ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ ಎಂದ ಡಿ ಬಾಸ್
ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟ ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ಗೆ ಬಂಡೂರು ಕುರಿ ಗಿಫ್ಟ್ ಕೊಟ್ಟ ಮಹೇಂದ್ರ ಸಿಂಗ್
ಮೈಸೂರು: ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿಯನ್ನು ಹಾಡಿ ಹೊಗಳುವ ಮೂಲಕ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.
ಬನ್ನೂರು ಪಟ್ಟಣದಲ್ಲಿ ಹಳ್ಳಿಕಾರ್ ತಳಿ ಗೋದಾನ ಸಮಾರಂಭ ಭಾಗವಹಿಸಿದ್ದ ನಟ ದರ್ಶನ್ ರಾಜಸ್ಥಾನ ಮೂಲದ ಮಹೇಂದ್ರಸಿಂಗ್ ಕಾಳಪ್ಪ ಎಂಬವರನ್ನು ಹೊಗಳಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಅಲ್ಲಿ ಹುಟ್ಟಿದ್ದರು ಬನ್ನೂರಲ್ಲಿ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ನಾನೊಬ್ಬ ಅಪ್ಪಟ ಕನ್ನಡಿಗನೆಂದು ಹೇಳುತ್ತಾರೆ ಎಂದು ನಟ ದರ್ಶನ್ ಹೇಳಿದ್ದಾರೆ.
ಡಿ ಬಾಸ್ಗೆ ಕುರಿ ಗಿಫ್ಟ್
ಚಾಲೆಂಜಿಂಗ್ ಸ್ಟಾರ್ಗೆ ಮಹೇಂದ್ರಸಿಂಗ್ ಕಾಳಪ್ಪ ಬಂಡೂರು ಕುರಿ ಗಿಫ್ಟ್ ಕೊಟ್ಟಿದ್ದಾನೆ. ಸದಾ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಹೇಂದ್ರಸಿಂಗ್ ಬನ್ನೂರಿಗೆ ಬಂದು ತುಂಬಾ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ತಾನೊಬ್ಬ ಕನ್ನಡಿಗ ಅನ್ನೋದನ್ನ ಹೆಮ್ಮಯಿಂದ ಹೇಳ್ತಾರೆ. ರಾಜಸ್ಥಾನ ಮೂಲದ ಈ ವ್ಯಕ್ತಿಯ ಅಭಿಮಾನ ನೋಡಿ ನನಗೂ ಖುಷಿಯಾಗುತ್ತೆ ಎಂದು ಹೇಳುವ ಮೂಲಕ ಮಹೇಂದ್ರಸಿಂಗ್ ಅವರನ್ನು ಡಿ ಬಾಸ್ ಹಾಡಿಹೊಗಳಿದ್ದಾರೆ.
ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ
ದಯಮಾಡಿ ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಬೇಕು. ಈ ಹಳ್ಳಿಕಾರ್ ತಳಿಗಳು ಕನ್ನಡಿಗರದ್ದು ಅಂತಾ ಹೆಮ್ಮಿಯಿಂದ ಹೇಳಬಹುದು. ಉಚಿತವಾಗಿ ಕೊಟ್ಟರೆಂದು ಉದಾಸೀನ ಮಾಡಬೇಡಿ. ಈ ನಮ್ಮದೇ ನೆಲದ ಈ ತಳಿಯನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು ಎಂದು ದರ್ಶನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ ಎಂದ ಡಿ ಬಾಸ್
ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟ ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ಗೆ ಬಂಡೂರು ಕುರಿ ಗಿಫ್ಟ್ ಕೊಟ್ಟ ಮಹೇಂದ್ರ ಸಿಂಗ್
ಮೈಸೂರು: ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿಯನ್ನು ಹಾಡಿ ಹೊಗಳುವ ಮೂಲಕ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.
ಬನ್ನೂರು ಪಟ್ಟಣದಲ್ಲಿ ಹಳ್ಳಿಕಾರ್ ತಳಿ ಗೋದಾನ ಸಮಾರಂಭ ಭಾಗವಹಿಸಿದ್ದ ನಟ ದರ್ಶನ್ ರಾಜಸ್ಥಾನ ಮೂಲದ ಮಹೇಂದ್ರಸಿಂಗ್ ಕಾಳಪ್ಪ ಎಂಬವರನ್ನು ಹೊಗಳಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಅಲ್ಲಿ ಹುಟ್ಟಿದ್ದರು ಬನ್ನೂರಲ್ಲಿ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ನಾನೊಬ್ಬ ಅಪ್ಪಟ ಕನ್ನಡಿಗನೆಂದು ಹೇಳುತ್ತಾರೆ ಎಂದು ನಟ ದರ್ಶನ್ ಹೇಳಿದ್ದಾರೆ.
ಡಿ ಬಾಸ್ಗೆ ಕುರಿ ಗಿಫ್ಟ್
ಚಾಲೆಂಜಿಂಗ್ ಸ್ಟಾರ್ಗೆ ಮಹೇಂದ್ರಸಿಂಗ್ ಕಾಳಪ್ಪ ಬಂಡೂರು ಕುರಿ ಗಿಫ್ಟ್ ಕೊಟ್ಟಿದ್ದಾನೆ. ಸದಾ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಹೇಂದ್ರಸಿಂಗ್ ಬನ್ನೂರಿಗೆ ಬಂದು ತುಂಬಾ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ತಾನೊಬ್ಬ ಕನ್ನಡಿಗ ಅನ್ನೋದನ್ನ ಹೆಮ್ಮಯಿಂದ ಹೇಳ್ತಾರೆ. ರಾಜಸ್ಥಾನ ಮೂಲದ ಈ ವ್ಯಕ್ತಿಯ ಅಭಿಮಾನ ನೋಡಿ ನನಗೂ ಖುಷಿಯಾಗುತ್ತೆ ಎಂದು ಹೇಳುವ ಮೂಲಕ ಮಹೇಂದ್ರಸಿಂಗ್ ಅವರನ್ನು ಡಿ ಬಾಸ್ ಹಾಡಿಹೊಗಳಿದ್ದಾರೆ.
ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ
ದಯಮಾಡಿ ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಬೇಕು. ಈ ಹಳ್ಳಿಕಾರ್ ತಳಿಗಳು ಕನ್ನಡಿಗರದ್ದು ಅಂತಾ ಹೆಮ್ಮಿಯಿಂದ ಹೇಳಬಹುದು. ಉಚಿತವಾಗಿ ಕೊಟ್ಟರೆಂದು ಉದಾಸೀನ ಮಾಡಬೇಡಿ. ಈ ನಮ್ಮದೇ ನೆಲದ ಈ ತಳಿಯನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು ಎಂದು ದರ್ಶನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ