ಚಿಕ್ಕಬಾಣಾವರ-ನೆಲಮಂಗಲ ಮಧ್ಯೆ ನಡೆದ ಘಟನೆ
ಇಬ್ಬರು ಬೌದ್ಧ ಬಿಕ್ಕುಗಳು ಸಾವು, ಕಾರಣ ಇನ್ನೂ ನಿಗೂಢ
ಬೌದ್ಧ ಆಡಳಿತ ಮಂಡಳಿ ಸಂಪರ್ಕಿಸಿದ ಪೊಲೀಸರು
ಬೆಂಗಳೂರು: ಟ್ರೈನ್ನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ನಗರದ ಚಿಕ್ಕಬಾಣಾವರ-ನೆಲಮಂಗಲ ಮಧ್ಯೆ ನಡೆದಿದೆ.
25 ರಿಂದ 30 ವರ್ಷದ ಒಳಗಿನವರಾದ ಇಬ್ಬರು ಬೌದ್ಧ ಬಿಕ್ಕುಗಳು ಸಾವನ್ನಪ್ಪಿದ್ದಾರೆ. ಸದ್ಯ ಮೇಲ್ನೋಟಕ್ಕೆ ಈ ಇಬ್ಬರು ಟ್ರೈನ್ ಆಕ್ಸಿಡೆಂಟ್ನಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದ್ರೆ ಮೃತರ ಹೆಸರು, ವಿವರಗಳು ಏನು ಎಂಬುದು ಇನ್ನು ತಿಳಿದು ಬಂದಿಲ್ಲ.
ಹೀಗಾಗಿ ಪೊಲೀಸರು ಬೈಲುಕುಪ್ಪೆಯ ಬೌದ್ಧ ಆಡಳಿತ ಮಂಡಳಿಯನ್ನು ಸಂಪರ್ಕ ಮಾಡಿದ್ದಾರೆ. ಅಲ್ಲಿಂದ ಬೌದ್ಧ ಬಿಕ್ಕುಗಳು ಬಂದ ನಂತರವಷ್ಟೇ ಮೃತರ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯ ಈ ಬಗ್ಗೆ ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿಕ್ಕಬಾಣಾವರ-ನೆಲಮಂಗಲ ಮಧ್ಯೆ ನಡೆದ ಘಟನೆ
ಇಬ್ಬರು ಬೌದ್ಧ ಬಿಕ್ಕುಗಳು ಸಾವು, ಕಾರಣ ಇನ್ನೂ ನಿಗೂಢ
ಬೌದ್ಧ ಆಡಳಿತ ಮಂಡಳಿ ಸಂಪರ್ಕಿಸಿದ ಪೊಲೀಸರು
ಬೆಂಗಳೂರು: ಟ್ರೈನ್ನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ನಗರದ ಚಿಕ್ಕಬಾಣಾವರ-ನೆಲಮಂಗಲ ಮಧ್ಯೆ ನಡೆದಿದೆ.
25 ರಿಂದ 30 ವರ್ಷದ ಒಳಗಿನವರಾದ ಇಬ್ಬರು ಬೌದ್ಧ ಬಿಕ್ಕುಗಳು ಸಾವನ್ನಪ್ಪಿದ್ದಾರೆ. ಸದ್ಯ ಮೇಲ್ನೋಟಕ್ಕೆ ಈ ಇಬ್ಬರು ಟ್ರೈನ್ ಆಕ್ಸಿಡೆಂಟ್ನಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದ್ರೆ ಮೃತರ ಹೆಸರು, ವಿವರಗಳು ಏನು ಎಂಬುದು ಇನ್ನು ತಿಳಿದು ಬಂದಿಲ್ಲ.
ಹೀಗಾಗಿ ಪೊಲೀಸರು ಬೈಲುಕುಪ್ಪೆಯ ಬೌದ್ಧ ಆಡಳಿತ ಮಂಡಳಿಯನ್ನು ಸಂಪರ್ಕ ಮಾಡಿದ್ದಾರೆ. ಅಲ್ಲಿಂದ ಬೌದ್ಧ ಬಿಕ್ಕುಗಳು ಬಂದ ನಂತರವಷ್ಟೇ ಮೃತರ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯ ಈ ಬಗ್ಗೆ ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ