newsfirstkannada.com

×

ತಾಯಿಯಿಂದಲೇ ಮಗನ ಕೊಲೆ.. ಪೊಲೀಸ್ರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಹಂತಕಿ

Share :

Published January 10, 2024 at 10:22pm

    ಹೆತ್ತ ತಾಯಿಯಿಂದ ಹತ್ಯೆ.. ತಂದೆಯಿಂದ ಅಂತ್ಯಕ್ರಿಯೆ

    ಅಂತ್ಯಕ್ರಿಯೆ ವೇಳೆ ಕಣ್ಣೀರಾಕಿದ ತಂದೆ ವೆಂಕಟರಮಣ!

    ಭಾರದ ಮನಸ್ಸಲ್ಲೇ ಎತ್ತಿ ಆಡಿಸಿದ ಮಗನ ಅಂತ್ಯಕ್ರಿಯೆ!

ಬೆಂಗಳೂರು: ಹೆತ್ತವಳಿಂದಲೇ ಕೊಲೆಯಾದ ಪುಟ್ಟ ಕಂದಮ್ಮನ ಅಂತ್ಯಕ್ರಿಯೆ ಬೆಂಗಳೂರಿನ ಹರಿಶ್ಚಂದ್ರ ಘಾಟ್​ನಲ್ಲಿ ನೆರವೇರಿದೆ. ಭಾರವಾದ ಮನಸ್ಸಿನಲ್ಲೇ ತಂದೆಯೇ ಎತ್ತಿ ಆಡಿಸಿದ ಕೈಯಲ್ಲೇ ತನ್ನ ಕಂದನ ಅಂತ್ಯಕ್ರಿಯೆ ನೆರವೇರಿಸಿದ್ದ ದೃಶ್ಯ ನಿಜಕ್ಕೂ ಮನಕಲುಕಿಸುವಂತಿತ್ತು. ಅತ್ತ, ಹಂತಕಿ ತಾಯಿ ಪೊಲೀಸರ ಮುಂದೆ ಕೊಲೆಯ ಹಿಂದಿನ ಮತ್ತಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾಳೆ.
ಅಪ್ಪ.. ಅಪ್ಪ ಎಂದು ಬಾಯ್ತುಂಬ ಕರೆದ ಕಂದನ ಶವವನ್ನ ಎತ್ತಿ ಆಡಿಸಿದ ತಂದೆಯೇ ಶವಯಾತ್ರೆ ಮಾಡ್ತಿದ್ದಾರೆ. ಮಗನ ಭವಿಷ್ಯ ಕಂಡಿದ್ದ ಅಪ್ಪನ ಕಣ್ಣಲ್ಲಿ ಮಗನನ್ನ ಆ ಸ್ಥಿತಿಯಲ್ಲಿ ನೋಡಿ ಕಣ್ಣೀರೂ ಧುಮುಕುತ್ತಿತ್ತು.. ಹೆತ್ತಪ್ಪನೇ ತನ್ನ ಕಂದಮ್ಮನನ್ನ ಸಾವಿನ ಗುಂಡಿಯಲ್ಲಿ ಮಲಗಿಸ್ತಿರುವ ಈ ದೃಶ್ಯವನ್ನ ನೋಡಿದ್ರೆ ಎಂಥವರ ಮನಸ್ಸು ಕೂಡ ಭಾರವಾಗುತ್ತೆ.

ಹೆತ್ತ ತಾಯಿಯಿಂದ ಹತ್ಯೆ.. ತಂದೆಯಿಂದ ಅಂತ್ಯಸಂಸ್ಕಾರ!

ಹೌದು.. ಗೋವಾದಲ್ಲಿ ಹೆತ್ತ ತಾಯಿಯಿಂದ ಕೊಲೆಯಾದ ಕಂದನನ್ನ ಇಂದು ಬೆಳಗ್ಗೆ ಹರಿಶ್ಚಂದ್ರಘಾಟ್​ನಲ್ಲಿ ತಂದೆ ವೆಂಕಟರಮಣ ತನ್ನ ಕೈಯಾರೇ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.. ಈ ವೇಳೆ ಮಗನ ಶವದ ಮುಂದೆ ಕುಳಿತು ಗಳಗಳನೇ ಕಣ್ಣೀರಾಕಿದ್ರು.. ನಿನ್ನೆ ರಾತ್ರಿ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಳಿಕ ಮಧ್ಯರಾತ್ರಿ 1ಗಂಟೆ 45 ನಿಮಿಷಕ್ಕೆ ಬೆಂಗಳೂರಿನ ಯಶವಂತಪುರ ಬಳಿಯಿರುವ ಬ್ರಿಗೇಡ್​​ ಗೇಟ್​ ವೇ ರೆಸಿಡೆನ್ಸಿಯಲ್ಲಿರುವ ನಿವಾಸಕ್ಕೆ ತರಲಾಯ್ತು.. ಕುಟುಂಬಸ್ಥರು ಮಗುವಿನ ಅಂತಿಮ ದರ್ಶನ ಪಡೆದುಕೊಂಡ ನಂತರ ಇಂದು ಬೆಳ್ಳಗ್ಗೆ ಹರಿಶ್ಚಂದ್ರ ಘಾಟ್​ನಲ್ಲಿ ಮಗುವಿನ ಅಂತ್ಯಕ್ರಿಯೆ ಮಾಡಲಾಯ್ತು.

ಅತ್ತ, ಮಗು ಹತ್ಯೆ ಮಾಡಿದ ಕುಟುಕಿ ತಾಯಿ ಸುಚನಾ ಸೇಠ್​ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.. ಈ ವೇಳೆ ಸುಚೇನಾ ಸೇಠ್​ ಗೋವಾ ಪೊಲೀಸರ ಮುಂದೆ ಹಲವು ವಿಚಾರಗಳನ್ನ ಬಾಯ್ಬಿಟ್ಟಿದ್ದಾಳೆ.

ದಿಂಬು ಹಾಕಿ ಪ್ರಜ್ಞೆ ತಪ್ಪಿಸಲು ಹೋದೆ..ಮಗ ಸತ್ತುಹೋದ!
ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಪಾಪಿ ತಾಯಿ!

ಹೇಗಾಯ್ತು ‘ಕಂದ’ನ ಕೊಲೆ?

ನಾನು ಮತ್ತು ಪತಿ ವೆಂಕಟರಾಮನ್‌ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದೇವೆ. ಕೇಸ್​ ಕೋರ್ಟ್​​​ನಲ್ಲಿದೆ. ವಾರಕ್ಕೊಮ್ಮೆ ಪತಿಗೆ ವಿಡಿಯೋ ಕಾಲ್ ಮೂಲಕ ಮಗುವನ್ನ ತೋರಿಸ ಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ, ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದು ಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿಬಿಡ್ತು. ಅದೇ ನೋವಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇನೆ. ಆದ್ರೆ ಅದು ಸಾಧ್ಯವಾಗಿಲ್ಲ. ನಂತರ ಗಾಬರಿಯಲ್ಲಿ ಏನ್​ ಮಾಡಬೇಕೆಂದು ತೋಚದೆ, ಸೂಟ್ ಕೇಸ್‌ನಲ್ಲಿ ಮಗುವಿನ ಬಾಡಿ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದೆ.

-ಸುಚನಾ ಸೇಠ್‌, ಮಗು ಕೊಂದ ತಾಯಿ

ಹೀಗೆ, ಎಲ್ಲಿ ಚಿನ್ಮಯ್​ ತನ್ನ ತಂದೆ ಜೊತೆ ಅಟ್ಯಾಚ್​ಮೆಂಟ್ ಬೆಳೆಸಿಕೊಂಡು, ತನ್ನಿಂದ ದೂರವಾಗ್ಬಿಡ್ತಾನೆ ಎಂದು ಭಾವಿಸಿ, ಚಿನ್ಮಯ್ ಹಾಗೂ ವೆಂಕರಮಣನ್​ ಭೇಟಿಯಾಗದಂತೆ ತಡೆಯಲು ಯತ್ನಿಸಿದ ಸುಚನಾ ಆತಂಕದಲ್ಲೇ ಮಗುವನ್ನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.. ಸುಚನಾ ಪೊಲೀಸರಿಗೆ ತಪ್ಪೊಪ್ಪಿಗೆ ಕೊಟ್ಟಿರೋದನ್ನು ಎಲ್ಲಿ ಚಿನ್ಮಯ್​ ತಂದೆ ಜೊತೆಗೆ ಹೆಚ್ಚು ಹತ್ತಿರವಾಗಿ ತನ್ನಿಂದ ದೂರಾಗ್ಬಿಡ್ತಾನೆ ಅನ್ನೋ ಆತಂಕ ಇತ್ತು ಅನ್ನೋದು ಮೇಲ್ನೊಟಕ್ಕೆ ಕಾಣಿಸ್ತಿದೆ.

ಆರು ದಿನ ಗೋವಾ ಪೊಲೀಸ್ ಕಸ್ಟಡಿಯಲ್ಲಿ ಹಂತಕಿ ಸುಚನಾ!

ಇದೀಗ, ನಿನ್ನೆ ಆರೋಪಿ ಸುಚನಾ ಸೇಠ್​​ನನ್ನ ಕೋರ್ಟ್​ನಲ್ಲಿ ಹಾಜರು ಪಡಿಸಿದ ಕಲ್ಲಂಗೋಟ್ ಪೊಲೀಸರು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದು ಹಲವು ಆಯಾಮಗಳಲ್ಲಿ ವಿಚಾರಣೆ ಮುಂದುವರೆಸಿದ್ದಾರೆ..

ಅದೇನೆ ಹೇಳಿ.. ಹೆತ್ತ ಕಂದನಿಗೆ ದಾರಿದೀಪವಾಗಬೇಕಿದ್ದ ತಾಯಿಯೇ ಸಾವಿನ ಮನೆಗೆ ಕಂದನನ್ನ ನೂಕಿ ತಾಯ್ತನಕ್ಕೆ ಕಳಂಕತಂದಿದ್ದಾಳೆ.. ಮಡದಿಯಿಂದ ದೂರಾಗಿ ಒಂಟಿಯಾಗಿದ್ದ ಬಾಳಿಗೆ ಬೆಳಕಿನ ಭರವಸೆ ನೀಡಿದ್ದ ಕಂದನ ಅಗಲಿಕೆ ವೆಂಕಟರಮಣ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯಿಂದಲೇ ಮಗನ ಕೊಲೆ.. ಪೊಲೀಸ್ರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಹಂತಕಿ

https://newsfirstlive.com/wp-content/uploads/2024/01/Suchita-Seth.jpg

    ಹೆತ್ತ ತಾಯಿಯಿಂದ ಹತ್ಯೆ.. ತಂದೆಯಿಂದ ಅಂತ್ಯಕ್ರಿಯೆ

    ಅಂತ್ಯಕ್ರಿಯೆ ವೇಳೆ ಕಣ್ಣೀರಾಕಿದ ತಂದೆ ವೆಂಕಟರಮಣ!

    ಭಾರದ ಮನಸ್ಸಲ್ಲೇ ಎತ್ತಿ ಆಡಿಸಿದ ಮಗನ ಅಂತ್ಯಕ್ರಿಯೆ!

ಬೆಂಗಳೂರು: ಹೆತ್ತವಳಿಂದಲೇ ಕೊಲೆಯಾದ ಪುಟ್ಟ ಕಂದಮ್ಮನ ಅಂತ್ಯಕ್ರಿಯೆ ಬೆಂಗಳೂರಿನ ಹರಿಶ್ಚಂದ್ರ ಘಾಟ್​ನಲ್ಲಿ ನೆರವೇರಿದೆ. ಭಾರವಾದ ಮನಸ್ಸಿನಲ್ಲೇ ತಂದೆಯೇ ಎತ್ತಿ ಆಡಿಸಿದ ಕೈಯಲ್ಲೇ ತನ್ನ ಕಂದನ ಅಂತ್ಯಕ್ರಿಯೆ ನೆರವೇರಿಸಿದ್ದ ದೃಶ್ಯ ನಿಜಕ್ಕೂ ಮನಕಲುಕಿಸುವಂತಿತ್ತು. ಅತ್ತ, ಹಂತಕಿ ತಾಯಿ ಪೊಲೀಸರ ಮುಂದೆ ಕೊಲೆಯ ಹಿಂದಿನ ಮತ್ತಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾಳೆ.
ಅಪ್ಪ.. ಅಪ್ಪ ಎಂದು ಬಾಯ್ತುಂಬ ಕರೆದ ಕಂದನ ಶವವನ್ನ ಎತ್ತಿ ಆಡಿಸಿದ ತಂದೆಯೇ ಶವಯಾತ್ರೆ ಮಾಡ್ತಿದ್ದಾರೆ. ಮಗನ ಭವಿಷ್ಯ ಕಂಡಿದ್ದ ಅಪ್ಪನ ಕಣ್ಣಲ್ಲಿ ಮಗನನ್ನ ಆ ಸ್ಥಿತಿಯಲ್ಲಿ ನೋಡಿ ಕಣ್ಣೀರೂ ಧುಮುಕುತ್ತಿತ್ತು.. ಹೆತ್ತಪ್ಪನೇ ತನ್ನ ಕಂದಮ್ಮನನ್ನ ಸಾವಿನ ಗುಂಡಿಯಲ್ಲಿ ಮಲಗಿಸ್ತಿರುವ ಈ ದೃಶ್ಯವನ್ನ ನೋಡಿದ್ರೆ ಎಂಥವರ ಮನಸ್ಸು ಕೂಡ ಭಾರವಾಗುತ್ತೆ.

ಹೆತ್ತ ತಾಯಿಯಿಂದ ಹತ್ಯೆ.. ತಂದೆಯಿಂದ ಅಂತ್ಯಸಂಸ್ಕಾರ!

ಹೌದು.. ಗೋವಾದಲ್ಲಿ ಹೆತ್ತ ತಾಯಿಯಿಂದ ಕೊಲೆಯಾದ ಕಂದನನ್ನ ಇಂದು ಬೆಳಗ್ಗೆ ಹರಿಶ್ಚಂದ್ರಘಾಟ್​ನಲ್ಲಿ ತಂದೆ ವೆಂಕಟರಮಣ ತನ್ನ ಕೈಯಾರೇ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.. ಈ ವೇಳೆ ಮಗನ ಶವದ ಮುಂದೆ ಕುಳಿತು ಗಳಗಳನೇ ಕಣ್ಣೀರಾಕಿದ್ರು.. ನಿನ್ನೆ ರಾತ್ರಿ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಳಿಕ ಮಧ್ಯರಾತ್ರಿ 1ಗಂಟೆ 45 ನಿಮಿಷಕ್ಕೆ ಬೆಂಗಳೂರಿನ ಯಶವಂತಪುರ ಬಳಿಯಿರುವ ಬ್ರಿಗೇಡ್​​ ಗೇಟ್​ ವೇ ರೆಸಿಡೆನ್ಸಿಯಲ್ಲಿರುವ ನಿವಾಸಕ್ಕೆ ತರಲಾಯ್ತು.. ಕುಟುಂಬಸ್ಥರು ಮಗುವಿನ ಅಂತಿಮ ದರ್ಶನ ಪಡೆದುಕೊಂಡ ನಂತರ ಇಂದು ಬೆಳ್ಳಗ್ಗೆ ಹರಿಶ್ಚಂದ್ರ ಘಾಟ್​ನಲ್ಲಿ ಮಗುವಿನ ಅಂತ್ಯಕ್ರಿಯೆ ಮಾಡಲಾಯ್ತು.

ಅತ್ತ, ಮಗು ಹತ್ಯೆ ಮಾಡಿದ ಕುಟುಕಿ ತಾಯಿ ಸುಚನಾ ಸೇಠ್​ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.. ಈ ವೇಳೆ ಸುಚೇನಾ ಸೇಠ್​ ಗೋವಾ ಪೊಲೀಸರ ಮುಂದೆ ಹಲವು ವಿಚಾರಗಳನ್ನ ಬಾಯ್ಬಿಟ್ಟಿದ್ದಾಳೆ.

ದಿಂಬು ಹಾಕಿ ಪ್ರಜ್ಞೆ ತಪ್ಪಿಸಲು ಹೋದೆ..ಮಗ ಸತ್ತುಹೋದ!
ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಪಾಪಿ ತಾಯಿ!

ಹೇಗಾಯ್ತು ‘ಕಂದ’ನ ಕೊಲೆ?

ನಾನು ಮತ್ತು ಪತಿ ವೆಂಕಟರಾಮನ್‌ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದೇವೆ. ಕೇಸ್​ ಕೋರ್ಟ್​​​ನಲ್ಲಿದೆ. ವಾರಕ್ಕೊಮ್ಮೆ ಪತಿಗೆ ವಿಡಿಯೋ ಕಾಲ್ ಮೂಲಕ ಮಗುವನ್ನ ತೋರಿಸ ಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ, ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದು ಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿಬಿಡ್ತು. ಅದೇ ನೋವಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇನೆ. ಆದ್ರೆ ಅದು ಸಾಧ್ಯವಾಗಿಲ್ಲ. ನಂತರ ಗಾಬರಿಯಲ್ಲಿ ಏನ್​ ಮಾಡಬೇಕೆಂದು ತೋಚದೆ, ಸೂಟ್ ಕೇಸ್‌ನಲ್ಲಿ ಮಗುವಿನ ಬಾಡಿ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದೆ.

-ಸುಚನಾ ಸೇಠ್‌, ಮಗು ಕೊಂದ ತಾಯಿ

ಹೀಗೆ, ಎಲ್ಲಿ ಚಿನ್ಮಯ್​ ತನ್ನ ತಂದೆ ಜೊತೆ ಅಟ್ಯಾಚ್​ಮೆಂಟ್ ಬೆಳೆಸಿಕೊಂಡು, ತನ್ನಿಂದ ದೂರವಾಗ್ಬಿಡ್ತಾನೆ ಎಂದು ಭಾವಿಸಿ, ಚಿನ್ಮಯ್ ಹಾಗೂ ವೆಂಕರಮಣನ್​ ಭೇಟಿಯಾಗದಂತೆ ತಡೆಯಲು ಯತ್ನಿಸಿದ ಸುಚನಾ ಆತಂಕದಲ್ಲೇ ಮಗುವನ್ನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.. ಸುಚನಾ ಪೊಲೀಸರಿಗೆ ತಪ್ಪೊಪ್ಪಿಗೆ ಕೊಟ್ಟಿರೋದನ್ನು ಎಲ್ಲಿ ಚಿನ್ಮಯ್​ ತಂದೆ ಜೊತೆಗೆ ಹೆಚ್ಚು ಹತ್ತಿರವಾಗಿ ತನ್ನಿಂದ ದೂರಾಗ್ಬಿಡ್ತಾನೆ ಅನ್ನೋ ಆತಂಕ ಇತ್ತು ಅನ್ನೋದು ಮೇಲ್ನೊಟಕ್ಕೆ ಕಾಣಿಸ್ತಿದೆ.

ಆರು ದಿನ ಗೋವಾ ಪೊಲೀಸ್ ಕಸ್ಟಡಿಯಲ್ಲಿ ಹಂತಕಿ ಸುಚನಾ!

ಇದೀಗ, ನಿನ್ನೆ ಆರೋಪಿ ಸುಚನಾ ಸೇಠ್​​ನನ್ನ ಕೋರ್ಟ್​ನಲ್ಲಿ ಹಾಜರು ಪಡಿಸಿದ ಕಲ್ಲಂಗೋಟ್ ಪೊಲೀಸರು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದು ಹಲವು ಆಯಾಮಗಳಲ್ಲಿ ವಿಚಾರಣೆ ಮುಂದುವರೆಸಿದ್ದಾರೆ..

ಅದೇನೆ ಹೇಳಿ.. ಹೆತ್ತ ಕಂದನಿಗೆ ದಾರಿದೀಪವಾಗಬೇಕಿದ್ದ ತಾಯಿಯೇ ಸಾವಿನ ಮನೆಗೆ ಕಂದನನ್ನ ನೂಕಿ ತಾಯ್ತನಕ್ಕೆ ಕಳಂಕತಂದಿದ್ದಾಳೆ.. ಮಡದಿಯಿಂದ ದೂರಾಗಿ ಒಂಟಿಯಾಗಿದ್ದ ಬಾಳಿಗೆ ಬೆಳಕಿನ ಭರವಸೆ ನೀಡಿದ್ದ ಕಂದನ ಅಗಲಿಕೆ ವೆಂಕಟರಮಣ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More