2011ರ ವಿಶ್ವಕಪ್ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿದ್ದ ಯುವಿ
2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಲಿಡ್ ಪರ್ಫಾಮೆನ್ಸ್
ಟೀಮ್ ಇಂಡಿಯಾಕ್ಕೆ ಯುವಿ ಎಂಟ್ರಿಯಾದರೆ ಕಪ್ ಪಕ್ಕಾ ಗೆಲ್ಲುತ್ತಾ?
ಚುಟುಕು ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ದಿಗ್ಗಜ ಕ್ರಿಕೆಟಿಗ ಓಪನ್ ಆಫರ್ ಕೊಟ್ಟಿದ್ದಾರೆ. ಲೆಜೆಂಡರಿ ಕ್ರಿಕೆಟರ್ ಕೊಟ್ಟಿರೋ ಆಫರ್ ಖಂಡಿತವಾಗಲೂ ಟೀಮ್ ಇಂಡಿಯಾಗೆ ಸಹಾಯ ಮಾಡಲಿದೆ. ಆದ್ರೆ, ಬಿಸಿಸಿಐ ಈ ಆಫರ್ನ ಒಪ್ಪುತ್ತಾ? ರಿಜೆಕ್ಟ್ ಮಾಡುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಅಷ್ಟಕ್ಕೂ ಆ ದಿಗ್ಗಜ ಯಾರು, ಕೊಟ್ಟಿರೋ ಆಫರ್ ಎಂತಾದ್ದು?
ಅಫ್ಘಾನ್ ವಿರುದ್ಧದ ಟಿ20 ಸರಣಿಯೊಂದಿಗೆ ಟೀಮ್ ಇಂಡಿಯಾದ ವಿಶ್ವಕಪ್ ತಯಾರಿ ಆರಂಭವಾಗಿದೆ. ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ ದಂಗಲ್ನಲ್ಲಿ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾಗಿದೆ. ಅದಕ್ಕಾಗಿ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದಲೇ ಭರ್ಜರಿ ತಯಾರಿ ಆರಂಭಿಸಿದೆ.
BCCIಗೆ ಯುವರಾಜ್ ಸಿಂಗ್ ಓಪನ್ ಆಫರ್.!
ಬಿಸಿಸಿಐ & ಟೀಮ್ ಮ್ಯಾನೇಜ್ಮೆಂಟ್, ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಯುವ ಹಾಗೂ ಅನುಭವಿಗಳನ್ನೊಳಗೊಂಡ ಬ್ಯಾಲೆನ್ಸ್ಡ್ ಟೀಮ್ ಕಟ್ಟಿ ಸಕ್ಸಸ್ ಕಂಡಿದೆ. ಟೀಮ್ ಕಾಂಬಿನೇಷನ್ ಜೊತೆಗೆ ಟೂರ್ನಿ ನಡೆಯೋ ವೆಸ್ಟ್ ಇಂಡೀಸ್ ಹಾಗೂ ಅಮೇರಿಕದ ಕಂಡೀಷನ್ಸ್ ತಕ್ಕಂತೆ ಸ್ಟ್ರಾಟಜಿಗಳನ್ನ ವರ್ಕೌಟ್ ಮಾಡ್ತಿದೆ. ಟ್ರೋಫಿ ಗೆಲ್ಲಲು ಪಣ ತೊಟ್ಟು ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ಇದೀಗ ಮಾಜಿ ಸ್ಫೋಟಕ ಆಲ್ರೌಂಡರ್ ಓಪನ್ ಆಫರ್ ಕೊಟ್ಟಿದ್ದಾರೆ.
ಮೆಂಟರ್ ಹುದ್ದೆ ಮೇಲೆ ಯುವರಾಜ್ ಸಿಂಗ್ ಕಣ್ಣು.!
ಯುವರಾಜ್ ಸಿಂಗ್ ಟೀಮ್ ಇಂಡಿಯಾ ಮಾತ್ರವಲ್ಲ, ವಿಶ್ವ ಕ್ರಿಕೆಟ್ ಕಂಡ ಸ್ಫೋಟಕ ಆಲ್ರೌಂಡರ್. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ 3 ಐಸಿಸಿ ಟ್ರೋಫಿಗಳನ್ನ ಗೆದ್ದ ಆಟಗಾರ. 2007ರ ಚುಟುಕು ವಿಶ್ವಕಪ್ ದಂಗಲ್ನಲ್ಲಿ ಓವರ್ 6ಕ್ಕೆ ಆರು ಎಸೆತಗಳನ್ನ ಸಿಕ್ಸರ್ಗಟ್ಟಿ ದಾಖಲೆ ಬರೆದ ಯುವರಾಜ್, 2011ರ ವಿಶ್ವಕಪ್ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ರು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿ ಮಿಂಚಿದ್ರು. ಇಂತಾ ಯುವಿ ಇದೀಗ ಟೀಮ್ ಇಂಡಿಯಾ ಆಟಗಾರರ ಪಾಠ ಮಾಡಲು ರೆಡಿ ಎಂದಿದ್ದಾರೆ.
‘ಮೆಂಟರಿಂಗ್ ಮಾಡೋದು ನನಗಿಷ್ಟ’
‘ಯುವ ಆಟಗಾರರಿಗೆ ಒತ್ತಡದ ನಡುವೆ ಹೇಗೆ ಆಡಬೇಕು ಅನ್ನೋದನ್ನ ಕಲಿಸಬೇಕಿದೆ. ಅದು ನಮ್ಮ ಮುಂದಿರೋ ಸವಾಲು. ನಮ್ಮಲ್ಲಿ ಕೆಲ ಆಟಗಾರರು ಒತ್ತಡದ ನಡುವೆ ಆಡುವವರಿದ್ದಾರೆ. ಆದ್ರೆ, ಒಬ್ಬರು, ಇಬ್ಬರು ಮಾತ್ರವಲ್ಲ. ಇಡೀ ತಂಡ ಹಾಗೆ ಆಡಬೇಕು. ಮೆಂಟರಿಂಗ್ ಮಾಡೋದು ನನಗಿಷ್ಟ. ಮುಂದಿನ ದಿನಗಳಲ್ಲಿ ನಾನು ಯುವ ಆಟಗಾರರಿಗೆ ಸಹಾಯ ಮಾಡಬೇಕೆಂದಿದ್ದೇನೆ. ಬಿಗ್ ಟೂರ್ನಮೆಂಟ್ಗಳಲ್ಲಿ ಮಾನಸಿಕ ಸಮಸ್ಯೆಯನ್ನ ಎದುರಿಸಿದ್ದೇವೆ. ನಾನು ಈ ವಿಚಾರದಲ್ಲಿ ಆಟಗಾರರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ’
ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗ
ಯುವರಾಜ್ ಸಿಂಗ್ ಹೇಳಿದಂತೆ ಕಳೆದ ಕೆಲ ಐಸಿಸಿ ಟೂರ್ನಿಗಳನ್ನ ಒತ್ತಡಕ್ಕೆ ಒಳಗಾಗಿಯೇ ಟೀಮ್ ಇಂಡಿಯಾ ಕೈ ಚೆಲ್ಲಿದೆ. ಲೀಗ್ ಹಂತದಲ್ಲಿ ಅದ್ಭುತವಾಗಿ ಆಡುವ ಟೀಮ್ ಇಂಡಿಯಾ ಆಟಗಾರರು ನಾಕೌಟ್ ಹಂತದಲ್ಲಿ ವೈಫಲ್ಯ ಅನುಭವಿಸ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇದೇ ಆಗಿದ್ದು.
ಯುವರಾಜ್ ಎಂಟ್ರಿಯಾದ್ರೆ ಸಮಸ್ಯೆ ಪರಿಹಾರವಾಗುತ್ತಾ.?
ಅಂತರಾಷ್ಟ್ರೀಯ ಕ್ರಿಕೆಟ್ನ ಅಪಾರ ಅನುಭವ ಹೊಂದಿರುವ ಯುವರಾಜ್ ಸಿಂಗ್, ಕ್ರಿಕೆಟ್ ಆಳ-ಅಗಲದ ಬಗ್ಗೆ ಪಕ್ಕಾ ಮಾಹಿತಿಯಿದೆ. ಇನ್ನು, ಮಾನಸಿಕ ಆರೋಗ್ಯ ಹಾಗೂ ಒತ್ತಡದ ವಿಚಾರಕ್ಕೆ ಬಂದ್ರೆ, ಸ್ವತಃ ಯುವರಾಜ್ ಸಿಂಗ್ ಇದೆಲ್ಲವನ್ನ ಫೇಸ್ ಮಾಡಿ ಗೆದ್ದಿದ್ದಾರೆ. ಕ್ಯಾನ್ಸರ್ ಮಹಮಾರಿಯೊಂದಿಗೆ ಹೋರಾಡ್ತಾ ಇದ್ರೂ, ಮೈದಾನಕ್ಕಿಳಿದು ಘರ್ಜಿಸಿದ್ರು. ಯುವಿಯ ಈ ಛಲದ ಹೋರಾಟವೇ ಯುವ ಆಟಗಾರರಿಗೆ ಸ್ಪೂರ್ತಿಯ ಪಾಠವಾಗಲಿದೆ.
ವಿಶ್ವಕಪ್ ತಂಡಕ್ಕೆ ಯುವರಾಜ್ ಸಿಂಗ್ ಮೆಂಟರ್.?
ಕಳೆದ 2021ರ ಟಿ20 ವಿಶ್ವಕಪ್ ವೇಳೆ ಎಂ.ಎಸ್ ಧೋನಿ ಟೀಮ್ ಇಂಡಿಯಾದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ರು. ಇದೀಗ 2024 ಟಿ20 ವಿಶ್ವಕಪ್ಗೆ ಸಿದ್ಧತೆಯನ್ನ ಬಿಸಿಸಿಐ ಆರಂಭಿಸಿದೆ. ಈಗಲೂ ಕೂಡ ಟೀಮ್ ಇಂಡಿಯಾಗೆ ಮೆಂಟರ್ ಹುದ್ದೆಯ ಬಗ್ಗೆ ಬಿಸಿಸಿಐ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿವೆ. ಇದ್ರ ಬೆನ್ನಲ್ಲೇ ಯುವರಾಜ್ ಸಿಂಗ್ ಓಪನ್ ಆಫರ್ ಕೊಟ್ಟಿದ್ದು, ಟಿ20 ವಿಶ್ವಕಪ್ ತಂಡದ ಮೆಂಟರ್ ಆಗಿ ಆಯ್ಕೆಯಾದ್ರೂ ಅಚ್ಚರಿ ಪಡುವಂತಿಲ್ಲ.
ಯುವಿಯನ್ನ ವೈಟ್ಬಾಲ್ ಫಾರ್ಮೆಟ್ ಕಂಡ ಒನ್ ಆಫ್ ಗ್ರೇಟೆಸ್ಟ್ AND ಪರ್ಫೆಕ್ಟ್ ಆಲ್ರೌಂಡರ್ ಅಂದ್ರೆ ತಪ್ಪಾಗಲ್ಲ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಫೀಲ್ಡಿಂಗ್ 3 ವಿಭಾಗದಲ್ಲೂ ಮಿಂಚು ಹರಿಸಿದ ಕ್ರಿಕೆಟಿಗ. ಇಂತಾ ಶ್ರೇಷ್ಟ ಆಲ್ರೌಂಡರ್ ತಂಡದ ಮೆಂಟರ್ ಆದ್ರೆ ತಂಡಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಆದ್ರೆ, ಬಿಸಿಸಿಐ ಏನು ಮಾಡುತ್ತೆ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2011ರ ವಿಶ್ವಕಪ್ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿದ್ದ ಯುವಿ
2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಲಿಡ್ ಪರ್ಫಾಮೆನ್ಸ್
ಟೀಮ್ ಇಂಡಿಯಾಕ್ಕೆ ಯುವಿ ಎಂಟ್ರಿಯಾದರೆ ಕಪ್ ಪಕ್ಕಾ ಗೆಲ್ಲುತ್ತಾ?
ಚುಟುಕು ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ದಿಗ್ಗಜ ಕ್ರಿಕೆಟಿಗ ಓಪನ್ ಆಫರ್ ಕೊಟ್ಟಿದ್ದಾರೆ. ಲೆಜೆಂಡರಿ ಕ್ರಿಕೆಟರ್ ಕೊಟ್ಟಿರೋ ಆಫರ್ ಖಂಡಿತವಾಗಲೂ ಟೀಮ್ ಇಂಡಿಯಾಗೆ ಸಹಾಯ ಮಾಡಲಿದೆ. ಆದ್ರೆ, ಬಿಸಿಸಿಐ ಈ ಆಫರ್ನ ಒಪ್ಪುತ್ತಾ? ರಿಜೆಕ್ಟ್ ಮಾಡುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಅಷ್ಟಕ್ಕೂ ಆ ದಿಗ್ಗಜ ಯಾರು, ಕೊಟ್ಟಿರೋ ಆಫರ್ ಎಂತಾದ್ದು?
ಅಫ್ಘಾನ್ ವಿರುದ್ಧದ ಟಿ20 ಸರಣಿಯೊಂದಿಗೆ ಟೀಮ್ ಇಂಡಿಯಾದ ವಿಶ್ವಕಪ್ ತಯಾರಿ ಆರಂಭವಾಗಿದೆ. ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ ದಂಗಲ್ನಲ್ಲಿ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾಗಿದೆ. ಅದಕ್ಕಾಗಿ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದಲೇ ಭರ್ಜರಿ ತಯಾರಿ ಆರಂಭಿಸಿದೆ.
BCCIಗೆ ಯುವರಾಜ್ ಸಿಂಗ್ ಓಪನ್ ಆಫರ್.!
ಬಿಸಿಸಿಐ & ಟೀಮ್ ಮ್ಯಾನೇಜ್ಮೆಂಟ್, ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಯುವ ಹಾಗೂ ಅನುಭವಿಗಳನ್ನೊಳಗೊಂಡ ಬ್ಯಾಲೆನ್ಸ್ಡ್ ಟೀಮ್ ಕಟ್ಟಿ ಸಕ್ಸಸ್ ಕಂಡಿದೆ. ಟೀಮ್ ಕಾಂಬಿನೇಷನ್ ಜೊತೆಗೆ ಟೂರ್ನಿ ನಡೆಯೋ ವೆಸ್ಟ್ ಇಂಡೀಸ್ ಹಾಗೂ ಅಮೇರಿಕದ ಕಂಡೀಷನ್ಸ್ ತಕ್ಕಂತೆ ಸ್ಟ್ರಾಟಜಿಗಳನ್ನ ವರ್ಕೌಟ್ ಮಾಡ್ತಿದೆ. ಟ್ರೋಫಿ ಗೆಲ್ಲಲು ಪಣ ತೊಟ್ಟು ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ಇದೀಗ ಮಾಜಿ ಸ್ಫೋಟಕ ಆಲ್ರೌಂಡರ್ ಓಪನ್ ಆಫರ್ ಕೊಟ್ಟಿದ್ದಾರೆ.
ಮೆಂಟರ್ ಹುದ್ದೆ ಮೇಲೆ ಯುವರಾಜ್ ಸಿಂಗ್ ಕಣ್ಣು.!
ಯುವರಾಜ್ ಸಿಂಗ್ ಟೀಮ್ ಇಂಡಿಯಾ ಮಾತ್ರವಲ್ಲ, ವಿಶ್ವ ಕ್ರಿಕೆಟ್ ಕಂಡ ಸ್ಫೋಟಕ ಆಲ್ರೌಂಡರ್. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ 3 ಐಸಿಸಿ ಟ್ರೋಫಿಗಳನ್ನ ಗೆದ್ದ ಆಟಗಾರ. 2007ರ ಚುಟುಕು ವಿಶ್ವಕಪ್ ದಂಗಲ್ನಲ್ಲಿ ಓವರ್ 6ಕ್ಕೆ ಆರು ಎಸೆತಗಳನ್ನ ಸಿಕ್ಸರ್ಗಟ್ಟಿ ದಾಖಲೆ ಬರೆದ ಯುವರಾಜ್, 2011ರ ವಿಶ್ವಕಪ್ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ರು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿ ಮಿಂಚಿದ್ರು. ಇಂತಾ ಯುವಿ ಇದೀಗ ಟೀಮ್ ಇಂಡಿಯಾ ಆಟಗಾರರ ಪಾಠ ಮಾಡಲು ರೆಡಿ ಎಂದಿದ್ದಾರೆ.
‘ಮೆಂಟರಿಂಗ್ ಮಾಡೋದು ನನಗಿಷ್ಟ’
‘ಯುವ ಆಟಗಾರರಿಗೆ ಒತ್ತಡದ ನಡುವೆ ಹೇಗೆ ಆಡಬೇಕು ಅನ್ನೋದನ್ನ ಕಲಿಸಬೇಕಿದೆ. ಅದು ನಮ್ಮ ಮುಂದಿರೋ ಸವಾಲು. ನಮ್ಮಲ್ಲಿ ಕೆಲ ಆಟಗಾರರು ಒತ್ತಡದ ನಡುವೆ ಆಡುವವರಿದ್ದಾರೆ. ಆದ್ರೆ, ಒಬ್ಬರು, ಇಬ್ಬರು ಮಾತ್ರವಲ್ಲ. ಇಡೀ ತಂಡ ಹಾಗೆ ಆಡಬೇಕು. ಮೆಂಟರಿಂಗ್ ಮಾಡೋದು ನನಗಿಷ್ಟ. ಮುಂದಿನ ದಿನಗಳಲ್ಲಿ ನಾನು ಯುವ ಆಟಗಾರರಿಗೆ ಸಹಾಯ ಮಾಡಬೇಕೆಂದಿದ್ದೇನೆ. ಬಿಗ್ ಟೂರ್ನಮೆಂಟ್ಗಳಲ್ಲಿ ಮಾನಸಿಕ ಸಮಸ್ಯೆಯನ್ನ ಎದುರಿಸಿದ್ದೇವೆ. ನಾನು ಈ ವಿಚಾರದಲ್ಲಿ ಆಟಗಾರರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ’
ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗ
ಯುವರಾಜ್ ಸಿಂಗ್ ಹೇಳಿದಂತೆ ಕಳೆದ ಕೆಲ ಐಸಿಸಿ ಟೂರ್ನಿಗಳನ್ನ ಒತ್ತಡಕ್ಕೆ ಒಳಗಾಗಿಯೇ ಟೀಮ್ ಇಂಡಿಯಾ ಕೈ ಚೆಲ್ಲಿದೆ. ಲೀಗ್ ಹಂತದಲ್ಲಿ ಅದ್ಭುತವಾಗಿ ಆಡುವ ಟೀಮ್ ಇಂಡಿಯಾ ಆಟಗಾರರು ನಾಕೌಟ್ ಹಂತದಲ್ಲಿ ವೈಫಲ್ಯ ಅನುಭವಿಸ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇದೇ ಆಗಿದ್ದು.
ಯುವರಾಜ್ ಎಂಟ್ರಿಯಾದ್ರೆ ಸಮಸ್ಯೆ ಪರಿಹಾರವಾಗುತ್ತಾ.?
ಅಂತರಾಷ್ಟ್ರೀಯ ಕ್ರಿಕೆಟ್ನ ಅಪಾರ ಅನುಭವ ಹೊಂದಿರುವ ಯುವರಾಜ್ ಸಿಂಗ್, ಕ್ರಿಕೆಟ್ ಆಳ-ಅಗಲದ ಬಗ್ಗೆ ಪಕ್ಕಾ ಮಾಹಿತಿಯಿದೆ. ಇನ್ನು, ಮಾನಸಿಕ ಆರೋಗ್ಯ ಹಾಗೂ ಒತ್ತಡದ ವಿಚಾರಕ್ಕೆ ಬಂದ್ರೆ, ಸ್ವತಃ ಯುವರಾಜ್ ಸಿಂಗ್ ಇದೆಲ್ಲವನ್ನ ಫೇಸ್ ಮಾಡಿ ಗೆದ್ದಿದ್ದಾರೆ. ಕ್ಯಾನ್ಸರ್ ಮಹಮಾರಿಯೊಂದಿಗೆ ಹೋರಾಡ್ತಾ ಇದ್ರೂ, ಮೈದಾನಕ್ಕಿಳಿದು ಘರ್ಜಿಸಿದ್ರು. ಯುವಿಯ ಈ ಛಲದ ಹೋರಾಟವೇ ಯುವ ಆಟಗಾರರಿಗೆ ಸ್ಪೂರ್ತಿಯ ಪಾಠವಾಗಲಿದೆ.
ವಿಶ್ವಕಪ್ ತಂಡಕ್ಕೆ ಯುವರಾಜ್ ಸಿಂಗ್ ಮೆಂಟರ್.?
ಕಳೆದ 2021ರ ಟಿ20 ವಿಶ್ವಕಪ್ ವೇಳೆ ಎಂ.ಎಸ್ ಧೋನಿ ಟೀಮ್ ಇಂಡಿಯಾದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ರು. ಇದೀಗ 2024 ಟಿ20 ವಿಶ್ವಕಪ್ಗೆ ಸಿದ್ಧತೆಯನ್ನ ಬಿಸಿಸಿಐ ಆರಂಭಿಸಿದೆ. ಈಗಲೂ ಕೂಡ ಟೀಮ್ ಇಂಡಿಯಾಗೆ ಮೆಂಟರ್ ಹುದ್ದೆಯ ಬಗ್ಗೆ ಬಿಸಿಸಿಐ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿವೆ. ಇದ್ರ ಬೆನ್ನಲ್ಲೇ ಯುವರಾಜ್ ಸಿಂಗ್ ಓಪನ್ ಆಫರ್ ಕೊಟ್ಟಿದ್ದು, ಟಿ20 ವಿಶ್ವಕಪ್ ತಂಡದ ಮೆಂಟರ್ ಆಗಿ ಆಯ್ಕೆಯಾದ್ರೂ ಅಚ್ಚರಿ ಪಡುವಂತಿಲ್ಲ.
ಯುವಿಯನ್ನ ವೈಟ್ಬಾಲ್ ಫಾರ್ಮೆಟ್ ಕಂಡ ಒನ್ ಆಫ್ ಗ್ರೇಟೆಸ್ಟ್ AND ಪರ್ಫೆಕ್ಟ್ ಆಲ್ರೌಂಡರ್ ಅಂದ್ರೆ ತಪ್ಪಾಗಲ್ಲ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಫೀಲ್ಡಿಂಗ್ 3 ವಿಭಾಗದಲ್ಲೂ ಮಿಂಚು ಹರಿಸಿದ ಕ್ರಿಕೆಟಿಗ. ಇಂತಾ ಶ್ರೇಷ್ಟ ಆಲ್ರೌಂಡರ್ ತಂಡದ ಮೆಂಟರ್ ಆದ್ರೆ ತಂಡಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಆದ್ರೆ, ಬಿಸಿಸಿಐ ಏನು ಮಾಡುತ್ತೆ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ