ತಾರಕಕ್ಕೇರಿದ ಮಂಡ್ಯ ಲೋಕಸಭಾ ಚುನಾವಣೆ
ಮಂಡ್ಯದಿಂದಲೇ ಸುಮಲತಾ ಅಂಬರೀಶ್ ಕಣಕ್ಕೆ
ಸುಮಲತಾಗೆ ಬಿಜೆಪಿ ಟಿಕೆಟ್ ಕೊಡಲಿ ಎಂದ ಮಾಜಿ ಮಿನಿಸ್ಟರ್!
ಮಂಡ್ಯ: ಲೋಕಸಭಾ ಸಮರದ ಸೇನಾನಿಗಳ ಆಯ್ಕೆಗೆ ಕಸರತ್ತು ಜೋರಾಗಿದೆ. ಮಾಜಿ ಸಿಎಂ ಹೆಚ್ಡಿಕೆ ಅವರ ಬಿಡದಿ ಫಾರ್ಮ್ ಹೌಸ್, ರಾಜಕೀಯ ಚಟುವಟಿಕೆಯ ಪ್ರವಾಸಿ ಕ್ಷೇತ್ರವಾಗಿದೆ. ಬಿಜೆಪಿಯ ಸರಣಿ ನಾಯಕರು ಹೆಚ್ಡಿಕೆ ಬಳಿ ಮದ್ದು ಪಡೆಯುತ್ತಿದ್ದಾರೆ. ಆದ್ರೆ, ದಳಪತಿಗಳ ಗಟ್ಟಿ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ, ಮಂಡೆ ಬಿಸಿ ಮಾಡ್ತಿದೆ. ಇತ್ತ, ಬಿಜೆಪಿಗೆ ರೆಡ್ಡಿ, ಸಂಕಟ ಹೆಚ್ಚಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ರಾಜ್ಯ ರಾಜಕೀಯದ ವಠಾರ. ಆದ್ರೆ, ಬಿಡದಿಯ ಫಾರ್ಮ್ ಹೌಸ್ ಈಗ ಪವರ್ ಸ್ಟೇಷನ್ ಆಗಿ ಬದಲಾಗಿದೆ. ಬಿಜೆಪಿ, ಜೆಡಿಎಸ್ನ ರಾಜಕೀಯ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರವಾಗಿದೆ. ಜೆಡಿಎಸ್ ನಾಯಕರ ಪಾಲಿನ ತವರು ಮನೆ ಆದ ಈ ಬಿಡದಿ ಫಾರ್ಮ್ ಹೌಸ್ಗೆ ಬಿಜೆಪಿ ನಾಯಕರಿಗೂ ಈ ಮದ್ದಿನ ಅರಮನೆ, ಟ್ರಬಲ್ ಶೂಟರ್ ರೀತಿ ಕಾಣಿಸ್ತಿದೆ. ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಬಿಜೆಪಿಯ ಸಾಲು ಸಾಲು ನಾಯಕರು, ದಳಪತಿ ಭೇಟಿಗೆ ಸಾಲುಗಟ್ಟುತ್ತಿದ್ದಾರೆ. ಮೈತ್ರಿ ಆಗಿರೋ ಕಾರಣ ಮಂಡ್ಯವನ್ನು ಬಿಜೆಪಿ, ಜೆಡಿಎಸ್ಗೆ ಬಿಟ್ಟುಕೊಡಲಿದೆ. ಹೀಗಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ಸುಮಲತಾ ಅಂಬರೀಶ್ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ನಾರಾಯಣಗೌಡ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ನಾರಾಯಣಗೌಡ ಹೇಳಿದ್ದೇನು..?
ಮಂಡ್ಯದಲ್ಲಿ ಬಿಜೆಪಿಯಿಂದ 7 ಜನ ಸ್ಪರ್ಧೆ ಮಾಡಿದ್ದೆವು. ಅಂದಿನಿಂದ ಬಿಜೆಪಿಗೆ ಸುಮಲತಾ ಅಂಬರೀಶ್ ಅವರು ಸಪೋರ್ಟ್ ಮಾಡಿದ್ದಾರೆ. ಮಂಡ್ಯವನ್ನು ಜೆಡಿಎಸ್ಗೆ ಯಾಕೆ ಬಿಟ್ಟು ಕೊಡಬೇಕು? ಈಗಷ್ಟೇ ಜಿಲ್ಲೆಯಲ್ಲಿ ಬಿಜೆಪಿ ಚಿಗುರುತ್ತಿದೆ. ನಾನು ಇದೇ ಜಿಲ್ಲೆಯಿಂದಲೇ ಗೆದ್ದು ಬಿಜೆಪಿ ಶಾಸಕನಾದವನು. ಸುಮಲತಾ ಅಂಬರೀಶ್ಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಮಂಡ್ಯ ಟಿಕೆಟ್ ವಿಚಾರಕ್ಕೆ ಕಗ್ಗಂಟು ಮುಂದುವರಿದಿದೆ. ಈ ಸಲ ಸುಮಲತಾ ಸ್ಪರ್ಧೆ ಖಚಿತ ಎಂದು ಗೊತ್ತಾಗಿದೆ. ಹೀಗಾಗಿ ಜೆಡಿಎಸ್ಗೆ ಟೆನ್ಷನ್ ಡಬಲ್ ಆಗಿದ್ದು, ಈ ಬಗ್ಗೆ ಜೆಡಿಎಸ್ನಲ್ಲಿ ಚರ್ಚೆ ನಡೆದಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಗಿದ್ದು, ಸೋತ ಕಣದಲ್ಲೇ ಗೆಲ್ಲಲು ಕುಮಾರಸ್ವಾಮಿ ಅಗತ್ಯತೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ, ಕಳೆದ ಬಾರಿ ಸುಮಲತಾ ಪರವಿದ್ದ ಅನುಕಂಪ, ನಿಖಿಲ್ ಪರ ತಿರುಗಿದೆ ಅನ್ನೋ ಅಭಿಪ್ರಾಯ ಕ್ಷೇತ್ರದಲ್ಲಿ ಕಾಣಿಸ್ತಿದ್ದು, ನಿಖಿಲ್ಗೆ ಮತ್ತೆ ಕಣಕ್ಕಿಳಿಸಲು ಹೆಚ್ಡಿಕೆ ಪ್ಲಾನ್ ರೂಪಿಸಿದ್ದಾರೆ.
ತಾರಕಕ್ಕೇರಿದ ಮಂಡ್ಯ ಲೋಕಸಭಾ ಚುನಾವಣೆ
ಮಂಡ್ಯದಿಂದಲೇ ಸುಮಲತಾ ಅಂಬರೀಶ್ ಕಣಕ್ಕೆ
ಸುಮಲತಾಗೆ ಬಿಜೆಪಿ ಟಿಕೆಟ್ ಕೊಡಲಿ ಎಂದ ಮಾಜಿ ಮಿನಿಸ್ಟರ್!
ಮಂಡ್ಯ: ಲೋಕಸಭಾ ಸಮರದ ಸೇನಾನಿಗಳ ಆಯ್ಕೆಗೆ ಕಸರತ್ತು ಜೋರಾಗಿದೆ. ಮಾಜಿ ಸಿಎಂ ಹೆಚ್ಡಿಕೆ ಅವರ ಬಿಡದಿ ಫಾರ್ಮ್ ಹೌಸ್, ರಾಜಕೀಯ ಚಟುವಟಿಕೆಯ ಪ್ರವಾಸಿ ಕ್ಷೇತ್ರವಾಗಿದೆ. ಬಿಜೆಪಿಯ ಸರಣಿ ನಾಯಕರು ಹೆಚ್ಡಿಕೆ ಬಳಿ ಮದ್ದು ಪಡೆಯುತ್ತಿದ್ದಾರೆ. ಆದ್ರೆ, ದಳಪತಿಗಳ ಗಟ್ಟಿ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ, ಮಂಡೆ ಬಿಸಿ ಮಾಡ್ತಿದೆ. ಇತ್ತ, ಬಿಜೆಪಿಗೆ ರೆಡ್ಡಿ, ಸಂಕಟ ಹೆಚ್ಚಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ರಾಜ್ಯ ರಾಜಕೀಯದ ವಠಾರ. ಆದ್ರೆ, ಬಿಡದಿಯ ಫಾರ್ಮ್ ಹೌಸ್ ಈಗ ಪವರ್ ಸ್ಟೇಷನ್ ಆಗಿ ಬದಲಾಗಿದೆ. ಬಿಜೆಪಿ, ಜೆಡಿಎಸ್ನ ರಾಜಕೀಯ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರವಾಗಿದೆ. ಜೆಡಿಎಸ್ ನಾಯಕರ ಪಾಲಿನ ತವರು ಮನೆ ಆದ ಈ ಬಿಡದಿ ಫಾರ್ಮ್ ಹೌಸ್ಗೆ ಬಿಜೆಪಿ ನಾಯಕರಿಗೂ ಈ ಮದ್ದಿನ ಅರಮನೆ, ಟ್ರಬಲ್ ಶೂಟರ್ ರೀತಿ ಕಾಣಿಸ್ತಿದೆ. ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಬಿಜೆಪಿಯ ಸಾಲು ಸಾಲು ನಾಯಕರು, ದಳಪತಿ ಭೇಟಿಗೆ ಸಾಲುಗಟ್ಟುತ್ತಿದ್ದಾರೆ. ಮೈತ್ರಿ ಆಗಿರೋ ಕಾರಣ ಮಂಡ್ಯವನ್ನು ಬಿಜೆಪಿ, ಜೆಡಿಎಸ್ಗೆ ಬಿಟ್ಟುಕೊಡಲಿದೆ. ಹೀಗಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ಸುಮಲತಾ ಅಂಬರೀಶ್ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ನಾರಾಯಣಗೌಡ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ನಾರಾಯಣಗೌಡ ಹೇಳಿದ್ದೇನು..?
ಮಂಡ್ಯದಲ್ಲಿ ಬಿಜೆಪಿಯಿಂದ 7 ಜನ ಸ್ಪರ್ಧೆ ಮಾಡಿದ್ದೆವು. ಅಂದಿನಿಂದ ಬಿಜೆಪಿಗೆ ಸುಮಲತಾ ಅಂಬರೀಶ್ ಅವರು ಸಪೋರ್ಟ್ ಮಾಡಿದ್ದಾರೆ. ಮಂಡ್ಯವನ್ನು ಜೆಡಿಎಸ್ಗೆ ಯಾಕೆ ಬಿಟ್ಟು ಕೊಡಬೇಕು? ಈಗಷ್ಟೇ ಜಿಲ್ಲೆಯಲ್ಲಿ ಬಿಜೆಪಿ ಚಿಗುರುತ್ತಿದೆ. ನಾನು ಇದೇ ಜಿಲ್ಲೆಯಿಂದಲೇ ಗೆದ್ದು ಬಿಜೆಪಿ ಶಾಸಕನಾದವನು. ಸುಮಲತಾ ಅಂಬರೀಶ್ಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಮಂಡ್ಯ ಟಿಕೆಟ್ ವಿಚಾರಕ್ಕೆ ಕಗ್ಗಂಟು ಮುಂದುವರಿದಿದೆ. ಈ ಸಲ ಸುಮಲತಾ ಸ್ಪರ್ಧೆ ಖಚಿತ ಎಂದು ಗೊತ್ತಾಗಿದೆ. ಹೀಗಾಗಿ ಜೆಡಿಎಸ್ಗೆ ಟೆನ್ಷನ್ ಡಬಲ್ ಆಗಿದ್ದು, ಈ ಬಗ್ಗೆ ಜೆಡಿಎಸ್ನಲ್ಲಿ ಚರ್ಚೆ ನಡೆದಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಗಿದ್ದು, ಸೋತ ಕಣದಲ್ಲೇ ಗೆಲ್ಲಲು ಕುಮಾರಸ್ವಾಮಿ ಅಗತ್ಯತೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ, ಕಳೆದ ಬಾರಿ ಸುಮಲತಾ ಪರವಿದ್ದ ಅನುಕಂಪ, ನಿಖಿಲ್ ಪರ ತಿರುಗಿದೆ ಅನ್ನೋ ಅಭಿಪ್ರಾಯ ಕ್ಷೇತ್ರದಲ್ಲಿ ಕಾಣಿಸ್ತಿದ್ದು, ನಿಖಿಲ್ಗೆ ಮತ್ತೆ ಕಣಕ್ಕಿಳಿಸಲು ಹೆಚ್ಡಿಕೆ ಪ್ಲಾನ್ ರೂಪಿಸಿದ್ದಾರೆ.