newsfirstkannada.com

ಟೀಂ ಇಂಡಿಯಾಗೆ ಮೂವರು ಆಪ್ತರಕ್ಷಕರು.. ಈ ಆಟಗಾರರು ಸಿಡಿದೆದ್ದರೆ ಟೆಸ್ಟ್​ ವಿಶ್ವಕಪ್​ ಕಿರೀಟ..!

Share :

06-06-2023

    ಟೆಸ್ಟ್​​ನಲ್ಲಿ ಭಾರತದ ಮಧ್ಯಮ ಕ್ರಮಾಂಕ ಹೆಂಗಿದೆ ಗೊತ್ತಾ?

    'ಹಳೇ' ಮಿಡಲ್ ಆರ್ಡರ್​ 'ಹೊಸ' ಆಟವಾಡುತ್ತಾ?

    ನಾಳೆಯಿಂದ ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್ ಆರಂಭ​​

ನಾಳೆಯಿಂದ ಬಹು ನಿರೀಕ್ಷಿತ ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾ ಟೆಸ್ಟ್​ ವಿಶ್ವಕಪ್​ ಕಿರೀಟ ಮುಡಿಗೇರಿಸಿಕೊಳ್ಳಲು, ಒಂದೇ ಮೆಟ್ಟಿಲು ಬಾಕಿ. ಮಧ್ಯಮ ಕ್ರಮಾಂಕದ ಮೇಲೆ ಟ್ರೋಫಿ ಭವಿಷ್ಯ ಅಡಗಿದೆ. ಹಳೇ ಯುದ್ಧ ಕುದುರೆಗಳು, ಹೊಸ ಯುದ್ಧ ಕುದುರೆಗಳಂತೆ ಘರ್ಜಿಸಬೇಕಿವೆ. ಹಾಗಾದ್ದಲ್ಲಿ ರೋಹಿತ್ ಪಡೆಯನ್ನ ಫೈನಲ್​ ಅಖಾಡಲ್ಲಿ ಹಿಡಿಯೋರೆ ಇಲ್ಲ.

ಕೌನ್​ ಬನೇಗಾ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​​​ ನಯಾ ಸುಲ್ತಾನ್​? ಟೀಮ್ ಇಂಡಿಯಾನ ಅಥವಾ ಆಸ್ಟ್ರೇಲಿಯಾನ? ಉತ್ತರ ನಿಗೂಢ. ಇನ್ನೂ ಆರು ದಿನದಲ್ಲಿ ಹೊಸ ಟೆಸ್ಟ್​ ಅಧಿಪತಿಯ ಉದಯ ಆಗಲಿದೆ. ಅದು ನಾನೇ ಆಗಬೇಕಂತ ವಿಶ್ವ ಕ್ರಿಕೆಟ್​​ನ ದೈತ್ಯ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿವೆ.

ಕಳೆದ ಸಲ ಭಾರತಕ್ಕೆ ಟ್ರೋಫಿ ಜಸ್ಟ್ ಮಿಸ್ ಆಗಿತ್ತು. ಬಟ್​ ಈ ಬಾರಿ ಹೇಗಾದರೂ ಸೈ ಕಪ್​​ ಗೆದ್ದು ಟೆಸ್ಟ್​​ ಕ್ರಿಕೆಟ್​​ನ ಕಿಂಗ್ ಅನ್ನಿಸಿಕೊಳ್ಳಲು ರೋಹಿತ್ ಪಡೆ ಹವಣಿಸ್ತಿದೆ. ಈ ಡ್ರೀಮ್ ಇಂಪಾಸಿಬಲ್ ಏನು ಅಲ್ಲ, ಪಾಸಿಬಲ್ಲೆ. ಬಟ್​​​, ಎಲ್ಲವೂ ಮಿಡಲ್ ಆರ್ಡರ್​​​ ಮೇಲೆ ನಿಂತಿದೆ. ಒಂದೊಮ್ಮೆ ಮಧ್ಯಮ ಕ್ರಮಾಂಕದ ಬಿಗ್​ ಬ್ಯಾಟ್ಸ್​​​ಮನ್​ಗಳು​​​ ಸಿಡಿದು ನಿಂತ್ರೆ ಫೈನಲ್​​ನಲ್ಲಿ ಆಸ್ಟ್ರೇಲಿಯನ್ನರ ಹಂಟ್​ ಪಕ್ಕಾ.

ಕೊಹ್ಲಿ-ಪೂಜಾರ, ರಹಾನೆ ತಂಡಕ್ಕೆ ಆಪ್ತರಕ್ಷಕರು
ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ. ಆ ಮಹಾದಾಸೆ ಈಡೇರಬೇಕಾದ್ರೆ ಅದು ಮಿಡಲ್ ಆರ್ಡರ್ ಬ್ಯಾಟ್ಸ್​​​ಮನ್​​​ಗಳಿಂದ ಮಾತ್ರ ಸಾಧ್ಯ. ಅದು ಎಸ್ಪೆಷಲಿ ಬಿಗ್​​​​ ಫೋರ್​​​ ಪ್ಲೇಯರ್ಸ್​ ಅಬ್ಬರಿಸಬೇಕಿದೆ. ಅವರೇ ಕಿಂಗ್ ಕೊಹ್ಲಿ, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ. ಯೆಸ್​​, ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭಾರತಕ್ಕೆ ಈ ​​​​ ಬಿಗ್​​​ ಫೋರ್​​ ಬ್ಯಾಟ್ಸ್​​ಮನ್​​ಗಳೇ ಆಶಾಕಿರಣ. ಇವರೇ ತಂಡಕ್ಕೆ ಆಪ್ತರಕ್ಷಕರು.

ಟೆಸ್ಟ್​​ನಲ್ಲಿ ಭಾರತದ ಮಧ್ಯಮ ಕ್ರಮಾಂಕ
2020ರ ಡಿಸೆಂಬರ್​ ಬಳಿಕ ಚೇತೇಶ್ವರ್ ಪೂಜಾರ ಅವರು 25 ಪಂದ್ಯ್ಗಗಳಿಂದ 1314 ರನ್​​​ ಬಾರಿಸಿದ್ದಾರೆ. 1 ಶತಕ ಹಾಗೂ 10 ಅರ್ಧಶತಕ ಹೊಡೆದಿದ್ದಾರೆ. ವಿರಾಟ್ ಕೊಹ್ಲಿ 22 ಪಂದ್ಯಗಳಿಂದ 1176 ರನ್​ ಸಿಡಿಸಿದ್ದಾರೆ. ಇದ್ರಲ್ಲಿ 1 ಸೆಂಚುರಿ ಹಾಗೂ 6 ಹಾಫ್​ಸೆಂಚುರಿ ಸೇರಿಕೊಂಡಿವೆ. ಅಜಿಂಕ್ಯ ರಹಾನೆ 17 ಪಂದ್ಯಗಳಿಂದ 728 ರನ್​​ ಗಳಿಸಿದ್ರೆ ಆಲ್​ರೌಂಡರ್​ ಜಡೇಜಾ 15 ಮ್ಯಾಚ್​​ನಲ್ಲಿ ಎರಡು ಶತಕ ಹಾಗೂ 4 ಹಾಫ್​​ಸೆಂಚುರಿಯೊಂದಿಗೆ 789 ರನ್ ಚಚ್ಚಿದ್ದಾರೆ.

‘ಹಳೇ’ ಮಿಡಲ್ ಆರ್ಡರ್​ ‘ಹೊಸ’ ಆಟವಾಡುತ್ತಾ?
ರೀಸೆಂಟ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ರಿಷಬ್ ಪಂತ್​​, ಶ್ರೇಯಸ್ ಅಯ್ಯರ್ ಹಾಗೂ ಜಡೇಜಾ ಕೌಂಟರ್​​ ಅಟ್ಯಾಕ್​ ಆಟಕ್ಕೆ ಹೆಸರುವಾಸಿ. ಬ್ರ್ಯಾಂಡ್ ಆಫ್ ಟೆಸ್ಟ್ ಕ್ರಿಕೆಟ್​ ಸೆಟ್​​ ಮಾಡಿದ್ದಾರೆ. ಆದರೆ ಪ್ರಸಕ್ತ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಈ ಮೂವರು ಗೇಮ್​​​​​​ ಚೇಂಜರ್ಸ್​ ಆಡ್ತಿಲ್ಲ. ಸದ್ಯ ಈ ಟೆಂಪೋ ಮುಂದುವರಿಸಬೇಕಾದ ಜವಾಬ್ದಾರಿ ಕಿಂಗ್ ಕೊಹ್ಲಿ, ಪೂಜಾರ, ರಹಾನೆ ಹಾಗೂ ಜಡೇಜಾ ಅವರ ಹೆಗಲೇರಿದೆ.

ಫೈನಲ್​​ ವಾರ್​​ನಲ್ಲಿ ಆಸ್ಟ್ರೇಲಿಯಾದಂತ ಸ್ಟ್ರಾಂಗೆಸ್ಟ್​​ ತಂಡವನ್ನ ಮಣಿಸಬೇಕಾದ್ರೆ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್​ಗಳು ಅಗ್ರೆಸ್ಸಿವ್ ರೋಲ್​​ ಪ್ಲೇ ಮಾಡಲೇಬೇಕಿದೆ. 18 ತಿಂಗಳ ಬಳಿಕ ರಹಾನೆ ತಂಡಕ್ಕೆ ಮರಳಿದ್ದಾರೆ. ಐಪಿಎಲ್​​ನಲ್ಲಿ ಆಕ್ರಮಣಕಾರಿ ಆಟವಾಡಿ ಸೈ ಅನ್ನಿಸಿಕೊಂಡಿದ್ದು, ವೈಟ್​ ಜರ್ಸಿಯಲ್ಲಿ ಅದನ್ನು ಕಂಟಿನ್ಯೂ ಮಾಡಬೇಕಾದ ಅಗತ್ಯವಿದೆ.

ಅನುಭವಿ ಕಿಂಗ್ ಕೊಹ್ಲಿ ತಮ್ಮ ಅನುಭವ ಧಾರೆ ಎರೆಯಲೇಬೇಕಿದೆ. ಮಹತ್ವದ ಪಂದ್ಯದಲ್ಲಿ ರನ್ ಗಳಿಸೋದಷ್ಟೇ ಅಲ್ಲದೇ ಬ್ಯಾಟಿಂಗ್ ಅಪ್ರೋಚ್​ನಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಕೊಹ್ಲಿಯಂತ ದ ಲೆಜೆಂಡ್​​​​​​ ಅಬ್ಬರಿಸಿದ್ರೆ ಎದುರಾಳಿಯನ್ನ ಸುಲಭವಾಗಿ ಒತ್ತಡಕ್ಕೆ ಸಿಲುಕಿಸಬಹುದು. ಪೂಜಾರ ಕೂಡ ಅತಿಯಾದ ನಿಧಾನಗತಿ ಬ್ಯಾಟಿಂಗ್​ ಮಾಡೋದನ್ನು ಬಿಟ್ಟು ಸಿಚುವೇಶನ್​​​ಗೆ ತಕ್ಕಂತೆ ಆಡೋದನ್ನು ಕಲಿಯಬೇಕಿದೆ.

ಎನಿವೇ ಹಳೇ ಮಿಡಲ್ ಆರ್ಡರ್​ನಿಂದ ಹೊಸ ಆಟ ಮೂಡಿಬರಬೇಕಿದೆ. ಹಾಗಾದಲ್ಲಿ ಮಾತ್ರ ಬಲಾಢ್ಯ ಆಸೀಸ್​ ತಂಡವನ್ನ ಫೈನಲ್​​ ಆಖಾಡದಲ್ಲಿ ಮಣ್ಣು ಮುಕ್ಕಿಸಲು ಸಾಧ್ಯ. ಅಂತಹ ನ್ಯೂ ಅಪ್ರೋಚ್​​​​​​ ಗೇಮ್​​​ ಅನ್ನು ಭಾರತ ಆಡುತ್ತಾ ? ಅಥವಾ ಇಲ್ಲ ಅನ್ನೋದಕ್ಕೆ ಸಂಡೇ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಟೀಂ ಇಂಡಿಯಾಗೆ ಮೂವರು ಆಪ್ತರಕ್ಷಕರು.. ಈ ಆಟಗಾರರು ಸಿಡಿದೆದ್ದರೆ ಟೆಸ್ಟ್​ ವಿಶ್ವಕಪ್​ ಕಿರೀಟ..!

https://newsfirstlive.com/wp-content/uploads/2023/06/RAHANE.jpg

    ಟೆಸ್ಟ್​​ನಲ್ಲಿ ಭಾರತದ ಮಧ್ಯಮ ಕ್ರಮಾಂಕ ಹೆಂಗಿದೆ ಗೊತ್ತಾ?

    'ಹಳೇ' ಮಿಡಲ್ ಆರ್ಡರ್​ 'ಹೊಸ' ಆಟವಾಡುತ್ತಾ?

    ನಾಳೆಯಿಂದ ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್ ಆರಂಭ​​

ನಾಳೆಯಿಂದ ಬಹು ನಿರೀಕ್ಷಿತ ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾ ಟೆಸ್ಟ್​ ವಿಶ್ವಕಪ್​ ಕಿರೀಟ ಮುಡಿಗೇರಿಸಿಕೊಳ್ಳಲು, ಒಂದೇ ಮೆಟ್ಟಿಲು ಬಾಕಿ. ಮಧ್ಯಮ ಕ್ರಮಾಂಕದ ಮೇಲೆ ಟ್ರೋಫಿ ಭವಿಷ್ಯ ಅಡಗಿದೆ. ಹಳೇ ಯುದ್ಧ ಕುದುರೆಗಳು, ಹೊಸ ಯುದ್ಧ ಕುದುರೆಗಳಂತೆ ಘರ್ಜಿಸಬೇಕಿವೆ. ಹಾಗಾದ್ದಲ್ಲಿ ರೋಹಿತ್ ಪಡೆಯನ್ನ ಫೈನಲ್​ ಅಖಾಡಲ್ಲಿ ಹಿಡಿಯೋರೆ ಇಲ್ಲ.

ಕೌನ್​ ಬನೇಗಾ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​​​ ನಯಾ ಸುಲ್ತಾನ್​? ಟೀಮ್ ಇಂಡಿಯಾನ ಅಥವಾ ಆಸ್ಟ್ರೇಲಿಯಾನ? ಉತ್ತರ ನಿಗೂಢ. ಇನ್ನೂ ಆರು ದಿನದಲ್ಲಿ ಹೊಸ ಟೆಸ್ಟ್​ ಅಧಿಪತಿಯ ಉದಯ ಆಗಲಿದೆ. ಅದು ನಾನೇ ಆಗಬೇಕಂತ ವಿಶ್ವ ಕ್ರಿಕೆಟ್​​ನ ದೈತ್ಯ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿವೆ.

ಕಳೆದ ಸಲ ಭಾರತಕ್ಕೆ ಟ್ರೋಫಿ ಜಸ್ಟ್ ಮಿಸ್ ಆಗಿತ್ತು. ಬಟ್​ ಈ ಬಾರಿ ಹೇಗಾದರೂ ಸೈ ಕಪ್​​ ಗೆದ್ದು ಟೆಸ್ಟ್​​ ಕ್ರಿಕೆಟ್​​ನ ಕಿಂಗ್ ಅನ್ನಿಸಿಕೊಳ್ಳಲು ರೋಹಿತ್ ಪಡೆ ಹವಣಿಸ್ತಿದೆ. ಈ ಡ್ರೀಮ್ ಇಂಪಾಸಿಬಲ್ ಏನು ಅಲ್ಲ, ಪಾಸಿಬಲ್ಲೆ. ಬಟ್​​​, ಎಲ್ಲವೂ ಮಿಡಲ್ ಆರ್ಡರ್​​​ ಮೇಲೆ ನಿಂತಿದೆ. ಒಂದೊಮ್ಮೆ ಮಧ್ಯಮ ಕ್ರಮಾಂಕದ ಬಿಗ್​ ಬ್ಯಾಟ್ಸ್​​​ಮನ್​ಗಳು​​​ ಸಿಡಿದು ನಿಂತ್ರೆ ಫೈನಲ್​​ನಲ್ಲಿ ಆಸ್ಟ್ರೇಲಿಯನ್ನರ ಹಂಟ್​ ಪಕ್ಕಾ.

ಕೊಹ್ಲಿ-ಪೂಜಾರ, ರಹಾನೆ ತಂಡಕ್ಕೆ ಆಪ್ತರಕ್ಷಕರು
ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ. ಆ ಮಹಾದಾಸೆ ಈಡೇರಬೇಕಾದ್ರೆ ಅದು ಮಿಡಲ್ ಆರ್ಡರ್ ಬ್ಯಾಟ್ಸ್​​​ಮನ್​​​ಗಳಿಂದ ಮಾತ್ರ ಸಾಧ್ಯ. ಅದು ಎಸ್ಪೆಷಲಿ ಬಿಗ್​​​​ ಫೋರ್​​​ ಪ್ಲೇಯರ್ಸ್​ ಅಬ್ಬರಿಸಬೇಕಿದೆ. ಅವರೇ ಕಿಂಗ್ ಕೊಹ್ಲಿ, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ. ಯೆಸ್​​, ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭಾರತಕ್ಕೆ ಈ ​​​​ ಬಿಗ್​​​ ಫೋರ್​​ ಬ್ಯಾಟ್ಸ್​​ಮನ್​​ಗಳೇ ಆಶಾಕಿರಣ. ಇವರೇ ತಂಡಕ್ಕೆ ಆಪ್ತರಕ್ಷಕರು.

ಟೆಸ್ಟ್​​ನಲ್ಲಿ ಭಾರತದ ಮಧ್ಯಮ ಕ್ರಮಾಂಕ
2020ರ ಡಿಸೆಂಬರ್​ ಬಳಿಕ ಚೇತೇಶ್ವರ್ ಪೂಜಾರ ಅವರು 25 ಪಂದ್ಯ್ಗಗಳಿಂದ 1314 ರನ್​​​ ಬಾರಿಸಿದ್ದಾರೆ. 1 ಶತಕ ಹಾಗೂ 10 ಅರ್ಧಶತಕ ಹೊಡೆದಿದ್ದಾರೆ. ವಿರಾಟ್ ಕೊಹ್ಲಿ 22 ಪಂದ್ಯಗಳಿಂದ 1176 ರನ್​ ಸಿಡಿಸಿದ್ದಾರೆ. ಇದ್ರಲ್ಲಿ 1 ಸೆಂಚುರಿ ಹಾಗೂ 6 ಹಾಫ್​ಸೆಂಚುರಿ ಸೇರಿಕೊಂಡಿವೆ. ಅಜಿಂಕ್ಯ ರಹಾನೆ 17 ಪಂದ್ಯಗಳಿಂದ 728 ರನ್​​ ಗಳಿಸಿದ್ರೆ ಆಲ್​ರೌಂಡರ್​ ಜಡೇಜಾ 15 ಮ್ಯಾಚ್​​ನಲ್ಲಿ ಎರಡು ಶತಕ ಹಾಗೂ 4 ಹಾಫ್​​ಸೆಂಚುರಿಯೊಂದಿಗೆ 789 ರನ್ ಚಚ್ಚಿದ್ದಾರೆ.

‘ಹಳೇ’ ಮಿಡಲ್ ಆರ್ಡರ್​ ‘ಹೊಸ’ ಆಟವಾಡುತ್ತಾ?
ರೀಸೆಂಟ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ರಿಷಬ್ ಪಂತ್​​, ಶ್ರೇಯಸ್ ಅಯ್ಯರ್ ಹಾಗೂ ಜಡೇಜಾ ಕೌಂಟರ್​​ ಅಟ್ಯಾಕ್​ ಆಟಕ್ಕೆ ಹೆಸರುವಾಸಿ. ಬ್ರ್ಯಾಂಡ್ ಆಫ್ ಟೆಸ್ಟ್ ಕ್ರಿಕೆಟ್​ ಸೆಟ್​​ ಮಾಡಿದ್ದಾರೆ. ಆದರೆ ಪ್ರಸಕ್ತ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಈ ಮೂವರು ಗೇಮ್​​​​​​ ಚೇಂಜರ್ಸ್​ ಆಡ್ತಿಲ್ಲ. ಸದ್ಯ ಈ ಟೆಂಪೋ ಮುಂದುವರಿಸಬೇಕಾದ ಜವಾಬ್ದಾರಿ ಕಿಂಗ್ ಕೊಹ್ಲಿ, ಪೂಜಾರ, ರಹಾನೆ ಹಾಗೂ ಜಡೇಜಾ ಅವರ ಹೆಗಲೇರಿದೆ.

ಫೈನಲ್​​ ವಾರ್​​ನಲ್ಲಿ ಆಸ್ಟ್ರೇಲಿಯಾದಂತ ಸ್ಟ್ರಾಂಗೆಸ್ಟ್​​ ತಂಡವನ್ನ ಮಣಿಸಬೇಕಾದ್ರೆ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್​ಗಳು ಅಗ್ರೆಸ್ಸಿವ್ ರೋಲ್​​ ಪ್ಲೇ ಮಾಡಲೇಬೇಕಿದೆ. 18 ತಿಂಗಳ ಬಳಿಕ ರಹಾನೆ ತಂಡಕ್ಕೆ ಮರಳಿದ್ದಾರೆ. ಐಪಿಎಲ್​​ನಲ್ಲಿ ಆಕ್ರಮಣಕಾರಿ ಆಟವಾಡಿ ಸೈ ಅನ್ನಿಸಿಕೊಂಡಿದ್ದು, ವೈಟ್​ ಜರ್ಸಿಯಲ್ಲಿ ಅದನ್ನು ಕಂಟಿನ್ಯೂ ಮಾಡಬೇಕಾದ ಅಗತ್ಯವಿದೆ.

ಅನುಭವಿ ಕಿಂಗ್ ಕೊಹ್ಲಿ ತಮ್ಮ ಅನುಭವ ಧಾರೆ ಎರೆಯಲೇಬೇಕಿದೆ. ಮಹತ್ವದ ಪಂದ್ಯದಲ್ಲಿ ರನ್ ಗಳಿಸೋದಷ್ಟೇ ಅಲ್ಲದೇ ಬ್ಯಾಟಿಂಗ್ ಅಪ್ರೋಚ್​ನಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಕೊಹ್ಲಿಯಂತ ದ ಲೆಜೆಂಡ್​​​​​​ ಅಬ್ಬರಿಸಿದ್ರೆ ಎದುರಾಳಿಯನ್ನ ಸುಲಭವಾಗಿ ಒತ್ತಡಕ್ಕೆ ಸಿಲುಕಿಸಬಹುದು. ಪೂಜಾರ ಕೂಡ ಅತಿಯಾದ ನಿಧಾನಗತಿ ಬ್ಯಾಟಿಂಗ್​ ಮಾಡೋದನ್ನು ಬಿಟ್ಟು ಸಿಚುವೇಶನ್​​​ಗೆ ತಕ್ಕಂತೆ ಆಡೋದನ್ನು ಕಲಿಯಬೇಕಿದೆ.

ಎನಿವೇ ಹಳೇ ಮಿಡಲ್ ಆರ್ಡರ್​ನಿಂದ ಹೊಸ ಆಟ ಮೂಡಿಬರಬೇಕಿದೆ. ಹಾಗಾದಲ್ಲಿ ಮಾತ್ರ ಬಲಾಢ್ಯ ಆಸೀಸ್​ ತಂಡವನ್ನ ಫೈನಲ್​​ ಆಖಾಡದಲ್ಲಿ ಮಣ್ಣು ಮುಕ್ಕಿಸಲು ಸಾಧ್ಯ. ಅಂತಹ ನ್ಯೂ ಅಪ್ರೋಚ್​​​​​​ ಗೇಮ್​​​ ಅನ್ನು ಭಾರತ ಆಡುತ್ತಾ ? ಅಥವಾ ಇಲ್ಲ ಅನ್ನೋದಕ್ಕೆ ಸಂಡೇ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

Load More