newsfirstkannada.com

ಲಡಾಖ್​​ನಲ್ಲಿ ಭಾರೀ ಅನಾಹುತ.. ಐವರು ಯೋಧರ ದಾರುಣ ಸಾವು.. ಆಗಿದ್ದೇನು..?

Share :

Published June 29, 2024 at 12:58pm

    ನೀರಿನಲ್ಲಿ ಟ್ಯಾಂಕರ್ ಮುಳುಗಲು ಪ್ರಮುಖ ಕಾರಣವೇನು?

    ನದಿಯಲ್ಲಿ ಮೃತದೇಹಗಳಿಗಾಗಿ ಸೇನೆಯಿಂದ ಹುಡುಕಾಟ

    ರಾತ್ರಿ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಯೋಧರು

ನವದೆಹಲಿ: ಭಾರತೀಯ ಸೇನೆ ಅಭ್ಯಾಸ ನಡೆಸುವಾಗ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಲೇಹ್‌ನ ದೌಲತ್ ಬೇಗ್ ಓಲ್ಡಿ ಬಳಿ ನಡೆದಿದೆ.

ಸೇನೆಯ T-72 ಟ್ಯಾಂಕ್​​ನಲ್ಲಿ ಐವರು ಯೋಧರು ರಾತ್ರಿ 1 ಗಂಟೆ ಸುಮಾರಿಗೆ ಬೋಧಿ ನದಿಯನ್ನು ದಾಟುತ್ತಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಸೇನೆಯ ಟ್ಯಾಂಕ್​ನೊಂದಿಗೆ ಐವರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

ಟ್ಯಾಂಕ್ ಅಭ್ಯಾಸದ ವೇಳೆ ಈ ಅಪಘಾತ ಸಂಭವಿಸಿದೆ. T-72 ಟ್ಯಾಂಕ್‌ನಲ್ಲಿ ಐವರು ಸೈನಿಕರನ್ನ ಬಿಟ್ಟರೆ ಮತ್ತೆ ಯಾರೂ ಇರಲಿಲ್ಲ. ರಾತ್ರಿ ವೇಳೆ ನದಿ ದಾಟುತ್ತಿರುವಾಗ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ಯೋಧರಿಗಾಗಿ ಶೋಧ ನಡೆಸಲಾಗುತ್ತಿದೆ ಸೇನೆಯ ಅಧಿಕಾರಿಗಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಡಾಖ್​​ನಲ್ಲಿ ಭಾರೀ ಅನಾಹುತ.. ಐವರು ಯೋಧರ ದಾರುಣ ಸಾವು.. ಆಗಿದ್ದೇನು..?

https://newsfirstlive.com/wp-content/uploads/2024/06/IND_ARMY.jpg

    ನೀರಿನಲ್ಲಿ ಟ್ಯಾಂಕರ್ ಮುಳುಗಲು ಪ್ರಮುಖ ಕಾರಣವೇನು?

    ನದಿಯಲ್ಲಿ ಮೃತದೇಹಗಳಿಗಾಗಿ ಸೇನೆಯಿಂದ ಹುಡುಕಾಟ

    ರಾತ್ರಿ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಯೋಧರು

ನವದೆಹಲಿ: ಭಾರತೀಯ ಸೇನೆ ಅಭ್ಯಾಸ ನಡೆಸುವಾಗ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಲೇಹ್‌ನ ದೌಲತ್ ಬೇಗ್ ಓಲ್ಡಿ ಬಳಿ ನಡೆದಿದೆ.

ಸೇನೆಯ T-72 ಟ್ಯಾಂಕ್​​ನಲ್ಲಿ ಐವರು ಯೋಧರು ರಾತ್ರಿ 1 ಗಂಟೆ ಸುಮಾರಿಗೆ ಬೋಧಿ ನದಿಯನ್ನು ದಾಟುತ್ತಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಸೇನೆಯ ಟ್ಯಾಂಕ್​ನೊಂದಿಗೆ ಐವರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

ಟ್ಯಾಂಕ್ ಅಭ್ಯಾಸದ ವೇಳೆ ಈ ಅಪಘಾತ ಸಂಭವಿಸಿದೆ. T-72 ಟ್ಯಾಂಕ್‌ನಲ್ಲಿ ಐವರು ಸೈನಿಕರನ್ನ ಬಿಟ್ಟರೆ ಮತ್ತೆ ಯಾರೂ ಇರಲಿಲ್ಲ. ರಾತ್ರಿ ವೇಳೆ ನದಿ ದಾಟುತ್ತಿರುವಾಗ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ಯೋಧರಿಗಾಗಿ ಶೋಧ ನಡೆಸಲಾಗುತ್ತಿದೆ ಸೇನೆಯ ಅಧಿಕಾರಿಗಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More