/newsfirstlive-kannada/media/post_attachments/wp-content/uploads/2024/08/dharmasthala.jpg)
ರಾಕಿಂಗ್​ ಸ್ಟಾರ್​ ಯಶ್​​ ಧರ್ಮಸ್ಥಳಕ್ಕೆ ದಿಢೀರ್​ ಭೇಟಿ ನೀಡಿದ್ದಾರೆ. ಪುಣ್ಯಸ್ಥಳದಲ್ಲಿ ನೆಲೆನಿಂತ ಮಂಜುನಾಥನ ದರ್ಶನ ಪಡೆದಿದ್ದಾರೆ. ಅಂದಹಾಗೆಯೇ ಯಶ್​​ ಇದ್ದಕ್ಕಿದ್ದಂತೆಯೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಯಾಕೆ ಗೊತ್ತಾ? ಈ ಸ್ಟೋರಿ ಓದಿ.
ರಾಕಿಂಗ್​ ಸ್ಟಾರ್​ ಯಶ್​​ ಸದ್ಯ ಬ್ಯುಸಿ ಇದ್ದಾರೆ. ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಟಾಕ್ಸಿಕ್​ ಸಿನಿಮಾದಲ್ಲಿ ಯಶ್​ ಹೆಚ್ಚು ಸಮಯ ಕಳೆಯುತ್ತಿದ್ದು, ಇದರ ನಡುವೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲು ಬಂದಿದ್ದಾರೆ. ಬಳಿಕ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು ಸದಾಶಿವ ದೇವರ ದರ್ಶನ ಪಡೆದಿದ್ದಾರೆ.
/newsfirstlive-kannada/media/post_attachments/wp-content/uploads/2024/08/yash-2.jpg)
ಯಾವುದೇ ಒಂದು ಶುಭ ಕಾರ್ಯ ಆರಂಭಿಸುವಾಗ ಪ್ರತಿಯೊಬ್ಬರು ದೇವರ ದರ್ಶನ ಪಡೆಯುತ್ತಾರೆ. ಕಾಂತಾರ ಶುರು ಮಾಡಿದಾಗ ನಟ ರಿಷಬ್​ ಶೆಟ್ಟಿ ಕೂಡ ಮಂಜುನಾಥನ ದರ್ಶನ ಪಡೆದಿದ್ದರು. ಕಾಂತಾರ ಸಿನಿಮಾ ಸೂಪರ್​ ಡೂಪರ್ ಹಿಟ್​ ಆಗಿದ್ದಲ್ಲದೆ, ದೊಡ್ಡ ಸಕ್ಸಸ್​ ನೀಡಿತ್ತು. ಇದೀಗ ಯಶ್​​ ಟಾಕ್ಸಿಕ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಹೀಗಿರುವಾಗ ಮಂಜುನಾಥನ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಚಿಕ್ಕಪ್ಪನಿಂದ ಮಗನ ಕೊಲೆ.. ಮಚ್ಚಿನಿಂದ ಕೊಚ್ಚಿ ರಸ್ತೆ ಬದಿಗೆ ತಂದು ಬಿಸಾಕಿದ ದುಷ್ಕರ್ಮಿಗಳು
ಧರ್ಮಸ್ಥಳಕ್ಕೆ ಬಂದ ನಟ ಯಶ್​ರವರು ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಖಾವಂದರು ರಾಕಿ​ ಭಾಯ್​ ಅವರನ್ನು ಗೌರವಿಸಿ, ಪ್ರಸಾದ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/toxic.jpg)
ಇದನ್ನೂ ಓದಿ: ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು
ಅಂದಹಾಗೆಯೇ ಟಾಕ್ಸಿಕ್​ ಬಹುನಿರೀಕ್ಷಿತ ಸಿನಿಮಾ. ಯಶ್​ ಕನಸಿನ ಪ್ರಾಜೆಕ್ಟ್​​​ ಎಂದರೆ ತಪ್ಪಾಗಲಾರದು. ಗೀತು ಮೋಹನ್​​ದಾಸ್​​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆಯೇ ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಟೊವಿನೊ ಥಾಮಸ್ ಅವರು ವಿಲನ್​ ಆಗಿ ಅಭಿನಯ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us