2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾದ ಯುವರಾಜ್ ಸಿಂಗ್
ಲೋಕಸಭಾ ಚುನಾವಣಾ ಅಖಾಡಕ್ಕೆ ಯುವಿ ಎಂಟ್ರಿ..!
ಸನ್ನಿ ಡಿಯೋಲ್ಗೆ ಕೊಕ್, ಯುವರಾಜ್ಗೆ ಮಣೆ..!
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಇಷ್ಟು ದಿನ ಕ್ರಿಕೆಟ್ ಅಂಗಳಕ್ಕೆ ಮಾತ್ರ ಸೀಮಿತವಾಗಿದ್ದ ಯುವರಾಜ್, ಇದೀಗ ಚುನಾವಣಾ ಕಣಕ್ಕೆ ಧುಮುಕಲು ಮುಂದಾಗಿದ್ದಾರೆ. ಹಾಗಾದ್ರೆ, ಯುವರಾಜ್ ಎಲ್ಲಿ ಎಲೆಕ್ಷನ್ಗೆ ನಿಲ್ತಾರೆ? ಯಾವ ಪಕ್ಷದಿಂದ ನಿಲ್ತಾರೆ?
ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಬಳಿಕ ಯುವರಾಜ್ ಸಿಂಗ್ ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ರು. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಿದ್ದು, ಅಲ್ಲಿ-ಇಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು ಬಿಟ್ರೆ, ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಎಲ್ಲದರಿಂದ ದೂರವೇ ಉಳಿದಿದ್ದ ಯುವರಾಜ್ ಸಿಂಗ್, ಇದೀಗ ಸೈಲೆಂಟಾಗೇ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾದ ಯುವರಾಜ್ ಸಿಂಗ್
ದೇಶದೆಲ್ಲೆಡೆ ಸದ್ದಿಲ್ಲದೇ ಲೋಕಸಭಾ ಚುನಾವಣೆಯ ಕಾವು ಜೋರಾಗ್ತಿದೆ. ಚುನಾವಣಾ ಚದುರಂಗದಾಟಕ್ಕೆ ರಾಜಕೀಯ ಪಕ್ಷಗಳು ಸಿದ್ಧತೆಯನ್ನ ಆರಂಭಸಿವೆ. ತೆರೆಯ ಹಿಂದಿನ ಕಸರತ್ತುಗಳಂತೂ ಜೋರಾಗಿದ್ದು, ಈ ಚುನಾವಣೆಯ ಬಿಸಿ ಇದೀಗ ಕ್ರಿಕೆಟ್ ಲೋಕಕ್ಕೂ ತಟ್ಟಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚುನಾವಣಾ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ.
ಲೋಕಸಭಾ ಚುನಾವಣಾ ಅಖಾಡಕ್ಕೆ ಯುವರಾಜ್ ಎಂಟ್ರಿ..!
ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮುಂದಾಗಿದ್ದಾರೆ. ಈಗಾಗಲೇ ಯುವರಾಜ್ ಸಿಂಗ್, ಪಕ್ಷವೊಂದರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಬಹುತೇಕ ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನೂ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೇನಿದ್ರೂ, ಚುನಾವಣಾ ಅಖಾಡಕ್ಕೆ ಧುಮುಕುವುದೊಂದೆ ಬಾಕಿ ಅನ್ನೋದು ಮೂಲದ ಮಾಹಿತಿಯಾಗಿದೆ.
ಕೇಸರಿ ಪಾಳಯ ಸೇರಲಿದ್ದಾರಾ ಯುವರಾಜ್ ಸಿಂಗ್..?
ಬಹುತೇಕ ಯುವರಾಜ್ ಸಿಂಗ್ ಭಾರತೀಯ ಜನತಾ ಪಕ್ಷವನ್ನ ಸೇರೋದು ಕನ್ಫರ್ಮ್ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನ ತಾಯಿಯೊಂದಿಗೆ ಯುವರಾಜ್ ಸಿಂಗ್ ಭೇಟಿಯಾಗಿದ್ರು. ಈ ಭೇಟಿಯ ವೇಳೆಯಲ್ಲೇ ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಟಿಕೆಟ್ ನೀಡುವ ಬಗ್ಗೆ ಗಡ್ಕರಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಸನ್ನಿ ಡಿಯೋಲ್ಗೆ ಕೊಕ್, ಯುವರಾಜ್ಗೆ ಮಣೆ..!
ಬಹುತೇಕ ಯುವರಾಜ್ ಸಿಂಗ್ ಕಣಕ್ಕಿಳಿಯೋ ಕ್ಷೇತ್ರವೂ ಫೈನಲ್ ಆಗಿದೆ. ಪಂಜಾಬ್ನ ಗುರುದಾಸ್ಪುರ ಕ್ಷೇತ್ರದಿಂದ ಯುವರಾಜ್ ಸಿಂಗ್ ಕಣಕ್ಕಿಳಿಯೋ ಸಾಧ್ಯತೆಯಿದೆ. ಹಾಲಿ ಈ ಕ್ಷೇತ್ರವನ್ನ ಸನ್ನಿ ಡಿಯೋಲ್ ಪ್ರತಿನಿಧಿಸ್ತಾ ಇದ್ದಾರೆ. ಆದ್ರೆ, ಕ್ಷೇತ್ರದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರದ ಸನ್ನಿ ಡಿಯೋಲ್, ಲೋಕಸಭಾ ಕಲಾಪಗಳಲ್ಲೂ ಭಾಗವಹಿಸ್ತಾ ಇಲ್ಲ. ಕೆಲ ದಿನಗಳ ಹಿಂದಷ್ಟೇ ಸನ್ನಿ ಡಿಯೋಲ್ ಕೂಡ ನಾನು ರಾಜಕೀಯಕ್ಕೆ ಫಿಟ್ ಅಲ್ಲ ಎಂದು ಹೇಳಿದ್ರು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನ ಬದಲಿಸುವ ಲೆಕ್ಕಾಚಾರದಲ್ಲಿದ್ದು, ಬಹುತೇಕ ಯುವರಾಜ್ ಟಿಕೆಟ್ ಸಿಗಲಿದೆ ಎನ್ನಲಾಗ್ತಿದೆ.
ಯುವರಾಜ್ ಸಿಂಗ್ ಮೇಲ್ಯಾಕೆ ಬಿಜೆಪಿ ಕಣ್ಣು..?
ಯುವರಾಜ್ ಸಿಂಗ್ಗೆ ಟಿಕೆಟ್ ನೀಡಲು ಭಾರತೀಯ ಜನತಾ ಪಾರ್ಟಿ ಆಸಕ್ತಿ ತೋರಿರೋದ್ರ ಹಿಂದೆ ಕಾರಣಗಳು ಹಲವಿವೆ. ಹೊಸ ಹಾಗೂ ಯುವ ಮುಖವನ್ನಿಟ್ಟುಕೊಂಡು ಅಖಾಡಕ್ಕೆ ಇಳಿದರೆ ಸಕ್ಸಸ್ ಸಿಗುತ್ತೆ ಅನ್ನೋದು ಬಿಜೆಪಿಯ ಮೊದಲ ಲೆಕ್ಕಾಚಾರ. ಕ್ರಿಕೆಟ್ನಿಂದ ವಿಶ್ವಾದ್ಯಂತ ಪ್ರಸಿದ್ಧಿಯನ್ನ ಪಡೆದಿರೋ ಯುವರಾಜ್ ಈಗಲೂ ಯಂಗ್ಸ್ಟರ್ಗಳ ಫೇವರಿಟ್ ಆಗಿದ್ದಾರೆ. ಇದಲ್ಲದೇ ಕ್ಯಾನ್ಸರ್ ಗೆದ್ದ ಕಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ. ಯುವಿಯ ಆಟ, ಹೋರಾಟ ಇಂದಿಗೂ ಜನಮಾನಸದಲ್ಲಿ ಉಳಿದಿದ್ದು, ಹೀಗಾಗಿಯೇ ಮಣೆ ಹಾಕಲು ಬಿಜೆಪಿ ಮುಂದಾಗಿದೆ.
ಗುರಾದಾಸ್ಪುರ ಕ್ಷೇತ್ರ ಹೇಳಿ ಕೇಳಿ ಸೆಲಬ್ರಿಟಿಗಳ ಪಾಲಿನ ಅದೃಷ್ಟದ ಕ್ಷೇತ್ರವಾಗಿದೆ. ಈ ಹಿಂದೆ ನಟ ವಿನೋದ್ ಖನ್ನಾ1998ರಿಂದ 2014ರವರೆಗೆ 4 ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿದ್ದರು. ಆ ಬಳಿಕ ಸನ್ನಿ ಡಿಯೋಲ್ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇದೀಗ ಇದೇ ಕ್ಷೇತ್ರದಲ್ಲಿ ಯುವರಾಜ್ ಸಿಂಗ್ ಅದೃಷ್ಟ ಪರೀಕ್ಷೆಗೆ ಮುಂದಾಗ್ತಾರೆ ಎನ್ನಲಾಗಿದ್ದು, ಮತದಾರನ ನಿರ್ಧಾರ ಏನಿರುತ್ತೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾದ ಯುವರಾಜ್ ಸಿಂಗ್
ಲೋಕಸಭಾ ಚುನಾವಣಾ ಅಖಾಡಕ್ಕೆ ಯುವಿ ಎಂಟ್ರಿ..!
ಸನ್ನಿ ಡಿಯೋಲ್ಗೆ ಕೊಕ್, ಯುವರಾಜ್ಗೆ ಮಣೆ..!
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಇಷ್ಟು ದಿನ ಕ್ರಿಕೆಟ್ ಅಂಗಳಕ್ಕೆ ಮಾತ್ರ ಸೀಮಿತವಾಗಿದ್ದ ಯುವರಾಜ್, ಇದೀಗ ಚುನಾವಣಾ ಕಣಕ್ಕೆ ಧುಮುಕಲು ಮುಂದಾಗಿದ್ದಾರೆ. ಹಾಗಾದ್ರೆ, ಯುವರಾಜ್ ಎಲ್ಲಿ ಎಲೆಕ್ಷನ್ಗೆ ನಿಲ್ತಾರೆ? ಯಾವ ಪಕ್ಷದಿಂದ ನಿಲ್ತಾರೆ?
ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಬಳಿಕ ಯುವರಾಜ್ ಸಿಂಗ್ ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ರು. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಿದ್ದು, ಅಲ್ಲಿ-ಇಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು ಬಿಟ್ರೆ, ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಎಲ್ಲದರಿಂದ ದೂರವೇ ಉಳಿದಿದ್ದ ಯುವರಾಜ್ ಸಿಂಗ್, ಇದೀಗ ಸೈಲೆಂಟಾಗೇ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾದ ಯುವರಾಜ್ ಸಿಂಗ್
ದೇಶದೆಲ್ಲೆಡೆ ಸದ್ದಿಲ್ಲದೇ ಲೋಕಸಭಾ ಚುನಾವಣೆಯ ಕಾವು ಜೋರಾಗ್ತಿದೆ. ಚುನಾವಣಾ ಚದುರಂಗದಾಟಕ್ಕೆ ರಾಜಕೀಯ ಪಕ್ಷಗಳು ಸಿದ್ಧತೆಯನ್ನ ಆರಂಭಸಿವೆ. ತೆರೆಯ ಹಿಂದಿನ ಕಸರತ್ತುಗಳಂತೂ ಜೋರಾಗಿದ್ದು, ಈ ಚುನಾವಣೆಯ ಬಿಸಿ ಇದೀಗ ಕ್ರಿಕೆಟ್ ಲೋಕಕ್ಕೂ ತಟ್ಟಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚುನಾವಣಾ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ.
ಲೋಕಸಭಾ ಚುನಾವಣಾ ಅಖಾಡಕ್ಕೆ ಯುವರಾಜ್ ಎಂಟ್ರಿ..!
ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮುಂದಾಗಿದ್ದಾರೆ. ಈಗಾಗಲೇ ಯುವರಾಜ್ ಸಿಂಗ್, ಪಕ್ಷವೊಂದರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಬಹುತೇಕ ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನೂ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೇನಿದ್ರೂ, ಚುನಾವಣಾ ಅಖಾಡಕ್ಕೆ ಧುಮುಕುವುದೊಂದೆ ಬಾಕಿ ಅನ್ನೋದು ಮೂಲದ ಮಾಹಿತಿಯಾಗಿದೆ.
ಕೇಸರಿ ಪಾಳಯ ಸೇರಲಿದ್ದಾರಾ ಯುವರಾಜ್ ಸಿಂಗ್..?
ಬಹುತೇಕ ಯುವರಾಜ್ ಸಿಂಗ್ ಭಾರತೀಯ ಜನತಾ ಪಕ್ಷವನ್ನ ಸೇರೋದು ಕನ್ಫರ್ಮ್ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನ ತಾಯಿಯೊಂದಿಗೆ ಯುವರಾಜ್ ಸಿಂಗ್ ಭೇಟಿಯಾಗಿದ್ರು. ಈ ಭೇಟಿಯ ವೇಳೆಯಲ್ಲೇ ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಟಿಕೆಟ್ ನೀಡುವ ಬಗ್ಗೆ ಗಡ್ಕರಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಸನ್ನಿ ಡಿಯೋಲ್ಗೆ ಕೊಕ್, ಯುವರಾಜ್ಗೆ ಮಣೆ..!
ಬಹುತೇಕ ಯುವರಾಜ್ ಸಿಂಗ್ ಕಣಕ್ಕಿಳಿಯೋ ಕ್ಷೇತ್ರವೂ ಫೈನಲ್ ಆಗಿದೆ. ಪಂಜಾಬ್ನ ಗುರುದಾಸ್ಪುರ ಕ್ಷೇತ್ರದಿಂದ ಯುವರಾಜ್ ಸಿಂಗ್ ಕಣಕ್ಕಿಳಿಯೋ ಸಾಧ್ಯತೆಯಿದೆ. ಹಾಲಿ ಈ ಕ್ಷೇತ್ರವನ್ನ ಸನ್ನಿ ಡಿಯೋಲ್ ಪ್ರತಿನಿಧಿಸ್ತಾ ಇದ್ದಾರೆ. ಆದ್ರೆ, ಕ್ಷೇತ್ರದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರದ ಸನ್ನಿ ಡಿಯೋಲ್, ಲೋಕಸಭಾ ಕಲಾಪಗಳಲ್ಲೂ ಭಾಗವಹಿಸ್ತಾ ಇಲ್ಲ. ಕೆಲ ದಿನಗಳ ಹಿಂದಷ್ಟೇ ಸನ್ನಿ ಡಿಯೋಲ್ ಕೂಡ ನಾನು ರಾಜಕೀಯಕ್ಕೆ ಫಿಟ್ ಅಲ್ಲ ಎಂದು ಹೇಳಿದ್ರು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನ ಬದಲಿಸುವ ಲೆಕ್ಕಾಚಾರದಲ್ಲಿದ್ದು, ಬಹುತೇಕ ಯುವರಾಜ್ ಟಿಕೆಟ್ ಸಿಗಲಿದೆ ಎನ್ನಲಾಗ್ತಿದೆ.
ಯುವರಾಜ್ ಸಿಂಗ್ ಮೇಲ್ಯಾಕೆ ಬಿಜೆಪಿ ಕಣ್ಣು..?
ಯುವರಾಜ್ ಸಿಂಗ್ಗೆ ಟಿಕೆಟ್ ನೀಡಲು ಭಾರತೀಯ ಜನತಾ ಪಾರ್ಟಿ ಆಸಕ್ತಿ ತೋರಿರೋದ್ರ ಹಿಂದೆ ಕಾರಣಗಳು ಹಲವಿವೆ. ಹೊಸ ಹಾಗೂ ಯುವ ಮುಖವನ್ನಿಟ್ಟುಕೊಂಡು ಅಖಾಡಕ್ಕೆ ಇಳಿದರೆ ಸಕ್ಸಸ್ ಸಿಗುತ್ತೆ ಅನ್ನೋದು ಬಿಜೆಪಿಯ ಮೊದಲ ಲೆಕ್ಕಾಚಾರ. ಕ್ರಿಕೆಟ್ನಿಂದ ವಿಶ್ವಾದ್ಯಂತ ಪ್ರಸಿದ್ಧಿಯನ್ನ ಪಡೆದಿರೋ ಯುವರಾಜ್ ಈಗಲೂ ಯಂಗ್ಸ್ಟರ್ಗಳ ಫೇವರಿಟ್ ಆಗಿದ್ದಾರೆ. ಇದಲ್ಲದೇ ಕ್ಯಾನ್ಸರ್ ಗೆದ್ದ ಕಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ. ಯುವಿಯ ಆಟ, ಹೋರಾಟ ಇಂದಿಗೂ ಜನಮಾನಸದಲ್ಲಿ ಉಳಿದಿದ್ದು, ಹೀಗಾಗಿಯೇ ಮಣೆ ಹಾಕಲು ಬಿಜೆಪಿ ಮುಂದಾಗಿದೆ.
ಗುರಾದಾಸ್ಪುರ ಕ್ಷೇತ್ರ ಹೇಳಿ ಕೇಳಿ ಸೆಲಬ್ರಿಟಿಗಳ ಪಾಲಿನ ಅದೃಷ್ಟದ ಕ್ಷೇತ್ರವಾಗಿದೆ. ಈ ಹಿಂದೆ ನಟ ವಿನೋದ್ ಖನ್ನಾ1998ರಿಂದ 2014ರವರೆಗೆ 4 ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿದ್ದರು. ಆ ಬಳಿಕ ಸನ್ನಿ ಡಿಯೋಲ್ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇದೀಗ ಇದೇ ಕ್ಷೇತ್ರದಲ್ಲಿ ಯುವರಾಜ್ ಸಿಂಗ್ ಅದೃಷ್ಟ ಪರೀಕ್ಷೆಗೆ ಮುಂದಾಗ್ತಾರೆ ಎನ್ನಲಾಗಿದ್ದು, ಮತದಾರನ ನಿರ್ಧಾರ ಏನಿರುತ್ತೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ