ಘಟನೆಯಲ್ಲಿ ಮೂವರನ್ನು ರಕ್ಷಣೆ ಮಾಡಿರುವ SDRF ಟೀಮ್
ತುಂಬಿ ಹರಿಯುತ್ತಿದ್ದ ನದಿ ನೀರಲ್ಲಿ ಬೋಟ್ ಮುಳುಗಿದ್ದಕ್ಕೆ ಸಾವು
4 ಸಾವು, ಮೂವರ ರಕ್ಷಣೆ, ನಾಪತ್ತೆ ಆದವರಿಗಾಗಿ ಹುಡುಕಾಟ
ಶ್ರೀನಗರ: ಜಮ್ಮುಕಾಶ್ಮೀರದ ಗಂಡ್ಬಾಲ್ ನೌಗಾಮ್ ಪ್ರದೇಶ ಬಳಿಯ ಝೀಲಂ ನದಿ ನೀರಿನಲ್ಲಿ ಬೋಟ್ವೊಂದು ಮುಳುಗಿ ನಾಲ್ವರು ಸಾವನ್ನಪ್ಪಿದ್ದು ಇನ್ನು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಬೋಟ್ ಮುಳುಗಿ ಮೃತಪಟ್ಟವರನ್ನು ಫಿರ್ದೌಸಾ (30), ರಜಿಯಾ (18), ಶಬೀರ್ (23) ಮತ್ತು ಗುಲ್ಜಾರ್ (30) ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯಲ್ಲಿ ಮೂವರು ರಕ್ಷಿಸಲ್ಪಟ್ಟಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲಾ-ಕಾಲೇಜು ಹಾಗೂ ಕೆಲಸದ ನಿಮಿತ್ತ ಬೋಟ್ ಮೂಲಕ ನದಿ ದಾಟಬೇಕಾದರೆ ಈ ಅವಘಡ ಸಂಭವಿಸಿದೆ. ನೀರಿನಲ್ಲಿ ಬಿದ್ದವರಿಗಾಗಿ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
ಇನ್ನು ಮಾಹಿತಿ ತಿಳಿದು ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಎಸ್ಡಿಆರ್ಎಫ್ ನದಿ ನೀರಿನಲ್ಲಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸಿದೆ. ಬೋಟ್ನಲ್ಲಿ ನೀರಿಗೆ ಇಳಿದಿರುವ ಸಿಬ್ಬಂದಿ ಒಂದು ಕಡೆಯಿಂದ ಹುಡುಕುತ್ತಿದ್ದಾರೆ. ಕಾಣೆಯಾದವರ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು ತೀವ್ರ ಆತಂಕ ವ್ಯಕ್ತಪಡಿಸಿ ಕಣ್ಣೀರು ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಧೋನಿ ಬ್ಯಾಟಿಂಗ್ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್.. ಮಹಿ ಸಿಕ್ಸ್ಗೆ ಕರೀನಾ, ನೇಹಾ ಫುಲ್ ಶಾಕ್
#SadNews🚨
4 people died and 3 injured when a boat capsized in Jhelum river in #Srinagar,Jammu and Kashmir.
Rescue operation is reported to be going on.#Srinagar#batwara#accident #श्रीनगर #JammuKashmir pic.twitter.com/UnEflKZFcr— Dr R.Tripathi. (@Vairagi2288) April 16, 2024
ಇದನ್ನೂ ಓದಿ: ಪ್ರೇಯಸಿ ಸಿಕ್ಕಿಲ್ಲವೆಂದು ಹೆಣ್ಮಕ್ಕಳೇ ಟಾರ್ಗೆಟ್; ಚೂರಿ ಚುಚ್ಚಿ 5 ಮಹಿಳೆಯರ ಬಲಿ ಪಡೆದ ಸೈಕೋ!
ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಝೀಲಂ ನದಿಗೆ ಹಲವು ಕಡೆಯಿಂದ ಭಾರೀ ಮಟ್ಟದಲ್ಲಿ ನೀರು ಹರಿದು ಬಂದು ತುಂಬಿದ್ದರಿಂದ ನೀರಿನ ಮಟ್ಟ ಹೆಚ್ಚಳವಾಗಿದೆ. ಭಾರೀ ಮಳೆಯಿಂದಾಗಿ ಖನ್ಯಾರ್, ಬಾಬಾಡೆಂಬ್, ನೌಹಟ್ಟಾ ಸೇರಿದಂತೆ ಡೌನ್ಟೌನ್ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತವಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಘಟನೆಯಲ್ಲಿ ಮೂವರನ್ನು ರಕ್ಷಣೆ ಮಾಡಿರುವ SDRF ಟೀಮ್
ತುಂಬಿ ಹರಿಯುತ್ತಿದ್ದ ನದಿ ನೀರಲ್ಲಿ ಬೋಟ್ ಮುಳುಗಿದ್ದಕ್ಕೆ ಸಾವು
4 ಸಾವು, ಮೂವರ ರಕ್ಷಣೆ, ನಾಪತ್ತೆ ಆದವರಿಗಾಗಿ ಹುಡುಕಾಟ
ಶ್ರೀನಗರ: ಜಮ್ಮುಕಾಶ್ಮೀರದ ಗಂಡ್ಬಾಲ್ ನೌಗಾಮ್ ಪ್ರದೇಶ ಬಳಿಯ ಝೀಲಂ ನದಿ ನೀರಿನಲ್ಲಿ ಬೋಟ್ವೊಂದು ಮುಳುಗಿ ನಾಲ್ವರು ಸಾವನ್ನಪ್ಪಿದ್ದು ಇನ್ನು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಬೋಟ್ ಮುಳುಗಿ ಮೃತಪಟ್ಟವರನ್ನು ಫಿರ್ದೌಸಾ (30), ರಜಿಯಾ (18), ಶಬೀರ್ (23) ಮತ್ತು ಗುಲ್ಜಾರ್ (30) ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯಲ್ಲಿ ಮೂವರು ರಕ್ಷಿಸಲ್ಪಟ್ಟಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲಾ-ಕಾಲೇಜು ಹಾಗೂ ಕೆಲಸದ ನಿಮಿತ್ತ ಬೋಟ್ ಮೂಲಕ ನದಿ ದಾಟಬೇಕಾದರೆ ಈ ಅವಘಡ ಸಂಭವಿಸಿದೆ. ನೀರಿನಲ್ಲಿ ಬಿದ್ದವರಿಗಾಗಿ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
ಇನ್ನು ಮಾಹಿತಿ ತಿಳಿದು ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಎಸ್ಡಿಆರ್ಎಫ್ ನದಿ ನೀರಿನಲ್ಲಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸಿದೆ. ಬೋಟ್ನಲ್ಲಿ ನೀರಿಗೆ ಇಳಿದಿರುವ ಸಿಬ್ಬಂದಿ ಒಂದು ಕಡೆಯಿಂದ ಹುಡುಕುತ್ತಿದ್ದಾರೆ. ಕಾಣೆಯಾದವರ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು ತೀವ್ರ ಆತಂಕ ವ್ಯಕ್ತಪಡಿಸಿ ಕಣ್ಣೀರು ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಧೋನಿ ಬ್ಯಾಟಿಂಗ್ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್.. ಮಹಿ ಸಿಕ್ಸ್ಗೆ ಕರೀನಾ, ನೇಹಾ ಫುಲ್ ಶಾಕ್
#SadNews🚨
4 people died and 3 injured when a boat capsized in Jhelum river in #Srinagar,Jammu and Kashmir.
Rescue operation is reported to be going on.#Srinagar#batwara#accident #श्रीनगर #JammuKashmir pic.twitter.com/UnEflKZFcr— Dr R.Tripathi. (@Vairagi2288) April 16, 2024
ಇದನ್ನೂ ಓದಿ: ಪ್ರೇಯಸಿ ಸಿಕ್ಕಿಲ್ಲವೆಂದು ಹೆಣ್ಮಕ್ಕಳೇ ಟಾರ್ಗೆಟ್; ಚೂರಿ ಚುಚ್ಚಿ 5 ಮಹಿಳೆಯರ ಬಲಿ ಪಡೆದ ಸೈಕೋ!
ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಝೀಲಂ ನದಿಗೆ ಹಲವು ಕಡೆಯಿಂದ ಭಾರೀ ಮಟ್ಟದಲ್ಲಿ ನೀರು ಹರಿದು ಬಂದು ತುಂಬಿದ್ದರಿಂದ ನೀರಿನ ಮಟ್ಟ ಹೆಚ್ಚಳವಾಗಿದೆ. ಭಾರೀ ಮಳೆಯಿಂದಾಗಿ ಖನ್ಯಾರ್, ಬಾಬಾಡೆಂಬ್, ನೌಹಟ್ಟಾ ಸೇರಿದಂತೆ ಡೌನ್ಟೌನ್ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತವಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ