ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
2 ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರ ತಂಡ ಆಯ್ಕೆ
ಏಕದಿನ ಸರಣಿಗೆ 17 ಸದಸ್ಯರ ತಂಡ ಪ್ರಕಟ
WTC ಫೈನಲ್ ಬಳಿಕ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಪರ್ಯಟನೆಗೆ ಸನ್ನದ್ಧವಾಗಿದೆ. ಇದಕ್ಕಾಗಿ ಟೆಸ್ಟ್ ಹಾಗೂ ಏಕದಿನ ತಂಡವನ್ನು ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಹಾಗಾದ್ರೆ ವಿಂಡೀಸ್ ಟಿಕೆಟ್ ಪಡೆದಿರೋ ಆ ಕಲಿಗಳು ಯಾರು?
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮುಗೀದ ಬೆನ್ನಲ್ಲೇ ಟೀಮ್ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಜ್ಜಾಗ್ತಿದೆ. ಸರಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯಗಳನ್ನಾಡಲಿದ್ದು, ಇದಕ್ಕಾಗಿ ಸೆಲೆಕ್ಷನ್ ಕಮಿಟಿ ಅಳೆದು ತೂಗಿ ಟೀಮ್ ಇಂಡಿಯಾವನ್ನ ಪ್ರಕಟಿಸಿದ್ದಾರೆ. ಸದ್ಯ ಟೆಸ್ಟ್ ಹಾಗೂ ಏಕದಿನ ಸರಣಿಗೆ ಮಾತ್ರವೇ ರೋಹಿತ್ ಸಾರಥ್ಯದ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ ಅಚ್ಚರಿ ಆಯ್ಕೆಗಳು ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಜುಲೈ 12ರಿಂದ ಆರಂಭಗೊಳ್ಳಲಿರುವ ವಿಂಡೀಸ್ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ಇದೇ ಸರಣಿಯಿಂದಲೇ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಭಿಯಾನ ಆರಂಭಿಸಲಿದೆ. ಈ ನಿಟ್ಟಿನಲ್ಲಿ 16 ಸದಸ್ಯರ ತಂಡವನ್ನ ಪ್ರಕಟಿಸಿರೋ ಬಿಸಿಸಿಐ, ಕೆಲ ಆಟಗಾರರಿಗೆ ಕೊಕ್ ನೀಡಿ ಶಾಕ್ ನೀಡಿದ್ರೆ. ಕೆಲ ಯುವ ಆಟಗಾರರಿಗೆ ಅವಕಾಶ ನೀಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯ ತಂಡ ಕಟ್ಟುವ ಸಂದೇಶ ರವಾನಿಸಿದೆ.
ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾಱರಿಗೆ ಸ್ಥಾನ ಸಿಕ್ಕಿದೆ ಅನ್ನೋದನ್ನ ನೋಡೋದ್ರಾದ್ರೆ, ಮುಂಬೈಕರ್ಗಳಾದ ರೋಹಿತ್ ಶರ್ಮಾ ನಾಯಕರಾಗಿದ್ರೆ. ಅಜಿಂಕ್ಯಾ ರಹಾನೆ ಉಪನಾಯಕರಾಗಿ ಪ್ರಮೋಷನ್ ಪಡೆದಿದ್ದಾರೆ. ಉಳಿದಂತೆ ಶುಭಮನ್ ಗಿಲ್ ತಂಡದಲ್ಲಿದ್ದಾರೆ. ಋತುರಾಜ್ ಗಾಯಕ್ವಾಡ್ ಟೆಸ್ಟ್ಗೆ ಚೊಚ್ಚಲ ಕರೆ ಪಡೆದರೆ, ವಿರಾಟ್, ಯಶಸ್ವಿ ಜೈಸ್ವಾಲ್ ತಂಡದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ಗಳಾಗಿ ಕೆ.ಎಸ್.ಭರತ್, ಇಶಾನ್ ಕಿಶನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರೆ. ಆಲ್ರೌಂಡರ್ ಕೋಟಾದಲ್ಲಿ ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಆಪ್ ಸ್ಪಿನ್ನರ್ ಅಶ್ವಿನ್ ಸ್ಪಿನ್ ಕೋಟಾದಲ್ಲಿ ಆಯ್ಕೆಯಾಗಿರೋ ಏಕೈಕ ಸ್ಪಿನ್ನರ್ ಆಗಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಜೈದೇವ್ ಉನಾದ್ಕಟ್ ಎಂದಿನಂತೆ ಸ್ಥಾನ ಪಡೆದ್ರೆ, 2 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬೆಂಗಾಲ್ ವೇಗಿ ಮುಖೇಶ್ ಕುಮಾರ್ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದಿಷ್ಟೇ ಅಲ್ಲ.! ಜುಲೈ 27ರಿಂದ ಆರಂಭವಾಗಲಿರೋ 3 ಪಂದ್ಯಗಳ ಏಕದಿನ ಸರಣಿಗೆ 17 ಸದಸ್ಯರ ಟೀಮ್ ಇಂಡಿಯಾವನ್ನ ಪ್ರಕಟಿಸಿರೋ ಆಯ್ಕೆ ಸಮಿತಿ, ಮುಂದಿನ ಏಷ್ಯಾಕಪ್ ಹಾಗೂ ವಿಶ್ವಕಪ್ ಅನ್ನ ದೃಷ್ಟಿಯಲ್ಲಿ ಇಟ್ಟುಕೊಂಡೇ ತಂಡವನ್ನ ಪ್ರಕಟಿಸಿದಂತೆ ಕಾಣ್ತಿದೆ.
ಏಕದಿನ ಸರಣಿಗೆ ಟೀಮ್ ಇಂಡಿಯಾ
ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ್ರೆ, ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. ಇನ್ನುಳಿದಂತೆ ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟ್ಸ್ಮನ್ಗಳಾಗಿ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ಧಾರೆ. ಇನ್ನು ಇಶಾನ್ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ರೆ. ಆಲ್ರೌಂಡರ್ಗಳಾಗಿ ಶಾರ್ದುಲ್ ಠಾಕೂರ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಸ್ಪಿನ್ ಕೋಟಾದಲ್ಲಿ ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್ ಸ್ಥಾನ ಉಳಿಸಿಕೊಂಡರೆ, ವೇಗಿಗಳಾಗಿ ಜೈದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಆ ಮೂಲಕ ಟೆಸ್ಟ್ ಹಾಗೂ ಏಕದಿನ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿರೋ ಸೆಲೆಕ್ಷನ್ ಕಮಿಟಿ, ವಿಂಡೀಸ್ ನಾಡಿಗೆ ಯುವ ಹಾಗೂ ಹಿರಿಯರ ಸಮ್ಮಿಶ್ರಣದ ತಂಡವನ್ನ ಕಳುಹಿಸುತ್ತಿದೆ.
ಒಟ್ನಲ್ಲಿ, ಭಾರೀ ಲೆಕ್ಕಚಾರದೊಂದಿಗೆ ಟೆಸ್ಟ್ ಹಾಗೂ ಏಕದಿನ ತಂಡವನ್ನ ಆಯ್ಕೆ ಮಾಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯದ ರೂಟ್ ಮ್ಯಾಪ್ಗೆ ಅನುಗುಣವಾಗಿಯೇ ತಂಡವನ್ನ ಪ್ರಕಟಿಸಿದೆ. ಅಷ್ಟೇ ಅಲ್ಲ.! ಕೆಲ ಆಟಗಾರರಿಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿರೋದು ಸುಳ್ಳಲ್ಲ. ಆದ್ರೆ, ಈ ಯಂಗ್ ಪ್ಲೇಯರ್ಸ್ ಪೈಕಿ ವಿಂಡೀಸ್ ಪ್ರವಾಸದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಕ್ಕಿ ಸಕ್ಸಸ್ ಕಾಣುತ್ತಾರೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
2 ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರ ತಂಡ ಆಯ್ಕೆ
ಏಕದಿನ ಸರಣಿಗೆ 17 ಸದಸ್ಯರ ತಂಡ ಪ್ರಕಟ
WTC ಫೈನಲ್ ಬಳಿಕ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಪರ್ಯಟನೆಗೆ ಸನ್ನದ್ಧವಾಗಿದೆ. ಇದಕ್ಕಾಗಿ ಟೆಸ್ಟ್ ಹಾಗೂ ಏಕದಿನ ತಂಡವನ್ನು ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಹಾಗಾದ್ರೆ ವಿಂಡೀಸ್ ಟಿಕೆಟ್ ಪಡೆದಿರೋ ಆ ಕಲಿಗಳು ಯಾರು?
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮುಗೀದ ಬೆನ್ನಲ್ಲೇ ಟೀಮ್ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಜ್ಜಾಗ್ತಿದೆ. ಸರಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯಗಳನ್ನಾಡಲಿದ್ದು, ಇದಕ್ಕಾಗಿ ಸೆಲೆಕ್ಷನ್ ಕಮಿಟಿ ಅಳೆದು ತೂಗಿ ಟೀಮ್ ಇಂಡಿಯಾವನ್ನ ಪ್ರಕಟಿಸಿದ್ದಾರೆ. ಸದ್ಯ ಟೆಸ್ಟ್ ಹಾಗೂ ಏಕದಿನ ಸರಣಿಗೆ ಮಾತ್ರವೇ ರೋಹಿತ್ ಸಾರಥ್ಯದ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ ಅಚ್ಚರಿ ಆಯ್ಕೆಗಳು ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಜುಲೈ 12ರಿಂದ ಆರಂಭಗೊಳ್ಳಲಿರುವ ವಿಂಡೀಸ್ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ಇದೇ ಸರಣಿಯಿಂದಲೇ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಭಿಯಾನ ಆರಂಭಿಸಲಿದೆ. ಈ ನಿಟ್ಟಿನಲ್ಲಿ 16 ಸದಸ್ಯರ ತಂಡವನ್ನ ಪ್ರಕಟಿಸಿರೋ ಬಿಸಿಸಿಐ, ಕೆಲ ಆಟಗಾರರಿಗೆ ಕೊಕ್ ನೀಡಿ ಶಾಕ್ ನೀಡಿದ್ರೆ. ಕೆಲ ಯುವ ಆಟಗಾರರಿಗೆ ಅವಕಾಶ ನೀಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯ ತಂಡ ಕಟ್ಟುವ ಸಂದೇಶ ರವಾನಿಸಿದೆ.
ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾಱರಿಗೆ ಸ್ಥಾನ ಸಿಕ್ಕಿದೆ ಅನ್ನೋದನ್ನ ನೋಡೋದ್ರಾದ್ರೆ, ಮುಂಬೈಕರ್ಗಳಾದ ರೋಹಿತ್ ಶರ್ಮಾ ನಾಯಕರಾಗಿದ್ರೆ. ಅಜಿಂಕ್ಯಾ ರಹಾನೆ ಉಪನಾಯಕರಾಗಿ ಪ್ರಮೋಷನ್ ಪಡೆದಿದ್ದಾರೆ. ಉಳಿದಂತೆ ಶುಭಮನ್ ಗಿಲ್ ತಂಡದಲ್ಲಿದ್ದಾರೆ. ಋತುರಾಜ್ ಗಾಯಕ್ವಾಡ್ ಟೆಸ್ಟ್ಗೆ ಚೊಚ್ಚಲ ಕರೆ ಪಡೆದರೆ, ವಿರಾಟ್, ಯಶಸ್ವಿ ಜೈಸ್ವಾಲ್ ತಂಡದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ಗಳಾಗಿ ಕೆ.ಎಸ್.ಭರತ್, ಇಶಾನ್ ಕಿಶನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರೆ. ಆಲ್ರೌಂಡರ್ ಕೋಟಾದಲ್ಲಿ ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಆಪ್ ಸ್ಪಿನ್ನರ್ ಅಶ್ವಿನ್ ಸ್ಪಿನ್ ಕೋಟಾದಲ್ಲಿ ಆಯ್ಕೆಯಾಗಿರೋ ಏಕೈಕ ಸ್ಪಿನ್ನರ್ ಆಗಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಜೈದೇವ್ ಉನಾದ್ಕಟ್ ಎಂದಿನಂತೆ ಸ್ಥಾನ ಪಡೆದ್ರೆ, 2 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬೆಂಗಾಲ್ ವೇಗಿ ಮುಖೇಶ್ ಕುಮಾರ್ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದಿಷ್ಟೇ ಅಲ್ಲ.! ಜುಲೈ 27ರಿಂದ ಆರಂಭವಾಗಲಿರೋ 3 ಪಂದ್ಯಗಳ ಏಕದಿನ ಸರಣಿಗೆ 17 ಸದಸ್ಯರ ಟೀಮ್ ಇಂಡಿಯಾವನ್ನ ಪ್ರಕಟಿಸಿರೋ ಆಯ್ಕೆ ಸಮಿತಿ, ಮುಂದಿನ ಏಷ್ಯಾಕಪ್ ಹಾಗೂ ವಿಶ್ವಕಪ್ ಅನ್ನ ದೃಷ್ಟಿಯಲ್ಲಿ ಇಟ್ಟುಕೊಂಡೇ ತಂಡವನ್ನ ಪ್ರಕಟಿಸಿದಂತೆ ಕಾಣ್ತಿದೆ.
ಏಕದಿನ ಸರಣಿಗೆ ಟೀಮ್ ಇಂಡಿಯಾ
ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ್ರೆ, ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. ಇನ್ನುಳಿದಂತೆ ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟ್ಸ್ಮನ್ಗಳಾಗಿ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ಧಾರೆ. ಇನ್ನು ಇಶಾನ್ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ರೆ. ಆಲ್ರೌಂಡರ್ಗಳಾಗಿ ಶಾರ್ದುಲ್ ಠಾಕೂರ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಸ್ಪಿನ್ ಕೋಟಾದಲ್ಲಿ ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್ ಸ್ಥಾನ ಉಳಿಸಿಕೊಂಡರೆ, ವೇಗಿಗಳಾಗಿ ಜೈದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಆ ಮೂಲಕ ಟೆಸ್ಟ್ ಹಾಗೂ ಏಕದಿನ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿರೋ ಸೆಲೆಕ್ಷನ್ ಕಮಿಟಿ, ವಿಂಡೀಸ್ ನಾಡಿಗೆ ಯುವ ಹಾಗೂ ಹಿರಿಯರ ಸಮ್ಮಿಶ್ರಣದ ತಂಡವನ್ನ ಕಳುಹಿಸುತ್ತಿದೆ.
ಒಟ್ನಲ್ಲಿ, ಭಾರೀ ಲೆಕ್ಕಚಾರದೊಂದಿಗೆ ಟೆಸ್ಟ್ ಹಾಗೂ ಏಕದಿನ ತಂಡವನ್ನ ಆಯ್ಕೆ ಮಾಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯದ ರೂಟ್ ಮ್ಯಾಪ್ಗೆ ಅನುಗುಣವಾಗಿಯೇ ತಂಡವನ್ನ ಪ್ರಕಟಿಸಿದೆ. ಅಷ್ಟೇ ಅಲ್ಲ.! ಕೆಲ ಆಟಗಾರರಿಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿರೋದು ಸುಳ್ಳಲ್ಲ. ಆದ್ರೆ, ಈ ಯಂಗ್ ಪ್ಲೇಯರ್ಸ್ ಪೈಕಿ ವಿಂಡೀಸ್ ಪ್ರವಾಸದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಕ್ಕಿ ಸಕ್ಸಸ್ ಕಾಣುತ್ತಾರೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್