newsfirstkannada.com

ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಪ್ರವೇಶಿಸಲು ಯತ್ನ.. ಮೂವರು ಅರೆಸ್ಟ್​.. ಎಲ್ಲಿಯವರು ಗೊತ್ತಾ?

ಹೊಸ ಸಂಸತ್​ ಭವನ

Share :

Published June 7, 2024 at 11:05am

    ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರು

    ನಕಲಿ ಆಧಾರ್​ ಚೀಟಿ ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನ

    ಭಾರತೀಯ ದಂಡ ಸಂಹಿತೆ ಸೆಕ್ಷನ್​ ಅಡಿಯಲ್ಲಿ ಮೂವರ ಬಂಧನ

ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರನ್ನು ಸಿಐಎಸ್​ಎಫ್​ ಯೋಧರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತರನ್ನು ಖಾಸಿಂ, ಮೋನಿಸ್​, ಸೋಯೆಬ್​ ಎಂದು ಗುರುತಿಸಲಾಗಿದೆ.

ಸೋಯೆಬ್​ ಗುರುತಿನ ಚೀಟಿಯನ್ನು ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ್ದಾನೆ. ಈತ ಉತ್ತರದ ಪ್ರದೇಶದ ಹಾಪುರ್​ ನಿವಾಸಿ ಎಂದು ಗುರುತಿನ ಚೀಟಿಯಲ್ಲಿ ನಮೂದಿಸಿ ಸಂಸತ್​ ಪ್ರವೇಶಿಸಲು ಮುಂದಾಗಿದ್ದಾನೆ. ಸದ್ಯ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ ಅಡಿಯಲ್ಲಿ ಬಂಧಿಸಲಾಗಿದೆ.

ಬಂಧಿತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 419, 465,468, 120ಬಿ ಸೆಕ್ಷನ್​ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ. ಮೂವರ ನಕಲಿ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು

ಕಳೆದ ವರ್ಷ ಡಿಸೆಂಬರ್​ನಲ್ಲಿ ಮೈಸೂರು ಮಾಜಿ ಸಂಸದರಾದ ಪ್ರತಾಪ್​ ಸಿಂಹ ಅವರಿಂದ ಅನುಮತಿ ಪಡೆದ ಆರು ವಿದ್ಯಾರ್ಥಿಗಳು ಸಂಸತ್ ಪ್ರವೇಶಿಸಿದ್ದರು. ಸಂಸತ್​ನಲ್ಲಿ ಹೊಗೆ ಡಬ್ಬಿ ಹಚ್ಚಿದ್ದರು. ಈ ಘಟನೆಯಲ್ಲಿ ಮೈಸೂರು ಮೂಲದ ವ್ಯಕ್ತಿಯೂ ಇದ್ದನು. ಇದೀಗ ಅಂತಹದೇ ಘಟನೆ ಎಂಬಂತೆ ನಕಲಿ ಗುರುತಿನ ಚೀಟಿ ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಪ್ರವೇಶಿಸಲು ಯತ್ನ.. ಮೂವರು ಅರೆಸ್ಟ್​.. ಎಲ್ಲಿಯವರು ಗೊತ್ತಾ?

https://newsfirstlive.com/wp-content/uploads/2024/06/vidhana-parishat.jpg

    ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರು

    ನಕಲಿ ಆಧಾರ್​ ಚೀಟಿ ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನ

    ಭಾರತೀಯ ದಂಡ ಸಂಹಿತೆ ಸೆಕ್ಷನ್​ ಅಡಿಯಲ್ಲಿ ಮೂವರ ಬಂಧನ

ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರನ್ನು ಸಿಐಎಸ್​ಎಫ್​ ಯೋಧರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತರನ್ನು ಖಾಸಿಂ, ಮೋನಿಸ್​, ಸೋಯೆಬ್​ ಎಂದು ಗುರುತಿಸಲಾಗಿದೆ.

ಸೋಯೆಬ್​ ಗುರುತಿನ ಚೀಟಿಯನ್ನು ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ್ದಾನೆ. ಈತ ಉತ್ತರದ ಪ್ರದೇಶದ ಹಾಪುರ್​ ನಿವಾಸಿ ಎಂದು ಗುರುತಿನ ಚೀಟಿಯಲ್ಲಿ ನಮೂದಿಸಿ ಸಂಸತ್​ ಪ್ರವೇಶಿಸಲು ಮುಂದಾಗಿದ್ದಾನೆ. ಸದ್ಯ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ ಅಡಿಯಲ್ಲಿ ಬಂಧಿಸಲಾಗಿದೆ.

ಬಂಧಿತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 419, 465,468, 120ಬಿ ಸೆಕ್ಷನ್​ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ. ಮೂವರ ನಕಲಿ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು

ಕಳೆದ ವರ್ಷ ಡಿಸೆಂಬರ್​ನಲ್ಲಿ ಮೈಸೂರು ಮಾಜಿ ಸಂಸದರಾದ ಪ್ರತಾಪ್​ ಸಿಂಹ ಅವರಿಂದ ಅನುಮತಿ ಪಡೆದ ಆರು ವಿದ್ಯಾರ್ಥಿಗಳು ಸಂಸತ್ ಪ್ರವೇಶಿಸಿದ್ದರು. ಸಂಸತ್​ನಲ್ಲಿ ಹೊಗೆ ಡಬ್ಬಿ ಹಚ್ಚಿದ್ದರು. ಈ ಘಟನೆಯಲ್ಲಿ ಮೈಸೂರು ಮೂಲದ ವ್ಯಕ್ತಿಯೂ ಇದ್ದನು. ಇದೀಗ ಅಂತಹದೇ ಘಟನೆ ಎಂಬಂತೆ ನಕಲಿ ಗುರುತಿನ ಚೀಟಿ ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More