/newsfirstlive-kannada/media/post_attachments/wp-content/uploads/2025/04/JAISWAL.jpg)
ದೇಸಿಯ ಕ್ರಿಕೆಟ್​ನಲ್ಲಿ ಮುಂಬೈ ತಂಡದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಶಾಕಿಂಗ್​ ನಿರ್ಧಾರ ಮಾಡಿದ್ದಾರೆ. ಮುಂಬೈ ತಂಡವನ್ನ ತೊರೆದು ಗೋವಾದತ್ತ ಮುಖ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಗೋವಾ ಕ್ರಿಕೆಟ್ ಅಸೋಸಿಯೇಷನ್​​​​ ಜೈಸ್ವಾಲ್​ಗೆ ನಾಯಕತ್ವದ ಆಫರ್ ನೀಡಿದೆ.
ಈ ಕಾರಣಕ್ಕೆ ದೇಶಿ ಕ್ರಿಕೆಟ್​ನಲ್ಲಿ ತವರು ಮುಂಬೈ ತಂಡವನ್ನು ತೊರೆಯಲು ಮುಂದಾಗಿರುವ ಜೈಸ್ವಾಲ್, ಮುಂದಿನ ಸೀಸನ್​ನಲ್ಲಿ ಗೋವಾ ಸೇರಲು ಮುಂದಾಗಿದ್ದಾರೆ. ಈಗಾಗಲೇ ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ನಿಂದ NOC ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶಸ್ವಿ ಜೈಸ್ವಾಲ್, ಗೋವಾ ನನ್ನನ್ನು ಕೈಬೀಸಿ ಕರೆಯಿತು. ನಾನು ತುಂಬಾ ಯೋಚಿಸಿ ನಿರ್ಧಾರ ಮಾಡಿದೆ. ನಾನು ಇವತ್ತು ಏನೇ ಆದರೂ ಅದಕ್ಕೆ ಕಾರಣ ಮುಂಬೈ ತಂಡ. ಮುಂಬೈ ಸಿಟಿ ನನಗೆ ಬದುಕು ನೀಡಿದೆ. ನಾನು ಮುಂಬೈನ ಎಂಸಿಎಗೆ ಸದಾ ಋಣಿ ಆಗಿರುತ್ತೇನೆ.
ಗೋವಾ ನನಗೆ ಹೊಸ ಅವಕಾಶಕ್ಕಾಗಿ ಕೈಬೀಸಿ ಕರೆದಿದೆ. ಅದು ನಾಯಕತ್ವದ ಹೊಣೆ ನೀಡುವಾಗಿದೆ ಹೇಳಿದೆ. ನನ್ನ ಮೊದಲ ಗುರಿ ಭಾರತ ತಂಡಕ್ಕಾಗಿ ಆಡುವುದು. ಯಾವಾಗ ಭಾರತ ತಂಡದಲ್ಲಿ ಆಡುವುದರ ಜೊತೆಗೆ ಗೋವಾ ತಂಡದ ಪರವಾಗಿ ಆಡಲಿದ್ದೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್