ತಾಯಿಯನ್ನು ಕೊಲೆಗೈದ ಅಪ್ರಾಪ್ತ ಮಗ
ಕಬ್ಬಿಣದ ರಾಡ್ನಿಂದ ತಾಯಿಯ ಹತ್ಯೆ
ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ಮಗನಿಂದ ಕೃತ್ಯ
ಬೆಂಗಳೂರು: ಅಪ್ರಾಪ್ತ ಬಾಲಕನೋರ್ವ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಕೆ.ಆರ್.ಪುರಂ ನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಮಗನ ಕೈಯಾರೆ ತಾಯಿ ನೇತ್ರಾವತಿ (40) ಸಾವನ್ನಪ್ಪಿದ್ದಾಳೆ.
ಅಪ್ರಾಪ್ತ ಮುಳಬಾಗಿಲಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದನು. ನಿನ್ನೆ ತಾಯಿಯನ್ನ ಭೇಟಿಯಾಗಲಿಕ್ಕೆ ಕೆ.ಆರ್.ಪುರಂಗೆ ಬಂದಿದ್ದನು. ಈ ವೇಳೆ ತಾಯಿಗೆ ರಾಡ್ನಿಂದ ಹಲ್ಲೆ ಮಾಡಿದ್ದಾನೆ.
ಮಗನ ಹಲ್ಲೆಯಿಂದ ತಾಯಿ ನೇತ್ರವಾತಿ ಪ್ರಾಣಬಿಟ್ಟಿದ್ದಾಳೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಾಯಿಯನ್ನು ಕೊಲೆಗೈದ ಅಪ್ರಾಪ್ತ ಮಗ
ಕಬ್ಬಿಣದ ರಾಡ್ನಿಂದ ತಾಯಿಯ ಹತ್ಯೆ
ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ಮಗನಿಂದ ಕೃತ್ಯ
ಬೆಂಗಳೂರು: ಅಪ್ರಾಪ್ತ ಬಾಲಕನೋರ್ವ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಕೆ.ಆರ್.ಪುರಂ ನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಮಗನ ಕೈಯಾರೆ ತಾಯಿ ನೇತ್ರಾವತಿ (40) ಸಾವನ್ನಪ್ಪಿದ್ದಾಳೆ.
ಅಪ್ರಾಪ್ತ ಮುಳಬಾಗಿಲಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದನು. ನಿನ್ನೆ ತಾಯಿಯನ್ನ ಭೇಟಿಯಾಗಲಿಕ್ಕೆ ಕೆ.ಆರ್.ಪುರಂಗೆ ಬಂದಿದ್ದನು. ಈ ವೇಳೆ ತಾಯಿಗೆ ರಾಡ್ನಿಂದ ಹಲ್ಲೆ ಮಾಡಿದ್ದಾನೆ.
ಮಗನ ಹಲ್ಲೆಯಿಂದ ತಾಯಿ ನೇತ್ರವಾತಿ ಪ್ರಾಣಬಿಟ್ಟಿದ್ದಾಳೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ