ಬೆಳೆದು ಬಂದ ಹಾದಿ ಮರೆಯದ ರೋಹಿತ್ ಶರ್ಮಾ
275 ರೂಪಾಯಿಗೆ ಪರದಾಡಿದ್ದ ರೋಹಿತ್ ಶರ್ಮಾ..!
ಯೋಗೇಶ್ ಪಟೇಲ್ ರೋಹಿತ್ ಜೀವನ ಬದಲಿಸಿದ್ದೇಗೆ..?
ಇಂದು ಕೋಟ್ಯಾಧಿಪತಿಯಾಗಿರೋ ರೋಹಿತ್ ಶರ್ಮಾ ಅಂದು ಕೇವಲ 275 ರೂಪಾಯಿಗಾಗಿ ಪರದಾಡಿದ್ದರು. ಅಂದು ಈ ವಿಶೇಷ ವ್ಯಕ್ತಿ ಸಹಾಯ ಮಾಡದಿದ್ದರೆ ರೋಹಿತ್ ಶರ್ಮಾ ವರ್ಲ್ಡ್ ಫೇಮಸ್ ಆಗೋದು ಅನುಮಾನವೇ ಆಗಿತ್ತು. ಅಷ್ಟಕ್ಕೂ ಈ ವಿಶೇಷ ವ್ಯಕ್ತಿ ಯಾರು? ಈ ವ್ಯಕ್ತಿ ರೋಹಿತ್ ಅವರ ಜೀವನ ಬದಲಿಸಿದ್ದು ಹೇಗೆ?
ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದು ಟೀಮ್ ಇಂಡಿಯಾ ಭಾರತಕ್ಕೆ ಬಂದಿಳಿದ ಮೇಲೆ ನಡೆದ ವಿಜಯೋತ್ಸವದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಇದಕ್ಕೆ ಮುಂಬೈಕರ್ ಅನ್ನೋದು ಪ್ರಮುಖ ಕಾರಣವಾಗಿತ್ತು. ಅಂದು ಮಾಡಿದ ಅದ್ಧೂರಿ ಸ್ವಾಗತದ ವಿಡಿಯೋಗಳು, ಫೋಟೋಗಳು ಸಖತ್ ಟ್ರೆಂಡಿಂಗ್ನಲ್ಲಿವೆ. ಅದ್ರಲ್ಲಿ ರೋಹಿತ್ರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಪೋಟೋದಲ್ಲಿರೋ ವ್ಯಕ್ತಿ ಯಾರು ಅನ್ನೋ ಪ್ರಶ್ನೆ ಎಲ್ಲರ ಕಾಡ್ತಿದೆ.
ಇದನ್ನೂ ಓದಿ:ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI
ಬೆಳೆದು ಬಂದ ಹಾದಿ ಮರೆಯದ ರೋಹಿತ್..!
ರೋಹಿತ್ ಶರ್ಮಾ ಜೊತೆಗಿರೋ ಈ ವ್ಯಕ್ತಿ ಸಾಮಾನ್ಯರಲ್ಲ. ಇಂದು ವಿಶ್ವ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾಗೆ ವಿಶೇಷವಾದ ಸ್ಥಾನವಿದೆ. ಹಿಟ್ಮ್ಯಾನ್, ಸಿಕ್ಸರ್ ಕಿಂಗ್, ವಿಶ್ವಕಪ್ ವಿನ್ನರ್ ಎಂಬೆಲ್ಲಾ ಹೆಸರಿನಿಂದ ಕರೆಯಲಾಗ್ತಿದೆ. ರೋಹಿತ್ ಮೊದಲ ಬಾರಿ ಕ್ರಿಕೆಟರ್ ಆಗೋ ಕನಸನ್ನು ಕಂಡಾಗ ಬಡತನದ ಬೇಗೆಯಲ್ಲಿದ್ರು. ಆಗ ಕೈ ಹಿಡಿದಿದ್ದೇ ಈ ವಿಶೇಷ ವ್ಯಕ್ತಿ. ರೋಹಿತ್ ಇಂದು ದೊಡ್ಡ ಸಾಧಕನಾಗಿ ಬೆಳೆದಿರೋದ್ರ ಹಿಂದಿನ ಶಕ್ತಿ ಯೋಗೇಶ್ ಪಟೇಲ್ (Yogesh Patel).
ರೋಹಿತ್ ಶರ್ಮಾ ಕ್ರಿಕೆಟ್ ಕಂಡ ಒನ್ ಆಫ್ ಬೆಸ್ಟ್ ಬ್ಯಾಟರ್ ಆಗಿ ಗುರುತಿಸಿ ಕೊಂಡಿರಬಹುದು. ಕರಿಯರ್ ಆರಂಭಿಸಿದ್ದು, ಆಫ್ ಸ್ಪಿನ್ನರ್ ಆಗಿ. ತನ್ನ ಸ್ಪಿನ್ ಜಾದೂವಿನಿಂದ ರೋಹಿತ್ ಬ್ಯಾಟ್ಸ್ಮನ್ಗಳ ಕಾಡ್ತಿದ್ರು. ರೋಹಿತ್ ಈ ಟ್ಯಾಲೆಂಟ್ ಮೊದಲು ಗುರುತಿಸಿದ್ದು, ಮುಂಬೈನ ಫೇಮಸ್ ಕೋಚ್ ದಿನೇಶ್ ಲಾಡ್. 1999ರಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಸ್ಪಿನ್ ಜಾದೂ ಮಾಡಿದ್ರು. ಆಗ ದಿನೇಶ್ ಲಾಡ್ ವಿವೇಕಾನಂದ ಸ್ಕೂಲ್ನ ಕೋಚ್ ಆಗಿದ್ರು. ಇಂಪ್ರೆಸ್ ಆಗಿದ್ದ ದಿನೇಶ್ ಲಾಡ್ಗೆ ರೋಹಿತ್ ಶರ್ಮಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳೋ ಆಸೆ ಹುಟ್ಟಿತ್ತು.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
ರೋಹಿತ್ ಬಳಿ ಟ್ಯಾಲೆಂಟ್ ಇತ್ತು..!
ಕ್ರಿಕೆಟರ್ ಆಗುವ ಕನಸು ಕಟ್ಟಿಕೊಂಡಿದ್ದ ರೋಹಿತ್ ಬಳಿ ಟ್ಯಾಲೆಂಟ್ ಇತ್ತು. ಆದರೆ ಕಾಸಿರಲಿಲ್ಲ. ರೋಹಿತ್ರ ಅಂಕಲ್ ಬಳಿ ದಿನೇಶ್ ಲಾಡ್ ತಮ್ಮ ಶಾಲೆಗೆ ಸೇರಿಸುವಂತೆ ಕೇಳಿದಾಗ ಒಂದ ಉತ್ತರ ಸಾಧ್ಯನೇ ಇಲ್ಲ. ಅಂದು ರೋಹಿತ್ ಕುಟುಂಬ ಅಷ್ಟು ಕಡು ಬಡತನದಲ್ಲಿತ್ತು. ಎಷ್ಟರ ಮಟ್ಟಿಗೆ ಬಡತನ ಇತ್ತೆಂದರೆ 275 ರೂಪಾಯಿ ಸ್ಕೂಲ್ ಫೀಸ್ ಕೂಡ ಕಟ್ಟಲಾಗದಷ್ಟು. ಆಗ ದಿನೇಶ್ ಲಾಡ್ ಹೋಗಿದ್ದೇ ಈ ಯೋಗೇಶ್ ಪಟೇಲ್ ಬಳಿ. ಈ ಯೋಗೇಶ್ ಪಟೇಲ್ ಯಾರಂದರೆ ಬೋರಿವಲ್ಲಿಯಲ್ಲಿರೋ ಸ್ವಾಮಿ ವಿವೇಕಾನಂದ ಸ್ಕೂಲ್ನ ಒಡೆಯ.
ರೋಹಿತ್ರನ್ನ ತಮ್ಮ ಸ್ಕೂಲ್ ಟೀಮ್ಗೆ ಸೇರಿಸಿಕೊಳ್ಳಲು ಒಡೆಯ ಯೋಗೇಶ್ ಪಟೇಲ್ ಜೊತೆಗೆ ದಿನೇಶ್ ಲಾಡ್ ಮಾತುಕತೆ ನಡೆಸಿದ್ರು.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ರೋಹಿತ್ ಶರ್ಮಾ ಟ್ಯಾಲೆಂಟ್ ಬಗ್ಗೆ ತಿಳಿಸಿ, ಆತ ನಮ್ಮ ಸ್ಕೂಲ್ ಟೀಮ್ಗೆ ಬೇಕು. ಫೀಸ್ ಕಟ್ಟಲು ಅವರಲ್ಲಿ ಹಣವಿಲ್ಲ ಎಂದು ತಿಳಿಸಿದ್ರು. ಇದಕ್ಕೆ ಒಪ್ಪಿದ ಯೋಗೇಶ್ ಪಟೇಲ್, ರೋಹಿತ್ಗೆ ಉಚಿತ ಶಿಕ್ಷಣ ನೀಡೋ ಉದಾರವಾದ ನಿಲುವು ತೋರಿಸಿದರು. ಯೋಗೇಶ್ ಪಟೇಲ್ ಸ್ಕಾಲರ್ ಶಿಪ್ ನೀಡೋ ಆ ಒಂದು ನಿರ್ಧಾರ ಮಾಡದಿದ್ದಿದ್ರೆ, ರೋಹಿತ್ ಶರ್ಮಾ ಜೀವನ ಬೇರೆಯದ್ದೇ ದಿಕ್ಕಲ್ಲಿ ಸಾಗಿ ಬಿಡ್ತಿತ್ತೇನೋ?
ರೋಹಿತ್ ಬಗ್ಗೆ ಖುಷಿ, ಹೆಮ್ಮೆಯಿದೆ
‘ರೋಹಿತ್ ಶರ್ಮಾ ನಮ್ಮ ಜೀವನಕ್ಕೆ ಬಂದಿದ್ದಕ್ಕೆ ಖುಷಿ ಇದೆ. ನಾನು ಕೂಡ ಬಡ ಕುಟುಂಬದಿಂದ ಬಂದವನು. ರೋಹಿತ್ ಬಳಿ ಟ್ಯಾಲೆಂಟ್ ಇದೆ ಎಂದು ನಮ್ಮ ಕೋಚ್ ಹೇಳಿದ್ರು. ಅವರ ಕುಟುಂಬಕ್ಕೆ 275 ರೂಪಾಯಿಗಳ ಫೀಸ್ ಕಟ್ಟಲು ಆಗ್ತಿರಲಿಲ್ಲ. ಅದಕ್ಕೆ ನಾನು ಆತನಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಮಾಡಿದೆ. ನಮ್ಮ ಶಾಲೆಯಲ್ಲಿ ಓದಿದ ರೋಹಿತ್ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಾಗ ಹೆಮ್ಮೆಯಾಗುತ್ತೆ. ಈಗ ನಮ್ಮ ಶಾಲೆಯ ಕೀರ್ತಿಯೂ ಹೆಚ್ಚಾಗಿದೆ’ ಯೋಗೇಶ್ ಪಟೇಲ್, ಶಾಲೆಯ ಮಾಲೀಕ
ಉಚಿತ ಶಿಕ್ಷಣ ಸಿಕ್ಕ ಬಳಿಕ ರೋಹಿತ್ ಜೀವನ ಬದಲಾದ ಕಥೆ ನಿಮಗೆ ಗೊತ್ತೇ ಇದೆ. ಅಂದು 275 ರೂಪಾಯಿ ಫೀಸ್ ಕಟ್ಟಲಾಗದ ರೋಹಿತ್ ಈಗ ಕೋಟ್ಯಧಿಪತಿಯಾಗಿದ್ದಾರೆ. ನೇಮ್, ಫೇಮ್ ಎಲ್ಲಾ ಹುಡುಕಿಕೊಂಡು ಬಂದಿದೆ. ಈಗಲೂ ಬೆಳೆದು ಬಂದ ಹಾದಿಯನ್ನ ಹಿಟ್ಮ್ಯಾನ್ ಮರೆತಿಲ್ಲ. ವಿವೇಕಾನಂದ ಸ್ಕೂಲ್ನಲ್ಲಿ ಏನೇ ಕಾರ್ಯಕ್ರಮ ನಡೆದ್ರೂ ಬಿಡುವಿದ್ರೆ ರೋಹಿತ್ ಪಕ್ಕಾ ಹಾಜಾರಾಗ್ತಾರೆ. ಕೋಚ್ ದಿನೇಶ್ ಲಾಡ್ ಹಾಗೂ ಯೋಗೇಶ್ ಪಟೇಲ್ರನ್ನು ಅಷ್ಟೇ ವಿನಯದಿಂದ ಕಾಣ್ತಾರೆ. ರೋಹಿತ್ರ ಈ ಹಂಬಲ್ ವ್ಯಕ್ತಿತ್ವ, ಪ್ರತಿಯೊಬ್ಬರಿಗೂ ಸ್ಫೂರ್ತಿ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬೆಳೆದು ಬಂದ ಹಾದಿ ಮರೆಯದ ರೋಹಿತ್ ಶರ್ಮಾ
275 ರೂಪಾಯಿಗೆ ಪರದಾಡಿದ್ದ ರೋಹಿತ್ ಶರ್ಮಾ..!
ಯೋಗೇಶ್ ಪಟೇಲ್ ರೋಹಿತ್ ಜೀವನ ಬದಲಿಸಿದ್ದೇಗೆ..?
ಇಂದು ಕೋಟ್ಯಾಧಿಪತಿಯಾಗಿರೋ ರೋಹಿತ್ ಶರ್ಮಾ ಅಂದು ಕೇವಲ 275 ರೂಪಾಯಿಗಾಗಿ ಪರದಾಡಿದ್ದರು. ಅಂದು ಈ ವಿಶೇಷ ವ್ಯಕ್ತಿ ಸಹಾಯ ಮಾಡದಿದ್ದರೆ ರೋಹಿತ್ ಶರ್ಮಾ ವರ್ಲ್ಡ್ ಫೇಮಸ್ ಆಗೋದು ಅನುಮಾನವೇ ಆಗಿತ್ತು. ಅಷ್ಟಕ್ಕೂ ಈ ವಿಶೇಷ ವ್ಯಕ್ತಿ ಯಾರು? ಈ ವ್ಯಕ್ತಿ ರೋಹಿತ್ ಅವರ ಜೀವನ ಬದಲಿಸಿದ್ದು ಹೇಗೆ?
ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದು ಟೀಮ್ ಇಂಡಿಯಾ ಭಾರತಕ್ಕೆ ಬಂದಿಳಿದ ಮೇಲೆ ನಡೆದ ವಿಜಯೋತ್ಸವದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಇದಕ್ಕೆ ಮುಂಬೈಕರ್ ಅನ್ನೋದು ಪ್ರಮುಖ ಕಾರಣವಾಗಿತ್ತು. ಅಂದು ಮಾಡಿದ ಅದ್ಧೂರಿ ಸ್ವಾಗತದ ವಿಡಿಯೋಗಳು, ಫೋಟೋಗಳು ಸಖತ್ ಟ್ರೆಂಡಿಂಗ್ನಲ್ಲಿವೆ. ಅದ್ರಲ್ಲಿ ರೋಹಿತ್ರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಪೋಟೋದಲ್ಲಿರೋ ವ್ಯಕ್ತಿ ಯಾರು ಅನ್ನೋ ಪ್ರಶ್ನೆ ಎಲ್ಲರ ಕಾಡ್ತಿದೆ.
ಇದನ್ನೂ ಓದಿ:ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI
ಬೆಳೆದು ಬಂದ ಹಾದಿ ಮರೆಯದ ರೋಹಿತ್..!
ರೋಹಿತ್ ಶರ್ಮಾ ಜೊತೆಗಿರೋ ಈ ವ್ಯಕ್ತಿ ಸಾಮಾನ್ಯರಲ್ಲ. ಇಂದು ವಿಶ್ವ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾಗೆ ವಿಶೇಷವಾದ ಸ್ಥಾನವಿದೆ. ಹಿಟ್ಮ್ಯಾನ್, ಸಿಕ್ಸರ್ ಕಿಂಗ್, ವಿಶ್ವಕಪ್ ವಿನ್ನರ್ ಎಂಬೆಲ್ಲಾ ಹೆಸರಿನಿಂದ ಕರೆಯಲಾಗ್ತಿದೆ. ರೋಹಿತ್ ಮೊದಲ ಬಾರಿ ಕ್ರಿಕೆಟರ್ ಆಗೋ ಕನಸನ್ನು ಕಂಡಾಗ ಬಡತನದ ಬೇಗೆಯಲ್ಲಿದ್ರು. ಆಗ ಕೈ ಹಿಡಿದಿದ್ದೇ ಈ ವಿಶೇಷ ವ್ಯಕ್ತಿ. ರೋಹಿತ್ ಇಂದು ದೊಡ್ಡ ಸಾಧಕನಾಗಿ ಬೆಳೆದಿರೋದ್ರ ಹಿಂದಿನ ಶಕ್ತಿ ಯೋಗೇಶ್ ಪಟೇಲ್ (Yogesh Patel).
ರೋಹಿತ್ ಶರ್ಮಾ ಕ್ರಿಕೆಟ್ ಕಂಡ ಒನ್ ಆಫ್ ಬೆಸ್ಟ್ ಬ್ಯಾಟರ್ ಆಗಿ ಗುರುತಿಸಿ ಕೊಂಡಿರಬಹುದು. ಕರಿಯರ್ ಆರಂಭಿಸಿದ್ದು, ಆಫ್ ಸ್ಪಿನ್ನರ್ ಆಗಿ. ತನ್ನ ಸ್ಪಿನ್ ಜಾದೂವಿನಿಂದ ರೋಹಿತ್ ಬ್ಯಾಟ್ಸ್ಮನ್ಗಳ ಕಾಡ್ತಿದ್ರು. ರೋಹಿತ್ ಈ ಟ್ಯಾಲೆಂಟ್ ಮೊದಲು ಗುರುತಿಸಿದ್ದು, ಮುಂಬೈನ ಫೇಮಸ್ ಕೋಚ್ ದಿನೇಶ್ ಲಾಡ್. 1999ರಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಸ್ಪಿನ್ ಜಾದೂ ಮಾಡಿದ್ರು. ಆಗ ದಿನೇಶ್ ಲಾಡ್ ವಿವೇಕಾನಂದ ಸ್ಕೂಲ್ನ ಕೋಚ್ ಆಗಿದ್ರು. ಇಂಪ್ರೆಸ್ ಆಗಿದ್ದ ದಿನೇಶ್ ಲಾಡ್ಗೆ ರೋಹಿತ್ ಶರ್ಮಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳೋ ಆಸೆ ಹುಟ್ಟಿತ್ತು.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
ರೋಹಿತ್ ಬಳಿ ಟ್ಯಾಲೆಂಟ್ ಇತ್ತು..!
ಕ್ರಿಕೆಟರ್ ಆಗುವ ಕನಸು ಕಟ್ಟಿಕೊಂಡಿದ್ದ ರೋಹಿತ್ ಬಳಿ ಟ್ಯಾಲೆಂಟ್ ಇತ್ತು. ಆದರೆ ಕಾಸಿರಲಿಲ್ಲ. ರೋಹಿತ್ರ ಅಂಕಲ್ ಬಳಿ ದಿನೇಶ್ ಲಾಡ್ ತಮ್ಮ ಶಾಲೆಗೆ ಸೇರಿಸುವಂತೆ ಕೇಳಿದಾಗ ಒಂದ ಉತ್ತರ ಸಾಧ್ಯನೇ ಇಲ್ಲ. ಅಂದು ರೋಹಿತ್ ಕುಟುಂಬ ಅಷ್ಟು ಕಡು ಬಡತನದಲ್ಲಿತ್ತು. ಎಷ್ಟರ ಮಟ್ಟಿಗೆ ಬಡತನ ಇತ್ತೆಂದರೆ 275 ರೂಪಾಯಿ ಸ್ಕೂಲ್ ಫೀಸ್ ಕೂಡ ಕಟ್ಟಲಾಗದಷ್ಟು. ಆಗ ದಿನೇಶ್ ಲಾಡ್ ಹೋಗಿದ್ದೇ ಈ ಯೋಗೇಶ್ ಪಟೇಲ್ ಬಳಿ. ಈ ಯೋಗೇಶ್ ಪಟೇಲ್ ಯಾರಂದರೆ ಬೋರಿವಲ್ಲಿಯಲ್ಲಿರೋ ಸ್ವಾಮಿ ವಿವೇಕಾನಂದ ಸ್ಕೂಲ್ನ ಒಡೆಯ.
ರೋಹಿತ್ರನ್ನ ತಮ್ಮ ಸ್ಕೂಲ್ ಟೀಮ್ಗೆ ಸೇರಿಸಿಕೊಳ್ಳಲು ಒಡೆಯ ಯೋಗೇಶ್ ಪಟೇಲ್ ಜೊತೆಗೆ ದಿನೇಶ್ ಲಾಡ್ ಮಾತುಕತೆ ನಡೆಸಿದ್ರು.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ರೋಹಿತ್ ಶರ್ಮಾ ಟ್ಯಾಲೆಂಟ್ ಬಗ್ಗೆ ತಿಳಿಸಿ, ಆತ ನಮ್ಮ ಸ್ಕೂಲ್ ಟೀಮ್ಗೆ ಬೇಕು. ಫೀಸ್ ಕಟ್ಟಲು ಅವರಲ್ಲಿ ಹಣವಿಲ್ಲ ಎಂದು ತಿಳಿಸಿದ್ರು. ಇದಕ್ಕೆ ಒಪ್ಪಿದ ಯೋಗೇಶ್ ಪಟೇಲ್, ರೋಹಿತ್ಗೆ ಉಚಿತ ಶಿಕ್ಷಣ ನೀಡೋ ಉದಾರವಾದ ನಿಲುವು ತೋರಿಸಿದರು. ಯೋಗೇಶ್ ಪಟೇಲ್ ಸ್ಕಾಲರ್ ಶಿಪ್ ನೀಡೋ ಆ ಒಂದು ನಿರ್ಧಾರ ಮಾಡದಿದ್ದಿದ್ರೆ, ರೋಹಿತ್ ಶರ್ಮಾ ಜೀವನ ಬೇರೆಯದ್ದೇ ದಿಕ್ಕಲ್ಲಿ ಸಾಗಿ ಬಿಡ್ತಿತ್ತೇನೋ?
ರೋಹಿತ್ ಬಗ್ಗೆ ಖುಷಿ, ಹೆಮ್ಮೆಯಿದೆ
‘ರೋಹಿತ್ ಶರ್ಮಾ ನಮ್ಮ ಜೀವನಕ್ಕೆ ಬಂದಿದ್ದಕ್ಕೆ ಖುಷಿ ಇದೆ. ನಾನು ಕೂಡ ಬಡ ಕುಟುಂಬದಿಂದ ಬಂದವನು. ರೋಹಿತ್ ಬಳಿ ಟ್ಯಾಲೆಂಟ್ ಇದೆ ಎಂದು ನಮ್ಮ ಕೋಚ್ ಹೇಳಿದ್ರು. ಅವರ ಕುಟುಂಬಕ್ಕೆ 275 ರೂಪಾಯಿಗಳ ಫೀಸ್ ಕಟ್ಟಲು ಆಗ್ತಿರಲಿಲ್ಲ. ಅದಕ್ಕೆ ನಾನು ಆತನಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಮಾಡಿದೆ. ನಮ್ಮ ಶಾಲೆಯಲ್ಲಿ ಓದಿದ ರೋಹಿತ್ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಾಗ ಹೆಮ್ಮೆಯಾಗುತ್ತೆ. ಈಗ ನಮ್ಮ ಶಾಲೆಯ ಕೀರ್ತಿಯೂ ಹೆಚ್ಚಾಗಿದೆ’ ಯೋಗೇಶ್ ಪಟೇಲ್, ಶಾಲೆಯ ಮಾಲೀಕ
ಉಚಿತ ಶಿಕ್ಷಣ ಸಿಕ್ಕ ಬಳಿಕ ರೋಹಿತ್ ಜೀವನ ಬದಲಾದ ಕಥೆ ನಿಮಗೆ ಗೊತ್ತೇ ಇದೆ. ಅಂದು 275 ರೂಪಾಯಿ ಫೀಸ್ ಕಟ್ಟಲಾಗದ ರೋಹಿತ್ ಈಗ ಕೋಟ್ಯಧಿಪತಿಯಾಗಿದ್ದಾರೆ. ನೇಮ್, ಫೇಮ್ ಎಲ್ಲಾ ಹುಡುಕಿಕೊಂಡು ಬಂದಿದೆ. ಈಗಲೂ ಬೆಳೆದು ಬಂದ ಹಾದಿಯನ್ನ ಹಿಟ್ಮ್ಯಾನ್ ಮರೆತಿಲ್ಲ. ವಿವೇಕಾನಂದ ಸ್ಕೂಲ್ನಲ್ಲಿ ಏನೇ ಕಾರ್ಯಕ್ರಮ ನಡೆದ್ರೂ ಬಿಡುವಿದ್ರೆ ರೋಹಿತ್ ಪಕ್ಕಾ ಹಾಜಾರಾಗ್ತಾರೆ. ಕೋಚ್ ದಿನೇಶ್ ಲಾಡ್ ಹಾಗೂ ಯೋಗೇಶ್ ಪಟೇಲ್ರನ್ನು ಅಷ್ಟೇ ವಿನಯದಿಂದ ಕಾಣ್ತಾರೆ. ರೋಹಿತ್ರ ಈ ಹಂಬಲ್ ವ್ಯಕ್ತಿತ್ವ, ಪ್ರತಿಯೊಬ್ಬರಿಗೂ ಸ್ಫೂರ್ತಿ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್