newsfirstkannada.com

ತವರು ಮನೆಗೆ ಹೋಗಿದ್ದ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಗಂಡ; ಕಾರಣವೇನು?

Share :

Published March 28, 2024 at 7:45pm

    ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ

    ಪತ್ನಿಯನ್ನು ಕೊಲೆ ಮಾಡಿ ಬಾಗಿಲು ಲಾಕ್ ಮಾಡಿದ ಪತಿರಾಯ

    ಸುಖಾ ಸುಮ್ಮನೆ ಪತ್ನಿ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದ ಗಂಡ

ಬೆಂಗಳೂರು: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಯತ್ನಿಸಿರೋ ಭಯಾನಕ ಘಟನೆ ಜಿಗಣಿ ಟೌನ್​ನಲ್ಲಿ ನಡೆದಿದೆ. ಅರ್ಬಿಯಾ ತಾಜ್ (24) ಮೃತ ಮಹಿಳೆ. ಮುಬಾರಕ್ (28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ.

ಇದನ್ನೂ ಓದಿ: ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಮೃತ ಅರ್ಬಿಯಾ ತಾಜ್ ಗಂಡನ ಕಿರುಕುಳದಿಂದ ಬೇಸತ್ತಿದ್ದಳಂತೆ. ಹೀಗಾಗಿ ಕೆಲ ತಿಂಗಳ ಹಿಂದೆ ತವರು ಮನೆಗೆ ವಾಪಸ್​​ ಆಗಿದ್ದಳಂತೆ. ಹೀಗಾಗಿ ವಾರದ ಹಿಂದೆ ಪತ್ನಿ ಮನೆಗೆ ಪತಿ ಹೋಗಿ ವಾಪಸ್ ತನ್ನ ಜತೆ ಬರುವಂತೆ ಒತ್ತಾಯ ಮಾಡಿದ್ದನಂತೆ.

ಆದರೆ ಪತ್ನಿ ಗಂಡನ ಮನೆಗೆ ಬರೋದಿಲ್ಲ ಅಂತಾ ಹೇಳಿದ್ದಾಳಂತೆ. ಇಷ್ಟಕ್ಕೆ ಕೋಪಗೊಂಡ ಪತಿ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರ ಕೊಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯ ಕೂಗಾಟದ ಶಬ್ದ ಕೇಳಿದ ತಾಯಿ ಆಕೆಯ ನೆರವಿಗೆ ಧಾವಿಸಿದ್ದಾಳೆ. ಬಳಿಕ ಪತ್ನಿಯನ್ನು ಕೊಲೆ ಮಾಡಿ ಬಾಗಿಲು ಲಾಕ್ ಮಾಡಿ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆರೋಪಿ ಪತಿಯನ್ನು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳದ ಕೂಡಲೇ ಸ್ಥಳಕ್ಕೆ ಜಿಗಣಿ‌ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತವರು ಮನೆಗೆ ಹೋಗಿದ್ದ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಗಂಡ; ಕಾರಣವೇನು?

https://newsfirstlive.com/wp-content/uploads/2024/03/death-2024-03-28T193414.317.jpg

    ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ

    ಪತ್ನಿಯನ್ನು ಕೊಲೆ ಮಾಡಿ ಬಾಗಿಲು ಲಾಕ್ ಮಾಡಿದ ಪತಿರಾಯ

    ಸುಖಾ ಸುಮ್ಮನೆ ಪತ್ನಿ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದ ಗಂಡ

ಬೆಂಗಳೂರು: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಯತ್ನಿಸಿರೋ ಭಯಾನಕ ಘಟನೆ ಜಿಗಣಿ ಟೌನ್​ನಲ್ಲಿ ನಡೆದಿದೆ. ಅರ್ಬಿಯಾ ತಾಜ್ (24) ಮೃತ ಮಹಿಳೆ. ಮುಬಾರಕ್ (28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ.

ಇದನ್ನೂ ಓದಿ: ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಮೃತ ಅರ್ಬಿಯಾ ತಾಜ್ ಗಂಡನ ಕಿರುಕುಳದಿಂದ ಬೇಸತ್ತಿದ್ದಳಂತೆ. ಹೀಗಾಗಿ ಕೆಲ ತಿಂಗಳ ಹಿಂದೆ ತವರು ಮನೆಗೆ ವಾಪಸ್​​ ಆಗಿದ್ದಳಂತೆ. ಹೀಗಾಗಿ ವಾರದ ಹಿಂದೆ ಪತ್ನಿ ಮನೆಗೆ ಪತಿ ಹೋಗಿ ವಾಪಸ್ ತನ್ನ ಜತೆ ಬರುವಂತೆ ಒತ್ತಾಯ ಮಾಡಿದ್ದನಂತೆ.

ಆದರೆ ಪತ್ನಿ ಗಂಡನ ಮನೆಗೆ ಬರೋದಿಲ್ಲ ಅಂತಾ ಹೇಳಿದ್ದಾಳಂತೆ. ಇಷ್ಟಕ್ಕೆ ಕೋಪಗೊಂಡ ಪತಿ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರ ಕೊಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯ ಕೂಗಾಟದ ಶಬ್ದ ಕೇಳಿದ ತಾಯಿ ಆಕೆಯ ನೆರವಿಗೆ ಧಾವಿಸಿದ್ದಾಳೆ. ಬಳಿಕ ಪತ್ನಿಯನ್ನು ಕೊಲೆ ಮಾಡಿ ಬಾಗಿಲು ಲಾಕ್ ಮಾಡಿ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆರೋಪಿ ಪತಿಯನ್ನು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳದ ಕೂಡಲೇ ಸ್ಥಳಕ್ಕೆ ಜಿಗಣಿ‌ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More