ಕರ್ನಾಟಕದ ಬೊಂಬಾಟ್ ಆಟಕ್ಕೆ, ಶರಣಾದ ಮುಂಬೈ ಟೀಮ್.!
8 ವಿಕೆಟ್ ಕಳೆದುಕೊಂಡು 890 ರನ್ಗಳ ಕಲೆ ಹಾಕಿದ್ದ ಕರ್ನಾಟಕ
ಚೊಚ್ಚಲ ಟ್ರೋಫಿ ಗೆದ್ದು ಸಂತಸ ವ್ಯಕ್ತಪಡಿಸಿದ ಕನ್ನಡ ಹುಡುಗರು
ಕರ್ನಾಟಕ ತಂಡದ ಯುವ ಆಟಗಾರರು ದೇಶವೇ ತಿರುಗಿನೋಡುವಂತ ಸಾಧನೆ ಮಾಡಿದ್ದಾರೆ. ಚೊಚ್ಚಲ ಕೂಚ್ ಬೆಹಾರ್ ಟ್ರೋಫಿ ಗೆದ್ದು ಸೀನಿಯರ್ಗಳಿಗೆ ಜೂನಿಯರ್ಸ್ ಪಾಠ ಮಾಡಿದ್ದಾರೆ. ಫೈನಲ್ ಫೈಟ್ನಲ್ಲಿ ಕರ್ನಾಟಕದ ಯುವ ಆಟಗಾರರ ಆಡಿದ ರೀತಿಯಂತೂ ಅದ್ಭುತ. ಹೇಗಿತ್ತು ಫೈನಲ್?.
ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಅಂಡರ್ 19 ಹುಡುಗರು ಇಡೀ ದೇಶವೇ ತಿರುಗಿನೋಡುವಂತೆ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ನವುಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಕರುನಾಡ ಹುಡುಗರು ಸೋಲಿನ ರುಚಿ ತೋರಿಸಿದ್ದಾರೆ.
ಕೂಚ್ ಬೆಹಾರ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡದ ಯುವ ಆಟಗಾರರು ಫೈನಲ್ ಫೈಟ್ನಲ್ಲೂ ಪಾರಮ್ಯ ಮರೆದರು. ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ ತಂಡವನ್ನ ಕರ್ನಾಟಕ 380 ರನ್ಗಳಿಗೆ ಆಲೌಟ್ ಮಾಡ್ತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 8 ವಿಕೆಟ್ ಕಳೆದುಕೊಂಡು 890 ರನ್ಗಳ ಕರ್ನಾಟಕ ಪೇರಿಸಿತು. ಕರ್ನಾಟಕವನ್ನ ಆಲೌಟ್ ಮಾಡಲಾಗದೇ ಮುಂಬೈ ಒದ್ದಾಡಿಬಿಡ್ತು.
ಚೊಚ್ಚಲ ಕೂಚ್ ಬೆಹಾರ್ ಟ್ರೋಫಿ ಜಯಿಸಿದ ಕರ್ನಾಟಕ.!
ಮುಂಬೈ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕರ್ನಾಟಕದ ಬ್ಯಾಟರ್ಸ್ ಬರೋಬ್ಬರಿ 223 ಓವರ್ ಬ್ಯಾಟಿಂಗ್ ನಡೆಸಿದ್ರು. ಕರುನಾಡ ಹುಡುಗರ ದಿಟ್ಟ ಬ್ಯಾಟಿಂಗ್ ಮುಂದೆ ಕಂಗೆಟ್ಟ, ಮುಂಬೈ ತಂಡ ಕೊನೆಯಲ್ಲಿ ಶರಣಾಗಿ ಸೋಲನ್ನ ಒಪ್ಪಿಕೊಳ್ತು. ಇನ್ನಿಂಗ್ಸ್ ಲೀಡ್ ಆಧಾರ ಜಯ ಸಾಧಿಸಿದ ಕರ್ನಾಟಕ ಇತಿಹಾಸ ನಿರ್ಮಿಸಿತು. ಇದೇ ಮೊದಲ ಬಾರಿಗೆ ಕೂಚ್ ಬೆಹಾರ್ ಟ್ರೋಫಿ ಜಯಿಸಿದ ಸಾಧನೆ ಮಾಡಿತು.
ಅಜೇಯ 400 ರನ್ ಸಿಡಿಸಿ ಮಿಂಚಿದ ಕನ್ನಡಿಗ ಪ್ರಕಾರ್ ಚತುರ್ವೇದಿ
ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಓಪನರ್ ಪ್ರಕಾರ್ ಚತುರ್ವೇದಿ ಆಟಕ್ಕೆ ಮುಂಬೈ ತಂಡ ಸುಸ್ತು ಹೊಡೆಯಿತು. ಆರಂಭಿಕನಾಗಿ ಕಣಕ್ಕಿಳಿದು ಅಂತ್ಯವರೆಗೂ ಹೋರಾಡಿದ ಪ್ರಕಾರ ಚತುರ್ವೇದಿ ಮುಂಬೈ ಬೌಲರ್ಗಳ ಬೆವರಿಳಿಸಿದ್ರು. ಅಜೇಯ 404 ರನ್ಗಳ ಅತ್ಯಮೋಘ ಇನ್ನಿಂಗ್ಸ್ ಕಟ್ಟಿ ಅಬ್ಬರಿಸಿದ್ರು.
400 ರನ್ ಸಿಡಿಸಿದ ಪ್ರಕಾರ್ ಚತುರ್ವೇದಿ
ಶತಕ ಸಿಡಿಸೋದು ಅಂದ್ರೆನೆ ಒಂದು ಸಾಧನೆ. ಅಂತ್ರದಲ್ಲಿ ಅಜೇಯ 404 ರನ್ ಸಿಡಿಸೋದು ಅದು ಅಸಾಧ್ಯದ ವಿಚಾರವೆ. ಇಂತಹ ಅಸಾಧ್ಯದ ವಿಚಾರವನ್ನ ಪ್ರಕಾರ್ ಸಾಧ್ಯವಾಗಿಸಿದ್ರು. 638 ಎಸೆತಗಳನ್ನ ಎದುರಿಸಿದ ಪ್ರಕಾರ್, 404 ರನ್ ಸಿಡಿಸಿದ್ರು. 44 ಬೌಂಡರಿ, 3 ಭರ್ಜರಿ ಸಿಕ್ಸರ್ ಚತುರ್ವೇದಿಯ ಇನ್ನಿಂಗ್ಸ್ನಲ್ಲಿದ್ವು.
ಪ್ರಕಾರ್ ‘ಪ್ರಹಾರ’.. ಯುವರಾಜ್ ಸಿಂಗ್ ದಾಖಲೆ ಉಡೀಸ್.!
1999ರಲ್ಲಿ ನಡೆದ ಕೂಚ್ ಬೆಹಾರ್ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ 358 ರನ್ಗಳಿಸಿದ್ದರು. ಅದೇ ಈವರೆಗಿನ ಫೈನಲ್ ಪಂದ್ಯದ ಹೈಯೆಸ್ಟ್ ಸ್ಕೋರ್ ಆಗಿತ್ತು. ಈ ದಾಖಲೆಯನ್ನ ಇದೀಗ ಪ್ರಕಾರ್ ಉಡೀಸ್ ಮಾಡಿದ್ದಾರೆ. ಪ್ರಕಾರ್ ಮಾತ್ರವಲ್ಲ.. ಇಡೀ ಕರ್ನಾಟಕ ತಂಡವೇ ಫೈನಲ್ ಫೈಟ್ನಲ್ಲಿ ಆಲ್ರೌಂಡ್ ಆಟವಾಡಿತು.
ಕೂಚ್ ಬೆಹಾರ್ ಫೈನಲ್ ಹೀರೋಸ್- ಬೌಲರ್ಸ್
ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪರ ಹಾರ್ದಿಕ್ ರಾಜ್ 4 ವಿಕೆಟ್ ಕಬಳಿಸಿದ್ರೆ, ಸಮರ್ಥ್ N ಹಾಗೂ ಸಮಿತ್ ದ್ರಾವಿಡ್ ತಲಾ 2 ವಿಕೆಟ್ ಕಬಳಿಸಿದ್ರು. ಇನ್ನು, ಕ್ಯಾಪ್ಟನ್ ಧೀರಜ್ ಗೌಡ ಹಾಗೂ ಅಗಸ್ತ್ಯ ತಲಾ 1 ವಿಕೆಟ್ ಕಬಳಿಸಿದ್ರು.
ಕೂಚ್ ಬೆಹಾರ್ ಫೈನಲ್ ಹೀರೋಸ್- ಬ್ಯಾಟ್ಸ್ಮನ್
ಬ್ಯಾಟಿಂಗ್ನಲ್ಲಿ ಪ್ರಕಾರ್ ಚತುರ್ವೇದಿ ಅಜೇಯ 404 ರನ್ ಸಿಡಿಸಿದ್ರೆ, ಹರ್ಷಿಲ್ ಧರ್ಮಾನಿ 169 ರನ್ ಸಿಡಿಸಿದ್ರು. ಇನ್ನು, ಕಾರ್ತಿಕೇಯ 72, ಸಮರ್ಥ್ N ಅಜೇಯ 55, ಹಾರ್ದಿಕ್ ರಾಜ್ 51 ಹಾಗೂ ಕಾರ್ತಿಕ್ SU 50 ರನ್ ಸಿಡಿಸಿ ಮಿಂಚಿದ್ರು.
ಅದ್ಭುತ ಪ್ರದರ್ಶನ ನೀಡಿದ ಕೂಚ್ ಬೆಹಾರ್ ಫೈನಲ್ ಪಂದ್ಯದಲ್ಲಿ ಆಲ್ರೌಂಡ್ ಆಟವಾಡಿದ ಯುವ ಆಟಗಾರರು ಇಡೀ ರಾಜ್ಯವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲೂ ಯುವ ಆಟಗಾರರ ಪರ್ಫಾಮೆನ್ಸ್ ಹೀಗೆ ಇರಲಿ. ಸೀನಿಯರ್ ತಂಡಕ್ಕೆ ಎಂಟ್ರಿ ಕೊಟ್ಟಾಗಲೂ ಮಿಂಚಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕರ್ನಾಟಕದ ಬೊಂಬಾಟ್ ಆಟಕ್ಕೆ, ಶರಣಾದ ಮುಂಬೈ ಟೀಮ್.!
8 ವಿಕೆಟ್ ಕಳೆದುಕೊಂಡು 890 ರನ್ಗಳ ಕಲೆ ಹಾಕಿದ್ದ ಕರ್ನಾಟಕ
ಚೊಚ್ಚಲ ಟ್ರೋಫಿ ಗೆದ್ದು ಸಂತಸ ವ್ಯಕ್ತಪಡಿಸಿದ ಕನ್ನಡ ಹುಡುಗರು
ಕರ್ನಾಟಕ ತಂಡದ ಯುವ ಆಟಗಾರರು ದೇಶವೇ ತಿರುಗಿನೋಡುವಂತ ಸಾಧನೆ ಮಾಡಿದ್ದಾರೆ. ಚೊಚ್ಚಲ ಕೂಚ್ ಬೆಹಾರ್ ಟ್ರೋಫಿ ಗೆದ್ದು ಸೀನಿಯರ್ಗಳಿಗೆ ಜೂನಿಯರ್ಸ್ ಪಾಠ ಮಾಡಿದ್ದಾರೆ. ಫೈನಲ್ ಫೈಟ್ನಲ್ಲಿ ಕರ್ನಾಟಕದ ಯುವ ಆಟಗಾರರ ಆಡಿದ ರೀತಿಯಂತೂ ಅದ್ಭುತ. ಹೇಗಿತ್ತು ಫೈನಲ್?.
ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಅಂಡರ್ 19 ಹುಡುಗರು ಇಡೀ ದೇಶವೇ ತಿರುಗಿನೋಡುವಂತೆ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ನವುಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಕರುನಾಡ ಹುಡುಗರು ಸೋಲಿನ ರುಚಿ ತೋರಿಸಿದ್ದಾರೆ.
ಕೂಚ್ ಬೆಹಾರ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡದ ಯುವ ಆಟಗಾರರು ಫೈನಲ್ ಫೈಟ್ನಲ್ಲೂ ಪಾರಮ್ಯ ಮರೆದರು. ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ ತಂಡವನ್ನ ಕರ್ನಾಟಕ 380 ರನ್ಗಳಿಗೆ ಆಲೌಟ್ ಮಾಡ್ತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 8 ವಿಕೆಟ್ ಕಳೆದುಕೊಂಡು 890 ರನ್ಗಳ ಕರ್ನಾಟಕ ಪೇರಿಸಿತು. ಕರ್ನಾಟಕವನ್ನ ಆಲೌಟ್ ಮಾಡಲಾಗದೇ ಮುಂಬೈ ಒದ್ದಾಡಿಬಿಡ್ತು.
ಚೊಚ್ಚಲ ಕೂಚ್ ಬೆಹಾರ್ ಟ್ರೋಫಿ ಜಯಿಸಿದ ಕರ್ನಾಟಕ.!
ಮುಂಬೈ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕರ್ನಾಟಕದ ಬ್ಯಾಟರ್ಸ್ ಬರೋಬ್ಬರಿ 223 ಓವರ್ ಬ್ಯಾಟಿಂಗ್ ನಡೆಸಿದ್ರು. ಕರುನಾಡ ಹುಡುಗರ ದಿಟ್ಟ ಬ್ಯಾಟಿಂಗ್ ಮುಂದೆ ಕಂಗೆಟ್ಟ, ಮುಂಬೈ ತಂಡ ಕೊನೆಯಲ್ಲಿ ಶರಣಾಗಿ ಸೋಲನ್ನ ಒಪ್ಪಿಕೊಳ್ತು. ಇನ್ನಿಂಗ್ಸ್ ಲೀಡ್ ಆಧಾರ ಜಯ ಸಾಧಿಸಿದ ಕರ್ನಾಟಕ ಇತಿಹಾಸ ನಿರ್ಮಿಸಿತು. ಇದೇ ಮೊದಲ ಬಾರಿಗೆ ಕೂಚ್ ಬೆಹಾರ್ ಟ್ರೋಫಿ ಜಯಿಸಿದ ಸಾಧನೆ ಮಾಡಿತು.
ಅಜೇಯ 400 ರನ್ ಸಿಡಿಸಿ ಮಿಂಚಿದ ಕನ್ನಡಿಗ ಪ್ರಕಾರ್ ಚತುರ್ವೇದಿ
ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಓಪನರ್ ಪ್ರಕಾರ್ ಚತುರ್ವೇದಿ ಆಟಕ್ಕೆ ಮುಂಬೈ ತಂಡ ಸುಸ್ತು ಹೊಡೆಯಿತು. ಆರಂಭಿಕನಾಗಿ ಕಣಕ್ಕಿಳಿದು ಅಂತ್ಯವರೆಗೂ ಹೋರಾಡಿದ ಪ್ರಕಾರ ಚತುರ್ವೇದಿ ಮುಂಬೈ ಬೌಲರ್ಗಳ ಬೆವರಿಳಿಸಿದ್ರು. ಅಜೇಯ 404 ರನ್ಗಳ ಅತ್ಯಮೋಘ ಇನ್ನಿಂಗ್ಸ್ ಕಟ್ಟಿ ಅಬ್ಬರಿಸಿದ್ರು.
400 ರನ್ ಸಿಡಿಸಿದ ಪ್ರಕಾರ್ ಚತುರ್ವೇದಿ
ಶತಕ ಸಿಡಿಸೋದು ಅಂದ್ರೆನೆ ಒಂದು ಸಾಧನೆ. ಅಂತ್ರದಲ್ಲಿ ಅಜೇಯ 404 ರನ್ ಸಿಡಿಸೋದು ಅದು ಅಸಾಧ್ಯದ ವಿಚಾರವೆ. ಇಂತಹ ಅಸಾಧ್ಯದ ವಿಚಾರವನ್ನ ಪ್ರಕಾರ್ ಸಾಧ್ಯವಾಗಿಸಿದ್ರು. 638 ಎಸೆತಗಳನ್ನ ಎದುರಿಸಿದ ಪ್ರಕಾರ್, 404 ರನ್ ಸಿಡಿಸಿದ್ರು. 44 ಬೌಂಡರಿ, 3 ಭರ್ಜರಿ ಸಿಕ್ಸರ್ ಚತುರ್ವೇದಿಯ ಇನ್ನಿಂಗ್ಸ್ನಲ್ಲಿದ್ವು.
ಪ್ರಕಾರ್ ‘ಪ್ರಹಾರ’.. ಯುವರಾಜ್ ಸಿಂಗ್ ದಾಖಲೆ ಉಡೀಸ್.!
1999ರಲ್ಲಿ ನಡೆದ ಕೂಚ್ ಬೆಹಾರ್ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ 358 ರನ್ಗಳಿಸಿದ್ದರು. ಅದೇ ಈವರೆಗಿನ ಫೈನಲ್ ಪಂದ್ಯದ ಹೈಯೆಸ್ಟ್ ಸ್ಕೋರ್ ಆಗಿತ್ತು. ಈ ದಾಖಲೆಯನ್ನ ಇದೀಗ ಪ್ರಕಾರ್ ಉಡೀಸ್ ಮಾಡಿದ್ದಾರೆ. ಪ್ರಕಾರ್ ಮಾತ್ರವಲ್ಲ.. ಇಡೀ ಕರ್ನಾಟಕ ತಂಡವೇ ಫೈನಲ್ ಫೈಟ್ನಲ್ಲಿ ಆಲ್ರೌಂಡ್ ಆಟವಾಡಿತು.
ಕೂಚ್ ಬೆಹಾರ್ ಫೈನಲ್ ಹೀರೋಸ್- ಬೌಲರ್ಸ್
ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪರ ಹಾರ್ದಿಕ್ ರಾಜ್ 4 ವಿಕೆಟ್ ಕಬಳಿಸಿದ್ರೆ, ಸಮರ್ಥ್ N ಹಾಗೂ ಸಮಿತ್ ದ್ರಾವಿಡ್ ತಲಾ 2 ವಿಕೆಟ್ ಕಬಳಿಸಿದ್ರು. ಇನ್ನು, ಕ್ಯಾಪ್ಟನ್ ಧೀರಜ್ ಗೌಡ ಹಾಗೂ ಅಗಸ್ತ್ಯ ತಲಾ 1 ವಿಕೆಟ್ ಕಬಳಿಸಿದ್ರು.
ಕೂಚ್ ಬೆಹಾರ್ ಫೈನಲ್ ಹೀರೋಸ್- ಬ್ಯಾಟ್ಸ್ಮನ್
ಬ್ಯಾಟಿಂಗ್ನಲ್ಲಿ ಪ್ರಕಾರ್ ಚತುರ್ವೇದಿ ಅಜೇಯ 404 ರನ್ ಸಿಡಿಸಿದ್ರೆ, ಹರ್ಷಿಲ್ ಧರ್ಮಾನಿ 169 ರನ್ ಸಿಡಿಸಿದ್ರು. ಇನ್ನು, ಕಾರ್ತಿಕೇಯ 72, ಸಮರ್ಥ್ N ಅಜೇಯ 55, ಹಾರ್ದಿಕ್ ರಾಜ್ 51 ಹಾಗೂ ಕಾರ್ತಿಕ್ SU 50 ರನ್ ಸಿಡಿಸಿ ಮಿಂಚಿದ್ರು.
ಅದ್ಭುತ ಪ್ರದರ್ಶನ ನೀಡಿದ ಕೂಚ್ ಬೆಹಾರ್ ಫೈನಲ್ ಪಂದ್ಯದಲ್ಲಿ ಆಲ್ರೌಂಡ್ ಆಟವಾಡಿದ ಯುವ ಆಟಗಾರರು ಇಡೀ ರಾಜ್ಯವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲೂ ಯುವ ಆಟಗಾರರ ಪರ್ಫಾಮೆನ್ಸ್ ಹೀಗೆ ಇರಲಿ. ಸೀನಿಯರ್ ತಂಡಕ್ಕೆ ಎಂಟ್ರಿ ಕೊಟ್ಟಾಗಲೂ ಮಿಂಚಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ