newsfirstkannada.com

WTC Final 2023: ಕೊಹ್ಲಿ ಅದೊಂದು ಮಾತಿನಿಂದ ಹೆಚ್ಚಾಯ್ತು ಆಟಗಾರರ ಜೋಶ್​​! 

Share :

11-06-2023

    ಆಟಗಾರರಿಗೆ ಗೆಲುವಿನ ಉತ್ಸಾಹ ತುಂಬಿದ ವಿರಾಟ್​​ ಕೊಹ್ಲಿ

    ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದ ಕಿಂಗ್​

    ವಿರಾಟ್​ ಕೊಟ್ಟ ಟಿಪ್ಸ್​ ವರ್ಕೌಟ್​ ಆಗುತ್ತಾ?

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ನಿಜಕ್ಕೂ ಥ್ರಿಲ್ಲಿಂಗ್ ಎಂಡ್​​ಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಆರಂಭಿಕ ಎರಡು ದಿನ ಡಲ್ ಆಗಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ನರನ್ನ ಸೆಡ್ಡು ಹೊಡೆದು ಸಖತ್ ಆಗಿಯೇ ಕಮ್​​ಬ್ಯಾಕ್ ಮಾಡಿದೆ. ಅಷ್ಟೇ ಅಲ್ಲ.! ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದೆ. ಇದಕ್ಕೆಲ್ಲ ಕಾರಣ ಕಿಂಗ್ ವಿರಾಟ್​ ಕೊಹ್ಲಿ.

ಹೌದು! ಪ್ರತಿಷ್ಠಿತ ಪಂದ್ಯದಲ್ಲಿ ಆಸೀಸ್​ ಪಾಲಿಗೆ ಕಬ್ಬಿಣದ ಕಡಲೆಯಾಗಬೇಕಿದ್ದ ಟೀಮ್ ಇಂಡಿಯಾ, ಮೊದಲೆರೆಡು ದಿನ ನಿಜಕ್ಕೂ ಸಪ್ಪೆಯಾಗಿತ್ತು. ಹಲ್ಲಿಲ್ಲದ ಹಾವಿನಂತೆ ಆನ್​ಫೀಲ್ಡ್​ನಲ್ಲಿ ಕಾಣುತ್ತಿತ್ತು. ಆ ಎರಡು ದಿನಗಳ ಆಟ ನೋಡಿದವರು, ನಿಜಕ್ಕೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಆಡ್ತಿದೆಯೋ, ಇಲ್ಲ ಫ್ರಾಕ್ಟೀಸ್ ಮಾಡ್ತಿದೆಯೋ ಎಂಬಂತೆ ಭಾಸವಾಗಿತ್ತು. ಯಾಕಂದ್ರೆ, ಟೀಮ್ ಇಂಡಿಯಾದ ಆಟವೇ ಅಲ್ಲ. ಹಾವಭಾವ ಅದೇ ರೀತಿ ಇತ್ತು.

ರೋಹಿತ್ ಸೈಲೆಂಟ್​.. ಕೊಹ್ಲಿಗೆ ಜವಾಬ್ದಾರಿ..!

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಆದ್ರೆ, ದಿನಕಳೆದಂತೆ  ಆಸ್ಟ್ರೇಲಿಯಾ ಮೇಲಿನ ಬಿಗಿ ಹಿಡಿತ ಸಡಲಿಸಿದ ಟೀಮ್ ಇಂಡಿಯಾ ಮಂಕಾಗಿ ಹೋಗಿತ್ತು. ಅದ್ರಲ್ಲೂ  ಆಟಗಾರರನ್ನ ಹುರಿದುಂಬಿಸಿ ಜೋಶ್​ ತುಂಬಬೇಕಿದ್ದ ನಾಯಕ ರೋಹಿತ್ ಶರ್ಮಾನೇ, ಬಳಲಿ ಬೆಂಡಾಗಿ ಹೋಗಿದ್ದರು.

ಸ್ಮಿತ್-ಟ್ರಾವಿಸ್ ಆಟಕ್ಕೆ  ಹತಾಶೆಗೆ ಒಳಗಾದ ರೋಹಿತ್, ಬೌಲರ್​ಗಳ ಮೇಲೆಯೇ ಕೆಂಡಕಾರಿದರು. ಒಂದೊಂದು ಬೌಂಡರಿಗೂ ತಾಳ್ಮೆ ಕಳೆದುಕೊಳ್ಳುತ್ತಿದ್ದ ರೋಹಿತ್, ನಿಜಕ್ಕೂ ಏನೂ ತೋಚದ ಮನಸ್ಥಿತಿಯಲ್ಲಿ ಸೈಲೆಂಟ್​ ಆಗ್ಬಿಟ್ಟರು. ನಾಯಕನ ಈ ನಡೆ ನಿಜಕ್ಕೂ ಟೀಮ್ ಇಂಡಿಯಾದ ಸೋಲನ್ನೇ ಪ್ರತಿಬಿಂಬಿಸುವಂತಿತ್ತು. ಆದ್ರೆ, ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದೇ ಮೂರನೇ ದಿನ.

ಹೌದು.! ಟೀಮ್ ಇಂಡಿಯಾ ಎದುರು ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್​ ಆರಂಭಿಸಿದ್ದೇ ತಡ, ಖಾಯಂ ಕ್ಯಾಪ್ಟನ್ ರೋಹಿತ್, ಕಿಂಗ್ ಕೊಹ್ಲಿಯ ಹೆಗಲಿಗೆ ತಂಡದ ಜವಾಬ್ದಾರಿ ವಹಿಸಿದರು. ಅಷ್ಟೇ ಅಲ್ಲ.! ಆನ್​​ಫೀಲ್ಡ್​ಗೆ ಇಳಿಯುತ್ತಿದ್ದಂತೆ ಸ್ಪೂರ್ತಿದಾಯಕ ಮಾತುಗಳನ್ನಾಡಿದ ವಿರಾಟ್​, ಆಟಗಾರರಲ್ಲಿ ಹೊಸ ಉತ್ಸಾಹ ತುಂಬುವ ಕೆಲಸಕ್ಕೆ ಕೈಹಾಕಿದರು.

ಆಟಗಾರರನ್ನ ಪ್ರೇರೇಪಿಸಿತಾ ಕೊಹ್ಲಿ ಮಾತು ..?

ಸಹಜವಾಗೇ ಭಾರೀ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ, ಕಮ್​​​​ಬ್ಯಾಕ್ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಹುತೇಕ ಸೋಲೋಪ್ಪಿಕೊಂಡಿದ್ದ ಟೀಮ್ ಇಂಡಿಯಾ, ಕೊಹ್ಲಿಯ ಸ್ಪೂರ್ತಿದಾಯಕ ಮಾತುಗಳಿಗೆ ಪ್ರೇರಣಿಗೊಳ್ತು. ಡು ಆರ್​ ಡೈ ಪರಿಸ್ಥಿತಿಯಲ್ಲಿ ಗೆಲುವಿನ ಛಲ ತುಂಬಿದರು. ಇದು ಸಹಜವಾಗೇ ಆಟಗಾರರಲ್ಲಿ ಗೆಲುವಿನ ಉತ್ಸಾಹ ತುಂಬುವಂತೆ ಮಾಡಿತ್ತು. ಅಷ್ಟೇ ಅಲ್ಲ.! ಆಟಗಾರರಲ್ಲಿ ಹೊಸ ಚೈತನ್ಯ ತುಂಬಿತ್ತು.

ಬದಲಾಯ್ತು ಆಟಗಾರರ ಬಾಡಿ ಲಾಂಗ್ವೇಜ್​ ..!

ಮೊದಲ ಎರಡು ದಿನ, ವಿರಾಟ್​ ಕೊಹ್ಲಿ, ರಹಾನೆ, ಶಾರ್ದೂಲ್ ಠಾಕೂರ್, ಜಡೇಜಾ ಬಿಟ್ಟರೆ, ಉಳಿವರೆಲ್ಲ ಸುಸ್ತಾದಂತೆ ಕಾಣ್ತಿದ್ದರು. ಆದ್ರೆ, ಕಿಂಗ್ ಕೊಹ್ಲಿ ಆನ್​ಫೀಲ್ಡ್​ನ ಜವಾಬ್ದಾರಿ ತೆಗೆದುಕೊಂಡಿದ್ದೇ ತಡ, ಆಟಗಾರರನ್ನ ಪುಟಿದೇಳುವಂತೆ ಮಾಡಿತ್ತು.  ಕೊಹ್ಲಿ ನೀಡುತ್ತಿದ್ದ ಪ್ರೋತ್ಸಾಹಕ್ಕೆ ಆಟಗಾರರ ಎನರ್ಜಿ ಡಬಲ್ ಆಗಿತ್ತು. ಅಗ್ರೆಸ್ಸಿವ್ ಸ್ಟೈಲ್ ಆಫ್ ಕ್ರಿಕೆಟ್​ ಮೂಡ್​ಗೆ ಜಾರಿದ್ರು.

ಬೌಲರ್​ಗಳಿಂದ 3ನೇ ದಿನ ಅಗ್ರೆಸ್ಸಿವ್ ಬೌಲಿಂಗ್ ಸ್ಪೆಲ್..!

ಫೀಲ್ಡರ್​ಗಳು ಮಾತ್ರವಲ್ಲ. ಟೀಮ್ ಇಂಡಿಯಾ ಬೌಲರ್​ಗಳ ಸ್ಪೆಲ್ ಕೂಡ ಚುರುಕಾಗಿತ್ತು. ಅದರಲ್ಲೂ ಸಿರಾಜ್​​ರ ಉರಿದಾಳಿಗೆ ಲಬುಶೇನ್​, ಪತರಗುಟ್ಟಿದ್ದರು. ಸಿರಾಜ್​ ಮಾತ್ರವೇ ಅಲ್ಲ. ಸ್ಪೀಡ್​ ಟ್ರ್ಯಾಕ್​ನಲ್ಲಿ ಚೆಂಡನ್ನ ಬುಗುರಿಯಂತೆ ತಿರುವಿ ಟ್ರಾವಿಸ್ ಹೆಡ್​​ ಕಕ್ಕಬಿಕ್ಕಿಯಾಗುವಂತೆ ಮಾಡಿದ್ದರು.

ವರ್ಕೌಟ್ ಆಗುತ್ತಾ ಕೊಹ್ಲಿ ಕೊಟ್ಟ ಟಿಪ್ಸ್​..?

ಟೀಮ್ ಹಡಲ್​​​​ನಲ್ಲಿ ವಿರಾಟ್​ ಕೊಟ್ಟಂತ ಟಿಪ್ಸ್​, ನಿಜಕ್ಕೂ ಟೀಮ್ ಇಂಡಿಯಾ ಆಟಗಾರರಲ್ಲಿ ಹೋರಾಟದ ಕಿಚ್ಚನ್ನೇ ಎಬ್ಬಿಸಿತ್ತು. ಇದನ್ನ ಮೂರನೇ ದಿನ ಹಾಗೂ ನಾಲ್ಕನೇ ದಿನ ಫೀಲ್ಡಿಂಗ್ ವೇಳೆ ಆಟಗಾರರು ಫೈಟ್​​ ಬ್ಯಾಕ್ ಮಾಡಿದ ಪರಿಯೇ ತಾಜಾ ಉದಾಹರಣೆ.. ಆದ್ರೆ, ಕಕೊಹ್ಲಿ ಟಿಪ್ಸ್​ ಸಂಪೂರ್ಣ ವರ್ಕೌಟ್ ಆಯ್ತಾ ಅನ್ನೋದಕ್ಕೆ ಉತ್ತರ ಇಂದೇ ಸಿಗಬೇಕಿದೆ.

ಒಟ್ನಲ್ಲಿ.! ಅದೇನೇ ಆಗಲಿ. ಮೊದಲೆರೆಡು ದಿನ ಮಂಕಾಗಿದ್ದ ಟೀಮ್ ಇಂಡಿಯಾ, 3ನೇ ಹಾಗೂ 4ನೇ ದಿನ ಆಸಿಸ್​​ಗೆ ಕೌಂಟರ್ ನೀಡೋ ಪರ್ಫಾಮೆನ್ಸ್​ ನೀಡಿದ್ದಂತು ವಿರಾಟ್​ ಕೊಹ್ಲಿಯ ಮೋಟಿವೇಷನಲ್ ಸ್ಪೀಚ್​ಗೆ ಅನ್ನೋದರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

 

 

WTC Final 2023: ಕೊಹ್ಲಿ ಅದೊಂದು ಮಾತಿನಿಂದ ಹೆಚ್ಚಾಯ್ತು ಆಟಗಾರರ ಜೋಶ್​​! 

https://newsfirstlive.com/wp-content/uploads/2023/06/Kohli-11.jpg

    ಆಟಗಾರರಿಗೆ ಗೆಲುವಿನ ಉತ್ಸಾಹ ತುಂಬಿದ ವಿರಾಟ್​​ ಕೊಹ್ಲಿ

    ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದ ಕಿಂಗ್​

    ವಿರಾಟ್​ ಕೊಟ್ಟ ಟಿಪ್ಸ್​ ವರ್ಕೌಟ್​ ಆಗುತ್ತಾ?

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ನಿಜಕ್ಕೂ ಥ್ರಿಲ್ಲಿಂಗ್ ಎಂಡ್​​ಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಆರಂಭಿಕ ಎರಡು ದಿನ ಡಲ್ ಆಗಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ನರನ್ನ ಸೆಡ್ಡು ಹೊಡೆದು ಸಖತ್ ಆಗಿಯೇ ಕಮ್​​ಬ್ಯಾಕ್ ಮಾಡಿದೆ. ಅಷ್ಟೇ ಅಲ್ಲ.! ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದೆ. ಇದಕ್ಕೆಲ್ಲ ಕಾರಣ ಕಿಂಗ್ ವಿರಾಟ್​ ಕೊಹ್ಲಿ.

ಹೌದು! ಪ್ರತಿಷ್ಠಿತ ಪಂದ್ಯದಲ್ಲಿ ಆಸೀಸ್​ ಪಾಲಿಗೆ ಕಬ್ಬಿಣದ ಕಡಲೆಯಾಗಬೇಕಿದ್ದ ಟೀಮ್ ಇಂಡಿಯಾ, ಮೊದಲೆರೆಡು ದಿನ ನಿಜಕ್ಕೂ ಸಪ್ಪೆಯಾಗಿತ್ತು. ಹಲ್ಲಿಲ್ಲದ ಹಾವಿನಂತೆ ಆನ್​ಫೀಲ್ಡ್​ನಲ್ಲಿ ಕಾಣುತ್ತಿತ್ತು. ಆ ಎರಡು ದಿನಗಳ ಆಟ ನೋಡಿದವರು, ನಿಜಕ್ಕೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಆಡ್ತಿದೆಯೋ, ಇಲ್ಲ ಫ್ರಾಕ್ಟೀಸ್ ಮಾಡ್ತಿದೆಯೋ ಎಂಬಂತೆ ಭಾಸವಾಗಿತ್ತು. ಯಾಕಂದ್ರೆ, ಟೀಮ್ ಇಂಡಿಯಾದ ಆಟವೇ ಅಲ್ಲ. ಹಾವಭಾವ ಅದೇ ರೀತಿ ಇತ್ತು.

ರೋಹಿತ್ ಸೈಲೆಂಟ್​.. ಕೊಹ್ಲಿಗೆ ಜವಾಬ್ದಾರಿ..!

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಆದ್ರೆ, ದಿನಕಳೆದಂತೆ  ಆಸ್ಟ್ರೇಲಿಯಾ ಮೇಲಿನ ಬಿಗಿ ಹಿಡಿತ ಸಡಲಿಸಿದ ಟೀಮ್ ಇಂಡಿಯಾ ಮಂಕಾಗಿ ಹೋಗಿತ್ತು. ಅದ್ರಲ್ಲೂ  ಆಟಗಾರರನ್ನ ಹುರಿದುಂಬಿಸಿ ಜೋಶ್​ ತುಂಬಬೇಕಿದ್ದ ನಾಯಕ ರೋಹಿತ್ ಶರ್ಮಾನೇ, ಬಳಲಿ ಬೆಂಡಾಗಿ ಹೋಗಿದ್ದರು.

ಸ್ಮಿತ್-ಟ್ರಾವಿಸ್ ಆಟಕ್ಕೆ  ಹತಾಶೆಗೆ ಒಳಗಾದ ರೋಹಿತ್, ಬೌಲರ್​ಗಳ ಮೇಲೆಯೇ ಕೆಂಡಕಾರಿದರು. ಒಂದೊಂದು ಬೌಂಡರಿಗೂ ತಾಳ್ಮೆ ಕಳೆದುಕೊಳ್ಳುತ್ತಿದ್ದ ರೋಹಿತ್, ನಿಜಕ್ಕೂ ಏನೂ ತೋಚದ ಮನಸ್ಥಿತಿಯಲ್ಲಿ ಸೈಲೆಂಟ್​ ಆಗ್ಬಿಟ್ಟರು. ನಾಯಕನ ಈ ನಡೆ ನಿಜಕ್ಕೂ ಟೀಮ್ ಇಂಡಿಯಾದ ಸೋಲನ್ನೇ ಪ್ರತಿಬಿಂಬಿಸುವಂತಿತ್ತು. ಆದ್ರೆ, ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದೇ ಮೂರನೇ ದಿನ.

ಹೌದು.! ಟೀಮ್ ಇಂಡಿಯಾ ಎದುರು ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್​ ಆರಂಭಿಸಿದ್ದೇ ತಡ, ಖಾಯಂ ಕ್ಯಾಪ್ಟನ್ ರೋಹಿತ್, ಕಿಂಗ್ ಕೊಹ್ಲಿಯ ಹೆಗಲಿಗೆ ತಂಡದ ಜವಾಬ್ದಾರಿ ವಹಿಸಿದರು. ಅಷ್ಟೇ ಅಲ್ಲ.! ಆನ್​​ಫೀಲ್ಡ್​ಗೆ ಇಳಿಯುತ್ತಿದ್ದಂತೆ ಸ್ಪೂರ್ತಿದಾಯಕ ಮಾತುಗಳನ್ನಾಡಿದ ವಿರಾಟ್​, ಆಟಗಾರರಲ್ಲಿ ಹೊಸ ಉತ್ಸಾಹ ತುಂಬುವ ಕೆಲಸಕ್ಕೆ ಕೈಹಾಕಿದರು.

ಆಟಗಾರರನ್ನ ಪ್ರೇರೇಪಿಸಿತಾ ಕೊಹ್ಲಿ ಮಾತು ..?

ಸಹಜವಾಗೇ ಭಾರೀ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ, ಕಮ್​​​​ಬ್ಯಾಕ್ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಹುತೇಕ ಸೋಲೋಪ್ಪಿಕೊಂಡಿದ್ದ ಟೀಮ್ ಇಂಡಿಯಾ, ಕೊಹ್ಲಿಯ ಸ್ಪೂರ್ತಿದಾಯಕ ಮಾತುಗಳಿಗೆ ಪ್ರೇರಣಿಗೊಳ್ತು. ಡು ಆರ್​ ಡೈ ಪರಿಸ್ಥಿತಿಯಲ್ಲಿ ಗೆಲುವಿನ ಛಲ ತುಂಬಿದರು. ಇದು ಸಹಜವಾಗೇ ಆಟಗಾರರಲ್ಲಿ ಗೆಲುವಿನ ಉತ್ಸಾಹ ತುಂಬುವಂತೆ ಮಾಡಿತ್ತು. ಅಷ್ಟೇ ಅಲ್ಲ.! ಆಟಗಾರರಲ್ಲಿ ಹೊಸ ಚೈತನ್ಯ ತುಂಬಿತ್ತು.

ಬದಲಾಯ್ತು ಆಟಗಾರರ ಬಾಡಿ ಲಾಂಗ್ವೇಜ್​ ..!

ಮೊದಲ ಎರಡು ದಿನ, ವಿರಾಟ್​ ಕೊಹ್ಲಿ, ರಹಾನೆ, ಶಾರ್ದೂಲ್ ಠಾಕೂರ್, ಜಡೇಜಾ ಬಿಟ್ಟರೆ, ಉಳಿವರೆಲ್ಲ ಸುಸ್ತಾದಂತೆ ಕಾಣ್ತಿದ್ದರು. ಆದ್ರೆ, ಕಿಂಗ್ ಕೊಹ್ಲಿ ಆನ್​ಫೀಲ್ಡ್​ನ ಜವಾಬ್ದಾರಿ ತೆಗೆದುಕೊಂಡಿದ್ದೇ ತಡ, ಆಟಗಾರರನ್ನ ಪುಟಿದೇಳುವಂತೆ ಮಾಡಿತ್ತು.  ಕೊಹ್ಲಿ ನೀಡುತ್ತಿದ್ದ ಪ್ರೋತ್ಸಾಹಕ್ಕೆ ಆಟಗಾರರ ಎನರ್ಜಿ ಡಬಲ್ ಆಗಿತ್ತು. ಅಗ್ರೆಸ್ಸಿವ್ ಸ್ಟೈಲ್ ಆಫ್ ಕ್ರಿಕೆಟ್​ ಮೂಡ್​ಗೆ ಜಾರಿದ್ರು.

ಬೌಲರ್​ಗಳಿಂದ 3ನೇ ದಿನ ಅಗ್ರೆಸ್ಸಿವ್ ಬೌಲಿಂಗ್ ಸ್ಪೆಲ್..!

ಫೀಲ್ಡರ್​ಗಳು ಮಾತ್ರವಲ್ಲ. ಟೀಮ್ ಇಂಡಿಯಾ ಬೌಲರ್​ಗಳ ಸ್ಪೆಲ್ ಕೂಡ ಚುರುಕಾಗಿತ್ತು. ಅದರಲ್ಲೂ ಸಿರಾಜ್​​ರ ಉರಿದಾಳಿಗೆ ಲಬುಶೇನ್​, ಪತರಗುಟ್ಟಿದ್ದರು. ಸಿರಾಜ್​ ಮಾತ್ರವೇ ಅಲ್ಲ. ಸ್ಪೀಡ್​ ಟ್ರ್ಯಾಕ್​ನಲ್ಲಿ ಚೆಂಡನ್ನ ಬುಗುರಿಯಂತೆ ತಿರುವಿ ಟ್ರಾವಿಸ್ ಹೆಡ್​​ ಕಕ್ಕಬಿಕ್ಕಿಯಾಗುವಂತೆ ಮಾಡಿದ್ದರು.

ವರ್ಕೌಟ್ ಆಗುತ್ತಾ ಕೊಹ್ಲಿ ಕೊಟ್ಟ ಟಿಪ್ಸ್​..?

ಟೀಮ್ ಹಡಲ್​​​​ನಲ್ಲಿ ವಿರಾಟ್​ ಕೊಟ್ಟಂತ ಟಿಪ್ಸ್​, ನಿಜಕ್ಕೂ ಟೀಮ್ ಇಂಡಿಯಾ ಆಟಗಾರರಲ್ಲಿ ಹೋರಾಟದ ಕಿಚ್ಚನ್ನೇ ಎಬ್ಬಿಸಿತ್ತು. ಇದನ್ನ ಮೂರನೇ ದಿನ ಹಾಗೂ ನಾಲ್ಕನೇ ದಿನ ಫೀಲ್ಡಿಂಗ್ ವೇಳೆ ಆಟಗಾರರು ಫೈಟ್​​ ಬ್ಯಾಕ್ ಮಾಡಿದ ಪರಿಯೇ ತಾಜಾ ಉದಾಹರಣೆ.. ಆದ್ರೆ, ಕಕೊಹ್ಲಿ ಟಿಪ್ಸ್​ ಸಂಪೂರ್ಣ ವರ್ಕೌಟ್ ಆಯ್ತಾ ಅನ್ನೋದಕ್ಕೆ ಉತ್ತರ ಇಂದೇ ಸಿಗಬೇಕಿದೆ.

ಒಟ್ನಲ್ಲಿ.! ಅದೇನೇ ಆಗಲಿ. ಮೊದಲೆರೆಡು ದಿನ ಮಂಕಾಗಿದ್ದ ಟೀಮ್ ಇಂಡಿಯಾ, 3ನೇ ಹಾಗೂ 4ನೇ ದಿನ ಆಸಿಸ್​​ಗೆ ಕೌಂಟರ್ ನೀಡೋ ಪರ್ಫಾಮೆನ್ಸ್​ ನೀಡಿದ್ದಂತು ವಿರಾಟ್​ ಕೊಹ್ಲಿಯ ಮೋಟಿವೇಷನಲ್ ಸ್ಪೀಚ್​ಗೆ ಅನ್ನೋದರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

 

 

Load More