ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಆಗಮನ
ನಟ ದರ್ಶನ್ಗೆ ಸಾಥ್ ಕೊಟ್ಟ ಧನ್ವೀರ್, ವಿನೋದ್ ಪ್ರಭಾಕರ್
ನಟ ದರ್ಶನ್ ಕಂಡು ‘ಡಿ ಬಾಸ್’ ಎಂದು ಕೂಗುತ್ತಿರೋ ಫ್ಯಾನ್ಸ್
ಮಂಡ್ಯ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 75ನೇ ಜನ್ಮ ದಿನೋತ್ಸವ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ. ಪಾಂಡವಪುರ ತಾಲೂಕು ಕಚೇರಿಯಿಂದ ಪಾಂಡವ ಕ್ರೀಡಾಂಗಣದವರೆಗೆ ಮೆರವಣಿಗೆ ಸಾಗಿತ್ತು.
ಈ ವೇಳೆ ರೈತರ ಬಗೆಗಿನ ಕಾಟೇರ ಸಿನಿಮಾ ಸಕ್ಸಸ್ ಹಿನ್ನಲೆಯಲ್ಲಿ ಚಿತ್ರ ತಂಡಕ್ಕೆ ಸನ್ಮಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಈ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದರು.
ನಟ ದರ್ಶನ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಧನ್ವೀರ್, ವಿನೋದ್ ಪ್ರಭಾಕರ್, ಯಶಸ್ಸ್ ಸೂರ್ಯ ಸಾಥ್ ನೀಡಿದ್ದರು. ಇನ್ನೂ, ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಜಟಾಪಟಿ ನಡುವೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ. ಮೆರವಣಿಗೆ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೈತಸಂಘದಿಂದ ಬೃಹತ್ ಸಪೋಟಾ ಹಾರ ಸಮರ್ಪಣೆ ಮಾಡಲಾಯಿತು. ರೋಡ್ ಶೋ ಉದ್ದಕ್ಕೂ ಡಿ ಬಾಸ್.. ಡಿ ಬಾಸ್ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಆಗಮನ
ನಟ ದರ್ಶನ್ಗೆ ಸಾಥ್ ಕೊಟ್ಟ ಧನ್ವೀರ್, ವಿನೋದ್ ಪ್ರಭಾಕರ್
ನಟ ದರ್ಶನ್ ಕಂಡು ‘ಡಿ ಬಾಸ್’ ಎಂದು ಕೂಗುತ್ತಿರೋ ಫ್ಯಾನ್ಸ್
ಮಂಡ್ಯ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 75ನೇ ಜನ್ಮ ದಿನೋತ್ಸವ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ. ಪಾಂಡವಪುರ ತಾಲೂಕು ಕಚೇರಿಯಿಂದ ಪಾಂಡವ ಕ್ರೀಡಾಂಗಣದವರೆಗೆ ಮೆರವಣಿಗೆ ಸಾಗಿತ್ತು.
ಈ ವೇಳೆ ರೈತರ ಬಗೆಗಿನ ಕಾಟೇರ ಸಿನಿಮಾ ಸಕ್ಸಸ್ ಹಿನ್ನಲೆಯಲ್ಲಿ ಚಿತ್ರ ತಂಡಕ್ಕೆ ಸನ್ಮಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಈ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದರು.
ನಟ ದರ್ಶನ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಧನ್ವೀರ್, ವಿನೋದ್ ಪ್ರಭಾಕರ್, ಯಶಸ್ಸ್ ಸೂರ್ಯ ಸಾಥ್ ನೀಡಿದ್ದರು. ಇನ್ನೂ, ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಜಟಾಪಟಿ ನಡುವೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ. ಮೆರವಣಿಗೆ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೈತಸಂಘದಿಂದ ಬೃಹತ್ ಸಪೋಟಾ ಹಾರ ಸಮರ್ಪಣೆ ಮಾಡಲಾಯಿತು. ರೋಡ್ ಶೋ ಉದ್ದಕ್ಕೂ ಡಿ ಬಾಸ್.. ಡಿ ಬಾಸ್ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ