ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್ ಮುಕ್ತಾಯ
ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಶಿವರಾಮ್ನ ಖಡಕ್ ಸ್ಟೈಲ್, ಮಹತಿ ಬುದ್ಧಿವಂತಿಕೆ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಡೆಯಿಂದ ಅಭಿಮಾನಿಗಳಿಗೆ ಕಹಿಸುದ್ದಿ
ಇದು ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್ ಹಿಟ್ ಧಾರಾವಾಹಿ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್ ತಂಡದವರು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ವೊಂದನ್ನ ಕೊಟ್ಟಿದ್ದಾರೆ. ಅದುವೇ ಗಿಣಿರಾಮ ಸೀರಿಯಲ್ ಮುಕ್ತಾಯ. ಗಿಣಿರಾಮ ಸೀರಿಯಲ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು.
ಗಿಣಿರಾಮ ಸೀರಿಯಲ್ನ ಪಾತ್ರಧಾರಿಗಳು ಉತ್ತರ ಕಾರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದರು. ಹಾಗೂ ಅವರು ಧರಿಸುವ ಉಡುಪುಗಳಿಗೆ ಜನ ಮನಸೋತಿದ್ದರು. ಶಿವರಾಮ್ನ ಖಡಕ್ ಸ್ಟೈಲ್. ಮಹತಿಯ ಬುದ್ಧಿವಂತಿಕೆಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ಕಾಲ ಕ್ರಮೇಣ ಗಿಣಿರಾಮ ಧಾರಾವಾಹಿ ಸ್ಲಾಟ್ ಚೇಂಹ್ ಆಯ್ತು. ಆ ಕಾರಣವೇ ಸೀರಿಯಲ್ ನಿಧಾನವಾಗಿ ಅಭಿಮಾನಿಗಳಿಂದ ದೂರವಾಯ್ತು.
ಸ್ಲಾಟ್ ಚೇಂಜ್ ಆದ ಕಾರಣ ಸೀರಿಯಲ್ನಲ್ಲಿ ಕೆಲ ಬದಲಾವಣೆಗಳು ಆಗಿದ್ದರಿಂದ ಅಭಿಮಾನಿಗಳು ಸೀರಿಯಲ್ ನೋಡುವುದನ್ನು ಕಡಿಮೆ ಮಾಡಿದ್ದರು. ಕಾಲ ಕಳೆದಂತೆ ಗಿಣಿರಾಮ ಸೀರಿಯಲ್ ಟಿಆರ್ಪಿ ಕೂಡ ಕಡಿಮೆ ಆಗತೊಡಗಿತ್ತು. ಇದೆಲ್ಲರ ಕಾರಣದಿಂದಾಗಿ ಗಿಣಿರಾಮ ತನ್ನ ಕತೆಯನ್ನ ಮುಗಿಸ್ತಾ ಇದೆ. ಹೌದು ಕೊನೆಯ ವಾರದ ಎಪಿಸೋಡ್ಸ್ಗಳು ಕಲರ್ಸ್ ಕನ್ನಡದಲ್ಲಿ ಸದ್ಯ ಪ್ರಸಾರವಾಗ್ತಿದೆ. ಈ ವಾರದ ನಂತರ ಗಿಣಿರಾಮ ಧಾರಾವಾಹಿಯ ಕತೆಯು ವೀಕ್ಷಕರಿಗೆ ವಿದಾಯ ತಿಳಸಲಿದೆ.
ಸದ್ಯ ಗಿಣಿರಾಮ ಧಾರಾವಾಹಿಯ ಶೂಟಿಂಗ್ ಎಲ್ಲಾ ಪೂರ್ಣಗೊಂಡಿದ್ದು, ಕೊನೆಯ ಹಂತಹ ಸಂಚಿಕೆಗಳು ಪ್ರಸಾರಾವಾಗ್ತಿವೆ. ತನ್ನ ಕತೆಗೆ ಮಹಾ ಮುಕ್ತಾಯ ಆಡ್ತಿದೆ ಗಿಣಿರಾಮ ಸೀರಿಯಲ್. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್ ಮುಕ್ತಾಯ
ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಶಿವರಾಮ್ನ ಖಡಕ್ ಸ್ಟೈಲ್, ಮಹತಿ ಬುದ್ಧಿವಂತಿಕೆ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಡೆಯಿಂದ ಅಭಿಮಾನಿಗಳಿಗೆ ಕಹಿಸುದ್ದಿ
ಇದು ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್ ಹಿಟ್ ಧಾರಾವಾಹಿ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್ ತಂಡದವರು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ವೊಂದನ್ನ ಕೊಟ್ಟಿದ್ದಾರೆ. ಅದುವೇ ಗಿಣಿರಾಮ ಸೀರಿಯಲ್ ಮುಕ್ತಾಯ. ಗಿಣಿರಾಮ ಸೀರಿಯಲ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು.
ಗಿಣಿರಾಮ ಸೀರಿಯಲ್ನ ಪಾತ್ರಧಾರಿಗಳು ಉತ್ತರ ಕಾರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದರು. ಹಾಗೂ ಅವರು ಧರಿಸುವ ಉಡುಪುಗಳಿಗೆ ಜನ ಮನಸೋತಿದ್ದರು. ಶಿವರಾಮ್ನ ಖಡಕ್ ಸ್ಟೈಲ್. ಮಹತಿಯ ಬುದ್ಧಿವಂತಿಕೆಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ಕಾಲ ಕ್ರಮೇಣ ಗಿಣಿರಾಮ ಧಾರಾವಾಹಿ ಸ್ಲಾಟ್ ಚೇಂಹ್ ಆಯ್ತು. ಆ ಕಾರಣವೇ ಸೀರಿಯಲ್ ನಿಧಾನವಾಗಿ ಅಭಿಮಾನಿಗಳಿಂದ ದೂರವಾಯ್ತು.
ಸ್ಲಾಟ್ ಚೇಂಜ್ ಆದ ಕಾರಣ ಸೀರಿಯಲ್ನಲ್ಲಿ ಕೆಲ ಬದಲಾವಣೆಗಳು ಆಗಿದ್ದರಿಂದ ಅಭಿಮಾನಿಗಳು ಸೀರಿಯಲ್ ನೋಡುವುದನ್ನು ಕಡಿಮೆ ಮಾಡಿದ್ದರು. ಕಾಲ ಕಳೆದಂತೆ ಗಿಣಿರಾಮ ಸೀರಿಯಲ್ ಟಿಆರ್ಪಿ ಕೂಡ ಕಡಿಮೆ ಆಗತೊಡಗಿತ್ತು. ಇದೆಲ್ಲರ ಕಾರಣದಿಂದಾಗಿ ಗಿಣಿರಾಮ ತನ್ನ ಕತೆಯನ್ನ ಮುಗಿಸ್ತಾ ಇದೆ. ಹೌದು ಕೊನೆಯ ವಾರದ ಎಪಿಸೋಡ್ಸ್ಗಳು ಕಲರ್ಸ್ ಕನ್ನಡದಲ್ಲಿ ಸದ್ಯ ಪ್ರಸಾರವಾಗ್ತಿದೆ. ಈ ವಾರದ ನಂತರ ಗಿಣಿರಾಮ ಧಾರಾವಾಹಿಯ ಕತೆಯು ವೀಕ್ಷಕರಿಗೆ ವಿದಾಯ ತಿಳಸಲಿದೆ.
ಸದ್ಯ ಗಿಣಿರಾಮ ಧಾರಾವಾಹಿಯ ಶೂಟಿಂಗ್ ಎಲ್ಲಾ ಪೂರ್ಣಗೊಂಡಿದ್ದು, ಕೊನೆಯ ಹಂತಹ ಸಂಚಿಕೆಗಳು ಪ್ರಸಾರಾವಾಗ್ತಿವೆ. ತನ್ನ ಕತೆಗೆ ಮಹಾ ಮುಕ್ತಾಯ ಆಡ್ತಿದೆ ಗಿಣಿರಾಮ ಸೀರಿಯಲ್. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ