ನಾಳೆ ರಾಮಲಲ್ಲಾ ಪ್ರತಿಷ್ಠಾಪನೆಯ ವೈಭವ
ಕುತೂಹಲತೆಯಿಂದ ಕಾದು ಕುಳಿದ ರಾಜ್ಯದ ಜನತೆ
ರಾಜ್ಯದ ಕೆಲವು ಶಾಲೆಗಳ ಮಕ್ಕಳಿಗೆ ರಜೆ ಘೋಷಣೆ
ಚಿಕ್ಕಮಗಳೂರು: ರಾಮಲಲ್ಲಾನ ಪ್ರಾಣಪ್ರತಿಷ್ಠಾನೆಗೆ ಇಡೀ ಹಿಂದೂ ಸಮಾಜವೇ ಸಂಭ್ರಮದಲ್ಲಿದೆ. ಆದರೆ, ಕಾಫಿನಾಡಿನ ಚಿಕ್ಕಮಗಳೂರಿನ ಚರ್ಚ್ ರಸ್ತೆಯಲ್ಲಿರುವ ಸಂತ ಜೋಸೆಫರ ಕಾನ್ವೆಂಟ್ ಶಾಲೆಗೆ ನಾಳೆ ಮಕ್ಕಳು ಬರಲಿಲ್ಲ ಅಂದ್ರೆ ಸಾವಿರ ದಂಡದ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರ ಹಿಂದೂಪರ ಸಂಘಟಗಳು ಮತ್ತು ವಿ.ಹೆಚ್.ಪಿ, ಬಜರಂಗದಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನೇ ಮುಂದಿಟ್ಟುಕೊಂಡು ಸಾವಿರ ದಂಡ ಅಂತ ಹೇಳಿದ್ದಾರೆಂದು ಕಿಡಿಕಾರಿದ್ದಾರೆ. ಇನ್ನು ಕಾನ್ವೆಂಟ್ ಮುಂದೇ ಆಕ್ರೋಶ ಹೊರಹಾಕ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ರು, ಎಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾನ್ವೆಂಟ್ ಮುಖ್ಯೋಪಾಧ್ಯಯರು ಸೇರಿದಂತೆ ಅಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ರು.
ಕೊನೆಗೂ ಸಾವಿರ ರೂಪಾಯಿ ದಂಡವಿಲ್ಲ ಅಂತ ಗೊತ್ತಾಗ್ತಿದ್ದಂತೆ ಅಲ್ಲಿಂದ ವಿಹೆಚ್ಪಿ ಹಾಗೂ ಬಜರಂಗದಳ ಮುಖಂಡ್ರು ವಾಪಸ್ಸಾದ್ರು. ನಂತರ ಡಿಡಿಪಿಐ ಪ್ರಕಾಶ್ ಕಾನ್ವೆಂಟ್ ಶಾಲೆಗೆ ಭೇಟಿ ನೀಡಿ ವಿವಾದದ ಬಗ್ಗೆ ಮಾಹಿತಿ ಪಡೆದ್ರು. ನಾಳೆ ಭೇಟಿ ನೀಡ್ತೇನೆ ಆ ರೀತಿ ಆರೋಪದ ದೂರು ಬಂದ್ರೆ ಕ್ರಮಕೈಗೊಳ್ತಿನಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಳೆ ರಾಮಲಲ್ಲಾ ಪ್ರತಿಷ್ಠಾಪನೆಯ ವೈಭವ
ಕುತೂಹಲತೆಯಿಂದ ಕಾದು ಕುಳಿದ ರಾಜ್ಯದ ಜನತೆ
ರಾಜ್ಯದ ಕೆಲವು ಶಾಲೆಗಳ ಮಕ್ಕಳಿಗೆ ರಜೆ ಘೋಷಣೆ
ಚಿಕ್ಕಮಗಳೂರು: ರಾಮಲಲ್ಲಾನ ಪ್ರಾಣಪ್ರತಿಷ್ಠಾನೆಗೆ ಇಡೀ ಹಿಂದೂ ಸಮಾಜವೇ ಸಂಭ್ರಮದಲ್ಲಿದೆ. ಆದರೆ, ಕಾಫಿನಾಡಿನ ಚಿಕ್ಕಮಗಳೂರಿನ ಚರ್ಚ್ ರಸ್ತೆಯಲ್ಲಿರುವ ಸಂತ ಜೋಸೆಫರ ಕಾನ್ವೆಂಟ್ ಶಾಲೆಗೆ ನಾಳೆ ಮಕ್ಕಳು ಬರಲಿಲ್ಲ ಅಂದ್ರೆ ಸಾವಿರ ದಂಡದ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರ ಹಿಂದೂಪರ ಸಂಘಟಗಳು ಮತ್ತು ವಿ.ಹೆಚ್.ಪಿ, ಬಜರಂಗದಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನೇ ಮುಂದಿಟ್ಟುಕೊಂಡು ಸಾವಿರ ದಂಡ ಅಂತ ಹೇಳಿದ್ದಾರೆಂದು ಕಿಡಿಕಾರಿದ್ದಾರೆ. ಇನ್ನು ಕಾನ್ವೆಂಟ್ ಮುಂದೇ ಆಕ್ರೋಶ ಹೊರಹಾಕ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ರು, ಎಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾನ್ವೆಂಟ್ ಮುಖ್ಯೋಪಾಧ್ಯಯರು ಸೇರಿದಂತೆ ಅಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ರು.
ಕೊನೆಗೂ ಸಾವಿರ ರೂಪಾಯಿ ದಂಡವಿಲ್ಲ ಅಂತ ಗೊತ್ತಾಗ್ತಿದ್ದಂತೆ ಅಲ್ಲಿಂದ ವಿಹೆಚ್ಪಿ ಹಾಗೂ ಬಜರಂಗದಳ ಮುಖಂಡ್ರು ವಾಪಸ್ಸಾದ್ರು. ನಂತರ ಡಿಡಿಪಿಐ ಪ್ರಕಾಶ್ ಕಾನ್ವೆಂಟ್ ಶಾಲೆಗೆ ಭೇಟಿ ನೀಡಿ ವಿವಾದದ ಬಗ್ಗೆ ಮಾಹಿತಿ ಪಡೆದ್ರು. ನಾಳೆ ಭೇಟಿ ನೀಡ್ತೇನೆ ಆ ರೀತಿ ಆರೋಪದ ದೂರು ಬಂದ್ರೆ ಕ್ರಮಕೈಗೊಳ್ತಿನಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ