಮೇಲಂತೂ, ಟೀಮ್ ಇಂಡಿಯಾ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು. ಆದ್ರೆ, ಸೀನ್ ಕಟ್ ಮಾಡಿದ್ರೆ, ಆಗಿದ್ದೇ ಬೇರೆ. ಆಸಿಸ್ ಪಡೆಯ ರಣಾರ್ಭಟಕ್ಕೆ ಬೌಲಿಂಗ್ ಯುನಿಟ್ ಬೆಸ್ತು ಬಿತ್ತು. ಬರೋಬ್ಬರಿ 469 ರನ್ಗಳನ್ನ ಕಾಂಗರೂ ಪಡೆ ಕಲೆ ಹಾಕ್ತು. ಇದ್ರ ಬೆನ್ನಲ್ಲೇ, ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕಾನ್ಫಿಡೆನ್ಸೇ ಮಾಯವಾಯ್ತು.
ಟೀಮ್ ಇಂಡಿಯಾ ಪರದಾಟ, ಆಸಿಸ್ ಮೆರೆದಾಟ.!
ಒಂದೆಡೆ ಟೀಮ್ ಇಂಡಿಯಾ ಬೌಲರ್ಗಳು ವಿಕೆಟ್ ಬೇಟೆಗೆ ಪರದಾಡಿದ್ರೆ, ಆಸಿಸ್ ಬೌಲರ್ಸ್ ಸಲೀಸಾಗಿ ವಿಕೆಟ್ ಎಗರಿಸಿದ್ರು. ಕೊಹ್ಲಿ, ರೋಹಿತ್, ಪೂಜಾರ, ಗಿಲ್ ಎಲ್ರೂ ಮಕಾಡೆ ಮಲಗಿದ್ರು. ಹಾಗಾದ್ರೆ, ಟೀಮ್ ಇಂಡಿಯಾ ಬೌಲರ್ಸ್ ಎಡವಿದ್ದೆಲ್ಲಿ ಅನ್ನೋದು ಈಗ ಹುಟ್ಟಿರೋ ಪ್ರಶ್ನೆಯಾಗಿದೆ. ಕಣಕ್ಕಿಳಿಸಿದ ನಾಲ್ವರು ಬೌಲರ್ಗಳು ಕ್ವಾಲಿಟಿ ಬೌಲರ್ಸ್ ಇಂಗ್ಲೆಂಡ್ನಲ್ಲಿ ಆಡಿದ ಅನುಭವವೂ ಇದೆ. ಹಾಗಿದ್ರೂ, ವಿಕೆಟ್ ಭೇಟೆಗೆ ಪರದಾಡಿದ್ದು ಯಾಕೆ ಅನ್ನೋ ಚರ್ಚೆ ನಡೀತಾ ಇದೆ. ಇದಕ್ಕೆ ಉತ್ತರ ಐಪಿಎಲ್.
ಐಪಿಎಲ್ನಲ್ಲಿ ಮಿಂಚು, ಟೆಸ್ಟ್ ಫೈನಲ್ನಲ್ಲಿ ಮಂಕು.!
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇವರಿಬ್ಬರೂ ಈ ಸೀಸನ್ನ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಆದ್ರೆ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ವಿಕೆಟ್ ಬೇಟೆಗೆ ಒದ್ದಾಡಿದ್ರು. ವೈಟ್ಬಾಲ್ ಫಾರ್ಮೆಟ್ನಿಂದ ರೆಡ್ಬಾಲ್ ಶಿಫ್ಟ್ ಆಗಿದ್ದೇ ತಡ ಇಬ್ಬರೂ ರಿಧಮ್ ಕಂಡುಕೊಳ್ಳೋಕೆ ಆಗಲಿಲ್ಲ. ಟೀಮ್ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಸತತ 2 ತಿಂಗಳು ಐಪಿಎಲ್ ಆಡಿದ್ದೇ ಹಿನ್ನಡೆಗೆ ಕಾರಣ ಅಂತಿದ್ದಾರೆ. ಸತತ 2 ತಿಂಗಳು ಪಂದ್ಯದಲ್ಲಿ 4 ಓವರ್ ಮಾತ್ರ ಬೌಲಿಂಗ್ ಮಾಡಿ, ಇದ್ದಕ್ಕಿದ್ದಂತೆ 15-20 ಓವರ್ಗೆ ಜಂಪ್ ಮಾಡಿದ್ರೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.
ವರ್ಕ್ಲೋಡ್ ಮ್ಯಾನೇಜ್ಮೆಂಟ್ನಲ್ಲಿ ವಿಫಲ.!
ಹೌದು. ಈ ಸೀಸನ್ ಐಪಿಎಲ್ಗೂ ಮುನ್ನ ಟೀಮ್ ಇಂಡಿಯಾದ ಕ್ಯಾಪ್ಟನ್ ಒಂದು ಮಾತು ಹೇಳಿದ್ರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಮ್ಮ ಟಾರ್ಗೆಟ್. ಐಪಿಎಲ್ನಲ್ಲಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಮಾಡ್ತೀವಿ ಅಂತಾ. ಆದ್ರೆ, ಐಪಿಎಲ್ನಲ್ಲಿ ಆಗಿದ್ದೇ ಬೇರೆ. ತಂಡದ ಪ್ರಮುಖ ಆಟಗಾರರೆಲ್ಲಾ ವಿಶ್ರಾಂತಿಯನ್ನೇ ಪಡೀಲಿಲ್ಲ. ಸತತ 2 ತಿಂಗಳು ಐಪಿಎಲ್ ಆಡಿ, ದಿಢೀರ್ ಟೆಸ್ಟ್ ಫಾರ್ಮೆಟ್ಗೆ ಶಿಫ್ಟ್ ಆದ್ರು.
ಕಂಡೀಷನ್ಗೆ ಹೊಂದಿಕೊಳ್ಳುವಲ್ಲೂ ಫೇಲ್.!
ಇಂಗ್ಲೆಂಡ್ನ ಪ್ಲೇಯಿಂಗ್ ಕಂಡೀಷನ್ಗೂ ಭಾರತದ ಪ್ಲೇಯಿಂಗ್ ಕಂಡೀಷನ್ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ಹೀಗಾಗಿ ಟೂರ್ನಿಗೂ ಮುನ್ನವೇ ಟೀಮ್ ಇಂಡಿಯಾ ಆಟಗಾರರು ತೆರಳಬೇಕು ಅನ್ನೋದು ಎಲ್ಲರ ಅಭಿಪ್ರಾಯವಾಗಿತ್ತು. ಆದ್ರೆ, ಐಪಿಎಲ್ ಕಾರಣದಿಂದ ಇದು ಸಾಧ್ಯವಾಗಲೇ ಇಲ್ಲ. ಇನ್ಫ್ಯಾಕ್ಟ್. ತಂಡದ ಮೇನ್ ವೆಪನ್ ಮೊಹಮದ್ ಶಮಿ ತಂಡ ಕೂಡಿಕೊಂಡಿದ್ದು ಕೊನೆಯ ಆಟಗಾರನಾಗಿ. ಜೊತೆಗೆ ಮಹತ್ವದ ಪಂದ್ಯಕ್ಕೂ ಮುನ್ನ ಒಂದು ಅಭ್ಯಾಸ ಪಂದ್ಯವನ್ನೂ ಆಟಗಾರರು ಆಡಲಿಲ್ಲ.
ಇನ್ನೊಂದೆಡೆ ಫೈನಲ್ಗೂ ಮುನ್ನ ಇಂಗ್ಲೆಂಡ್ನಲ್ಲಿ ಆಸಿಸ್ ಪಡೆ ಭರ್ಜರಿ ಅಭ್ಯಾಸ ನಡೆಸಿತ್ತು. ಸ್ವತಃ ಕ್ಯಾಪ್ಟನ್ ಕಮಿನ್ಸ್ ಇದರಿಂದ ಹೊರತಾಗಲಿಲ್ಲ. ಹೀಗಾಗಿಯೇ ಸಿದ್ಧತೆಯಿಲ್ಲದ ಟೀಮ್ ಇಂಡಿಯಾ ಬೌಲರ್ಗಳು ಸಾಲು ಸಾಲು ಹಿನ್ನಡೆಯನ್ನ ಅನುಭವಿಸಿದ್ರು. ತಂಡವೂ ಸಂಕಷ್ಟಕ್ಕೆ ಸಿಲುಕಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
IPLನಲ್ಲಿ ಆಡಿ ಇಲ್ಯಾಕೆ ಹಿಂಗಾಯ್ತು?
ಟೀಂ ಇಂಡಿಯಾಗೆ ಶನಿದೆಸೆಯೇ?
ಟೀಂ ಇಂಡಿಯಾದ ಮುಂದೆ ಆಸೀಸ್ ಓಟದ ಆಟ
ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕೋ ಪ್ಲಾನ್ ಹಾಕಿಕೊಂಡು ಇಂಗ್ಲೆಂಡ್ ಫ್ಲೈಟ್ ಹತ್ತಿದ ಟೀಮ್ ಇಂಡಿಯಾದ ಲೆಕ್ಕಾಚಾರ ಮೊದಲ ದಿನದಲ್ಲೇ ತಲೆ ಕೆಳಗಾಯ್ತು. ಆಸ್ಟ್ರೇಲಿಯಾ ಖಡಕ್ ಆಟದ ಮುಂದೆ ರೋಹಿತ್ ಪಡೆ ದಿಕ್ಕೇ ತೋಚದೆ ನಿಂತು ಬಿಡ್ತು. ತಂಡದಲ್ಲಿ ಕಾನ್ಫಿಡೆನ್ಸ್ ಅನ್ನೋದೆ ಮಾಯವಾಯ್ತು. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಬೌಲಿಂಗ್ ಅಷ್ಟು ಕಳಪೆಯಾಗಿತ್ತು.
ರನ್ಮಷೀನ್ಗಳಾದ ಬೌಲರ್ಸ್, ಕಂಗೆಟ್ಟ ಕ್ಯಾಪ್ಟನ್.!
ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದೇ ತಡ ಟೀಮ್ ಇಂಡಿಯಾ ಅರ್ಧಪಂದ್ಯ ಗೆಲ್ತು ಅಂತ ಎಲ್ರೂ ಭಾವಿಸಿದ್ರು. ಆರಂಭದಲ್ಲೇ ಆಸಿಸ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ ಮೇಲಂತೂ, ಟೀಮ್ ಇಂಡಿಯಾ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು. ಆದ್ರೆ, ಸೀನ್ ಕಟ್ ಮಾಡಿದ್ರೆ, ಆಗಿದ್ದೇ ಬೇರೆ. ಆಸಿಸ್ ಪಡೆಯ ರಣಾರ್ಭಟಕ್ಕೆ ಬೌಲಿಂಗ್ ಯುನಿಟ್ ಬೆಸ್ತು ಬಿತ್ತು. ಬರೋಬ್ಬರಿ 469 ರನ್ಗಳನ್ನ ಕಾಂಗರೂ ಪಡೆ ಕಲೆ ಹಾಕ್ತು. ಇದ್ರ ಬೆನ್ನಲ್ಲೇ, ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕಾನ್ಫಿಡೆನ್ಸೇ ಮಾಯವಾಯ್ತು.
ಟೀಮ್ ಇಂಡಿಯಾ ಪರದಾಟ, ಆಸಿಸ್ ಮೆರೆದಾಟ.!
ಒಂದೆಡೆ ಟೀಮ್ ಇಂಡಿಯಾ ಬೌಲರ್ಗಳು ವಿಕೆಟ್ ಬೇಟೆಗೆ ಪರದಾಡಿದ್ರೆ, ಆಸಿಸ್ ಬೌಲರ್ಸ್ ಸಲೀಸಾಗಿ ವಿಕೆಟ್ ಎಗರಿಸಿದ್ರು. ಕೊಹ್ಲಿ, ರೋಹಿತ್, ಪೂಜಾರ, ಗಿಲ್ ಎಲ್ರೂ ಮಕಾಡೆ ಮಲಗಿದ್ರು. ಹಾಗಾದ್ರೆ, ಟೀಮ್ ಇಂಡಿಯಾ ಬೌಲರ್ಸ್ ಎಡವಿದ್ದೆಲ್ಲಿ ಅನ್ನೋದು ಈಗ ಹುಟ್ಟಿರೋ ಪ್ರಶ್ನೆಯಾಗಿದೆ. ಕಣಕ್ಕಿಳಿಸಿದ ನಾಲ್ವರು ಬೌಲರ್ಗಳು ಕ್ವಾಲಿಟಿ ಬೌಲರ್ಸ್ ಇಂಗ್ಲೆಂಡ್ನಲ್ಲಿ ಆಡಿದ ಅನುಭವವೂ ಇದೆ. ಹಾಗಿದ್ರೂ, ವಿಕೆಟ್ ಭೇಟೆಗೆ ಪರದಾಡಿದ್ದು ಯಾಕೆ ಅನ್ನೋ ಚರ್ಚೆ ನಡೀತಾ ಇದೆ. ಇದಕ್ಕೆ ಉತ್ತರ ಐಪಿಎಲ್.
ಐಪಿಎಲ್ನಲ್ಲಿ ಮಿಂಚು, ಟೆಸ್ಟ್ ಫೈನಲ್ನಲ್ಲಿ ಮಂಕು.!
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇವರಿಬ್ಬರೂ ಈ ಸೀಸನ್ನ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಆದ್ರೆ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ವಿಕೆಟ್ ಬೇಟೆಗೆ ಒದ್ದಾಡಿದ್ರು. ವೈಟ್ಬಾಲ್ ಫಾರ್ಮೆಟ್ನಿಂದ ರೆಡ್ಬಾಲ್ ಶಿಫ್ಟ್ ಆಗಿದ್ದೇ ತಡ ಇಬ್ಬರೂ ರಿಧಮ್ ಕಂಡುಕೊಳ್ಳೋಕೆ ಆಗಲಿಲ್ಲ. ಟೀಮ್ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಸತತ 2 ತಿಂಗಳು ಐಪಿಎಲ್ ಆಡಿದ್ದೇ ಹಿನ್ನಡೆಗೆ ಕಾರಣ ಅಂತಿದ್ದಾರೆ. ಸತತ 2 ತಿಂಗಳು ಪಂದ್ಯದಲ್ಲಿ 4 ಓವರ್ ಮಾತ್ರ ಬೌಲಿಂಗ್ ಮಾಡಿ, ಇದ್ದಕ್ಕಿದ್ದಂತೆ 15-20 ಓವರ್ಗೆ ಜಂಪ್ ಮಾಡಿದ್ರೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.
ವರ್ಕ್ಲೋಡ್ ಮ್ಯಾನೇಜ್ಮೆಂಟ್ನಲ್ಲಿ ವಿಫಲ.!
ಹೌದು. ಈ ಸೀಸನ್ ಐಪಿಎಲ್ಗೂ ಮುನ್ನ ಟೀಮ್ ಇಂಡಿಯಾದ ಕ್ಯಾಪ್ಟನ್ ಒಂದು ಮಾತು ಹೇಳಿದ್ರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಮ್ಮ ಟಾರ್ಗೆಟ್. ಐಪಿಎಲ್ನಲ್ಲಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಮಾಡ್ತೀವಿ ಅಂತಾ. ಆದ್ರೆ, ಐಪಿಎಲ್ನಲ್ಲಿ ಆಗಿದ್ದೇ ಬೇರೆ. ತಂಡದ ಪ್ರಮುಖ ಆಟಗಾರರೆಲ್ಲಾ ವಿಶ್ರಾಂತಿಯನ್ನೇ ಪಡೀಲಿಲ್ಲ. ಸತತ 2 ತಿಂಗಳು ಐಪಿಎಲ್ ಆಡಿ, ದಿಢೀರ್ ಟೆಸ್ಟ್ ಫಾರ್ಮೆಟ್ಗೆ ಶಿಫ್ಟ್ ಆದ್ರು.
ಕಂಡೀಷನ್ಗೆ ಹೊಂದಿಕೊಳ್ಳುವಲ್ಲೂ ಫೇಲ್.!
ಇಂಗ್ಲೆಂಡ್ನ ಪ್ಲೇಯಿಂಗ್ ಕಂಡೀಷನ್ಗೂ ಭಾರತದ ಪ್ಲೇಯಿಂಗ್ ಕಂಡೀಷನ್ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ಹೀಗಾಗಿ ಟೂರ್ನಿಗೂ ಮುನ್ನವೇ ಟೀಮ್ ಇಂಡಿಯಾ ಆಟಗಾರರು ತೆರಳಬೇಕು ಅನ್ನೋದು ಎಲ್ಲರ ಅಭಿಪ್ರಾಯವಾಗಿತ್ತು. ಆದ್ರೆ, ಐಪಿಎಲ್ ಕಾರಣದಿಂದ ಇದು ಸಾಧ್ಯವಾಗಲೇ ಇಲ್ಲ. ಇನ್ಫ್ಯಾಕ್ಟ್. ತಂಡದ ಮೇನ್ ವೆಪನ್ ಮೊಹಮದ್ ಶಮಿ ತಂಡ ಕೂಡಿಕೊಂಡಿದ್ದು ಕೊನೆಯ ಆಟಗಾರನಾಗಿ. ಜೊತೆಗೆ ಮಹತ್ವದ ಪಂದ್ಯಕ್ಕೂ ಮುನ್ನ ಒಂದು ಅಭ್ಯಾಸ ಪಂದ್ಯವನ್ನೂ ಆಟಗಾರರು ಆಡಲಿಲ್ಲ.
ಇನ್ನೊಂದೆಡೆ ಫೈನಲ್ಗೂ ಮುನ್ನ ಇಂಗ್ಲೆಂಡ್ನಲ್ಲಿ ಆಸಿಸ್ ಪಡೆ ಭರ್ಜರಿ ಅಭ್ಯಾಸ ನಡೆಸಿತ್ತು. ಸ್ವತಃ ಕ್ಯಾಪ್ಟನ್ ಕಮಿನ್ಸ್ ಇದರಿಂದ ಹೊರತಾಗಲಿಲ್ಲ. ಹೀಗಾಗಿಯೇ ಸಿದ್ಧತೆಯಿಲ್ಲದ ಟೀಮ್ ಇಂಡಿಯಾ ಬೌಲರ್ಗಳು ಸಾಲು ಸಾಲು ಹಿನ್ನಡೆಯನ್ನ ಅನುಭವಿಸಿದ್ರು. ತಂಡವೂ ಸಂಕಷ್ಟಕ್ಕೆ ಸಿಲುಕಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ