/newsfirstlive-kannada/media/post_attachments/wp-content/uploads/2025/06/rcb-fan-death3.jpg)
ಬೆಂಗಳೂರು: ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು.
ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ
ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ.
ಈ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಇದೇ ಘಟನೆಯಲ್ಲಿ ಆರ್ಸಿಬಿ ಆಟಗಾರರನ್ನು ನೋಡಲು ಬಂದಿದ್ದ ಅಭಿಮಾನಿ ಶಿವಲಿಂಗ್ ಮೃತಪಟ್ಟಿದ್ದಾನೆ.
ಯಾದಗಿರಿ ಜಿಲ್ಲೆಯ ರಾಮಸಂದ್ರ ಮೂಲದ ಶಿವಲಿಂಗ್ ದ್ವಿತೀಯ ಪಿಯುಸಿಗೆ ಸೇರಲು ಟಿಸಿ ಪಡೆಯಲು ಬೆಂಗಳೂರಿಗೆ ಬಂದಿದ್ದ. ಆದ್ರೆ ಟಿಸಿ ಪಡೆಯದೇ ನೇರವಾಗಿ ಸ್ಟೇಡಿಯಂಗೆ ಹೋಗಿದ್ದಾನೆ. ಇದೇ ವೇಳೆ ಕಾಲ್ತುಳಿತದಲ್ಲಿ ವಿದ್ಯಾರ್ಥಿ ಶಿವಲಿಂಗ್ ಮೃತಪಟ್ಟಿದ್ದಾನೆ. ನೋವಿನ ವಿಚಾರ ಏನೆಂದರೆ ಪೋಷಕರು ಕೂಲಿ ಕೆಲಸ ಮಾಡಿ ಈತನನ್ನು ಓದಿಸುತ್ತಿದ್ದರು. ಆದ್ರೆ ಹೀಗೆ ಆರ್ಸಿಬಿ ಆಟಗಾರರನ್ನು ನೋಡಲು ಬಂದಿದ್ದ ದಾರುಣವಾಗಿ ಜೀವಬಿಟ್ಟಿದ್ದಾನೆ. ಈಗಾಗಲೇ ವಿದ್ಯಾರ್ಥಿಯ ಮೃತದೇಹವನ್ನು ಯಾದಗಿರಿಯ ರಾಮಸಂದ್ರ ಗ್ರಾಮಕ್ಕೆ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ