ಮಿತ್ರರ ಅಥವಾ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ
ಜನರಲ್ಲಿ ಅಥವಾ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವ ಸೂಚನೆ ಇದೆ
ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ಆಧುನಿಕತೆಗೆ ಬದಲಾಗಿರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.
ಮೇಷ ರಾಶಿ
- ಮನಸ್ಸಿನ ಆಲೋಚನೆಗಳ ಮೇಲೆ ದಿನ ಅವಲಂಬಿತವಾಗಿರುತ್ತದೆ
- ಮಿತ್ರರ ಅಥವಾ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ
- ಕೆಲವು ವಿಚಾರಗಳನ್ನು ಬಂಧುಗಳ ಜೊತೆಯಲ್ಲಿ ಚರ್ಚಿಸಬಹುದು
- ನಿದ್ರಾಹೀನತೆ ಅಥವಾ ನಿದ್ರಾ ಭಂಗದಿಂದ ತೊಂದರೆಯಾಗಬಹುದು
- ಯಾವುದೇ ಕ್ಷಣದಲ್ಲಿ ನಿಮಗೆ ಸವಾಲುಗಳು ಬರಬಹುದು
- ಮಾನಸಿಕವಾಗಿ ಪ್ರತಿಕ್ಷಣ ಸಿದ್ಧರಾಗಿರಬೇಕಾದ ದಿನ
- ನವಗ್ರಹರ ಪ್ರಾರ್ಥನೆ ಮಾಡಿ
ವೃಷಭ
- ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಶುಭವಿದೆ
- ನಿಮ್ಮ ಕಿರಿಯರು ಹೆಚ್ಚು ಗೌರವ ನೀಡುತ್ತಾರೆ
- ಆರ್ಥಿಕವಾಗಿ ಸಾಧಾರಣವಾದ ದಿನ
- ಒಡಹುಟ್ಟಿದವರೊಡನೆ ಸಂಬಂಧ ಚೆನ್ನಾಗಿರಲಿದೆ
- ನಿಮ್ಮ ಇಷ್ಟದ ಕೆಲಸದಲ್ಲಿ ಕಾಲ ಕಳೆಯಬಹುದು
- ಮನೆಯಲ್ಲಿ ಸ್ವತಂತ್ರದ ವಾತಾವರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
- ವೈಯಕ್ತಿಕ ವಿಚಾರ ಅಥವಾ ಸಾಂಸಾರಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
- ಮಧ್ಯಾಹ್ನಕ್ಕಿಂತ ಮುಂಚೆ ನಿಮ್ಮ ಕೆಲಸಗಳಾಗಲಿದೆ
- ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟ ಇರುವುದಿಲ್ಲ
- ನಿಮ್ಮ ನಿರ್ಧಾರ ತಪ್ಪಾಗಿರಬಹುದು
- ಹಳೆಯ ಸಾಲ ಅಥವಾ ವ್ಯವಹಾರದಿಂದ ಸಮಸ್ಯೆಯಾಗಬಹುದು
- ಜನರಲ್ಲಿ ಅಥವಾ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವ ಸೂಚನೆ ಇದೆ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಇಂದು ನಿಮಗೆ ಸವಾಲಿನ ದಿನ
- ಜೊತೆಯಲ್ಲಿ ಇರುವವರು ಅಸೂಯೆ ತೋರಿಸಬಹುದು
- ವಿದೇಶ ಪ್ರಯಾಣಕ್ಕೆ ಇರುವ ಅಡೆತಡೆ ನಿವಾರಣೆಯಾಗಬಹುದು
- ದಾಂಪತ್ಯ ಜೀವನದಲ್ಲಿ ಕಿರಿಕಿರಿಯಾಗಬಹುದು
- ಸಾಲ ಪಡೆದ ಹಣ ಸದ್ಬಳಕೆಯಾಗಬಹುದು
- ಅನಿರೀಕ್ಷಿತವಾಗಿ ಹಣ ಬಂದರೆ ಹಾಗೆ ಖರ್ಚಾಗಲಿದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
- ನಿಮ್ಮ ಗುರುಗಳನ್ನು ಪ್ರಾರ್ಥಿಸಿ ಆಶೀರ್ವಾದ ಸ್ವೀಕರಿಸಿ
ಸಿಂಹ
- ಮಾಹಿತಿ ಸರಿಯಾಗಿರದೆ ಹಣ ಹೂಡಿಕೆ ಬೇಡ
- ಇಂದು ಅನಗತ್ಯ ಪ್ರಯಾಣ ಬೇಡ
- ಮನೆಯಿಂದ ಹೊರಗೆ ಹೋಗಿ ವ್ಯವಹರಿಸುವಾಗ ಎಚ್ಚರಿಕೆಯಿರಲಿ
- ಮಕ್ಕಳ ಆರೋಗ್ಯ ಅಥವಾ ವರ್ತನೆಯಿಂದ ಬೇಸರವಾಗಬಹುದು
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ಆಧುನಿಕತೆಗೆ ಬದಲಾಗಿರಿ
- ಲಾಭವಿದ್ದರೂ ಸರಿಯಾಗಿ ಉಪಯೋಗಿಸದೆ ವ್ಯರ್ಥವಾಗಬಹುದು
- ಮಕ್ಕಳಿಂದ ಸಮಾಧಾನ ಸಿಗಲಿದೆ
- ತುಂಬಾ ಕಷ್ಟ ಪಡಬೇಕಾದ ದಿನ ಸ್ವಲ್ಪ ಲಾಭವಿದೆ
- ತಾಯಿಯವರ ಆರೋಗ್ಯದ ಬಗ್ಗೆ ಗಮನಿಸಿ ಕರ್ತವ್ಯ ಲೋಪ ಬೇಡ
- ತಾಳ್ಮೆಯಿಂದ ಯೋಚಿಸಿ ನಿರ್ಧಾರ ಮಾಡಿದಾಗ ಶುಭವಿದೆ
- ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ
ತುಲಾ
- ಸಭೆ ಸಮಾರಂಭಗಳ ವಿಚಾರ ಕುರಿತು ಚರ್ಚೆ ಮಾಡುತ್ತೀರಿ
- ಗೌರವ ಸನ್ಮಾನಗಳು ನಿಮ್ಮ ಪಾಲಿಗೆ ಬರುವ ಸೂಚನೆ ಇದೆ
- ವಿದ್ಯಾರ್ಥಿಗಳಲ್ಲಿ ಪ್ರಗತಿ ಹೊಂದುತ್ತೀರಿ
- ಪೋಷಕರ ನಿಯಮಗಳು ಪಾಲಿಸಿ ಶುಭವಿದೆ
- ವಿನಾಕಾರಣ ಹಣದ ವಿಚಾರದಲ್ಲಿ ಮನಸ್ತಾಪ ಬೇಡ
- ಕುಲದೇವತಾ ಸ್ಮರಣೆ ಮಾಡಿ
ವೃಶ್ಚಿಕ
- ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುವವರಿಗೆ ಶುಭವಿದೆ
- ವಿವಾಹ ವಿಚಾರ ಹಾಸ್ಯದಲ್ಲಿ ಮುಗಿದು ಹೋಗಬಹುದು
- ಪ್ರವಾಸ ಹಣ ಸರ್ಕಾರಿ ಕೆಲಸ ವಿಚಾರದಲ್ಲಿ ಒಳ್ಳೆಯದಿದೆ
- ಪ್ರಯಾಣಿಸುವಾಗ ನಿಮ್ಮ ಪದಾರ್ಥಗಳ ಬಗ್ಗೆ ಎಚ್ಚರಿಕೆಯಿರಲಿ
- ಆತುರದ ನಿರ್ಧಾರ ಒಳ್ಳೆಯದಲ್ಲ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಮೇಲಾಧಿಕಾರಿಗಳಿಂದ ಉದ್ದೇಶ ಪೂರ್ವಕವಾಗಿ ಸವಾಲುಗಳು ಬರಬಹುದು
- ಇಂದು ಸುಳ್ಳನ್ನು ಹೇಳಬಾರದು
- ಮಾನಸಿಕ ತೊಂದರೆ ಅಥವಾ ಖಿನ್ನತೆ ನಿಮ್ಮನ್ನ ಹಿನ್ನಡೆಗೆ ತರಬಹುದು
- ನಿಮ್ಮದೇ ತೀರ್ಮಾನದ ಕೆಲಸಗಳು ಆಗುವುದಿಲ್ಲ
- ಸಮಯಕ್ಕೆ ಹೊಂದಿಕೊಳ್ಳಬೇಕಾಗಬಹುದು
- ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ
- ಮಧ್ಯಾಹ್ನದ ಸಮಯ ಸ್ವಲ್ಪ ಕಷ್ಟವೆನಿಸಬಹುದು
- ಇಂದಿನ ಕೆಲಸ ಸಾಧಾರಣವಾಗಿ ಯಶಸ್ಸು ಕಾಣಬಹುದು
- ನಿಂತು ಹೋಗಿದ್ದ ಕೆಲಸಗಳು ಅಥವಾ ವಿಚಾರಗಳು ಮರುಜೀವ ಪಡೆಯಬಹುದು
- ನಿಮ್ಮದೇ ಆದ ಶೈಲಿಯಲ್ಲಿ ಜನರನ್ನು ಆಕರ್ಷಿಸುತ್ತೀರಿ
- ಮನಸ್ಸಿನಲ್ಲಿ ಧೈರ್ಯ ಇರುವುದಿಲ್ಲ
- ಸಮಾಜದಲ್ಲಿ ಹೆದರಿಕೆಯಿಂದಲೇ ದಿನ ಕಳೆಯುವಂತೆ ವರ್ತಿಸುತ್ತೀರಿ
- ಈಶ್ವರನ ಆರಾಧನೆ ಮಾಡಿ
ಕುಂಭ
- ನಿಮ್ಮ ಕೆಲಸ ಅಥವಾ ತೀರ್ಮಾನ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ
- ಅನುಮಾನ ಅಥವಾ ತಪ್ಪು ಕಲ್ಪನೆಗಳು ಬಾರದಂತೆ ಗಮನಿಸಿ
- ಕುಟುಂಬದವರ ಸಹಾಯ ಸಹಕಾರ ಅತಿ ಮುಖ್ಯ ಅದನ್ನು ಗಮನಿಸಿ
- ಸಮಾಜದಲ್ಲಿ ಜನರು ತುಂಬಾ ಜಾಗೃತವಾಗಿರುವುದರಿಂದ ದ್ರೋಹ ಬೇಡ
- ಪೋಷಕರೊಂದಿಗೆ ವಿಧೇಯವಾಗಿ ವರ್ತಿಸಿ
- ನಿಮ್ಮ ಅನುಕೂಲಕ್ಕಾಗಿ ಬೇರೆಯವರಿಗೆ ತೊಂದರೆ ಮಾಡಬೇಡಿ
- ವಿಷ್ಣು ಸಹಸ್ರನಾಮ ಪಠಣೆ ಮಾಡಿ
ಮೀನ
- ದಾಂಪತ್ಯದಲ್ಲಿ ವಾದ-ವಿವಾದ ಬೇಡ
- ಕಲ್ಯಾಣಕ್ಕೆ ಅನುಕೂಲವಾಗುವ ವಿಚಾರ ಮಾಡಿ
- ಸರ್ಕಾರಿ ಕೆಲಸದ ವಿಚಾರದಲ್ಲಿ ಅಸಮಾಧಾನ ಉಂಟಾಗಲಿದೆ
- ನಿಮ್ಮ ಕಾರ್ಯ ವೈಖರಿಯ ಬಗ್ಗೆ ನಿಮಗೆ ಹೆಮ್ಮೆ
- ನಿಮ್ಮ ಉದ್ದೇಶವನ್ನು ಕಠಿಣವಾಗಿ ತೋರಿಸಬೇಡಿ
- ದುರ್ಗಾರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ