ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಲೆ ಕೇಸ್..!
ಪೊಲೀಸ್ ಮುಂದೆ ಐವರು ಆರೋಪಿಗಳು ಶರಣು
ಪರಪ್ಪನ ಅಗ್ರಹಾರ ಪೊಲೀಸರಿಗೆ ಸರೆಂಡರ್ ಆದ್ರು
ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮಹೇಶ್ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್ ಸೇರಿ ಐವರು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.
ಹೌದು, ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್, ವಾಲ್ಟರ್ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಇನ್ನು, A1 ಆರೋಪಿ ವಿಲ್ಸನ್ ಗಾರ್ಡನ್ ನಾಗ, A2 ಆರೋಪಿ ಡಬಲ್ ಮೀಟರ್ ಮೋಹನ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ತಂಡ ರಚನೆ
ಈ ಹಿಂದೆ ಡಿಸಿಪಿ ಸೌತ್-ಈಸ್ಟ್ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್ ಮೇಲೂ 2 ಕೊಲೆ ಸೇರಿ 11 ಕೇಸ್ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದರು.
ಏನಿದು ಕೇಸ್..?
ರೌಡಿ ಶೀಟರ್ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಕಾರಿಗೆ ಅಡ್ಡ ಹಾಕಿ ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಲೆ ಕೇಸ್..!
ಪೊಲೀಸ್ ಮುಂದೆ ಐವರು ಆರೋಪಿಗಳು ಶರಣು
ಪರಪ್ಪನ ಅಗ್ರಹಾರ ಪೊಲೀಸರಿಗೆ ಸರೆಂಡರ್ ಆದ್ರು
ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮಹೇಶ್ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್ ಸೇರಿ ಐವರು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.
ಹೌದು, ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್, ವಾಲ್ಟರ್ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಇನ್ನು, A1 ಆರೋಪಿ ವಿಲ್ಸನ್ ಗಾರ್ಡನ್ ನಾಗ, A2 ಆರೋಪಿ ಡಬಲ್ ಮೀಟರ್ ಮೋಹನ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ತಂಡ ರಚನೆ
ಈ ಹಿಂದೆ ಡಿಸಿಪಿ ಸೌತ್-ಈಸ್ಟ್ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್ ಮೇಲೂ 2 ಕೊಲೆ ಸೇರಿ 11 ಕೇಸ್ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದರು.
ಏನಿದು ಕೇಸ್..?
ರೌಡಿ ಶೀಟರ್ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಕಾರಿಗೆ ಅಡ್ಡ ಹಾಕಿ ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ