/newsfirstlive-kannada/media/post_attachments/wp-content/uploads/2024/10/yashwanth1.jpg)
ನವೆಂಬರ್ನಲ್ಲಿ ಹೊಸ ಹೊಸ ಧಾರಾವಾಹಿಗಳು ಲಾಂಚ್ ಆಗೋಕೆ ಸಾಲುಗಟ್ಟಿವೆ. ಈ ಸಾಲಿಗೆ ಮತ್ತೊಂದು ಬ್ಯೂಟಿಫುಲ್ ಲವ್ ಸ್ಟೋರಿ ಸೇರ್ಪಡೆ ಆಗ್ತಿದೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿ ಚರಣ್ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಯಶ್ವಂತ್ ಗೌಡ ಮತ್ತೆ ಹೀರೋ ಆಗಿ ಕನ್ನಡದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಒಂದೇ ಕಲ್ಲಿನಲ್ಲಿ 3 ಹಕ್ಕಿ ಹೊಡೆಯೋ ಪ್ಲಾನ್.. ಪಂತ್ಗೆ ಆರ್ಸಿಬಿಯಿಂದ ಬಿಗ್ ಆಫರ್
ಹೌದು, ಕನ್ಯಾಕುಮಾರಿ ಧಾರಾವಾಹಿ ನಂತರ ಪರಭಾಷೆಯ ಅವಕಾಶ ಯಶವಂತ್ ಅವರಿಗೆ ಅರಸಿ ಬಂದಿತ್ತು. "ಅಮ್ಮಯ್ಯಗಾರು" ಧಾರಾವಾಹಿ ಮೂಲಕ ತೆಲುಗಿಗೆ ಕಾಲಿಟ್ಟಿದ್ರು. ನಿಶಾ ಹಾಗೂ ಯಶ್ವಂತ್ ಗೌಡ ಲೀಡ್ ಪಾತ್ರದಲ್ಲಿ ಅಭಿನಯಿಸಿದ್ರು. ಸದ್ಯ ಯಶ್ವಂತ್ ಗೌಡ ‘ನಾತಿಚರಾಮಿ’ ಎಂಬ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಕನ್ನಡಕ್ಕೆ ಮರಳಿದ್ದಾರೆ.
‘ನಾತಿಚರಾಮಿ’ ಪ್ರೋಮೋ ರಿಲೀಸ್ ಆಗಿದ್ದು, ಇಂಟ್ರಸ್ಟಿಂಗ್ ಆಗಿದೆ. ನಾಯಕ ಅಗಸ್ತ್ಯನಿಗೆ ದೇವರ ಮೇಲೆ ಕೋಪ. ತನ್ನ ತಾಯಿಯನ್ನ ಉಳಿಸಿಕೊಡಲಿಲ್ಲ. ಆ ದೇವಿ ಎಂಬ ಹತಾಶೆ. ಹೀಗಾಗಿ ದೇವರು, ದೇವಿ ಅಂದ್ರೆ ನಂಬಿಕೆಯಿಲ್ಲ. ಆದರೆ ಹೆಸರಲ್ಲೇ ಭಕ್ತಿ ತುಂಬಿಕೊಂಡಿರೋ ನಾಯಕಿಗೆ ದೇವಿನೇ ಎಲ್ಲಾ. ಇಬ್ಬರ ತದ್ವಿರುದ್ಧದ ಸ್ವಭಾವ ಹೇಗೆ ಒಂದಾಗುತ್ತೆ ಅನ್ನೋದೇ ‘ನಾತಿಚರಾಮಿ’ ಕತಾಹಂದರ. ಇನ್ನೂ ಯಶ್ವಂತ್ ಗೌಡಗೆ ಜೋಡಿಯಾಗಿ ನಟಿ ಮನಸ್ವಿ ಅಭಿನಯಸುತ್ತಿದ್ದಾರೆ. ಮನಸ್ವಿಗೆ ಇದು ಮೊದಲ ಧಾರಾವಾಹಿಯಾಗಿದೆ. ಉದಯ ವಾಹಿನಿಯಲ್ಲಿ ಇದೇ ನವೆಂಬರ್ 4ರಿಂದ, ಸಂಜೆ 6.30ಕ್ಕೆ ‘ನಾತಿಚರಾಮಿ’ ವೀಕ್ಷಕರ ಮನೆಗೆ ಕಾಲಿಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ