ಅಮೆರಿಕಾ, ಭಾರತದ DNAನಲ್ಲೇ ಪ್ರಜಾಪ್ರಭುತ್ವ ಇದೆ
ಸಬ್ ಕಾ ಸಾಥ್ ನೀತಿಯಲ್ಲಿ ಭಾರತ ಕೆಲಸ ಮಾಡುತ್ತಿದೆ
ವಿಶ್ವದ ಶಾಂತಿ ಸ್ಥಾಪನೆಗೆ ಭಾರತ ಸದಾ ಮುಂದಿದೆ- ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸವು ಎರಡು ದೇಶಗಳ ನಡುವೆ ಹೊಸ ಬೆಸುಗೆ ಬೆಸೆದಿದೆ. ಯೋಗದಿಂದ ಶುರುವಾದ ನಮೋ ನೌಕೆ, ಇಂದು ಶ್ವೇತಭವನದೊಳಗೂ ಸದ್ದು ಮಾಡಿ, ಸಂಸತ್ನೊಳಗೂ ಸಂಚರಿಸಿದೆ. ದೊಡ್ಡಣ್ಣನ ನಾಡಿನಲ್ಲಿ ನಿಂತು ಪ್ರಧಾನಿ ಮೋದಿ ವಿಶ್ವಕ್ಕೆ ದೊಡ್ಡ ಸಂದೇಶವನ್ನ ರವಾನಿಸಿದ್ದಾರೆ.
ಶ್ವೇತಭವನದಲ್ಲಿ ಬೈಡನ್ ದಂಪತಿಯ ಜೊತೆ ಔತಣಕೂಟದಲ್ಲಿ ಭಾಗಿಯಾದ ಬಳಿಕ ಮೋದಿ, ಅಮೆರಿಕಾ ಅಧ್ಯಕ್ಷರ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ರು. ಒಂದಷ್ಟು ದ್ವಿಪಕ್ಷೀಯ ಒಪ್ಪಂದಗಳಿಗೂ ಈ ಮಾತುಕತೆ ಸಾಕ್ಷಿಯಾಯ್ತು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ವೇಳೆ ಅಮೆರಿಕ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಮೋದಿ ಖಡಕ್ ಆಗಿ ಉತ್ತರಿಸಿದರು.
ಪತ್ರಕರ್ತೆ ಪ್ರಶ್ನೆ:
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಜನ ಹೇಳುತ್ತಾರೆ. ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತದೆ ಮತ್ತು ಟೀಕಾಕಾರರನ್ನು ಮೌನಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳುತ್ತವೆ. ನೀವು ಇಲ್ಲಿ ಶ್ವೇತಭವನದಲ್ಲಿ ನಿಂತಿರುವಂತೆ, ಅನೇಕ ವಿಶ್ವದ ನಾಯಕರು ಇಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾರೆ. ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ನೀವು ಏನ್ ಕ್ರಮ ತೆಗೆದುಕೊಳ್ಳುತ್ತೀರಿ?
ಪ್ರಧಾನಿ ಮೋದಿ ಉತ್ತರ:
ಜನ ಹೇಳುವುದಿಲ್ಲ. ಆದರೆ ನೀವು ಹೇಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಭಾರತ ಮತ್ತು ಅಮೆರಿಕದ ಡಿಎನ್ಎಯಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನಿಮ್ಮ ಅಧ್ಯಕ್ಷರಾದ ಬೈಡನ್ ಹೇಳಿದಂತೆ, ಪ್ರಜಾಪ್ರಭುತ್ವ ನಮ್ಮ ಆತ್ಮ. ಪ್ರಜಾಪ್ರಭುತ್ವ ನಮ್ಮ ರಕ್ತನಾಳಗಳಲ್ಲಿದೆ. ನಾವು ಪ್ರಜಾಪ್ರಭುತ್ವದಲ್ಲಿ ಉಸಿರಾಡುತ್ತೇವೆ. ನಮ್ಮ ಪೂರ್ವಜರು ಸಂವಿಧಾನದ ರೂಪದಲ್ಲಿ ಪದಗಳಲ್ಲಿ ಸೇರಿಸಿದ್ದಾರೆ. ನಮ್ಮ ಸರ್ಕಾರ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲೆ ನಿರ್ಮಿಸಲಾದ ಸಂವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
ನಾನು ಮೋಕ್ಷದ ಬಗ್ಗೆ ಮಾತನಾಡುವಾಗ ಜಾತಿ, ಮತ, ಧರ್ಮ, ಲಿಂಗ.. ಯಾವುದೇ ತಾರತಮ್ಯಕ್ಕೆ ಅಲ್ಲಿ ಸ್ಥಾನವಿಲ್ಲ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ಮಾನವೀಯ ಮೌಲ್ಯಗಳಿಲ್ಲದಿದ್ದರೆ, ಮಾನವೀಯತೆ ಇಲ್ಲ, ಮಾನವ ಹಕ್ಕುಗಳಿಲ್ಲದಿದ್ದರೆ ಅದು ಪ್ರಜಾಪ್ರಭುತ್ವವೇ ಅಲ್ಲ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ನೀವು ಅದನ್ನು ಸ್ವೀಕರಿಸುತ್ತೀರಿ, ಅದರೊಂದಿಗೆ ಬದುಕುತ್ತೀರಿ. ಆಗ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದಕ್ಕಾಗಿಯೇ ಭಾರತವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್’ ಎಂಬ ಮೂಲ ತತ್ವಗಳೊಂದಿಗೆ ನಡೆಯುತ್ತದೆ.
ಭಾರತ ಮತ್ತು ಅಮೆರಿಕಾ ಎರಡೂ ದೇಶದ ಡಿಎನ್ಎನಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿವೆ. ಪ್ರಜಾಪ್ರಭುತ್ವವು ನಮ್ಮ ಆತ್ಮದಲ್ಲಿದೆ ಮತ್ತು ನಾವು ಅದನ್ನೇ ಬದುಕುತ್ತಿದ್ದೇವೆ ಮತ್ತು ಅದನ್ನು ನಮ್ಮ ಸಂವಿಧಾನದಲ್ಲಿ ಬರೆಯಲಾಗಿದೆ. ಹಾಗಾಗಿ ಜಾತಿ, ಮತ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯದ ಪ್ರಶ್ನೆ ಉದ್ಭವಿಸುವುದಿಲ್ಲ.
ಭಾರತದಲ್ಲಿ ಸರ್ಕಾರದ ಪ್ರಯೋಜನಗಳು ಎಲ್ಲರಿಗೂ ಲಭ್ಯವಿವೆ. ಯಾರು ಅರ್ಹರು. ಎಲ್ಲರೂ ಅವುಗಳನ್ನು ಪಡೆಯುತ್ತಾರೆ. ಆದ್ದರಿಂದ, ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಧರ್ಮ, ಜಾತಿ, ವಯಸ್ಸು ಮತ್ತು ಪ್ರದೇಶದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ.
ಪ್ರಧಾನಿ ಮೋದಿ, ನರೇಂದ್ರ ಮೋದಿ
ತಮ್ಮ ಭೇಟಿ ವೇಳೆ ನಡೆದ ಕೆಲವು ಒಪ್ಪಂದಗಳ ಬಗ್ಗೆಯೂ ಮೋದಿ ಮಾಹಿತಿ ನೀಡಿದರು. ಯದ್ಧವಿಮಾನಗಳ ಎಂಜಿನ್ ನಿರ್ಮಿಸುವ ಮಹತ್ವದ ಒಪ್ಪಂದ ಉಭಯ ದೇಶಗಳ ನಡುವಿನ ಐತಿಹಾಸಿಕ ಒಪ್ಪಂದವಾಗಿದೆ ಅಂತಾ ಮೋದಿ ಬಣ್ಣಿಸಿದ್ರು. ಅಲ್ಲದೇ ಅಹಮದಬಾದ್ನಲ್ಲಿ ಅಮೆರಿಕ ಕೌನ್ಸಿಲ್ ಘಟಕ ತೆರೆಯುವ ನಿರ್ಧಾರವನ್ನು ಸ್ವಾಗತಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮೆರಿಕಾ, ಭಾರತದ DNAನಲ್ಲೇ ಪ್ರಜಾಪ್ರಭುತ್ವ ಇದೆ
ಸಬ್ ಕಾ ಸಾಥ್ ನೀತಿಯಲ್ಲಿ ಭಾರತ ಕೆಲಸ ಮಾಡುತ್ತಿದೆ
ವಿಶ್ವದ ಶಾಂತಿ ಸ್ಥಾಪನೆಗೆ ಭಾರತ ಸದಾ ಮುಂದಿದೆ- ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸವು ಎರಡು ದೇಶಗಳ ನಡುವೆ ಹೊಸ ಬೆಸುಗೆ ಬೆಸೆದಿದೆ. ಯೋಗದಿಂದ ಶುರುವಾದ ನಮೋ ನೌಕೆ, ಇಂದು ಶ್ವೇತಭವನದೊಳಗೂ ಸದ್ದು ಮಾಡಿ, ಸಂಸತ್ನೊಳಗೂ ಸಂಚರಿಸಿದೆ. ದೊಡ್ಡಣ್ಣನ ನಾಡಿನಲ್ಲಿ ನಿಂತು ಪ್ರಧಾನಿ ಮೋದಿ ವಿಶ್ವಕ್ಕೆ ದೊಡ್ಡ ಸಂದೇಶವನ್ನ ರವಾನಿಸಿದ್ದಾರೆ.
ಶ್ವೇತಭವನದಲ್ಲಿ ಬೈಡನ್ ದಂಪತಿಯ ಜೊತೆ ಔತಣಕೂಟದಲ್ಲಿ ಭಾಗಿಯಾದ ಬಳಿಕ ಮೋದಿ, ಅಮೆರಿಕಾ ಅಧ್ಯಕ್ಷರ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ರು. ಒಂದಷ್ಟು ದ್ವಿಪಕ್ಷೀಯ ಒಪ್ಪಂದಗಳಿಗೂ ಈ ಮಾತುಕತೆ ಸಾಕ್ಷಿಯಾಯ್ತು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ವೇಳೆ ಅಮೆರಿಕ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಮೋದಿ ಖಡಕ್ ಆಗಿ ಉತ್ತರಿಸಿದರು.
ಪತ್ರಕರ್ತೆ ಪ್ರಶ್ನೆ:
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಜನ ಹೇಳುತ್ತಾರೆ. ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತದೆ ಮತ್ತು ಟೀಕಾಕಾರರನ್ನು ಮೌನಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳುತ್ತವೆ. ನೀವು ಇಲ್ಲಿ ಶ್ವೇತಭವನದಲ್ಲಿ ನಿಂತಿರುವಂತೆ, ಅನೇಕ ವಿಶ್ವದ ನಾಯಕರು ಇಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾರೆ. ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ನೀವು ಏನ್ ಕ್ರಮ ತೆಗೆದುಕೊಳ್ಳುತ್ತೀರಿ?
ಪ್ರಧಾನಿ ಮೋದಿ ಉತ್ತರ:
ಜನ ಹೇಳುವುದಿಲ್ಲ. ಆದರೆ ನೀವು ಹೇಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಭಾರತ ಮತ್ತು ಅಮೆರಿಕದ ಡಿಎನ್ಎಯಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನಿಮ್ಮ ಅಧ್ಯಕ್ಷರಾದ ಬೈಡನ್ ಹೇಳಿದಂತೆ, ಪ್ರಜಾಪ್ರಭುತ್ವ ನಮ್ಮ ಆತ್ಮ. ಪ್ರಜಾಪ್ರಭುತ್ವ ನಮ್ಮ ರಕ್ತನಾಳಗಳಲ್ಲಿದೆ. ನಾವು ಪ್ರಜಾಪ್ರಭುತ್ವದಲ್ಲಿ ಉಸಿರಾಡುತ್ತೇವೆ. ನಮ್ಮ ಪೂರ್ವಜರು ಸಂವಿಧಾನದ ರೂಪದಲ್ಲಿ ಪದಗಳಲ್ಲಿ ಸೇರಿಸಿದ್ದಾರೆ. ನಮ್ಮ ಸರ್ಕಾರ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲೆ ನಿರ್ಮಿಸಲಾದ ಸಂವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
ನಾನು ಮೋಕ್ಷದ ಬಗ್ಗೆ ಮಾತನಾಡುವಾಗ ಜಾತಿ, ಮತ, ಧರ್ಮ, ಲಿಂಗ.. ಯಾವುದೇ ತಾರತಮ್ಯಕ್ಕೆ ಅಲ್ಲಿ ಸ್ಥಾನವಿಲ್ಲ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ಮಾನವೀಯ ಮೌಲ್ಯಗಳಿಲ್ಲದಿದ್ದರೆ, ಮಾನವೀಯತೆ ಇಲ್ಲ, ಮಾನವ ಹಕ್ಕುಗಳಿಲ್ಲದಿದ್ದರೆ ಅದು ಪ್ರಜಾಪ್ರಭುತ್ವವೇ ಅಲ್ಲ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ನೀವು ಅದನ್ನು ಸ್ವೀಕರಿಸುತ್ತೀರಿ, ಅದರೊಂದಿಗೆ ಬದುಕುತ್ತೀರಿ. ಆಗ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದಕ್ಕಾಗಿಯೇ ಭಾರತವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್’ ಎಂಬ ಮೂಲ ತತ್ವಗಳೊಂದಿಗೆ ನಡೆಯುತ್ತದೆ.
ಭಾರತ ಮತ್ತು ಅಮೆರಿಕಾ ಎರಡೂ ದೇಶದ ಡಿಎನ್ಎನಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿವೆ. ಪ್ರಜಾಪ್ರಭುತ್ವವು ನಮ್ಮ ಆತ್ಮದಲ್ಲಿದೆ ಮತ್ತು ನಾವು ಅದನ್ನೇ ಬದುಕುತ್ತಿದ್ದೇವೆ ಮತ್ತು ಅದನ್ನು ನಮ್ಮ ಸಂವಿಧಾನದಲ್ಲಿ ಬರೆಯಲಾಗಿದೆ. ಹಾಗಾಗಿ ಜಾತಿ, ಮತ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯದ ಪ್ರಶ್ನೆ ಉದ್ಭವಿಸುವುದಿಲ್ಲ.
ಭಾರತದಲ್ಲಿ ಸರ್ಕಾರದ ಪ್ರಯೋಜನಗಳು ಎಲ್ಲರಿಗೂ ಲಭ್ಯವಿವೆ. ಯಾರು ಅರ್ಹರು. ಎಲ್ಲರೂ ಅವುಗಳನ್ನು ಪಡೆಯುತ್ತಾರೆ. ಆದ್ದರಿಂದ, ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಧರ್ಮ, ಜಾತಿ, ವಯಸ್ಸು ಮತ್ತು ಪ್ರದೇಶದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ.
ಪ್ರಧಾನಿ ಮೋದಿ, ನರೇಂದ್ರ ಮೋದಿ
ತಮ್ಮ ಭೇಟಿ ವೇಳೆ ನಡೆದ ಕೆಲವು ಒಪ್ಪಂದಗಳ ಬಗ್ಗೆಯೂ ಮೋದಿ ಮಾಹಿತಿ ನೀಡಿದರು. ಯದ್ಧವಿಮಾನಗಳ ಎಂಜಿನ್ ನಿರ್ಮಿಸುವ ಮಹತ್ವದ ಒಪ್ಪಂದ ಉಭಯ ದೇಶಗಳ ನಡುವಿನ ಐತಿಹಾಸಿಕ ಒಪ್ಪಂದವಾಗಿದೆ ಅಂತಾ ಮೋದಿ ಬಣ್ಣಿಸಿದ್ರು. ಅಲ್ಲದೇ ಅಹಮದಬಾದ್ನಲ್ಲಿ ಅಮೆರಿಕ ಕೌನ್ಸಿಲ್ ಘಟಕ ತೆರೆಯುವ ನಿರ್ಧಾರವನ್ನು ಸ್ವಾಗತಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ