YSRCP ಸಂಸದ ಮಿಧುನ್ ರೆಡ್ಡಿ ಬಂಧನ.. ಆಂಧ್ರದಲ್ಲಿ ಭಾರೀ ಹೈಡ್ರಾಮಾ..!

author-image
Ganesh
Updated On
YSRCP ಸಂಸದ ಮಿಧುನ್ ರೆಡ್ಡಿ ಬಂಧನ.. ಆಂಧ್ರದಲ್ಲಿ ಭಾರೀ ಹೈಡ್ರಾಮಾ..!
Advertisment
  • ಸುಪ್ರೀಂ, ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಅರ್ಜಿ ರಿಜೆಕ್ಟ್
  • ಎಸ್​ಐಟಿ ಸುಳಿಯಲ್ಲಿ ಸಂಸದ ಮಿಧುನ್ ರೆಡ್ಡಿ, ಮತ್ತಷ್ಟು ಸಂಕಷ್ಟ
  • ಇಂದು ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ

ಆಂಧ್ರಪ್ರದೇಶ 3200 ಕೋಟಿ ರೂಪಾಯಿ ಮದ್ಯ ಹಗರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. A4 ಸ್ಥಾನದಲ್ಲಿರುವ ವೈಎಸ್‌ಆರ್‌ಸಿಪಿ ಸಂಸದ ಮಿಧುನ್ ರೆಡ್ಡಿ (Midhun Reddy) ಅವರನ್ನು ಎಸ್‌ಐಟಿ ಬಂಧಿಸಿದೆ.

ಮಿಧುನ್ ರೆಡ್ಡಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ಅವರನ್ನು 6 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು, ನಂತರ ಬಂಧಿಸಲಾಗಿದೆ. ಅಧಿಕಾರಿಗಳು ಇಂದು ಕೋರ್ಟ್​ಗೆ ಹಾಜರುಪಡಿಸಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:  ಇಡೀ ದೇಶದಲ್ಲೇ ಒಂದೇ ಒಂದು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು..?

ಮಿಧುನ್ ರೆಡ್ಡಿ ಬಂಧನದ ಬಗ್ಗೆ ಎಸ್‌ಐಟಿ ಕುಟುಂಬದ ಸದಸ್ಯರಿಗೆ ತಿಳಿಸಿದೆ. ಮಿಥುನ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದೇ ಪ್ರಕರಣದಲ್ಲಿ ಒಟ್ಟು 12 ಜನರ ಬಂಧನವಾಗಿದೆ.

ಮತ್ತೊಂದು ಕಡೆ ತನಿಖೆ ನಡೆಸ್ತಿರುವ ಎಸ್‌ಐಟಿ, ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಎಸ್‌ಐಟಿ ಮಿಥುನ್ ರೆಡ್ಡಿ ಹೆಸರನ್ನು ಉಲ್ಲೇಖಿಸಿಲ್ಲ. ಎಸ್‌ಐಟಿ ಎಸಿಬಿ ಮ್ಯಾಜಿಸ್ಟ್ರೇಟ್‌ಗೆ 300 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. 100ಕ್ಕೂ ಹೆಚ್ಚು ವಿಧಿವಿಜ್ಞಾನ ಪ್ರಯೋಗಾಲಯ ವರದಿಗಳನ್ನು ಲಗತ್ತಿಸಲಾಗಿದೆ. ಒಟ್ಟು 62 ಕೋಟಿ ರೂ.ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದಿದೆ. 268 ಸಾಕ್ಷಿಗಳನ್ನು ಪ್ರಶ್ನಿಸಲಾಗಿದೆ. 11 ಆರೋಪಿಗಳ ಹೇಳಿಕೆಗಳನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆಧಾರ್​​ ಕಾರ್ಡ್​ನಲ್ಲಿ ಎಷ್ಟು ವರ್ಷಗಳ ನಂತರ ಮಕ್ಕಳ ಬಯೋಮೆಟ್ರಿಕ್​ ಅಪ್​ಡೇಟ್​​​ ಮಾಡಿಸಬೇಕು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment