ಪ್ರತಾಪ್ ಸಿಂಹರಿಂದ ಕೈ ಜಾರುತ್ತಾ ಮೈಸೂರು-ಕೊಡಗು ಟಿಕೆಟ್?
ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮೈಸೂರು ರಾಜರು
ಮೈಸೂರು-ಶೃಂಗೇರಿ ಮಧ್ಯೆ ಮೊದಲಿಂದ ಅವಿನಾಭವ ಸಂಬಂಧ
ಚಿಕ್ಕಮಗಳೂರು: ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶೃಂಗೇರಿಯ ಶ್ರೀಮಠಕ್ಕೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದುಕೊಂಡಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿಯ ದರ್ಶನ ಪಡೆದ ಬಳಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಿರಿಯ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಶೃಂಗೇರಿಯ ಶ್ರೀಮಠಕ್ಕೂ ಹಾಗೂ ಮೈಸೂರು ಸಂಸ್ಥಾನಕ್ಕೂ ಇತಿಹಾಸ ಕಾಲದಿಂದಲೂ ಅವಿನಾಭವ ಸಂಬಂಧವಿದೆ.
ಹೀಗಾಗಿ ಮೈಸೂರು ಸಂಸ್ಥಾನದವರು ಶ್ರೀಮಠಕ್ಕೆ ಭೇಟಿ ನೀಡುವುದು ಮೊದಲನಿಂದಲೂ ನಡೆದುಕೊಂಡು ಬಂದಿದ್ದರಿಂದ ಮಠದ ಹಲವು ಕಾರ್ಯಕ್ರಮಗಳಲ್ಲಿ ಮೈಸೂರು ರಾಜವಂಶಸ್ಥರು ಭಾಗಿಯಾಗುತ್ತಿದ್ದರು. ಇದೀಗ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಒಡೆಯರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಶೃಂಗೇರಿ ಶ್ರೀಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರತಾಪ್ ಸಿಂಹರಿಂದ ಕೈ ಜಾರುತ್ತಾ ಮೈಸೂರು-ಕೊಡಗು ಟಿಕೆಟ್?
ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮೈಸೂರು ರಾಜರು
ಮೈಸೂರು-ಶೃಂಗೇರಿ ಮಧ್ಯೆ ಮೊದಲಿಂದ ಅವಿನಾಭವ ಸಂಬಂಧ
ಚಿಕ್ಕಮಗಳೂರು: ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶೃಂಗೇರಿಯ ಶ್ರೀಮಠಕ್ಕೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದುಕೊಂಡಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿಯ ದರ್ಶನ ಪಡೆದ ಬಳಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಿರಿಯ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಶೃಂಗೇರಿಯ ಶ್ರೀಮಠಕ್ಕೂ ಹಾಗೂ ಮೈಸೂರು ಸಂಸ್ಥಾನಕ್ಕೂ ಇತಿಹಾಸ ಕಾಲದಿಂದಲೂ ಅವಿನಾಭವ ಸಂಬಂಧವಿದೆ.
ಹೀಗಾಗಿ ಮೈಸೂರು ಸಂಸ್ಥಾನದವರು ಶ್ರೀಮಠಕ್ಕೆ ಭೇಟಿ ನೀಡುವುದು ಮೊದಲನಿಂದಲೂ ನಡೆದುಕೊಂಡು ಬಂದಿದ್ದರಿಂದ ಮಠದ ಹಲವು ಕಾರ್ಯಕ್ರಮಗಳಲ್ಲಿ ಮೈಸೂರು ರಾಜವಂಶಸ್ಥರು ಭಾಗಿಯಾಗುತ್ತಿದ್ದರು. ಇದೀಗ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಒಡೆಯರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಶೃಂಗೇರಿ ಶ್ರೀಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ