ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಗಡಿಯಲ್ಲಿ ಕಾಳಗ
ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ನಕ್ಸಲ್ ಕಮಾಂಡರ್ DVCM ಲಕ್ಷ್ಮಣ್ ಅತ್ರಮ್ ಎನ್ಕೌಂಟರ್
ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಕ್ಸಲರ ಮಧ್ಯೆ ಭಾರೀ ಗುಂಡಿನ ಕಾಳಗ ನಡೆದಿದೆ. ಗನ್ಫೈಟ್ನಲ್ಲಿ ಒಟ್ಟು 12 ನಕ್ಸಲರನ್ನು ಎನ್ಕೌಂಟರ್ ಮಾಡಲಾಗಿದೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗುಂಡಿನ ಕಾಳಗ ನಡೆದಿದೆ. ನಿನ್ನೆ ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಶುರುವಾಗಿತ್ತು. C60 ಕಾಮಾಂಡೋ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಛತ್ತೀಸ್ಗಢ ಗಡಿಯ ವಂಡೊಲಿ ಗ್ರಾಮದಲ್ಲಿ 12-15 ನಕ್ಸಲರು ಅಡಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರುವಾಗಿತ್ತು.
ಇದನ್ನೂ ಓದಿ:ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿ ಯು-ಟರ್ನ್ ಹೊಡೆದ ಸಿದ್ದು ಸರ್ಕಾರ.. ಭಾರೀ ಆಕ್ರೋಶ.. ಏನಿದು ಗೊಂದಲ..?
ಮಧ್ಯಾಹ್ನದ ವೇಳೆಗೆ ಗುಂಡಿನ ಕಾಳಗ ಜೋರಾಗಿದ್ದು, ಸತತ 6 ಗಂಟೆಗಳ ಕಾಲ ಕೂಂಬಿಂಗ್ ನಡೆದಿತ್ತು. ಸಂಜೆ ವೇಳೆಗೆ 12 ನಕ್ಸಲರ ಮೃತದೇಹಗಳು ಸಿಕ್ಕಿವೆ. ಅದೇ ಜಾಗದಲ್ಲಿ ನಕ್ಸಲರು ಇಟ್ಕೊಂಡಿದ್ದ 7 ಅಟೋಮ್ಯಾಟಿಕ್ ವೆಪನ್ಸ್, ಮೂರು AK-47, ಎರಡು INSAS ರೈಫಲ್ಸ್ ಸೇರಿದಂತೆ ಅನೇಕ ಅಸ್ತ್ರಗಳನ್ನು ಸೀಜ್ ಮಾಡಲಾಗಿದೆ. ನಕ್ಸಲ್ ಕಮಾಂಡರ್ DVCM ಲಕ್ಷ್ಮಣ್ ಅತ್ರಮ್, ವಿಶಾಲ್ ಅತ್ರಮ್ನ ಹತ್ಯೆಯಾಗಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ.. ಭಾರತದ ಪಂದ್ಯಗಳು ಈ ದೇಶದಲ್ಲಿ ನಡೆಯಲಿವೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಗಡಿಯಲ್ಲಿ ಕಾಳಗ
ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ನಕ್ಸಲ್ ಕಮಾಂಡರ್ DVCM ಲಕ್ಷ್ಮಣ್ ಅತ್ರಮ್ ಎನ್ಕೌಂಟರ್
ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಕ್ಸಲರ ಮಧ್ಯೆ ಭಾರೀ ಗುಂಡಿನ ಕಾಳಗ ನಡೆದಿದೆ. ಗನ್ಫೈಟ್ನಲ್ಲಿ ಒಟ್ಟು 12 ನಕ್ಸಲರನ್ನು ಎನ್ಕೌಂಟರ್ ಮಾಡಲಾಗಿದೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗುಂಡಿನ ಕಾಳಗ ನಡೆದಿದೆ. ನಿನ್ನೆ ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಶುರುವಾಗಿತ್ತು. C60 ಕಾಮಾಂಡೋ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಛತ್ತೀಸ್ಗಢ ಗಡಿಯ ವಂಡೊಲಿ ಗ್ರಾಮದಲ್ಲಿ 12-15 ನಕ್ಸಲರು ಅಡಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರುವಾಗಿತ್ತು.
ಇದನ್ನೂ ಓದಿ:ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿ ಯು-ಟರ್ನ್ ಹೊಡೆದ ಸಿದ್ದು ಸರ್ಕಾರ.. ಭಾರೀ ಆಕ್ರೋಶ.. ಏನಿದು ಗೊಂದಲ..?
ಮಧ್ಯಾಹ್ನದ ವೇಳೆಗೆ ಗುಂಡಿನ ಕಾಳಗ ಜೋರಾಗಿದ್ದು, ಸತತ 6 ಗಂಟೆಗಳ ಕಾಲ ಕೂಂಬಿಂಗ್ ನಡೆದಿತ್ತು. ಸಂಜೆ ವೇಳೆಗೆ 12 ನಕ್ಸಲರ ಮೃತದೇಹಗಳು ಸಿಕ್ಕಿವೆ. ಅದೇ ಜಾಗದಲ್ಲಿ ನಕ್ಸಲರು ಇಟ್ಕೊಂಡಿದ್ದ 7 ಅಟೋಮ್ಯಾಟಿಕ್ ವೆಪನ್ಸ್, ಮೂರು AK-47, ಎರಡು INSAS ರೈಫಲ್ಸ್ ಸೇರಿದಂತೆ ಅನೇಕ ಅಸ್ತ್ರಗಳನ್ನು ಸೀಜ್ ಮಾಡಲಾಗಿದೆ. ನಕ್ಸಲ್ ಕಮಾಂಡರ್ DVCM ಲಕ್ಷ್ಮಣ್ ಅತ್ರಮ್, ವಿಶಾಲ್ ಅತ್ರಮ್ನ ಹತ್ಯೆಯಾಗಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ.. ಭಾರತದ ಪಂದ್ಯಗಳು ಈ ದೇಶದಲ್ಲಿ ನಡೆಯಲಿವೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ