ವಿರಾಟ್ ಕೊಹ್ಲಿ ಸ್ಥಾನಕ್ಕೆ ಸರ್ಫರಾಜ್ ಖಾನ್ ಕುತ್ತು ತರುತ್ತಾರಾ?
ಈಗಾಗಲೇ ಟಿ20, ಏಕದಿನದಲ್ಲಿ ಸ್ಥಾನ ತುಂಬಿದ ಯಂಗ್ಸ್ಟರ್ಸ್
ಧ್ರುವ್ ಜುರೆಲ್ ಆಟ ಮುಂದುವರೆಸಿದ್ರೆ ಈ ಪ್ಲೇಯರ್ಸ್ಗೆ ಕಂಠಕ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ. ಯಂಗ್ಸ್ಟರ್ಗಳ ಅಬ್ಬರದ ಮುಂದೆ ಕಳೆದು ಹೋಗೋ ಭೀತಿ ಸೀನಿಯರ್ಸ್ಗಳನ್ನ ಕಾಡ್ತಿದೆ. ಅಷ್ಟಕ್ಕೂ ಸ್ಥಾನ ಕಳೆದುಕೊಳ್ಳೋ ಭೀತಿಗೆ ಸಿಲುಕಿರೋ ಆಟಗಾರರು ಯಾರು. ಸ್ಥಾನಕ್ಕೆ ಕುತ್ತು ತಂದಿರುವ ಜೂನಿಯರ್ಸ್ ಯಾರು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕಾದಾಟದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರ ಅಬ್ಬರ ಜೋರಾಗಿದೆ. ರಣಾಂಗಣದಲ್ಲಿ ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸ್ತಿರೋ ಯಂಗ್ಸ್ಟರ್, ಸೀನಿಯರ್ಸ್ಗಳಿಗೇ ಪಾಠ ಮಾಡ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ನಿಂದ ಎಲ್ಲರನ್ನ ಇಂಪ್ರೆಸ್ ಮಾಡ್ತಿದ್ದಾರೆ.
ಯುವ ಆಟಗಾರರ ಅಬ್ಬರ, ಸೀನಿಯರ್ಸ್ಗೆ ಢವ., ಢವ.!
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಕೌಂಟ್ಡೌನ್ ಶುರುವಾಗಿದೆ. ಟಿ20, ಏಕದಿನದಲ್ಲಿ ಈಗಾಗಲೇ ಹಲ ಸೀನಿಯರ್ಸ್ ಜಾಗದಲ್ಲಿ ಯುವ ಆಟಗಾರರು ಬಂದು ಕುಳಿತಿದ್ದಾರೆ. ಇದೀಗ ಟೆಸ್ಟ್ ತಂಡದಲ್ಲಿ ತಮ್ಮ ಅಬ್ಬರ ಪರ್ಫಾಮೆನ್ಸ್ನಿಂದಲೇ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಆನ್ಫೀಲ್ಡ್ನಲ್ಲಿ ಜೂನಿಯರ್ಸ್ ಆರ್ಭಟಿಸ್ತಾ ಇದ್ರೆ, ಸೀನಿಯರ್ಸ್ ಎದೆಯಲ್ಲಿ ಢವ.. ಢವ ಶುರುವಾಗಿದೆ.
ರಾಜ್ಕೋಟ್ನಲ್ಲಿ ಸರ್ಫರಾಜ್ ಆರ್ಭಟ.!
ಕಳೆದ 3 ಸೀಸನ್ಗಳಿಂದ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಆರ್ಭಟಿಸಿದ ಸರ್ಫರಾಜ್ ಖಾನ್, ರಾಜ್ಕೋಟ್ ಟೆಸ್ಟ್ನೊಂದಿಗೆ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ರು. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಆರ್ಭಟಿಸಿದ ಸರ್ಫರಾಜ್ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಶತಕ ನಿರೀಕ್ಷೆ ಮೂಡಿಸಿದ್ದ ಯುವ ಆಟಗಾರ ದುರಾದೃಷ್ಟವಶಾತ್ ರನೌಟ್ಗೆ ಬಲಿಯಾದ್ರು. ಆದ್ರೆ, ಇದೇ ಆಟ ತ್ರಿಮೂರ್ತಿಗಳಿಗೆ ನಡುಕ ಶುರುವಾಗುವಂತೆ ಮಾಡಿದೆ.
ರಾಹುಲ್, ಕೊಹ್ಲಿ, ಶ್ರೇಯಸ್ ಸ್ಥಾನಕ್ಕೆ ಕುತ್ತು.!
ಸರ್ಫರಾಜ್ ಶತಕ ಸಿಡಿಸದೇ ಇದ್ರೂ ತನ್ನ ಆಟದಿಂದ ಎಲ್ಲರನ್ನ ಇಂಪ್ರೆಸ್ ಮಾಡಿದ್ದಾರೆ. ಇದು ಸೀನಿಯರ್ಗಳಾದ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಮ್ಬ್ಯಾಕ್ಗೆ ಅಡ್ಡಗಾಲಾಗಿದೆ. ಜೊತೆಗೆ ವಿರಾಟ್ ಕೊಹ್ಲಿ ಸ್ಥಾನಕ್ಕೂ ಸರ್ಫರಾಜ್ ಕುತ್ತು ತಂದಿದ್ದಾರೆ. ಯಾಕಂದ್ರೆ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ 4ನೇ ಕ್ರಮಾಂಕದಲ್ಲಿ ಸರ್ಫರಾಜ್ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ.
ಧ್ರುವ್ ಜುರೆಲ್ ಡಿಸೆಂಟ್ ಆಟ.. ಕಿಶನ್, ಭರತ್ಗೆ ಕಂಟಕ.!
3ನೇ ಟೆಸ್ಟ್ನಲ್ಲಿ ಡೆಬ್ಯು ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಕೂಡ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಬರೋಬ್ಬರಿ 104 ಎಸೆತಗಳನ್ನ ತಾಳ್ಮೆಯಿಂದ ಎದುರಿಸಿದ ಜುರೆಲ್, 46 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ವಿಕೆಟ್ ಹಿಂದೆಯು ಗಮನ ಸೆಳೆದ್ರು. ಹೀಗಾಗಿ ಜುರೆಲ್ ಆಟ ಬಿಸಿಸಿಐ ಮಾತಿಗೆ ಡೋಂಟ್ಕೇರ್ ಅಂದ ಇಶನ್ ಕಿಶನ್ ಪಾಲಿಗೆ ತಂಡದ ಬಾಗಿಲನ್ನೇ ಮುಚ್ಚಿಸಿದ್ರೆ, ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ ಭರತ್ಗೂ ಕಂಟಕ ತಂದಿದೆ.
ಶುಭ್ಮನ್ ಶೈನ್., ಪೂಜಾರ, ರಹಾನೆ ಡೋರ್ ಕ್ಲೋಸ್..!
ಕಳೆದ 2 ವರ್ಷದಿಂದ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನಿಯಾಗಿರೋ, ಶುಭ್ಮನ್ ಗಿಲ್ ಆರಂಭಿಕ ಸ್ಲಾಟ್ನ ಬಳಿಕ ಇದೀಗ ನಂಬರ್ 3 ಸ್ಲಾಟ್ನಲ್ಲೂ ಮಿಂಚಿದ್ದಾರೆ. ವೈಜಾಗ್ ಟೆಸ್ಟ್ನಲ್ಲಿ ಸಾಲಿಡ್ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಕಮ್ಬ್ಯಾಕ್ ಕನವರಿಕೆಯಲ್ಲಿದ್ದ ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಕನಸಿಗೆ ತಣ್ಣೀರೆರಚಿದ್ದಾರೆ.
ಆರಂಭಿಕನಾಗಿ ಜೈಸ್ವಾಲ್ ಭವಿಷ್ಯದ ಭರವಸೆ.!
ಟೀಮ್ ಇಂಡಿಯಾದ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಹೊಸ ಭರವಸೆಯನ್ನೇ ಹುಟ್ಟು ಹಾಕಿದ್ದಾರೆ. ವಿಶ್ವದ ಶ್ರೇಷ್ಠ ಬೌಲಿಂಗ್ ಅಟ್ಯಾಕ್ ಎದುರಿಗೆ ಯಶಸ್ವಿ ಜೈಸ್ವಾಲ್ ಸಕ್ಸಸ್ ಕಂಡಿದ್ದಾರೆ. ಜೊತೆಗೆ ತಮ್ಮ ಆರಂಭಿಕನ ಸ್ಥಾನವನ್ನೂ ಭದ್ರ ಪಡಿಸಿಕೊಂಡಿದ್ದಾರೆ. ಜೈಸ್ವಾಲ್ ಅಬ್ಬರದ ಆಟ ನೋಡಿದವರು, ರಾಜ್ಕೋಟ್ ಟೆಸ್ಟ್ಗೂ ಮುನ್ನ ಕ್ಯಾಪ್ಟನ್ ರೋಹಿತ್ ಶರ್ಮಾರ ಸಾಮರ್ಥ್ಯವನ್ನ ಪ್ರಶ್ನಿಸಿದ್ದು ಸುಳ್ಳಲ್ಲ.
ಅಧಿಕೃತವಾಗಿ ಅಲ್ಲದಿದ್ರೂ ಅನಧಿಕೃತವಾಗಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಜೂನಿಯರ್ಸ್ಗಳು ಸಿಕ್ಕ ಅವಕಾಶದಲ್ಲಿ ಅಬ್ಬರಿಸ್ತಿರೋ ರೀತಿ, ಸೀನಿಯರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ಇನ್ಮುಂದೆ, ಸೀನಿಯರ್ಸ್ಗಳು ಯಾಮಾರಿದ್ರೆ, ಟೆಸ್ಟ್ ತಂಡದಿಂದಲೇ ಹೊರ ಬೀಳಬೇಕಾಗೋದು ಅನಿವಾರ್ಯತೆ ಸಿಲುಕೊದಂತೂ ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿರಾಟ್ ಕೊಹ್ಲಿ ಸ್ಥಾನಕ್ಕೆ ಸರ್ಫರಾಜ್ ಖಾನ್ ಕುತ್ತು ತರುತ್ತಾರಾ?
ಈಗಾಗಲೇ ಟಿ20, ಏಕದಿನದಲ್ಲಿ ಸ್ಥಾನ ತುಂಬಿದ ಯಂಗ್ಸ್ಟರ್ಸ್
ಧ್ರುವ್ ಜುರೆಲ್ ಆಟ ಮುಂದುವರೆಸಿದ್ರೆ ಈ ಪ್ಲೇಯರ್ಸ್ಗೆ ಕಂಠಕ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ. ಯಂಗ್ಸ್ಟರ್ಗಳ ಅಬ್ಬರದ ಮುಂದೆ ಕಳೆದು ಹೋಗೋ ಭೀತಿ ಸೀನಿಯರ್ಸ್ಗಳನ್ನ ಕಾಡ್ತಿದೆ. ಅಷ್ಟಕ್ಕೂ ಸ್ಥಾನ ಕಳೆದುಕೊಳ್ಳೋ ಭೀತಿಗೆ ಸಿಲುಕಿರೋ ಆಟಗಾರರು ಯಾರು. ಸ್ಥಾನಕ್ಕೆ ಕುತ್ತು ತಂದಿರುವ ಜೂನಿಯರ್ಸ್ ಯಾರು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕಾದಾಟದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರ ಅಬ್ಬರ ಜೋರಾಗಿದೆ. ರಣಾಂಗಣದಲ್ಲಿ ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸ್ತಿರೋ ಯಂಗ್ಸ್ಟರ್, ಸೀನಿಯರ್ಸ್ಗಳಿಗೇ ಪಾಠ ಮಾಡ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ನಿಂದ ಎಲ್ಲರನ್ನ ಇಂಪ್ರೆಸ್ ಮಾಡ್ತಿದ್ದಾರೆ.
ಯುವ ಆಟಗಾರರ ಅಬ್ಬರ, ಸೀನಿಯರ್ಸ್ಗೆ ಢವ., ಢವ.!
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಕೌಂಟ್ಡೌನ್ ಶುರುವಾಗಿದೆ. ಟಿ20, ಏಕದಿನದಲ್ಲಿ ಈಗಾಗಲೇ ಹಲ ಸೀನಿಯರ್ಸ್ ಜಾಗದಲ್ಲಿ ಯುವ ಆಟಗಾರರು ಬಂದು ಕುಳಿತಿದ್ದಾರೆ. ಇದೀಗ ಟೆಸ್ಟ್ ತಂಡದಲ್ಲಿ ತಮ್ಮ ಅಬ್ಬರ ಪರ್ಫಾಮೆನ್ಸ್ನಿಂದಲೇ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಆನ್ಫೀಲ್ಡ್ನಲ್ಲಿ ಜೂನಿಯರ್ಸ್ ಆರ್ಭಟಿಸ್ತಾ ಇದ್ರೆ, ಸೀನಿಯರ್ಸ್ ಎದೆಯಲ್ಲಿ ಢವ.. ಢವ ಶುರುವಾಗಿದೆ.
ರಾಜ್ಕೋಟ್ನಲ್ಲಿ ಸರ್ಫರಾಜ್ ಆರ್ಭಟ.!
ಕಳೆದ 3 ಸೀಸನ್ಗಳಿಂದ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಆರ್ಭಟಿಸಿದ ಸರ್ಫರಾಜ್ ಖಾನ್, ರಾಜ್ಕೋಟ್ ಟೆಸ್ಟ್ನೊಂದಿಗೆ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ರು. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಆರ್ಭಟಿಸಿದ ಸರ್ಫರಾಜ್ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಶತಕ ನಿರೀಕ್ಷೆ ಮೂಡಿಸಿದ್ದ ಯುವ ಆಟಗಾರ ದುರಾದೃಷ್ಟವಶಾತ್ ರನೌಟ್ಗೆ ಬಲಿಯಾದ್ರು. ಆದ್ರೆ, ಇದೇ ಆಟ ತ್ರಿಮೂರ್ತಿಗಳಿಗೆ ನಡುಕ ಶುರುವಾಗುವಂತೆ ಮಾಡಿದೆ.
ರಾಹುಲ್, ಕೊಹ್ಲಿ, ಶ್ರೇಯಸ್ ಸ್ಥಾನಕ್ಕೆ ಕುತ್ತು.!
ಸರ್ಫರಾಜ್ ಶತಕ ಸಿಡಿಸದೇ ಇದ್ರೂ ತನ್ನ ಆಟದಿಂದ ಎಲ್ಲರನ್ನ ಇಂಪ್ರೆಸ್ ಮಾಡಿದ್ದಾರೆ. ಇದು ಸೀನಿಯರ್ಗಳಾದ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಮ್ಬ್ಯಾಕ್ಗೆ ಅಡ್ಡಗಾಲಾಗಿದೆ. ಜೊತೆಗೆ ವಿರಾಟ್ ಕೊಹ್ಲಿ ಸ್ಥಾನಕ್ಕೂ ಸರ್ಫರಾಜ್ ಕುತ್ತು ತಂದಿದ್ದಾರೆ. ಯಾಕಂದ್ರೆ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ 4ನೇ ಕ್ರಮಾಂಕದಲ್ಲಿ ಸರ್ಫರಾಜ್ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ.
ಧ್ರುವ್ ಜುರೆಲ್ ಡಿಸೆಂಟ್ ಆಟ.. ಕಿಶನ್, ಭರತ್ಗೆ ಕಂಟಕ.!
3ನೇ ಟೆಸ್ಟ್ನಲ್ಲಿ ಡೆಬ್ಯು ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಕೂಡ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಬರೋಬ್ಬರಿ 104 ಎಸೆತಗಳನ್ನ ತಾಳ್ಮೆಯಿಂದ ಎದುರಿಸಿದ ಜುರೆಲ್, 46 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ವಿಕೆಟ್ ಹಿಂದೆಯು ಗಮನ ಸೆಳೆದ್ರು. ಹೀಗಾಗಿ ಜುರೆಲ್ ಆಟ ಬಿಸಿಸಿಐ ಮಾತಿಗೆ ಡೋಂಟ್ಕೇರ್ ಅಂದ ಇಶನ್ ಕಿಶನ್ ಪಾಲಿಗೆ ತಂಡದ ಬಾಗಿಲನ್ನೇ ಮುಚ್ಚಿಸಿದ್ರೆ, ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ ಭರತ್ಗೂ ಕಂಟಕ ತಂದಿದೆ.
ಶುಭ್ಮನ್ ಶೈನ್., ಪೂಜಾರ, ರಹಾನೆ ಡೋರ್ ಕ್ಲೋಸ್..!
ಕಳೆದ 2 ವರ್ಷದಿಂದ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನಿಯಾಗಿರೋ, ಶುಭ್ಮನ್ ಗಿಲ್ ಆರಂಭಿಕ ಸ್ಲಾಟ್ನ ಬಳಿಕ ಇದೀಗ ನಂಬರ್ 3 ಸ್ಲಾಟ್ನಲ್ಲೂ ಮಿಂಚಿದ್ದಾರೆ. ವೈಜಾಗ್ ಟೆಸ್ಟ್ನಲ್ಲಿ ಸಾಲಿಡ್ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಕಮ್ಬ್ಯಾಕ್ ಕನವರಿಕೆಯಲ್ಲಿದ್ದ ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಕನಸಿಗೆ ತಣ್ಣೀರೆರಚಿದ್ದಾರೆ.
ಆರಂಭಿಕನಾಗಿ ಜೈಸ್ವಾಲ್ ಭವಿಷ್ಯದ ಭರವಸೆ.!
ಟೀಮ್ ಇಂಡಿಯಾದ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಹೊಸ ಭರವಸೆಯನ್ನೇ ಹುಟ್ಟು ಹಾಕಿದ್ದಾರೆ. ವಿಶ್ವದ ಶ್ರೇಷ್ಠ ಬೌಲಿಂಗ್ ಅಟ್ಯಾಕ್ ಎದುರಿಗೆ ಯಶಸ್ವಿ ಜೈಸ್ವಾಲ್ ಸಕ್ಸಸ್ ಕಂಡಿದ್ದಾರೆ. ಜೊತೆಗೆ ತಮ್ಮ ಆರಂಭಿಕನ ಸ್ಥಾನವನ್ನೂ ಭದ್ರ ಪಡಿಸಿಕೊಂಡಿದ್ದಾರೆ. ಜೈಸ್ವಾಲ್ ಅಬ್ಬರದ ಆಟ ನೋಡಿದವರು, ರಾಜ್ಕೋಟ್ ಟೆಸ್ಟ್ಗೂ ಮುನ್ನ ಕ್ಯಾಪ್ಟನ್ ರೋಹಿತ್ ಶರ್ಮಾರ ಸಾಮರ್ಥ್ಯವನ್ನ ಪ್ರಶ್ನಿಸಿದ್ದು ಸುಳ್ಳಲ್ಲ.
ಅಧಿಕೃತವಾಗಿ ಅಲ್ಲದಿದ್ರೂ ಅನಧಿಕೃತವಾಗಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಜೂನಿಯರ್ಸ್ಗಳು ಸಿಕ್ಕ ಅವಕಾಶದಲ್ಲಿ ಅಬ್ಬರಿಸ್ತಿರೋ ರೀತಿ, ಸೀನಿಯರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ಇನ್ಮುಂದೆ, ಸೀನಿಯರ್ಸ್ಗಳು ಯಾಮಾರಿದ್ರೆ, ಟೆಸ್ಟ್ ತಂಡದಿಂದಲೇ ಹೊರ ಬೀಳಬೇಕಾಗೋದು ಅನಿವಾರ್ಯತೆ ಸಿಲುಕೊದಂತೂ ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ