ಸ್ಕಿಟ್ ಮಾಡುತ್ತಿದ್ದಾಗ ತುಕಾಲಿ ಸಂತೋಷ್ ಕೈಗೆ ಗಂಭೀರ ಗಾಯ
ಬಿಗ್ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ತುಕಾಲಿ ಸಂತೋಷ್
ಕೈಗೆ ಪೆಟ್ಟಾದರೂ ಮತ್ತೆ ಬಂದು ಸ್ಕಿಟ್ ಮಾಡಿದ್ದಕ್ಕೆ ಎಲ್ಲರು ಖುಷ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿರೋ ತುಕಾಲಿ ಸಂತೋಷ್ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್ಬಾಸ್ ಮುಗಿದ ಬಳಿಕವಂತು ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದಾರೆ. ಇನ್ನು ಭಾನುವಾರದ ಎಪಿಸೋಡ್ನಲ್ಲಿ ವೇದಿಕೆ ಮೇಲೆ ಸ್ಕಿಟ್ ಮಾಡುತ್ತಿದ್ದಾಗ ತುಕಾಲಿ ಸಂತೋಷ್ ಅವರ ಕೈಗೆ ಗಂಭೀರವಾಗಿ ಪೆಟ್ಟಾಗಿದೆ.
ಹೌದು, ವೇದಿಕೆ ಮೇಲೆ ವಿನೋದ ಗೊಬ್ಬರಗಾಲ, ಚಿಲ್ಲರ್ ಮಂಜು, ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸಾ ಸೇರಿಕೊಂಡು ಸ್ಕಿಟ್ ಮಾಡುತ್ತಿದ್ದರು. ಸ್ಕಿಟ್ ಮಾಡುವ ಭರದಲ್ಲಿ ತಕಾಲಿ ಸಂತೋಷ್ ತಮ್ಮ ಶರ್ಟ್ ಅನ್ನು ಹರಿಯುವ ವೇಳೆ ಈ ಘಟನೆ ನಡೆದಿದೆ. ಕೂಡಲೇ ಆ ಶೋವನ್ನು ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಗಂಟೆಗಳ ಬಳಿಕ ತುಕಾಲಿ ಸಂತೋಷ್ ಅವರು ಮತ್ತೆ ಬಂದು ಆ ಸ್ಕಿಟ್ ಅನ್ನು ಮುಂದುವರೆಸಿದರು. ಇನ್ನು ತುಕಾಲಿ ಸಂತೋಷ್ ಅವರ ಕಾಮಿಡಿಗೆ ಶೃತಿ ಅವರು ಬಿದ್ದು ಬಿದ್ದು ನಕ್ಕಿದ್ದರು. ಅಷ್ಟು ಕಷ್ಟವನ್ನು ಅನುಭವಿಸುತ್ತಿದ್ದರೂ ಕೂಡ ಮತ್ತೆ ಬಂದು ಸ್ಕಿಟ್ ಮಾಡಿದ್ದಕ್ಕೆ ಎಲ್ಲರು ಅಭಿನಂದಿಸಿದರು.
View this post on Instagram
ಈ ಹಿಂದೆ ಬಿಗ್ಬಾಸ್ನಲ್ಲಿ ಇದ್ದಾಗಲೂ ಕೂಡ ತುಕಾಲಿ ಸಂತೋಷ್ ಕೈಗೆ ಪೆಟ್ಟಾಗಿತ್ತು. ಆಗ ವೈದ್ಯರು ಇದಕ್ಕೆ ಅಬಾರ್ಷನ್ ಮಾಡಿಸಬೇಕು ಅಂತಾ ಹೇಳಿದ್ದರಂತೆ. ಗಿಚ್ಚಿ ಗಿಲಿಗಿಲಿ ಶೋ ಮುಗಿದ ಬಳಿಕ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇನೆ ಅಂತಾ ಹೇಳಿಕೊಂಡಿದ್ದಾರೆ. ಸದ್ಯ ದೊಡ್ಡ ಗಂಡಾಂತರದಿಂದ ತುಕಾಲಿ ಸಂತೋಷ್ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ಕಿಟ್ ಮಾಡುತ್ತಿದ್ದಾಗ ತುಕಾಲಿ ಸಂತೋಷ್ ಕೈಗೆ ಗಂಭೀರ ಗಾಯ
ಬಿಗ್ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ತುಕಾಲಿ ಸಂತೋಷ್
ಕೈಗೆ ಪೆಟ್ಟಾದರೂ ಮತ್ತೆ ಬಂದು ಸ್ಕಿಟ್ ಮಾಡಿದ್ದಕ್ಕೆ ಎಲ್ಲರು ಖುಷ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿರೋ ತುಕಾಲಿ ಸಂತೋಷ್ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್ಬಾಸ್ ಮುಗಿದ ಬಳಿಕವಂತು ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದಾರೆ. ಇನ್ನು ಭಾನುವಾರದ ಎಪಿಸೋಡ್ನಲ್ಲಿ ವೇದಿಕೆ ಮೇಲೆ ಸ್ಕಿಟ್ ಮಾಡುತ್ತಿದ್ದಾಗ ತುಕಾಲಿ ಸಂತೋಷ್ ಅವರ ಕೈಗೆ ಗಂಭೀರವಾಗಿ ಪೆಟ್ಟಾಗಿದೆ.
ಹೌದು, ವೇದಿಕೆ ಮೇಲೆ ವಿನೋದ ಗೊಬ್ಬರಗಾಲ, ಚಿಲ್ಲರ್ ಮಂಜು, ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸಾ ಸೇರಿಕೊಂಡು ಸ್ಕಿಟ್ ಮಾಡುತ್ತಿದ್ದರು. ಸ್ಕಿಟ್ ಮಾಡುವ ಭರದಲ್ಲಿ ತಕಾಲಿ ಸಂತೋಷ್ ತಮ್ಮ ಶರ್ಟ್ ಅನ್ನು ಹರಿಯುವ ವೇಳೆ ಈ ಘಟನೆ ನಡೆದಿದೆ. ಕೂಡಲೇ ಆ ಶೋವನ್ನು ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಗಂಟೆಗಳ ಬಳಿಕ ತುಕಾಲಿ ಸಂತೋಷ್ ಅವರು ಮತ್ತೆ ಬಂದು ಆ ಸ್ಕಿಟ್ ಅನ್ನು ಮುಂದುವರೆಸಿದರು. ಇನ್ನು ತುಕಾಲಿ ಸಂತೋಷ್ ಅವರ ಕಾಮಿಡಿಗೆ ಶೃತಿ ಅವರು ಬಿದ್ದು ಬಿದ್ದು ನಕ್ಕಿದ್ದರು. ಅಷ್ಟು ಕಷ್ಟವನ್ನು ಅನುಭವಿಸುತ್ತಿದ್ದರೂ ಕೂಡ ಮತ್ತೆ ಬಂದು ಸ್ಕಿಟ್ ಮಾಡಿದ್ದಕ್ಕೆ ಎಲ್ಲರು ಅಭಿನಂದಿಸಿದರು.
View this post on Instagram
ಈ ಹಿಂದೆ ಬಿಗ್ಬಾಸ್ನಲ್ಲಿ ಇದ್ದಾಗಲೂ ಕೂಡ ತುಕಾಲಿ ಸಂತೋಷ್ ಕೈಗೆ ಪೆಟ್ಟಾಗಿತ್ತು. ಆಗ ವೈದ್ಯರು ಇದಕ್ಕೆ ಅಬಾರ್ಷನ್ ಮಾಡಿಸಬೇಕು ಅಂತಾ ಹೇಳಿದ್ದರಂತೆ. ಗಿಚ್ಚಿ ಗಿಲಿಗಿಲಿ ಶೋ ಮುಗಿದ ಬಳಿಕ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇನೆ ಅಂತಾ ಹೇಳಿಕೊಂಡಿದ್ದಾರೆ. ಸದ್ಯ ದೊಡ್ಡ ಗಂಡಾಂತರದಿಂದ ತುಕಾಲಿ ಸಂತೋಷ್ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ