ಟೋಲ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿಯಾದ ಇನ್ನೊಂದು ಲಾರಿ
ಮಧ್ಯರಾತ್ರಿ ಸಮಯದಲ್ಲಿ ಎರಡು ಲಾರಿ, ಒಂದು ಬಸ್ ನಡುವೆ ಡಿಕ್ಕಿ
ಭೀಕರ ಅಪಘಾತದಿಂದ 7 ಜನರು ಸಾವು, 15 ಜನರಿಗೆ ಗಾಯ
ವಿಜಯವಾಡ: ಎರಡು ಲಾರಿ ಮತ್ತು ಒಂದು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ 7 ಜನರು ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿ ಟೋಲ್ ಪ್ಲಾಜ್ದ ಬಳಿ ನಡೆದಿದೆ. ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದರೆ, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಕವಲಿ ಟೋಲ್ ಪ್ಲಾಜ್ದ ಬಳಿ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಇನ್ನೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಇದಾದ ತಕ್ಷಣ ಎದುರುಗಡೆಯಿಂದ ಬರುತ್ತಿದ್ದ ಬಸ್ ಕೂಡ ಬಂದ ಆ ಲಾರಿಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಲಾರಿಯ ಡ್ರೈವರ್ಗಳಿಬ್ಬರು ಮತ್ತು ಬಸ್ ಚಾಲಕ ಹಾಗೂ 4 ಪ್ರಯಾಣಿಕರು ಸೇರಿ ಒಟ್ಟು 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Horrific: A V Kaveri travels bus collided with a lorry in #Nellore district, 7 dead as of now, with several seriously injured
The accident occurred on the highway near Kavali. Rescue efforts are underway. pic.twitter.com/EVVXybqmJm
— Sudhakar Udumula (@sudhakarudumula) February 10, 2024
ಎವಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ ಚೆನ್ನೈಯಿಂದ ಹೈದರಾಬಾದ್ಗೆ ಹೋಗುವಾಗ ಲಾರಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ನ ಮುಂಭಾಗವೆಲ್ಲ ಫುಲ್ ಜಖಂ ಆಗಿದ್ದರಿಂದ ಡ್ರೈವರ್ ಸೇರಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೋಲ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿಯಾದ ಇನ್ನೊಂದು ಲಾರಿ
ಮಧ್ಯರಾತ್ರಿ ಸಮಯದಲ್ಲಿ ಎರಡು ಲಾರಿ, ಒಂದು ಬಸ್ ನಡುವೆ ಡಿಕ್ಕಿ
ಭೀಕರ ಅಪಘಾತದಿಂದ 7 ಜನರು ಸಾವು, 15 ಜನರಿಗೆ ಗಾಯ
ವಿಜಯವಾಡ: ಎರಡು ಲಾರಿ ಮತ್ತು ಒಂದು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ 7 ಜನರು ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿ ಟೋಲ್ ಪ್ಲಾಜ್ದ ಬಳಿ ನಡೆದಿದೆ. ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದರೆ, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಕವಲಿ ಟೋಲ್ ಪ್ಲಾಜ್ದ ಬಳಿ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಇನ್ನೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಇದಾದ ತಕ್ಷಣ ಎದುರುಗಡೆಯಿಂದ ಬರುತ್ತಿದ್ದ ಬಸ್ ಕೂಡ ಬಂದ ಆ ಲಾರಿಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಲಾರಿಯ ಡ್ರೈವರ್ಗಳಿಬ್ಬರು ಮತ್ತು ಬಸ್ ಚಾಲಕ ಹಾಗೂ 4 ಪ್ರಯಾಣಿಕರು ಸೇರಿ ಒಟ್ಟು 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Horrific: A V Kaveri travels bus collided with a lorry in #Nellore district, 7 dead as of now, with several seriously injured
The accident occurred on the highway near Kavali. Rescue efforts are underway. pic.twitter.com/EVVXybqmJm
— Sudhakar Udumula (@sudhakarudumula) February 10, 2024
ಎವಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ ಚೆನ್ನೈಯಿಂದ ಹೈದರಾಬಾದ್ಗೆ ಹೋಗುವಾಗ ಲಾರಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ನ ಮುಂಭಾಗವೆಲ್ಲ ಫುಲ್ ಜಖಂ ಆಗಿದ್ದರಿಂದ ಡ್ರೈವರ್ ಸೇರಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ