ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳು ಮಾಡಬಹುದು
ಮನೆಯಲ್ಲಿರೋ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಸಾಮರ್ಥ್ಯ ನಿಮಗೆ ತಿಳಿಯದೇ ಕೊರತೆ ಉಂಟಾಗಬಹುದು
- ಪೋಷಕರ ಬೆಂಬಲದಿಂದ ಹಣಕಾಸು ಸಮಸ್ಯೆ ನಿವಾರಣೆ
- ಮಕ್ಕಳಿಗಾಗಿ ತುಂಬಾ ಯೋಚಿಸುವ ದಿನ
- ಬಲವಂತದಿಂದ ಯಾರನ್ನು ಯಾವುದಕ್ಕೂ ಒಪ್ಪಿಸಬೇಡಿ
- ಉದ್ಯೋಗ ಸ್ಥಳದಿಂದ ಮನಸ್ಸಿಗೆ ಬೇಸರ ತರುವ ವಿಷಯ ಬರಬಹುದು
- ಒತ್ತಡದಿಂದ ಬಳಲಿದ ನಿಮಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
- ಆಂಜನೇಯನಿಗೆ ತೈಲಾಭಿಷೇಕ ಮಾಡಿಸಿ
ವೃಷಭ
- ಆಹಾರದಲ್ಲಿ ಗಮನಹರಿಸಿ ಆರೋಗ್ಯ ಕಾಪಾಡಿಕೊಳ್ಳಿ
- ಕೇವಲ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಕಡಿಮೆ
- ಸಮಾಜದ ಜನರಿಂದ ಗೌರವ ನಿರೀಕ್ಷಿಸಬಹುದು
- ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ
- ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಅಧಿಕ ಖರ್ಚು
- ಲಕ್ಷ್ಮಿನರಸಿಂಹನ ಆರಾಧಿ ಆರಾಧಿಸಿ
ಮಿಥುನ
- ಮಾನಸಿಕ ದೃಢತೆ ಇದ್ದರೆ ಸಂತೃಪ್ತಿಯ ಜೀವನ
- ಆತುರದಲ್ಲಿ ಯಾವುದೇ ರೀತಿಯ ಹಣ ಹೂಡಿಕೆ ಬೇಡ
- ಮಕ್ಕಳೊಂದಿಗೆ ಮೃದುವಾಗಿ ವರ್ತಿಸಿ
- ಅಣ್ಣ ತಮ್ಮಂದಿರ ಹೊಂದಾಣಿಕೆ ಕಡಿಮೆ ಹಾಗೇ ಶೀತಲ ಸಮರ
- ದಾಂಪತ್ಯದಲ್ಲಿ ಚುಚ್ಚು ಮಾತು ಅದರಿಂದ ಬೇಸರ
- ಆಸ್ತಿ ವಿಚಾರ ಇತ್ಯರ್ಥ ಆಗುವುದಿಲ್ಲ
- ಮಾಂಗಲ್ಯಮೂರ್ತಿ ಲಕ್ಷ್ಮಿನಾರಾಯಣರನ್ನ ಆರಾಧಿಸಿ
ಕಟಕ
- ಬೇರೆಯವರನ್ನು ಟೀಕಿಸಬೇಡಿ ಅವಮಾನವಿದೆ
- ನಗು ನಗುತ್ತ ಮಾತಾಡಿ ಜನಾಕರ್ಷಣೆ ಮಾಡಿ
- ಪದಾರ್ಥ ನಷ್ಟ ಅಥವಾ ಕಳವು ಸಾಧ್ಯತೆ ಇದೆ
- ಪ್ರೇಮಿಗಳಿಗೆ ಸಂಕಷ್ಟ, ಪಾರಾಗಲು ಹರಸಾಹಸ
- ವ್ಯವಹಾರ ಸ್ಪಷ್ಟವಾಗಿರದೆ ದಂಡ ಕಟ್ಟಬೇಕಾಗುತ್ತದೆ
- ಸಾಯಂಕಾಲದಲ್ಲಿ ದುರ್ವಾರ್ತೆ ಅದರಿಂದ ಬೇಸರ ನೋವು
- ದೇವಿ ಆರಾಧನೆ ಮಾಡಿ
ಸಿಂಹ
- ಅಲ್ಪಸಮಯದಲ್ಲಿ ಹೆಚ್ಚು ಕೆಲಸಗಳಾಗುತ್ತವೆ
- ಇಂದು ಆದಾಯ ಹೆಚ್ಚಿದೆ
- ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯುವ ಸೂಚನೆ ಇದೆ
- ಧಾರ್ಮಿಕ ವಿಚಾರಕ್ಕೆ ಹಣ ವ್ಯಯ, ಭಯಮುಕ್ತಿ
- ಹಿರಿಯರ ಆಶೀರ್ವಾದ ಅದರಿಂದ ಸಹಾಯ ಒದಗುತ್ತದೆ
- ಹಳೆಯ ಹರಕೆಗಳಿದ್ದರೆ ಹರಕೆ ತೀರಿಸಿ
- ಶರಬೇಶ್ವರನನ್ನು ಆರಾಧಿಸಿ
ಕನ್ಯಾ
- ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಿಂದ ಆರೋಗ್ಯ ಮುಖ್ಯ ಗಮನಿಸಿ
- ಆರ್ಥಿಕವಾಗಿ ಸಬಲರಾಗುತ್ತೀರಿ
- ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ ಲಾಭ
- ಸಮಯವಿದ್ದಷ್ಟು ಕೆಲಸ ಮಾಡಿ ಸಂಪಾದಿಸಿ, ಆಲಸ್ಯ ಬೇಡ
- ವೈವಾಹಿಕ ಜೀವನದಲ್ಲಿ ಕಹಿ ಅನುಭವ
- ನಿಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಪ್ರಯತ್ನಿಸಿ ಶುಭದಿನ
- ಪಾರ್ವತಿ ದೇವಿಯನ್ನು ಪೂಜಿಸಿ
ತುಲಾ
- ಜಗಳದಿಂದ ಬಂಧುಗಳಲ್ಲಿ ವಿರಸ ಮಾತು ಬಿಡಬಹುದು
- ನಿಮ್ಮ ಶಿಸ್ತು ಬದ್ಧ ಜೀವನ ಬೇರೆಯವರಿಗೆ ಮಾದರಿ
- ಇಂದು ಸುಳ್ಳು ಹೇಳಬೇಕಾದ ಪರಿಸ್ಥಿತಿ ಬರಬಹುದು
- ಅಕ್ಕ ತಂಗಿಯರಿಗೆ ಸಹಾಯ ಮಾಡಿ
- ಸಮಯಕ್ಕೆ ಸರಿಯಾಗಿ ಆಗದವರ ಬಗ್ಗೆ ಬೇಸರ
- ಮಕ್ಕಳ ಯಶಸ್ಸು ತೃಪ್ತಿ ಕೊಡುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ
ವೃಶ್ಚಿಕ
- ಇಂದು ಆರಾಮವಾಗಿ ಕಾಲ ಕಳೆಯುತ್ತೀರಿ
- ಮನೆಯಿಂದ ಹೊರ ಹೋಗುವಾಗ ಎಚ್ಚರ ಅಪಾಯವಿದೆ
- ಅನುಚಿತವಾಗಿ ವರ್ತಿಸುವವರನ್ನು ಏನು ಅನ್ನಬೇಡಿ
- ದುಂದು ವೆಚ್ಚ ಗಮನ ಇರುವುದಿಲ್ಲ
- ನಿಮಗೆ ಆಯ್ಕೆಯ ಕೊರತೆ ಕಾಣಬಹುದು
- ಹಣದ ಬೆಲೆ ಬೇರೆಯವರಿಂದ ತಿಳಿಯುವ ಕಾಲ ಶ
- ಅನ್ನಪೂರ್ಣೇಶ್ವರಿಯನ್ನು ಉಪಾಸನೆ ಮಾಡಿ, ದೇವಾಲಯಕ್ಕೆ ಅಕ್ಕಿ ಅರ್ಪಿಸಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಕನಸು ನನಸಾಗುವ ದಿನ ತೃಪ್ತಿ ಇದೆ
- ನಿಮ್ಮ ಉತ್ಸಾಹ ಸಿಹಿಯಾಗಿದ್ದರು ನಿಯಂತ್ರಣದಲ್ಲಿರಲಿ
- ಏಕಮುಖವಾದ ವಿಶ್ವಾಸ ಕಡಿಮೆ ಮಾಡಿಕೊಳ್ಳಿ
- ಮಾನಸಿಕ ಒತ್ತಡ ಕಠಿಣ ಮಾತುಗಳಿಂದ ಬೇಸರ
- ನಿಮ್ಮ ಹಳೆಯ ಜೀವನ ನೆನಪಿಗೆ ಬಂದು ನೋವು
- ಮನೆಯ ವ್ಯವಸ್ಥೆಯಿಂದ ಆನಂದ ತಂದುಕೊಳ್ಳಬೇಕು
- ಸದ್ಗುರುಗಳನ್ನು ಪ್ರಾರ್ಥನೆ ಮಾಡಿ
ಮಕರ
- ಸೋಂಕು ತಗುಲಿ ತೊಂದರೆಯಾಗಬಹುದು
- ವ್ಯಾಪಾರಿ ಬುದ್ಧಿಯಿಂದ ಹೊರ ಬರಬೇಕಾಗುತ್ತದೆ
- ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅದರಿಂದ ನಿಮಗೆ ಗೌರವ
- ನಂಬಿದ ಸ್ನೇಹಿತರಿಂದ ಅಪಕೀರ್ತಿ ಜಾಗ್ರತೆ ಇರಲಿ
- ಸುತ್ತಮುತ್ತಲಿರುವ ಎಲ್ಲರೂ ನಿಮ್ಮಿಂದ ಏನನ್ನಾದರೂ ಬಯಸುತ್ತಾರೆ
- ಆತ್ಮೀಯರ ಕೋಪಕ್ಕೆ ಗುರಿಯಾಗಬಹುದು
- ವನದುರ್ಗಾದೇವಿ ಆರಾಧನೆ ಮಾಡಿ
ಕುಂಭ
- ಒಂಟಿತನವನ್ನು ದೂರ ಮಾಡಿ, ಕಾರ್ಯೋನ್ಮುಖರಾಗಿರಿ
- ಹಣಕ್ಕಿಂತ ಸಮಯ ಮುಖ್ಯ ನಿಮ್ಮಲ್ಲಿ ಎರಡು ಇದೆ
- ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಮುಖ್ಯವಾದ ವ್ಯಕ್ತಿ ಅಥವಾ ಸ್ನೇಹಿತನ ವಿಚಾರದಲ್ಲಿ ಸಮಸ್ಯೆ
- ಅವಿವಾಹಿತ ಪರವಾಗಿ ಬಂಧುಗಳಿಂದ ಸಹಾಯ
- ಶಾಂತಿಯುತವಾಗಿ ಈ ದಿನ ಕಳೆಯಬೇಕಾಗಿದೆ
- ಸ್ವಯಂವರ ಪಾರ್ವತಿ ಮಂತ್ರ ಜಪಿಸಿ
ಮೀನ
- ಬೇರೆಯವರು ನೀಡಿದ್ದ ಭರವಸೆಗಾಗಿ ಕಾಯಬಹುದು ಆದರೆ ಪ್ರಯೋಜನವಿಲ್ಲ
- ಹಣ ಉಳಿತಾಯದ ಮಾರ್ಗದಿಂದ ತೃಪ್ತಿ
- ದೂರದೂರಿನಿಂದ ಶುಭವಾರ್ತೆ ಅದರಿಂದ ಸಂತೋಷ
- ಮನೆಯವರ ಸಹಕಾರದಿಂದ ಕಾರ್ಯಕ್ಷೇತ್ರ ವಿಸ್ತರಣೆ
- ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾಗುತ್ತದೆ
- ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ
- ಕಾಳಿಕಾದೇವಿಯನ್ನ ಪೂಜಿಸಿ ಕಪ್ಪು ಬಟ್ಟೆ ಧರಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ